Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ನೀವು ನಿರ್ಲಕ್ಷಿಸಬಾರದ ಆರು ಲಿವರ್ (ಯಕೃತ್ತು)ಕಾಯಿಲೆಯ ಲಕ್ಷಣಗಳು
ನಮ್ಮ ದೇಹದ ಸುಮಾರು ೫೦೦ ಬೇರೆಬೇರೆ ಕಾರ್ಯಗಳನ್ನು ನಡೆಸಿಕೊಂಡು ಹೋಗುವ ಮುಖ್ಯ ಅಂಗ ಯಕೃತ್ (ಲಿವರ್).ಲಿವರ್ ಗೆ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡಲ್ಲಿ(ಅಲ್ಕೋಹಾಲ್, ಸಿಗರೇಟ್ ಅಥವಾ ಇನ್ನಿತರ ಕೆಟ್ಟ ಚಟಗಳಿಂದ)ಅದು ಇಡೀ ದೇಹದ ಆರೋಗ್ಯವನ್ನು ಹದಗೆಡಿಸಿಬಿಡುತ್ತದೆ.ಯಕೃತ್ ಕಾಯಿಲೆಯ ಕೆಲವು ಲಕ್ಷಣಗಳನ್ನು ಈ ಕೆಳಗೆ ನೀಡಲಾಗಿದೆ.
ಇಂತಹ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ಪರಿಹಾರ ತೆಗೆದುಕೊಳ್ಳುವುದು ಜೀವ ಉಳಿಸಿಕೊಳ್ಳಲು ಮಾಡಬೇಕಾದ ಮೊದಲ ಕೆಲಸ.ಆದ್ದರಿಂದ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯುವುದು ಒಳಿತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಲಿವರ್ ನ ಆರೋಗ್ಯಕ್ಕಾಗಿ ಸೂಪರ್ ಟಿಪ್ಸ್

ತಲೆಸುತ್ತುವಿಕೆ ಮತ್ತು ವಾಂತಿ:
ಸಾಕಷ್ಟು ಕಾಯಿಲೆಗಳಿಗೆ ವಾಂತಿ ಮತ್ತು ಸಲೆಸುತ್ತುವಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ.ತಲೆಸುತ್ತಿವಿಕೆ ಹೆಚ್ಚಿದಂತೆ ವಾಂತಿ ಜೊತೆಗೆ ಬೆವರುವಿಕೆ ಕಾಣಿಸಿಕೊಳ್ಳುತ್ತದೆ.ನೀವು ಸೇವಿಸಿದ ಆಹಾರ ಬಾಯಿಯ ಮೂಲಕ ಹೊರಬರುವುದರ ಜೊತೆಗೆ ಇದು ತುಂಬಾ ಸುಸ್ತು ಮಾಡಿಸಿಬಿಡುತ್ತದೆ.ಇಂತಹ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಬಳಿ ಹೋಗುವುದು ಸೂಕ್ತ.

ಹೊಟ್ಟೆ ಮೇಲ್ಬದಿಯ ಬಲಭಾಗದಲ್ಲಿ ನೋವು:
ಹೊಟ್ಟೆಯ ಬಲ ಮೇಲ್ಭಾಗದಲ್ಲಿ ನಿಮ್ಮ ಯಕೃತ್ ಇದೆ.ಈ ಭಾಗದಲ್ಲಿ ನಿಮಗೆ ನೋವು ಕಾಣಿಸಿಕೊಂಡರೆ ಅದು ಲಿವರ್ ಗೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು ಆದ್ದರಿಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ಅಜೀರ್ಣ:
ಜೀರ್ಣಕ್ರಿಯೆ ನಡೆಯಲು ಯಕೃತ್ ಪ್ರಮುಖ ಅಂಗವಾದ್ದರಿಂದ ಲಿವರ್ ಗೆ ಯಾವುದೇ ರೀತಿಯ ಹಾನಿಯಾದರೆ ಇದು ಜೀರ್ಣಕ್ರಿಯೆಯನ್ನು ಖಡಿತಗೊಳಿಸುತ್ತದೆ.ನಿಮಗೆ ಇಂತಹ ಸಮಯದಲ್ಲಿ ಊಟ ಮಾಡಲು ಆಗದಿರಬಹುದು ಅಥವಾ ಹೊಟ್ಟೆಯಲ್ಲಿ ಸುಡುವ ಅನುಭವವಾಗಬಹುದು.

ದುರ್ಬಲತೆ ಮತ್ತು ಸುಸ್ತು:
ದೇಹಕ್ಕೆ ಬೇಕಾದ ಖನಿಜಾಂಶಗಳು,ವಿಟಮಿನ್ ಇವುಗಳನ್ನು ಲಿವರ್ ಹೀರಿಕೊಳ್ಳುತ್ತದೆ.ಲಿವರ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಇವುಗಳ ಕೊರತೆಯಿಂದಾಗಿ ಸುಸ್ತು ಮತ್ತು ದುರ್ಬಲತೆ ಕಾಣಿಸಿಕೊಳ್ಳಬಹುದು.

ತೂಕ ಕಳೆದುಕೊಳ್ಳುವಿಕೆ:
ಸಾಕಷ್ಟು ಬಾರಿ ಯಕೃತ್ ನ ರೋಗ ಜೀರ್ಣಕ್ರಿಯೆಯಾಗುವುದನ್ನು ನಿಲ್ಲಿಸಿದಾಗ ನಿಮಗೆ ಹಸಿವಾಗುವುದು ಕೂಡ ನಿಂತುಬಿಡಬಹುದು.ಈ ಕಾರಣಕ್ಕೆ ನೀವು ಅತಿಬೇಗ ತೂಕ ಕಳೆದುಕೊಳ್ಳಬಹುದು.

ಚರ್ಚ ಹಳದಿ ಬಣ್ಣ ಪಡೆಯುವುದು:
ಲಿವರ್ ಕ್ಯಾನ್ಸರ್ ರೋಗ ಬಂದರೆ ಚರ್ಮ ಮತ್ತು ಕಣ್ಣು ಹಳದಿ ಬಣ್ಣ ತಲುಪಿ ಕಾಮಾಲೆ ರೋಗ ಕಾಣಿಸಿಕೊಳ್ಳಬಹುದು.ಯಕೃತ್ ನ ರೋಗಗಳಿಂದ ದೇಹಕ್ಕೆ ಇತರ ಹಾನಿಯೂ ಆಗಬಹುದು ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ವೈದ್ಯರನ್ನು ಕಾಣುವುದು ಸೂಕ್ತ.
ಈ ಮೇಲೆ ಹೇಳಿದ ಲಕ್ಷಣಗಳು ಕಾಣಿಸಿಕೊಂಡರೆ ಕಡೆಗಣಿಸದೆ ವೈದ್ಯರನ್ನು ಕಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.



Click it and Unblock the Notifications











