Latest Updates
-
ಭಾರಿ ಮಳೆ: ಅಮರನಾಥ-ವೈಷ್ಣೋದೇವಿ ಯಾತ್ರೆ ಸ್ಥಗಿತ; ಯಾತ್ರಿಕರು ಈಗ ಏನು ಮಾಡಬೇಕು? -
ಬಿರುಗಾಳಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ -
ಆನ್ಲೈನ್ ಫುಡ್ ಆರ್ಡರ್ ಮಾಡ್ತೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು! -
ಲಾರ್ಡ್ಸ್ ಅಂಗಳದಲ್ಲಿ ಹೈ-ವೋಲ್ಟೇಜ್ ಕದನ: ಭಾರತ-ಇಂಗ್ಲೆಂಡ್ ಸರಣಿ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲೋದು ಯಾರು? -
ಮಂಗಳೂರು ಮಳೆ: ಬೈಕ್ ಸವಾರರೇ ಎಚ್ಚರ! ಸ್ನಾಯು ನೋವು ತಡೆಯಲು ಮನೆಯಿಂದ ಹೊರಡುವ ಮುನ್ನ ಈ 6 ನಿಮಿಷದ ವ್ಯಾಯಾಮ ಮಾಡಿ -
ಇಂಟರ್ಸೆಕ್ಸ್ ವ್ಯಕ್ತಿಗಳ ಕಾನೂನು ಗುರುತಿಗೆ ಸುಪ್ರೀಂ ಕೋರ್ಟ್ ಮಹತ್ವದ ನೋಟಿಸ್: ದಂಪತಿಗಳಿಗೆ ಸಿಗಲಿದೆ ಹೊಸ ಭರವಸೆ? -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆ ಮತ್ತು ಗಾರ್ಡನ್ ಸುರಕ್ಷಿತವಾಗಿಡಲು ಈ ಸರಳ ಟಿಪ್ಸ್ ಪಾಲಿಸಿ -
ಮಹಿಸಾಗರದ ಹಾಸ್ಟೆಲ್ನಲ್ಲಿ 147 ವಿದ್ಯಾರ್ಥಿನಿಯರಿಗೆ ಫುಡ್ ಪಾಯಿಸನಿಂಗ್: ಮಳೆಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಎಚ್ಚರವಿರಲಿ! -
ಇಂದಿನ ಪೆಟ್ರೋಲ್, ಡೀಸೆಲ್ ದರ: ವಾಹನ ಸವಾರರಿಗೆ ಗುಡ್ ನ್ಯೂಸ್, ಕರ್ನಾಟಕದಲ್ಲಿ ಬೆಲೆ ಎಷ್ಟಿದೆ ನೋಡಿ! -
ಮಳೆಗಾಲದ ಹಿಮಾಲಯ ಚಾರಣ: ಭೂಕುಸಿತ ಮತ್ತು ಗಾಯಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ತ್ವಚೆಗೆ ತಕ್ಕಂತೆ ಆರೈಕೆ ಹೆಚ್ಚಿಸುವುದು ಸೌಂದರ್ಯ

ಸಾಮಾನ್ಯ ತ್ವಚೆ ಆರೈಕೆ:
1. 1 ಕ್ಯಾರೆಟ್ ತುರಿ, ಅರ್ಧ ಮೊಟ್ಟೆಯ ಬಿಳಿಭಾಗ, ಸ್ವಲ್ಪ ಹಾಲು ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ ಮುಖಕ್ಕೆ 15 ನಿಮಿಷದ ಬಳಿಕ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.
2. 8 ಬಾದಾಮಿ ರಾತ್ರಿ ನೀರಲ್ಲಿ ತೊಳೆದು ನೆನೆಸಿ ಅದೇ ನೀರಲ್ಲಿ ಗುಲಾಬಿ ದಳಗಳೊಂದಿಗೆ ಅರೆಯಬೇಕು. ಇದಕ್ಕೆ ಶುದ್ಧ ಪಚ್ಚ ಕರ್ಪೂರ ಚಿಟಿಕೆಯಷ್ಟು ಬೆರೆಸಿ ಮುಖಕ್ಕೆ ಲೇಪಿಸಿ ಮೃದುವಾಗಿ ಮಸಾಜು ಮಾಡಿ 20 ನಿಮಿಷದ ಬಳಿಕ ಮತ್ತೆ ಮಸಾಜು ಮಾಡಿ ತೊಳೆಯಬೇಕು. ಈ ರೀತಿ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.
3. 15 - 20 ತುಳಸೀ ಎಲೆ, 15 ಕರಿಬೇವು, 15 - 20 ಪುದೀನಾ ಎಲೆಗಳನ್ನು ಅರೆದು, ಸೌತೆಕಾಯಿಯ ರಸ ಬೆರೆಸಿ ಲೇಪ ತಯಾರಿಸಿ ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಸಾಮಾನ್ಯ ತ್ವಚೆ ಮೇಲೆ ಉತ್ತಮವಾದ ಪರಿಣಾಮ ಬೀಳುತ್ತದೆ.
4. ಬಾಳೆಹಣ್ಣು ಹಾಗೂ ಸ್ಟ್ರಾಬೆರಿ ಹಣ್ಣನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿದರೆ ಮತ್ತು ಈ ಹಣ್ಣುಗಳ ಜ್ಯೂಸ್ ಕುಡಿದರೆ ಮುಖದ ಹೊಳಪು ಹೆಚ್ಚುವುದು.
5. ಸಾಮಾನ್ಯ ತ್ವಚೆ ಇರುವವರು ಎಳನೀರಿಗೆ ಹತ್ತಿಯ ಉಂಡೆಯನ್ನು ಅದ್ದಿ ಮುಖವನ್ನು ಕ್ಲೆನ್ಸ್ ಮಾಡಿದರೆ ಚರ್ಮ ತಾಜಾ ಆಗಿ ಹೊಳೆಯುತ್ತದೆ.
ಎಣ್ಣೆ ತ್ವಚೆಯ ಆರೈಕೆ:
1. ರಕ್ತಚಂದನವನ್ನು ನೀರಿನಲ್ಲಿ ತೇದಿ ಅದಕ್ಕೆ 4 ಚಮಚ ರೋಸ್ ವಾಟರ್ ಬೆರೆಸಿ ಲೇಪ ತಯಾರಿಸಿ ಮುಖಕ್ಕೆ ಹಚ್ಚಿದರೆ ಮುಖದ ಜಿಡ್ಡು ನಿವಾರಣೆಯಾಗುತ್ತದೆ.
2. ಮುಲ್ತಾನಿಮಿಟ್ಟಿ ( ಫುಲ್ಲರ್ ಅರ್ತ್ ) ಪೌಡರನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಮಾಡಿ ಮುಖ, ಕತ್ತು, ಕೈಕಾಲುಗಳಿಗೆ ಹಚ್ಚಿ 19-20 ನಿಮಿಷ ಬಿಟ್ಟು ತೊಳೆದರೆ ಚರ್ಮದ ಹೊಳಪು ಹೆಚ್ಚುತ್ತದೆ.
3. ಸೇಬು ಹಣ್ಣಿನ ತಿರುಳಿಗೆ ಒಂದು ನಿಂಬೆಹಣ್ಣಿನ ರಸ ಬೆರೆಸಿ ಮುಖಕ್ಕೆ ಲೇಪಿಸಿದರೆ ಒಳ್ಳೆಯದು.
4. ಮುಖ ತುಂಬಾ ಜಿಡ್ಡಾಗಿದ್ದರೆ 2 ಚಮಚ ರೋಸ್ ವಾಟರ್ ಅನ್ನು 4 ಚಮಚ ಐಸ್ ನೀರಿಗೆ ಬೆರೆಸಿ ಅದಕ್ಕೆ ಹತ್ತಿಯ ಉಂಡೆಯನ್ನು ಅದ್ದಿ ಮುಖವನ್ನು ಶುಚಿಗೊಳಿಸಿದರೆ ಮುಖ ತಾಜಾತನದಿಂದ ಹೊಳೆಯುತ್ತದೆ.
5. ಅಧಿಕ ಜಿಡ್ಡಿನಂಶ ಇರುವವರು ಪುದೀನಾ ರಸ ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ ನಂತರ ಮುಖ ತೊಳೆದರೆ ಎಣ್ಣೆ ತ್ವಚೆ ನಿವಾರಣೆಯಾಗುವುದು.
ಶುಷ್ಕ ತ್ವಚೆಯ ಆರೈಕೆ
1. ಸೀಬೆ ಹಣ್ಣಿನ ತಿರುಳಿಗೆ ಜೇನು ಬೆರೆಸಿ ಮಿಶ್ರ ಮಾಡಿ ಈ ಲೇಪನವನ್ನು ಹಚ್ಚಿ 20 ನಿಮಿಷದ ಬಳಿಕ ತೊಳೆದರೆ ಒಣ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ.
2. ಹಾಲಿನ ಕೆನೆಯನ್ನು ಹಚ್ಚಿದರೆ ಮುಖ ನುಣಪನ್ನು ಪಡೆಯುತ್ತದೆ. ಹಾಲಿನ ಕೆನೆಗೆ ಜೇನು ತುಪ್ಪ ಬೇಕಾದರೂ ಸೇರಿಸಬಹುದು.
3. ಬಾಳೆಹಣ್ಣಿಗೆ ಸ್ವಲ್ಪ ಮೊಸರು ಮಿಶ್ರ ಮಾಡಿ ಮುಖಕ್ಕೆ ದಪ್ಪವಾಗಿ ಹಚ್ಚಿದರೆ ಒಳ್ಳೆಯದು.
4. ರೋಸ್ ವಾಟರ್ ನಿಂದ ಕ್ಲೆನ್ಸ್ ಮಾಡುವುದು ತುಂಬಾ ಒಳ್ಳೆಯದು.
5. ತ್ವಚೆ ಸ್ವಲ್ಪ ಬಾಡಿದಾಗ ತಾಜಾ ಹಾಲಿನ ಕೆನೆಗೆ ಸ್ವಲ್ಪ ಜೇನುತುಪ್ಪ ಮಿಶ್ರ ಮಾಡಿ ಹಚ್ಚಿ 1 ಗಂಟೆಯ ಬಳಿಕ ಸ್ನಾನ ಮಾಡಿದರೆ ಚರ್ಮ ಹೊಳಪನ್ನು ಪಡೆಯುತ್ತದೆ.



Click it and Unblock the Notifications