ಗೃಹ ಆರೋಗ್ಯ ಯೋಜನೆಗೆ ಸಿಎಂ ಚಾಲನೆ.! ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ತಪಾಸಣೆ..!

ಗ್ರಾಮೀಣ ಭಾಗದಲ್ಲಿ ಅನಾರೋಗ್ಯ ಸಮಸ್ಯೆಗಳ ದೂರ ಮಾಡಲು ಸರ್ಕಾರ ಹಲವು ರೀತಿಯ ಆರೋಗ್ಯ ಯೋಜನೆಗಳ ಜಾರಿ ಮಾಡುತ್ತಲೇ ಇರುತ್ತದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ, ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈಗ ಹೊಸದಾಗಿ ಗ್ರಾಮೀಣ ಭಾಗದ ಮಂದಿ ಮನೆಯಲ್ಲೇ ಕುಳಿತು ಆರೋಗ್ಯ ತಪಾಸಣೆ ಮಾಡಿಸುವಂತಹ ಯೋಜನೆಯನ್ನೂ ಕೂಡ ಜಾರಿಗೆ ತರಲಾಗಿದೆ.

ರಾಜ್ಯ ಸರ್ಕಾರ 'ಗೃಹ ಆರೋಗ್ಯ' ಎಂಬ ವಿನೂತನ ಯೋಜನೆ ಜಾರಿ ಮಾಡಿದ್ದು, ಈ ಯೋಜನೆಯಲ್ಲಿ ಮನೆ ಬಾಗಿಲಿಗೆ ತಜ್ಞರ ತಂಡ ಭೇಟಿ ನೀಡಿ ನಿಮ್ಮ ಆರೋಗ್ಯ ತಪಾಸಣೆ ನಡೆಸಲಿದೆ. ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಚಿಕಿತ್ಸೆ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಅನಾರೋಗ್ಯ ಮುಕ್ತ ಗ್ರಾಮ ಅಭಿವೃದ್ಧಿ ಈ ಯೋಜನೆಯ ಉದ್ದೇಶವಾಗಿದೆ.

CM launches Griha Arogya Scheme Provides Free Health Checkups At Door

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಈ ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಿದ್ದಾರೆ. ಹಾಗೆ ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯಲ್ಲಿ ಈ ಯೋಜನೆ ಅಡಿ ನಾಲ್ವರಿಗೆ ಮನೆಯಲ್ಲೇ ತಪಾಸಣೆ ನಡೆಸಿ ಔಷಧಿ ಕೂಡ ನೀಡಲಾಗಿದೆ. ಹಾಗೆ ಮುಂದಿನ ಜನವರಿಯಲ್ಲಿ ಇಡೀ ರಾಜ್ಯಕ್ಕೆ ಈ ಯೋಜನೆ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಏನಿದು ಗೃಹ ಆರೋಗ್ಯ ಯೋಜನೆ?

ಈ ಗೃಹ ಆರೋಗ್ಯ ಯೋಜನೆಯಲ್ಲಿ ಮನೆ ಬಾಗಿಲಿಗೆ ಕೆಲವೊಂದು ಆರೋಗ್ಯ ವ್ಯವಸ್ಥೆಗಳನ್ನು ತರುವ ಯೋಜನೆ ಇದು. ಅದರಲ್ಲೂ ಆರೋಗ್ಯ ಕಾರ್ಯಕರ್ತರು ಪ್ರತಿ ದಿನಕ್ಕೆ 15 ಜನರ ಮನೆಗೆ ತೆರಳಿ ಸದಸ್ಯರ ತಂಡ ಆರೋಗ್ಯ ತಪಾಸಣೆ ನಡೆಸಲಿದೆ. ಸದಸ್ಯರಲ್ಲಿ ಇರುವ ಅನಾರೋಗ್ಯ ಸಮಸ್ಯೆಗಳಿಗೆ ಔಷಧಿ ಸಹ ನೀಡಲಿದ್ದಾರೆ.

ಯಾವೆಲ್ಲಾ ಕಾಯಿಲೆಗೆ ಔಷಧಿ ನೀಡುತ್ತಾರೆ

ಆರೋಗ್ಯ ಕಾರ್ಯಕರ್ತರ ತಂಡವು ಬಿಪಿ, ಮಧುಮೇಹ, ಕ್ಯಾನ್ಸರ್, ಗರ್ಭಕ್ಕೆ ಕುರಿತ ಸಮಸ್ಯೆಗಳ ತಪಾಸಣೆ ಸೇರಿ ಹಲವು ರೀತಿ ಸಮಸ್ಯೆಗಳ ಪರಿಶೀಲನೆ ನಡೆಸಲಿದ್ದಾರೆ. ಹಾಗೆ ಉಚಿತ ಔಷಧಿ, ಆಹಾರ, ವ್ಯಾಯಾಮ ಸಲಹೆ ನೀಡಲಿದ್ದಾರೆ. ತಿಂಗಳಲ್ಲಿ ವಿಶೇಷ ಆರೋಗ್ಯ ಶಿಬಿರಗಳು, ಸಾಂಕ್ರಾಮಿಕಗಳ ಮೇಲ್ವಿಚಾರಣೆ ಕೂಡ ಈ ಕಾರ್ಯಕರ್ತರು ಮಾಡಲಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದಲ್ಲಿನ ಅನಾರೋಗ್ಯ ಸಮಸ್ಯೆಗಳ ದೂರ ಮಾಡುವ ಗುರಿ ಹೊಂದಲಾಗಿದೆ.

ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಆಸ್ಪತ್ರೆ ಹಾಗೂ ಅಧಿಕ ವೆಚ್ಚದ ಕಾರಣಕ್ಕೆ ಆರೋಗ್ಯ ತಪಾಸಣೆಗೆ ಮುಂದಾಗುವುದಿಲ್ಲ. ಈ ಕಾರಣದಿಂದಾಗಿಯೇ ಜನರು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗುವುದು, ಮರಣ ಹೊಂದುವ ಪ್ರಮಾಣ ಹೆಚ್ಚಿದೆ. ಈ ಸಮಸ್ಯೆಯ ಬಗೆಹರಿಸುವ ಉದ್ದೇಶದಿಂದ ಗೃಹ ಆರೋಗ್ಯ ಎಂಬ ಆಲೋಚನೆಯನ್ನ ಜಾರಿ ಮಾಡಲಾಗಿದೆಯಂತೆ.

ಆರೋಗ್ಯ ಇಲಾಖೆಯ ಪ್ರಕಾರ ಆರೋಗ್ಯ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕಾಗಿ ಒಟ್ಟು 92.75 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಮುಂದಿನ ದಿನಗಳಲ್ಲಿ ಈ ಹಣದಿಂದಾಗಿ ಇಡೀ ರಾಜ್ಯದಲ್ಲೂ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಜನವರಿಯಿಂದ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯವಾಗಿ ಈ ಯೋಜನೆ ಸಾಂಕ್ರಮಿಕ ಅಲ್ಲದ ರೋಗಗಳ ಕುರಿತು ವಿಶೇಷ ಗಮನ ಹರಿಸಲಿದೆ. ಏಕೆಂದರೆ ಭಾರತದಲ್ಲಿ ಸಾಂಕ್ರಮಿಕವಲ್ಲದ ರೋಗಗಳಿಂದ ಸುಮಾರು ಶೇ.63ರಷ್ಟು ಸಾವುಗಳು ದಾಖಲಾಗುತ್ತವೆ. ಈ ಪ್ರಮಾಣ ಇಳಿಸುವ ಗುರಿ ಹೊಂದಲಾಗಿದೆಯಂತೆ. ಹಾಗೆ ರಾಜ್ಯದಲ್ಲಿ ಶೇ.15.6ರಷ್ಟು ಮಂದಿ ಶುಗರ್‌ನಿಂದ ಬಳಲುತ್ತಿದ್ದಾರೆ ಮತ್ತು ಶೇ.26.8ರಷ್ಟು ಮಂದಿ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗೆ ಗುರಿಯಾಗಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದಾರೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

CM launches Griha Arogya Scheme: Provides Free Health Checkups At Door

The Department of Health and Family Welfare initiates outreach programs to underprivileged communities, ensuring timely disease detection and data documentation.
Story first published: Friday, October 25, 2024, 9:51 [IST]
X
Desktop Bottom Promotion