Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ತಣ್ಣೀರಿನಿಂದ ಮುಖ ತೊಳೆಯಿರಿ, ವ್ಯತ್ಯಾಸ ನೀವೇ ನೋಡಿ!
ಬೆಳಿಗ್ಗೆದ್ದ ತಕ್ಷಣ ಕನ್ನಡಿಯಲ್ಲಿ ಮುಖವನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿ. ಕೊಂಚವೇ ಊದಿಕೊಂಡಿರುವಂತೆ ತೋರುತ್ತದೆ ಅಲ್ಲವೇ? ರಾತ್ರಿಯ ವಿಶ್ರಾಂತಿಯ ವೇಳೆ ನಮ್ಮ ಚರ್ಮದ ಸೂಕ್ಷ್ಮರಂಧ್ರಗಳು ವಿಶಾಲವಾಗಿ ತೆರೆದು ಜೀವಕೋಶಗಳ ಬೆಳವಣಿಗೆಗೆ ಸ್ಥಳಾವಕಾಶ ಮಾಡಿಕೊಡುತ್ತದೆ. ಆದ್ದರಿಂದಲೇ ಮುಖ ಕೊಂಚವೇ ಊದಿಕೊಂಡಂತೆ ಕಾಣುತ್ತದೆ. ಕೊಂಚ ಹೊತ್ತಿನ ಬಳಿಕ ಇದು ಸಾಮಾನ್ಯವಾಗಬೇಕು.
ಇದಕ್ಕೆ ಅತ್ಯುತ್ತಮವೆಂದರೆ ತಣ್ಣೀರಿನಿಂದ ಮುಖ ತೊಳೆದುಕೊಳ್ಳುವುದು. ಬಿಸಿನೀರಿನಿಂದ ತೊಳೆದುಕೊಂಡರೆ ಇದಕ್ಕೆ ವಿರುದ್ಧವಾದ ಪರಿಣಾಮವಾಗುತ್ತದೆ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳುವುದರಿಂದ, ಅದರಲ್ಲೂ ಬೆಳಿಗ್ಗೆದ್ದ ಬಳಿಕ ತೊಳೆದುಕೊಳ್ಳುವುದರಿಂದ ಮುಖದ ಸೌಂದರ್ಯ, ಚರ್ಮದ ಸೆಳೆತ ಹೆಚ್ಚುತ್ತದೆ ಹಾಗೂ ಊದಿಕೊಂಡ ಚರ್ಮ ಮೊದಲಿನಂತಾಗುತ್ತದೆ. ಬನ್ನಿ, ಈ ವಿಧಾನ ಇನ್ನೂ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದನ್ನು ನೋಡೋಣ:

* ತಣ್ಣೀರಿನಿಂದ ಬೆಳಿಗ್ಗೆ ಮುಖ ತೊಳೆದುಕೊಳ್ಳುವ ಮೂಲಕ ರಾತ್ರಿಯ ವಿಶ್ರಾಂತಿಯ ವೇಳೆ ತೆರೆದಿದ್ದ ಸೂಕ್ಷ್ಮರಂಧ್ರಗಳೆಲ್ಲಾ ಮುಚ್ಚುತ್ತವೆ. ಇದು ಕಣ್ಣುಗಳಿಗೂ ಆರಾಮವನ್ನು ನೀಡುತ್ತದೆ.
* ಚರ್ಮದಲ್ಲಿ ನೆರಿಗೆ ಮೂಡದೇ ಇರಲು ತಣ್ಣೀರಿಗಿಂತ ಇನ್ನೊಂದು ನೆರಿಗೆನಿವಾರಕವಿಲ್ಲ. ಅಷ್ಟೇ ಅಲ್ಲ ಚರ್ಮದ ಸೆಳೆತ ಹೆಚ್ಚಿಸಿ ತಾರುಣ್ಯ ಮತ್ತು ಕಾಂತಿಯನ್ನು ಹೆಚ್ಚಿಸುತ್ತದೆ. ನಿತ್ಯವೂ ಬೆಳಿಗ್ಗೆದ್ದ ತಕ್ಷಣ ಪ್ರಥಮವಾಗಿ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ವಯಸ್ಸಾಗುವುದನ್ನೂ ನಿಧಾನಗೊಳಿಸಬಹುದು.
* ಸೂರ್ಯನ ಪ್ರಖರ ಕಿರಣಗಳ ಪ್ರಭಾವವನ್ನು ಕಡಿಮೆಗೊಳಿಸಬಹುದು. ಏಕೆಂದರೆ ರಾತ್ರಿ ತೆರೆದುಕೊಂಡಿದ್ದ ಸೂಕ್ಷ್ಮರಂಧ್ರಗಳು ಬಿಗಿಯಾಗಿ ಮುಚ್ಚಿದ್ದ ಕಾರಣ ಸೂರ್ಯನ ಕಿರಣಗಳಿಗೆ ಚರ್ಮದ ಸೂಕ್ಷ್ಮಸಂವೇದಿ ಒಳಪದರಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ತನ್ಮೂಲಕ ಚರ್ಮ ಹಾನಿಯಿಂದ ರಕ್ಷಿಸಲ್ಪಡುತ್ತದೆ.
*ಬಿಸಿನೀರಿಗಿಂತಲೂ ತಣ್ಣೀರೇ ಉತ್ತಮ
ಬಿಸಿನೀರಿನಿಂದ ಮುಖ ತೊಳೆದುಕೊಳ್ಳುವಾಗ ಕೊಂಚ ಆಹ್ಲಾದಕರ ಎನಿಸಿದರೂ ಮುಖದ ಚರ್ಮಕ್ಕೆ ತಣ್ಣೀರೇ ಅತ್ಯಂತ ಸೂಕ್ತವಾಗಿದೆ. ಏಕೆಂದರೆ ಮುಖದ ಚರ್ಮ ಅತ್ಯಂತ ಸೂಕ್ಷ್ಮಸಂವೇದಿಯಾಗಿದ್ದು ತಾಪಮಾನಕ್ಕೆ ಅತಿಹೆಚ್ಚಾಗಿ ಸ್ಪಂದಿಸುತ್ತದೆ. ಬಿಸಿನೀರಿನಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಹೆಚ್ಚು ಸ್ಪಂದಿಸಿ ಹೆಚ್ಚಾಗಿ ತೆರೆದುಕೊಳ್ಳುತ್ತವೆ. ದೊಡ್ಡದಾಗಿ ತೆರೆದ ರಂಧ್ರಗಳು ಇನ್ನೂ ದೊಡ್ಡ ಧೂಳಿನ ಕಣಗಳಿಗೆ ಆಹ್ವಾನ ನೀಡುತ್ತದೆ.
ಜೊತೆಗೇ ಹೆಚ್ಚಿನ ಪ್ರಮಾಣದ ಮತ್ತು ಆಳವಾಗಿ ಕುಳಿತುಕೊಳ್ಳಲು ನಾವೇ ರತ್ನಗಂಬಳಿ ಹಾಸಿ ಬೇಡದ ಅತಿಥಿಗಳನ್ನು ಕರೆದಂತಾಗುತ್ತದೆ. ಚರ್ಮ ಸಡಿಲವಾಗಿ ನೆರಿಗೆಗಳು ಶೀಘ್ರವಾಗಿ ಆವರಿಸುತ್ತವೆ. ಬದಲಿಗೆ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಈ ರಂಧ್ರಗಳು ಇನ್ನಷ್ಟು ಕಿರಿದಾಗಿ ಧೂಳಿನ ಕಣಗಳ ಪ್ರವೇಶಕ್ಕೆ ಪ್ರವೇಶವಿಲ್ಲ ಎಂಬ ಫಲಕ ತೋರಿಸುತ್ತವೆ. ಇದರಿಂದ ಚರ್ಮ ತನ್ನ ಸಹಜ ಸೆಳೆತವನ್ನು ಪಡೆದು ನೆರಿಗೆಗಳಿಂದ ಮುಕ್ತವಾಗಿರುತ್ತದೆ.



Click it and Unblock the Notifications












