Latest Updates
-
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ!
ಮಳೆಗಾಲದಲ್ಲಿ ತ್ವಚೆಯ ಆರೈಕೆಗೆ ಸರಳ ಸೂತ್ರ
ಮಳೆಗಾಲ ಶುರುವಾಗಿ ಬಿಟ್ಟಿದೆ, ನಾನಾ ಬಗೆಯ ರೋಗರುಜಿನಗಳ ಜೊತೆ ಚರ್ಮದ ಸೊಂಕು ಕೂಡ ಈ ಋತುವಿನಲ್ಲಿ ಬಾಧಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ಇಂತಹ ಸಮಯದಲ್ಲಿ ರಾಸಾಯನಿಕಗಳಿರುವ ಪ್ರಸಾಧನಗಳ ಬಳಕೆಯನ್ನು ಕಡಿಮೆ ಮಾಡಿ ನೈಸರ್ಗಿಕ ವಿಧಾನವನ್ನು ನಿಮ್ಮದಾಗಿಸಿಕೊಂಡು ಸೌಂದರ್ಯವನ್ನು ಇನ್ನಷ್ಟು ವರ್ಧಿಸಬಹುದಾಗಿದೆ. ಅಂತೆಯೇ ಆಯಾಯ ಕಾಲಕ್ಕೆ ಅನುಸಾರವಾಗಿ ನಿಮ್ಮ ಸೌಂದರ್ಯದ ರಕ್ಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ.
ಹೌದು, ಮಳೆಗಾಲದಲ್ಲಿ ಮುಖದ ಸೌಂದರ್ಯ ಹಾಳಾಗುವುದು ಬಹುಬೇಗ. ಅಂತೆಯೇ ತ್ವಚೆಗೆ ಬಳಸುವ ಸೌಂದರ್ಯವರ್ಧಕ ಸಾಮಾಗ್ರಿಗಳು ನೀರಿನ ಹಾನಿಗೆ ಒಳಪಟ್ಟಾಗ ಇದು ಕೂಡ ನಿಮ್ಮ ತ್ವಚೆಯ ಮೇಲೆ ದುಷ್ಪರಿಣಾಮಗಳನ್ನು ಬೀರಬಹುದು. ಆದರೆ ಇದಕ್ಕೆಲ್ಲಾ ಚಿಂತೆ ಮಾಡುವ ಅಗತ್ಯವೇ ಇಲ್ಲ. ಸುಂದರ ತ್ವಚೆ ಮತ್ತು ತ್ವಚೆಯನ್ನು ಆರೋಗ್ಯವಾಗಿಡಲು ನಮ್ಮಲ್ಲಿ ಕೆಲವೊಂದು ಟಿಪ್ಸ್ ಮತ್ತು ಟ್ರಿಕ್ಸ್ಗಳಿವೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ತ್ವಚೆಯ ಶುಚಿತ್ವದ ಪ್ರಾಮುಖ್ಯತೆ ನೀಡಿ
ಈ ಋತುವಿನಲ್ಲಿ ತೇವಾಂಶವು ಅಧಿಕವಾಗಿರುತ್ತದೆ ಮತ್ತು ಇದು ತ್ವಚೆಯ ರಂಧ್ರಗಳನ್ನು ಮುಚ್ಚಿಬಿಡಬಹುದು. ತ್ವಚೆಯ ರಂಧ್ರಗಳು ಮುಚ್ಚಲ್ಪಟ್ಟರೆ ಅದರಿಂದ ಮೊಡವೆಗಳು ಬರುತ್ತದೆ. ನಿಮ್ಮ ತ್ವಚೆಯನ್ನು ಶುಚಿಯಾಗಿಟ್ಟುಕೊಳ್ಳುವುದು ತುಂಬಾಮುಖ್ಯ. ತ್ವಚೆಯು ಎಣ್ಣೆಯಂಶವನ್ನು ಹೊಂದಿದ್ದರೆ ತೇವಾಂಶದೊಂದಿಗೆ ಧೂಳು ಮತ್ತು ಕಲ್ಮಶದೊಂದಿಗೆ ತ್ವಚೆಯಲ್ಲಿ ಮೊಡವೆಗಳು ಉಂಟಾಗಬಹುದು. ನಿಯಮಿತವಾಗಿ ತ್ವಚೆಯನ್ನು ತೊಳೆಯುವುದರಿಂದ ಕಲ್ಮಶ ದೂರವಾಗಿ ಆರೋಗ್ಯಕರ ತ್ವಚೆಯನ್ನು ಪಡೆಯಬಹುದಾಗಿದೆ.

ಮಳೆಗಾಲದಲ್ಲಿ ಒಣ ತ್ವಚೆ ಕಂಡುಬಂದರೆ
ಗಾಳಿಯಲ್ಲಿ ತೇವಾಂಶವಿದ್ದರೂ ಒಣ ತ್ವಚೆಯವರಿಗೆ ತುರಿಕೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಹೌದು ಮಳೆಗಾಲದಲ್ಲಿ ಇಂತಹ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಒಣ ತ್ವಚೆ ಹೊಂದಿರುವವರು ಪ್ರತೀ ರಾತ್ರಿ ಜೇನು ಮತ್ತು ಹಾಲಿನ ಮಿಶ್ರಣವನ್ನು ಹಚ್ಚಿಕೊಂಡರೆ ತ್ವಚೆಯಲ್ಲಿ ತೇವಾಂಶವು ನಿಯಂತ್ರಣದಲ್ಲಿರುತ್ತದೆ. ಆದರೆ ಒಂದು ಮಾತು ನೆನಪಿಡಿ ಸೋಪ್ ಅಥವಾ ಸೋಪ್ನಿಂದ ಮಾಡಲ್ಪಟ್ಟಿರುವಂತಹ ಫೇಸ್ ವಾಶ್ ಗಳನ್ನು ಯಾವತ್ತೂ ಬಳಸಬಾರದು. ಇದು ಒಣ ತ್ವಚೆಯ ತುರಿಕೆ ಮತ್ತು ಒಣಗುವಿಕೆ ಹೆಚ್ಚಿಸುತ್ತದೆ.

ಪುದೀನ ಫೇಶಿಯಲ್
ಮಳೆಗಾಲದಲ್ಲಿ ಪುದೀನ ಅಥವಾ ಪಪ್ಪಾಯ ಫೇಶಿಯಲ್ ಮಾಡಿಸಿಕೊಂಡರೆ ಒಳ್ಳೆಯ ಪರಿಣಾಮವಿರುತ್ತದೆ. ಪುದೀನ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವುದಲ್ಲದೆ ಚರ್ಮವನ್ನು ಮೃದುಗೊಳಿಸಿ ಮುಚ್ಚಿಹೋಗಿರುವ ರಂಧ್ರಗಳನ್ನೂ ಸಹ ಶುದ್ಧಿ ಮಾಡಿ ಆ ರಂಧ್ರಗಳ ಗಾತ್ರವನ್ನು ಕಡಿಮೆಮಾಡುತ್ತದೆ. ಅಲ್ಲದೆ ಪಪ್ಪಾಯಿ ಹಣ್ಣಿನಿಂದ ಪೋಷಣೆ ಮಾಡಿದರೆ ಮುಖವು ತೇವಾಂಶದಿಂದ ಕಾಂತಿಯುತವಾಗಿ ಕಾಣುತ್ತದೆ.

ರಾಸಾಯನಿಕ ಕ್ರೀಮ್ಗಳಿಂದ ದೂರವಿರಿ
ಮಳೆಗಾಲದಲ್ಲಿ ಆರ್ದ್ರತೆ (Humidity) ಮಟ್ಟವು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ರಾಸಾಯನಿಕ ಲೋಶನ್ಗಳು ಅಥವ ಕ್ರೀಮ್ಗಳನ್ನು ಹಚ್ಚುವುದನ್ನು ತಪ್ಪಿಸಿ, ಸಾಧ್ಯವಾದಷ್ಟು ಸೈಸರ್ಗಿಕ ಫೇಸ್ ಕ್ರೀಮ್ ಅನ್ನು ಆಯ್ದುಕೊಳ್ಳಿ

ತ್ವಚೆಯಲ್ಲಿ ಕಾಣಿಸಿಕೊಳ್ಳುವ ಮೊಡವೆ
ನೀವು ಈಗಾಗಲೇ ಮೊಡವೆಯಿಂದ ತೊಂದರೆಗೆ ಒಳಗಾಗಿದ್ದೀರಿ ಎಂದು ನಿಮಗನಿಸಿದರೆ ಅದರಿಂದ ನಿವಾರಣೆ ಪಡೆಯಲು ನಾವು ನಿಮಗೆ ಕೆಲವೊಂದು ಸಾಮಾನ್ಯ ಮನೆಮದ್ದನ್ನು ತಿಳಿಸುತ್ತೇವೆ. ಚಿಂತೆ ಬೇಡ. ಮಣ್ಣು, ಬೇವು,ಪುದೀನಾ,ಕರ್ಪೂರ ಮತ್ತು ರೋಸ್ ವಾಟರನ್ನು ಮಿಶ್ರಣ ಮಾಡಿ ಮತ್ತು ಇದನ್ನು ನಿಮ್ಮ ತ್ವಚೆಗೆ 15 ನಿಮಿಷ ಹಚ್ಚಿಕೊಳ್ಳಿ. ತದನಂತರ ತಂಪಾದ ನೀರಿನಿಂದ ಇದನ್ನು ತೊಳೆದು ತೆಗೆಯಿರಿ.



Click it and Unblock the Notifications