Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮಧುಮೇಹಿಗಳಿಗೆ ಗುಳಿಗೆ ನುಂಗುವುದಕ್ಕೆ ಟಿಪ್ಸ್

ತೊಂದರೆ ಏನಿಲ್ಲ. ವಿವಿಧ ಕಾರಣಕ್ಕೆ ನೀಡಿದ ಗುಳಿಗೆಗಳಲ್ಲಿ ಕೆಲವು ಹೆಚ್ಚಿನ ಪ್ರಮಾಣದ್ದು, ಕೆಲವು ಕಡಿಮೆ ಪ್ರಮಾಣದ್ದು ಇರುತ್ತವೆ. ಪದ್ಧತಿಯಂತೆ ಹೆಚ್ಚು ಗಾತ್ರದ ಮಾತ್ರೆಗಳನ್ನು ತೆಗೆದುಕೊಂಡು ನಂತರ ಕಡಿಮೆ ಗ್ರಾಂ ಲೆಕ್ಕದ ಮಾತ್ರಗಳನ್ನು ಸೇವಿಸಲಾಗುತ್ತದೆ. ಆದರೆ, ಈ ನಡುವೆ ಎಲ್ಲಾ ಮಾತ್ರೆಗಳನ್ನು ಆರಂಭದಿಂದಲೇ ಒಟ್ಟಿಗೆ ತೆಗೆದುಕೊಳ್ಳಲು ಹೇಳಲಾಗುತ್ತದೆ.
ಈ ರೀತಿ ಸೇವನೆಯಿಂದ ಸೈಡ್ ಎಫೆಕ್ಟ್ ಏನಾದ್ರೂ ಆಗುತ್ತಾ?
ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಔಷಧಿಗಳಿಂದ ಸೈಡ್ ಎಫೆಕ್ಟ್ ಆಗುವ ಭಯ ಇದ್ದೇ ಇರುತ್ತದೆ. ಡಯಾಬಿಟಿಸ್ ಮಾತ್ರೆಗಳಿಂದ ಕೂಡಾ ದೇಹಕ್ಕೆ ವ್ಯತಿರಿಕ್ತ ಪರಿಣಾಮಗಳಾಗಬಹುದು. ಆದರೆ, ಮಾತ್ರೆ ನಿಮ್ಮ ದೇಹಕ್ಕೆ ಒಗ್ಗಿಕೊಳ್ಳಬೇಕಾದ್ದು ಅವಶ್ಯ. ಯಾವುದೇ ಮಾತ್ರೆ ನಿಮ್ಮ ದೇಹಕ್ಕೆ ಒಗ್ಗದಿದ್ದರೆ, ವೈದ್ಯರ ಸಲಹೆ ಪಡೆದು, ಮಾತ್ರೆ ಸೇವನೆ ನಿಲ್ಲಿಸಬಹುದು. ಮಲಬದ್ಧತೆ, ಬೇಧಿ, ಅಧಿಕ ತೇಗು ಮುಂತಾದ ಉಂಟು ಮಾಡುವ Metformin ಗುಂಪಿನ ಮಾತ್ರೆಗಳ ಡೋಸೆಜ್ ಹೆಚ್ಚು ಕಮ್ಮಿ ಮಾಡುವುದರ ಮೂಲಕ ಸೈಡ್ ಎಫೆಕ್ಟ್ ತಡೆಗಟ್ಟಬಹುದು. ಆರಂಭದಲ್ಲಿ ಈ ಮಾತ್ರೆಗಳನ್ನು ಕಡಿಮೆ ಡೋಸೆಜ್ ನಲ್ಲಿ ತೆಗೆದುಕೊಂಡು ದೇಹಕ್ಕೆ ಒಗ್ಗಿದ ಮೇಲೆ ಡೋಸೆಜ್ ಹೆಚ್ಚಿಸಬಹುದು.
ಮಾತ್ರೆ ಚಿಕಿತ್ಸೆ ಆರಂಭಿಸಿದ ಮೇಲೆ, ಜೀವನಪೂರ್ತಿಮಾತ್ರೆ ಸೇವಿಸಬೇಕೆ?
ಇದು ನಿಮಗಿರುವ ಡಯಾಬಿಟಿಸ್ ಟೈಪ್ ಮೇಲೆ ನಿರ್ಧರಿತವಾಗುತ್ತದೆ. ನಿಮ್ಮ ಡಯಾಬಿಟಿಸ್ ನಿಯಂತ್ರಣದಲ್ಲಿದ್ದರೆ, ನೀವು ಸಮತೋಲನ ಆಹಾರದ ಮೂಲಕ ಇನ್ಸುಲಿನ್ ನಿಯಂತ್ರಿಸಬಹುದು. ಹಾಗಾದರೆ, ಆಹಾರದ ಮೂಲಕವೇ ಏಕೆ ಸಕ್ಕರೆ ಕಾಯಿಲೆ ನಿಯಂತ್ರಿಸಬಾರದು. ಆಹಾರದ ಮೂಲಕ ಡಯಾಬಿಟಿಸ್ ನಿಯಂತ್ರಣದಲ್ಲಿಡಬಹುದಾದರೂ, ಕಾಲಕಳೆದಂತೆ ಮಾತ್ರೆ, ಇನ್ಸುಲಿನ್ ಚುಚ್ಚುಮದ್ದಿನ ಅವಶ್ಯಕತೆ ಬೀಳುತ್ತದೆ. ಆ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಮಾತ್ರೆ ಮೂಲಕ ನಿಯಂತ್ರಣಕ್ಕೆ ಒಳಪಡಲು ನಿಮ್ಮ ದೇಹ ಸ್ಪಂದಿಸದೇ ಇರಬಹುದು. ಸಾಮಾನ್ಯವಾಗಿ ಕಾಲಕಳೆದಂತೆ ಟೈಪ್ 2 ಡಯಾಬಿಟಿಸ್ ದೇಹವನ್ನು ಹಿಂಡತೊಡಗುತ್ತದೆ.
ಆರಂಭದಿಂದಲೇ ಮಾತ್ರೆ ಚಿಕಿತ್ಸೆ ಪಡೆಯುತ್ತಿದ್ದೇನ, ಆದರೂ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಲ್ಲ ಏಕೆ?
ಇದು ವೈದ್ಯರಿಗೆ ದಿನನಿತ್ಯ ಎದುರಾಗುವ ಸಾಮಾನ್ಯ ಪ್ರಶ್ನೆ.ಆದರೂ ಇದಕ್ಕೆ ಪದೇ ಪದೇ ಉತ್ತರಿಸುವ ಅಗತ್ಯವಿದೆ. ಆಧುನಿಕ ಸಂಶೋಧನೆಯ ಪ್ರಕಾರ ಡಯಾಬಿಟಿಸ್ ಒಂದೇ ಸಮನಾಗಿರುವುದಿಲ್ಲ.ಏರಿಳಿತ ಸಹಜ. ವ್ಯಕ್ತಿಯಿಂದ ವ್ಯಕ್ತಿಗೆ ಡಯಾಬಿಟಿಸ್ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಇದರಲ್ಲಿ ನಿಮ್ಮದಾಗಲಿ, ನಿಮ್ಮ ಡಾಕ್ಟರ್ ದಾಗಲಿ ಏನು ತಪ್ಪಿಲ್ಲ. ನಿಮ್ಮ ದೈಹಿಕ ಆರೋಗ್ಯ ಸಮತೋಲನ ಕಾಯ್ದುಕೊಳ್ಳುವುದರಿಂದ ಡಯಾಬಿಟಿಸ್ ವಿಕೋಪಕ್ಕೆ ತಿರುಗುವುದನ್ನು ತಪ್ಪಿಸಬಹುದು. ನಿಮ್ಮ ಆಹಾರ ಕ್ರಮ, ಚಿಕಿತ್ಸಾವಿಧಾನದಲ್ಲಿ ಯಾವುದೇ ಬದಲಾವಣೆಯಾಗದೇ ಹಾಗೆ ಇದ್ದು, ಮಧುಮೇಹ ಉಲ್ಬಣಿಸಿದರೆ, ಚಿಕಿತ್ಸಾವಿಧಾನ ಬದಲಾಯಿಸುವುದು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications









