Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರಾಜ್ಯದಲ್ಲಿ ಡೆಂಗ್ಯೂವಿಗೆ 4 ಮಕ್ಕಳು ಸೇರಿ 5 ಬಲಿ: ಹೀಗೆ ಮಾಡಿದರೆ ಡೆಂಗ್ಯೂ ಭಯ ಇರಲ್ಲ!
ಕರ್ನಾಟಕದಲ್ಲಿ ಡೆಂಗ್ಯೂ ಕರ್ನಾಟಕದಲ್ಲಿ ಶೇ. 60ರಷ್ಟು ಹೆಚ್ಚಾಗಿದೆ, ಐವರು ಡೆಂಗ್ಯೂವಿಗೆ ಬಲಿಯಾಗಿದ್ದಾರೆ. ಡೆಂಗ್ಯೂ ತಡೆಗೆ ಎಲ್ಲಾ ಸೂಕ್ತ ಮುನ್ನೆಚ್ಚರಿಕೆವಹಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಗ್ಯ ಇಲಾಖೆಗೆ ,ಬಿಬಿಎಂಪಿಗೆ ಮುನ್ಸೂಚನೆ ನೀಡಿದ್ದಾರೆ.

5, 374 ಕೇಸ್ಗಳು ಪತ್ತೆಯಾಗಿದೆ
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿದ್ದು ಜೂನ್ 24ಕ್ಕೆ 5,374 ಕೇಸ್ಗಳು ಬಂದಿವೆ. ಬೆಂಗಳೂರು, ಚಿಕ್ಕಮಂಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ, ಬೆಂಗಳೂರಿಲ್ಲಿಯೇ 1230 ಜನರಿಗೆ ಡೆಂಗ್ಯೂ ತಗುಲಿದೆ.
ಡೆಂಗ್ಯೂವಿಗೆ ಬಲಿಯಾದ ಮಕ್ಕಳು
ಡೆಂಗ್ಯೂ ಮಕ್ಕಳಿಗೆ ಬಂದರೆ ಹೆಚ್ಚು ಅಪಾಯಕಾರಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಗರ್ಭಿಣಿಯರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರೆಗೆ ಈ ಡೆಂಗ್ಯೂ ಹೆಚ್ಚು ಅಪಾಯಕಾರಿ. ರಾಜ್ಯದಲ್ಲಿ ಡೆಂಗ್ಯೂವಿನಿಂದ ಒಟ್ಟು 5 ಸಾವಾಗಿದ್ದು ಅದರಲ್ಲಿ ನಾಲ್ಕು ಮಕ್ಕಳು ಮತ್ತೊಬ್ಬರು 32 ವರ್ಷದ ಯುವಕ.
ಆಸ್ಪತ್ರೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆವಹಿಸಲು ಸೂಚನೆ
ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ, ಟೆಸ್ಟಿಂಗ್ ಕಿಟ್, ಅಗ್ಯತವಿರುವ ವಸ್ತುಗಳು ಇರಬೇಕೆಂದು ಸರ್ಕಾರ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಜ್ವರ ಬಂದವರು ಡೆಂಗ್ಯೂ ಪರೀಕ್ಷೆಗೆ ಒಳ ಪಡುವುದು ಒಳ್ಳೆಯದು.
ಡೆಂಗ್ಯೂ ಲಕ್ಷಣಗಳು
ಡೆಂಗ್ಯೂ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ, ಬದಲಿಗೆ ಸೋಂಕಿತ ಸೊಳ್ಳೆ ಕಡಿತದಿಂದಾಗಿ ಹರಡುವುದು, ಸೊಳ್ಳೆ ಕಚ್ಚಿ 2-7 ದಿನಗಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುವುದು.
ಮೊದಲಿಗೆ ಜ್ವರ ಬರುತ್ತದೆ, ಸಾಮಾನ್ಯ ಜ್ವರವಾದರೆ ಔಷಧ ತೆಗೆದುಕೊಂಡಂತೆ ಕಡಿಮೆಯಾಗುವುದು, ಅದೇ ಡೆಂಗ್ಯೂ ಜ್ವರವಾದರೆ ಐದು ದಿನವಾದರೂ ಕಡಿಮೆಯಾಗುವುದಿಲ್ಲ
ಜ್ವರ
ಮೈಕೈ ನೋವು
ವಾಂತಿ ಬೇಧಿ
ಸುಸ್ತು
ಗ್ರಂಥಿಗಳಲ್ಲಿ ಊತ
ಮೈ ಮೇಲೆ ಗುಳ್ಳೆಗಳು ಏಳುವುದು
ವಿಪರೀತ ತಲೆನೋವು ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಡೆಂಗ್ಯೂ ಗಂಭೀರ ಲಕ್ಷಣಗಳು
ತುಂಬಾನೇ ಸುಸ್ತು
ಕಿಬ್ಬೊಟ್ಟೆ ನೋವು
ತೀವ್ರ ಉಸಿರಾಟದ ಸಮಸ್ಯೆ
ಮಲವಿಸರ್ಜನೆ ಮಾಡುವಾಗ ರಕ್ತಸ್ರಾವ'
ಬಾಯಾರಿಕೆ
ಸುಸ್ತು
ಮೆದುಳಿನಲ್ಲಿ ರಕ್ತಸ್ರಾವ
ಡೆಂಗ್ಯೂ ತಡೆಗಟ್ಟಲು ಚಿಕಿತ್ಸೆ ಇದೆಯೇ?
ಡೆಂಗ್ಯೂ ತಡೆಗಟ್ಟಲು ಮುನ್ನೆಚ್ಚರಿಕೆಯೇ ಚಿಕಿತ್ಸೆ. ಡೆಂಗ್ಯೂವಿಗಾಗಿ ನಿರ್ಧಿಷ್ಟ ಚಿಕಿತ್ಸೆಯಿಲ್ಲ, ರೋಗ ಲಕ್ಷಣ ನೋಡಿ ಚಿಕಿತ್ಸೆ ನೀಡಲಾಗುವುದು. ಡೆಂಗ್ಯೂ ರೋಗವನ್ನು ನಾವು ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆವಹಿಸಿದರೆ ತಡೆಗಟ್ಟಬಹುದು.
ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿ
ಮೊದಲು ಮಾಡಬೇಕಾಗಿರುವುದು ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸುವುದು
ಮಕ್ಕಳಿಗೆ ತುಂಬು ತೋಳಿನ ಉಡುಪು ಹಾಕಿ ಕೊಡಿ
ಸೊಳ್ಳೆ ಕಚ್ಚದಂತೆ ಕ್ರೀಮ್ ಬಳಸಿ
ಮನೆಯೊಳಗಡೆ ಸೊಳ್ಳೆ ಬರದಂತೆ ಸೊಳ್ಳೆ ಪರದೆ ಬಳಸಿ
ಸೊಳ್ಳೆ ಪರದೆಯೊಳಗಡೆ ಮಲಗಿ
ಮನೆ ಸುತ್ತ-ಮುತ್ತ ಕ್ಲೀನ್ ಆಗಿ ಇಡಿ
ಬಕೆಟ್, ಪಾತ್ರೆ, ನೀರಿ ತೊಟ್ಟಿಯಲ್ಲಿ ನೀರು ತುಂಬಿ ಮುಚ್ಚಿಡಿ, ಇಲ್ಲದಿದ್ದರೆ ಸೊಳ್ಳೆಗಳು ಮೊಟ್ಟೆ ಹಾಕಿ ಮರಿ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
