Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮಿಗೆ ಲೈಫ್ಸ್ಟೈಲ್ ಎಕ್ಸ್ಪರ್ಟ್ ಸೂಚಿಸಿದ ಕಷಾಯವಿದು: 13 ವರ್ಷಗಳಿಂದ ಅವರ ಕ್ಲೈಂಟ್ಸ್ಗೆ ಇದು
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯೆಂದರೆ ಶೀತ, ಕೆಮ್ಮು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಸಮಸ್ಯೆ ಕಾಡತ್ತದೆ. ಪ್ರಸಿದ್ಧ ಲೈಫ್ಸ್ಟೈಲ್ ಎಕ್ಸ್ಪರ್ಟ್ ಲುಕೆ ಕೌಂಟಿನೋ ಅವರು ಈ ಸಾಮಾನ್ಯ ಸಮಸ್ಯೆಗೆ ಸಿಂಪಲ್ ಟಿಪ್ಸ್ ನೀಡಿದ್ದು, ಈ ಟಿಪ್ಸ್ ಅವರ ಕ್ಲೈಂಟ್ಸ್ಗೆ ಕಳೆದ 13 ವರ್ಷದ ಸೂಪರ್ ಆಗಿ ವರ್ಕ್ ಆಗಿದೆ ಎಂಬುವುದಾಗಿ ಹೇಳಿದ್ದಾರೆ.

ಸಾಮಾನ್ಯ ಶೀತ-ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದು
1/2 ಚಮಚ ಅರಿಶಿಣ ಪುಡಿ
1/2 ಚಮಚಶುಂಠಿ ಪುಡಿ ಅಥವಾ 1/2 ಇಂಚು ಹಸಿ ಶುಂಠಿ
1 ಚಮಚ ನಿಂಬೆರಸ
ಸ್ವಲ್ಪ ಚಕ್ಕೆ ಪುಡಿ ( ಇದು ಬೇಡ ಅಂದರೆ ಸ್ಕಿಪ್ ಮಾಡಬಹುದು)
ನಿಂಬೆರಸ ಬಿಟ್ಟು ಉಳಿದ ಸಾಮಗ್ರಿ ಹಾಕಿ 5 ನಿಮಿಷ ಕುದಿಸಿ, ನಂತರ 1 ಚಮಚ ಜೇನು , 1 ಚಮಚ ನಿಂಬೆರಸ ಮಿಕ್ಸ್ ಮಾಡಿ ಕುಡಿಯಿರಿ, ಈ ಕಷಾಯವನ್ನು 15ml ದಿನದಲ್ಲಿ ಎರಡು ಬಾರಿ ಕುಡಿದರೆ ಕೆಮ್ಮು, ಶೀತ ಕಡಿಮೆಯಾಗುವುದು.
ಈ ಕಷಾಯದಲ್ಲಿರುವ ಗುಣಗಳು
ಅರಿಶಿಣ: ಇದರಲ್ಲಿ ಆಂಟಿಬ್ಯಾಕ್ಟಿರಿಯಾ ಗುಣವಿದೆ ಹಾಗಾಗಿ ಅರಿಶಿಣ ಬ್ಯಾಕ್ಟಿರಿಯಾ, ಸೋಂಕುಗಳ ವಿರುದ್ಧ ಹೋರಾಡಲು ತುಂಬಾನೇ ಸಹಾಯ ಮಾಡುತ್ತದೆ.
ಕೆಮ್ಮು-ಶೀತ ಕಡಿಮೆ ಮಾಡಲು , ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಅರಿಶಿಣ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಶುಂಠಿ: ಶುಂಠಿ ಕೆಮ್ಮು-ಶೀತ ಈ ಬಗೆಯ ಸಮಸ್ಯೆಗೆ ರಾಮಬಾಣ. ಹಲವುಮನೆಮದ್ದುಗಳಲ್ಲಿ ಶುಂಠಿಯನ್ನು ಸೇರಿಸಲಾಗುವುದು. ಶುಂಠಿ ಬಳಸುವುದರಿಂದ ಗಂಟಲು ಕೆರೆತ, ವಿಪರೀತ ಕಾಡುವ ಕೆಮ್ಮು ಕಡಿಮೆಯಾಗುವುದು. ಹಾಗಾಗಿ ಮಳೆಗಾಲದಲ್ಲಿ ಶುಂಠಿಯನ್ನು ನಿಯಮಿತವಾಗಿ ಬಳಸಲು ಸಲಹೆ ನೀಡಲಾಗುವುದು.
ನಿಂಬೆರಸ: ನಿಂಬೆರಸದಲ್ಲಿ ವಿಟಮಿನ್ ಸಿ ಇದೆ, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಅಲ್ಲದೆ ಕೆಮ್ಮು-ಶೀತ ಈ ಬಗೆಯ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ.
ಚಕ್ಕೆ ಪುಡಿ: ಈ ಚಕ್ಕೆಪುಡಿ ಗಂಟಲು ಕರೆತ ತಡೆಗಟ್ಟಲು ಸಹಕಾರಿ. ಆದರೆ ಕೆಲವರಿಗೆ ಚಕ್ಕೆಯ ವಾಸನೆ ಆಗಲ್ಲ, ಅಂಥವರು ಇದನ್ನು ಬಳಸಿದೆ ಇರಬಹುದು, ಈ ಚಕ್ಕೆಯನ್ನು ಬಳುಸವುದರಿಂದ ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ.
ಜೇನು: ಶೀತ, ಕೆಮ್ಮಿಗೆ ಜೇನು ಕೂಡ ಪರಿಣಾಮರಿ, ನೀವು ಈ ಮಿಶ್ರಣಕ್ಕೆ ಜೇನು ಸೇರಿಸುವುದರಿಂದ ಇದರಲ್ಲಿರುವ ಆ್ಯಂಟಿಬ್ಯಾಕ್ಟಿರಿಯಾ ರೋಗಾಣುಗಳ ವಿರುದ್ಧ ಹೋರಾಡುತ್ತದೆ.
ಹಾಗಾಗಿ ಈ ಕಷಾಯ ಹೆಚ್ಚು ಪರಿಣಾಮಕಾರಿ
ನೀವು ಈ ಕಷಾಯ ಮಾಡಿ ಕುಡಿಯುವುದರಿಂದ ಇವುಗಳ ಅಷ್ಟೂ ಪ್ರಯೋಜನ ಸಿಗುವುದು ಹಾಗಾಗಿ ಕೆಮ್ಮು-ಶೀತ ಈ ಬಗೆಯ ಸಮಸ್ಯೆಗೆ ಅತ್ಯುತ್ತಮವಾದ ಮನೆಮದ್ದಾಗುದೆ, ಅಲ್ಲದೆ ಈ ಕಷಾಯ 5 5ml ಚಿಕ್ಕ ಮಕ್ಕಳಿಗೂ ನೀಡಬಹುದು. ತುಂಬಾ ಚಿಕ್ಕ ಮಕ್ಕಳಿಗೆ ನೀಎಬೇಡಿ, ಒಂದು ವರ್ಷದ ಮೇಲಿನ ಮಕ್ಕಳಿಗೆ ನೀಡಬಹುದು.
ಅಡ್ಡಪರಿಣಾಮವಿದೆಯೇ?
ಈ ಕಷಾಯದ ಮತ್ತೊಂದು ಪ್ರಯೋಜನವೆಂದರೆ ಈ ಕಷಾಯ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಸಾಮಾನ್ಯ ಶೀತ-ಕೆಮ್ಮಿಗೆ ಇದನ್ನು ಟ್ರೈ ಮಾಡಿ ಖಂಡಿತ ಸಕ್ಸಸ್ ಸಿಗುತ್ತೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications