Latest Updates
-
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ! -
ಮಳೆಗಾಲದ ಎಚ್ಚರಿಕೆ: ಅಪಾರ್ಟ್ಮೆಂಟ್ ಸೋರಿಕೆ ತಡೆಯಲು ಮತ್ತು ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಸರಳ ಉಪಾಯಗಳು -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ₹350 ಕ್ಕಿಂತ ಕಡಿಮೆ ವೆಚ್ಚದಲ್ಲಿ 7 ಹೈ-ಪ್ರೋಟೀನ್ ಬ್ರೇಕ್ಫಾಸ್ಟ್ ಐಡಿಯಾಗಳು! -
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ರೂಲ್ಸ್: PoP ಮೂರ್ತಿ ನಿಷೇಧ, ಅನುಮತಿ ಪಡೆಯುವುದು ಹೇಗೆ? -
ದೆಹಲಿ ಆರೆಂಜ್ ಅಲರ್ಟ್: ಮಳೆಯಲ್ಲಿ ಮನೆಯಲ್ಲೇ ಫಿಟ್ ಆಗಿರಲು ಈ 20 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಬ್ರೇಕಪ್ ನಂತರ ಸೋಶಿಯಲ್ ಮೀಡಿಯಾ: ನಿಮ್ಮ ಗೌಪ್ಯತೆ ಮತ್ತು ಕಾನೂನು ರಕ್ಷಣೆಗೆ ಈ ಟಿಪ್ಸ್ ಪಾಲಿಸಿ -
ಜನ್ಮಾಷ್ಟಮಿ ಉಪವಾಸ: ಹಬ್ಬದ ಸಂಭ್ರಮದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಕಜರಿ ತೀಜ್ 2026: ಉಪವಾಸದ ದಿನ ಆರೋಗ್ಯ ಮತ್ತು ಸಂಗಾತಿಯೊಂದಿಗೆ ಸುಗಮ ಸಂವಹನಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಇಂದೇ ಕೊನೆಯ ಅವಕಾಶ: ಎಲ್ಪಿಜಿ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ದರ ಏರಿಕೆ ಖಚಿತ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆ ಬಜೆಟ್ ಉಳಿಸಿ, ಈರುಳ್ಳಿ ಇಲ್ಲದೆಯೂ ರುಚಿಕರ ಹೈ-ಪ್ರೋಟೀನ್ ಊಟ ಮಾಡಿ!
ನೀವು ನಿರ್ಲಕ್ಷಿಸಬಾರದ ಆರು ಲಿವರ್ (ಯಕೃತ್ತು)ಕಾಯಿಲೆಯ ಲಕ್ಷಣಗಳು
ನಮ್ಮ ದೇಹದ ಸುಮಾರು ೫೦೦ ಬೇರೆಬೇರೆ ಕಾರ್ಯಗಳನ್ನು ನಡೆಸಿಕೊಂಡು ಹೋಗುವ ಮುಖ್ಯ ಅಂಗ ಯಕೃತ್ (ಲಿವರ್).ಲಿವರ್ ಗೆ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡಲ್ಲಿ(ಅಲ್ಕೋಹಾಲ್, ಸಿಗರೇಟ್ ಅಥವಾ ಇನ್ನಿತರ ಕೆಟ್ಟ ಚಟಗಳಿಂದ)ಅದು ಇಡೀ ದೇಹದ ಆರೋಗ್ಯವನ್ನು ಹದಗೆಡಿಸಿಬಿಡುತ್ತದೆ.ಯಕೃತ್ ಕಾಯಿಲೆಯ ಕೆಲವು ಲಕ್ಷಣಗಳನ್ನು ಈ ಕೆಳಗೆ ನೀಡಲಾಗಿದೆ.
ಇಂತಹ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ಪರಿಹಾರ ತೆಗೆದುಕೊಳ್ಳುವುದು ಜೀವ ಉಳಿಸಿಕೊಳ್ಳಲು ಮಾಡಬೇಕಾದ ಮೊದಲ ಕೆಲಸ.ಆದ್ದರಿಂದ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವುದು ಒಳಿತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಲಿವರ್ ನ ಆರೋಗ್ಯಕ್ಕಾಗಿ ಸೂಪರ್ ಟಿಪ್ಸ್

ತಲೆಸುತ್ತುವಿಕೆ ಮತ್ತು ವಾಂತಿ:
ಸಾಕಷ್ಟು ಕಾಯಿಲೆಗಳಿಗೆ ವಾಂತಿ ಮತ್ತು ಸಲೆಸುತ್ತುವಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ.ತಲೆಸುತ್ತಿವಿಕೆ ಹೆಚ್ಚಿದಂತೆ ವಾಂತಿ ಜೊತೆಗೆ ಬೆವರುವಿಕೆ ಕಾಣಿಸಿಕೊಳ್ಳುತ್ತದೆ.ನೀವು ಸೇವಿಸಿದ ಆಹಾರ ಬಾಯಿಯ ಮೂಲಕ ಹೊರಬರುವುದರ ಜೊತೆಗೆ ಇದು ತುಂಬಾ ಸುಸ್ತು ಮಾಡಿಸಿಬಿಡುತ್ತದೆ.ಇಂತಹ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಬಳಿ ಹೋಗುವುದು ಸೂಕ್ತ.

ಹೊಟ್ಟೆ ಮೇಲ್ಬದಿಯ ಬಲಭಾಗದಲ್ಲಿ ನೋವು:
ಹೊಟ್ಟೆಯ ಬಲ ಮೇಲ್ಭಾಗದಲ್ಲಿ ನಿಮ್ಮ ಯಕೃತ್ ಇದೆ.ಈ ಭಾಗದಲ್ಲಿ ನಿಮಗೆ ನೋವು ಕಾಣಿಸಿಕೊಂಡರೆ ಅದು ಲಿವರ್ ಗೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು ಆದ್ದರಿಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ಅಜೀರ್ಣ:
ಜೀರ್ಣಕ್ರಿಯೆ ನಡೆಯಲು ಯಕೃತ್ ಪ್ರಮುಖ ಅಂಗವಾದ್ದರಿಂದ ಲಿವರ್ ಗೆ ಯಾವುದೇ ರೀತಿಯ ಹಾನಿಯಾದರೆ ಇದು ಜೀರ್ಣಕ್ರಿಯೆಯನ್ನು ಖಡಿತಗೊಳಿಸುತ್ತದೆ.ನಿಮಗೆ ಇಂತಹ ಸಮಯದಲ್ಲಿ ಊಟ ಮಾಡಲು ಆಗದಿರಬಹುದು ಅಥವಾ ಹೊಟ್ಟೆಯಲ್ಲಿ ಸುಡುವ ಅನುಭವವಾಗಬಹುದು.

ದುರ್ಬಲತೆ ಮತ್ತು ಸುಸ್ತು:
ದೇಹಕ್ಕೆ ಬೇಕಾದ ಖನಿಜಾಂಶಗಳು,ವಿಟಮಿನ್ ಇವುಗಳನ್ನು ಲಿವರ್ ಹೀರಿಕೊಳ್ಳುತ್ತದೆ.ಲಿವರ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಇವುಗಳ ಕೊರತೆಯಿಂದಾಗಿ ಸುಸ್ತು ಮತ್ತು ದುರ್ಬಲತೆ ಕಾಣಿಸಿಕೊಳ್ಳಬಹುದು.

ತೂಕ ಕಳೆದುಕೊಳ್ಳುವಿಕೆ:
ಸಾಕಷ್ಟು ಬಾರಿ ಯಕೃತ್ ನ ರೋಗ ಜೀರ್ಣಕ್ರಿಯೆಯಾಗುವುದನ್ನು ನಿಲ್ಲಿಸಿದಾಗ ನಿಮಗೆ ಹಸಿವಾಗುವುದು ಕೂಡ ನಿಂತುಬಿಡಬಹುದು.ಈ ಕಾರಣಕ್ಕೆ ನೀವು ಅತಿಬೇಗ ತೂಕ ಕಳೆದುಕೊಳ್ಳಬಹುದು.

ಚರ್ಚ ಹಳದಿ ಬಣ್ಣ ಪಡೆಯುವುದು:
ಲಿವರ್ ಕ್ಯಾನ್ಸರ್ ರೋಗ ಬಂದರೆ ಚರ್ಮ ಮತ್ತು ಕಣ್ಣು ಹಳದಿ ಬಣ್ಣ ತಲುಪಿ ಕಾಮಾಲೆ ರೋಗ ಕಾಣಿಸಿಕೊಳ್ಳಬಹುದು.ಯಕೃತ್ ನ ರೋಗಗಳಿಂದ ದೇಹಕ್ಕೆ ಇತರ ಹಾನಿಯೂ ಆಗಬಹುದು ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ವೈದ್ಯರನ್ನು ಕಾಣುವುದು ಸೂಕ್ತ.
ಈ ಮೇಲೆ ಹೇಳಿದ ಲಕ್ಷಣಗಳು ಕಾಣಿಸಿಕೊಂಡರೆ ಕಡೆಗಣಿಸದೆ ವೈದ್ಯರನ್ನು ಕಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.



Click it and Unblock the Notifications