Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿ 511 ಹೊಸ ಕೋವಿಡ್ ಪ್ರಕರಣ ದಾಖಲು..! ಕರ್ನಾಟಕದಲ್ಲೇ ಅತೀ ಹೆಚ್ಚು..!
ಹಿಂದೊಮ್ಮೆ ಕೊರೊನಾ ಸಾಂಕ್ರಾಮಿಕ ರೋಗವು ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಭಾರತದಲ್ಲಿಯೂ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಸುಮಾರು ಎರಡು ವರ್ಷಗಳ ಮನಕುಲವನ್ನೇ ಕಾಡಿದ್ದ ಕೊರೊನಾ ಇದೀಗ ಮತ್ತೆ ಅಬ್ಬರಿಸುವ ಮನ್ಸೂಚನೆ ನೀಡಿದೆ.
ಯೂರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ಕೊರೊನಾ ಹೊಸ ರೂಪಾಂತರದ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲೂ ಈ ಪ್ರಕರಣ ಕಳೆದೊಂದು ತಿಂಗಳಿನಿಂದ ಏರುಗತಿಯಲ್ಲಿದೆ. ಕಳೆದ ವರ್ಷದಿಂದ ಕೊರೊನಾ ಕೇಸ್ಗಳು ಇಳಿಮುಖವಾಗಿ ಶೂನ್ಯ ಪ್ರಕರಣವೂ ದಾಖಲಾಗಿತ್ತು. ಆದರೆ 2023ರ ಕೊನೆಯಲ್ಲಿ ಮತ್ತೆ ಪ್ರಕರಣಗಳು ಕಾಣಿಸಿಕೊಂಡಿವೆ.

ಹೊಸ ರೂಪಾಂತರವಾಗಿರುವ JN.1 ಇದೀಗ ವೇಗವಾಗಿ ಹರಡುತ್ತಿದೆ. ದೇಶದಲ್ಲಿ ಈ ರೂಪಾಂತರ ಪ್ರಕರಣಗಳ ಸಂಖ್ಯೆ ಬರೋಬ್ಬರಿ 511ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಕರ್ನಾಟಕದಲ್ಲೇ ಅತೀ ಹೆಚ್ಚು ಕೇಸ್ ದಾಖಲಾಗಿವೆ ಎಂದು ಅಧಿಕೃತ ಮೂಲಗಳು ಇಂದು ತಿಳಿಸಿವೆ.
ಕರ್ನಾಟಕದಲ್ಲಿ 199, ಕೇರಳದಲ್ಲಿ 148, ಗೋವಾದಲ್ಲಿ 47, ಗುಜರಾತ್ನಲ್ಲಿ 36, ಮಹಾರಾಷ್ಟ್ರದಲ್ಲಿ 32, ತಮಿಳುನಾಡಿನಲ್ಲಿ 26, ದೆಹಲಿಯಲ್ಲಿ 15, ರಾಜಸ್ಥಾನದಲ್ಲಿ 4, ತೆಲಂಗಾಣದಲ್ಲಿ 2 ಮತ್ತು ತಲಾ ಒಂದು ಪ್ರಕರಣಗಳು ಹರಿಯಾಣ ಮತ್ತು ಒಡಿಶಾದಿಂದ ವರದಿಯಾಗಿದೆ.
WHO JN.1 ಅನ್ನು ಪ್ರತ್ಯೇಕ "ಆಸಕ್ತಿಕರ ರೂಪಾಂತರ" ಎಂದು ವರ್ಗೀಕರಿಸಿದೆ. ಜೊತೆಗೆ ಅದು ವೇಗವಾಗಿ ಹರಡುವಿಕೆ ಹೆಚ್ಚುತ್ತಾ ಸಾಗಿದೆ ಎಂದಿದೆ. ಆದರೆ ಜಾಗತಿಕ ಸಾರ್ವಜನಿಕ ಆರೋಗ್ಯದ ಮೇಲೆ ಇದು ಕಡಿಮೆ ಅಪಾಯವನ್ನು ಉಂಟುಮಾಡುತ್ತದೆ ಎಂದಿದೆ.
ಕೊರೊನಾ ವೈರಸ್ನ JN.1 ರೂಪಾಂತರದ ಹಿಂದೆ BA.2.86 ಉಪ-ವಂಶಾವಳಿಗಳ ಭಾಗವಾಗಿ ಆಸಕ್ತಿಯ ರೂಪಾಂತರ (VOI) ಎಂದು ವರ್ಗೀಕರಿಸಲಾಗಿದೆ, ಇದು VOI ಎಂದು ವರ್ಗೀಕರಿಸಲಾದ ಪೋಷಕ ವಂಶಾವಳಿಯಾಗಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ದೇಶದಲ್ಲಿ ಜೆಎನ್.1 ರೂಪಾಂತರವನ್ನು ಪತ್ತೆಹಚ್ಚುವ ನಡುವೆಯೂ ನಿರಂತರ ಜಾಗರೂಕತೆಯನ್ನು ಕಾಪಾಡಿಕೊಳ್ಳಲು ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹಂಚಿಕೊಂಡಿರುವ COVID-19 ಗಾಗಿ ಪರಿಷ್ಕೃತ ಮಾರ್ಗಸೂಚಿಯನ್ನು ಕಟ್ಟನಿಟ್ಟಾಗಿ ಅನುಸರಿಸುವಂತೆ ರಾಜ್ಯಗಳನ್ನು ಒತ್ತಾಯಿಸಲಾಗಿದೆ. ಎಲ್ಲಾ ಆರೋಗ್ಯ ಸೌಲಭ್ಯಗಳಲ್ಲಿ ಇನ್ಫ್ಲುಯೆನ್ಸ ತರಹದ ಕಾಯಿಲೆ (ILI) ಮತ್ತು ತೀವ್ರತರವಾದ ಉಸಿರಾಟದ ಕಾಯಿಲೆ (SARI) ಯ ಜಿಲ್ಲಾವಾರು ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವರದಿ ಮಾಡಲು ಕೇಳಲಾಗಿದೆ.
JN.1 ಕೋವಿಡ್ 19ನಿಂದ ಭಾರತಕ್ಕೆ ಅಪಾಯವಿದೆಯೇ? JN.1 ಕೋವಿಡ್ 19 ರೂಪಾಂತಾರ ವಿಶ್ವದೆಲ್ಲಡೆ ಹೆಚ್ಚಾಗುತ್ತಿದೆ. ಹಾಗಾಗಿ ಭಾರತದಲ್ಲಿಯೂ ಕುರಿತು ಎಚ್ಚರಿಕೆವಹಿಸಬೇಕಾಗಿದೆ, ಒಮಿಕ್ರಾನ್ನ ರೂಪಾಂತರವಾಗಿರುವ ಈ ಕೋವಿಡ್ ಭಾರತದಲ್ಲಿ ಮತ್ತೊಮ್ಮೆ ಅಪಾಯವನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿರುವುದರಿಮದ ಸರ್ಕಾರ ಹಾಗೂ ಜನರು ಈ ಕುರಿತು ಹೆಚ್ಚಿನ ಜಾಗ್ರತೆವಹಿಸಬೇಕಾಗಿದೆ.
JN.1 ಕೋವಿಡ್ 19
ಆರೋಗ್ಯ ತಜ್ಞರ ಪ್ರಕಾರ JN.1 ಕೋವಿಡ್ 19 ಲಕ್ಷಣಗಳು
* ಜ್ವರ
* ಕೆಮ್ಮು
* ಸುಸ್ತು
* ಮೂಗು ಕಟ್ಟುವುದು
* ಶೀತ
* ಬೇಧಿ
*ತಲೆನೋವು
ಕೋವಿಡ್ 19 ತಡೆಗಟ್ಟಲು ಏನು ಮಾಡಬೇಕು?
ಕೊರೊನಾವನ್ನು ಹೇಗೆ ನಿಯಂತ್ರಿಸಬೇಕು ಎಂದು ನಮ್ಮೆಲ್ಲರಿಗೂ ಗೊತ್ತಿದೆ. ಹಾಗಾಗಿ ಈ ಬಾರಿ ಕೊರೊನಾ ತಡೆಗಟ್ಟಲು ಈ ಹಿಂದೆ ಮಾಡಿದ ಉಪಾಯಗಳನ್ನೇ ಮಾಡುವುದು ಒಳ್ಳೆಯದು
* ಮಾಸ್ಕ್ ಧರಿಸಿ: ಮತ್ತೆ ಮಾಸ್ಕ್ ಧರಿಸಿ, ಅದರಲ್ಲೂ ಚಳಿಗಾಲ ಜನರು ಗುಂಪಿನಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಧರಿಸಿ, ಡಬಲ್ ಮಾಸ್ಕ್ ಧರಿಸಿ.
* ಸ್ಯಾನಿಟೈಸರ್ ಬಳಸಿ
* ಸಾಧ್ಯವಾದರೆ ಸಾಮಾಜಿಕ ಅಂತರ ಕಾಪಾಡಿಗೊಳ್ಳಿ
* ಅಫೀಸ್ನಲ್ಲಿ ಗಎಸಿ ರೂಮ್ಗಿಂತ ಗಾಳಿ ಚೆನ್ನಾಗಿ ಓಡಾಡುವಂತೆ ಇದ್ದರೆ ಒಳ್ಳೆಯದು
* ಕೆಮ್ಮು, ಶೀತ, ಜ್ವರವಿದ್ದರೆ ಮನೆಯಲ್ಲಿಯೇ ರೆಸ್ಟ್ ಮಾಡಿ, ಹೊರಗಡೆ ಓಡಾಡಬೇಡಿ. ಮನೆಯಲ್ಲಿಯೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಅಂದರೆ ಮಕ್ಕಳು, ಗರ್ಭಿಣಿ, ವಯಸ್ಸಾದವರು ಇದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications