Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತ್ವಚೆಗೆ ತಕ್ಕಂತೆ ಆರೈಕೆ ಹೆಚ್ಚಿಸುವುದು ಸೌಂದರ್ಯ

ಸಾಮಾನ್ಯ ತ್ವಚೆ ಆರೈಕೆ:
1. 1 ಕ್ಯಾರೆಟ್ ತುರಿ, ಅರ್ಧ ಮೊಟ್ಟೆಯ ಬಿಳಿಭಾಗ, ಸ್ವಲ್ಪ ಹಾಲು ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ ಮುಖಕ್ಕೆ 15 ನಿಮಿಷದ ಬಳಿಕ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.
2. 8 ಬಾದಾಮಿ ರಾತ್ರಿ ನೀರಲ್ಲಿ ತೊಳೆದು ನೆನೆಸಿ ಅದೇ ನೀರಲ್ಲಿ ಗುಲಾಬಿ ದಳಗಳೊಂದಿಗೆ ಅರೆಯಬೇಕು. ಇದಕ್ಕೆ ಶುದ್ಧ ಪಚ್ಚ ಕರ್ಪೂರ ಚಿಟಿಕೆಯಷ್ಟು ಬೆರೆಸಿ ಮುಖಕ್ಕೆ ಲೇಪಿಸಿ ಮೃದುವಾಗಿ ಮಸಾಜು ಮಾಡಿ 20 ನಿಮಿಷದ ಬಳಿಕ ಮತ್ತೆ ಮಸಾಜು ಮಾಡಿ ತೊಳೆಯಬೇಕು. ಈ ರೀತಿ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.
3. 15 - 20 ತುಳಸೀ ಎಲೆ, 15 ಕರಿಬೇವು, 15 - 20 ಪುದೀನಾ ಎಲೆಗಳನ್ನು ಅರೆದು, ಸೌತೆಕಾಯಿಯ ರಸ ಬೆರೆಸಿ ಲೇಪ ತಯಾರಿಸಿ ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಸಾಮಾನ್ಯ ತ್ವಚೆ ಮೇಲೆ ಉತ್ತಮವಾದ ಪರಿಣಾಮ ಬೀಳುತ್ತದೆ.
4. ಬಾಳೆಹಣ್ಣು ಹಾಗೂ ಸ್ಟ್ರಾಬೆರಿ ಹಣ್ಣನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿದರೆ ಮತ್ತು ಈ ಹಣ್ಣುಗಳ ಜ್ಯೂಸ್ ಕುಡಿದರೆ ಮುಖದ ಹೊಳಪು ಹೆಚ್ಚುವುದು.
5. ಸಾಮಾನ್ಯ ತ್ವಚೆ ಇರುವವರು ಎಳನೀರಿಗೆ ಹತ್ತಿಯ ಉಂಡೆಯನ್ನು ಅದ್ದಿ ಮುಖವನ್ನು ಕ್ಲೆನ್ಸ್ ಮಾಡಿದರೆ ಚರ್ಮ ತಾಜಾ ಆಗಿ ಹೊಳೆಯುತ್ತದೆ.
ಎಣ್ಣೆ ತ್ವಚೆಯ ಆರೈಕೆ:
1. ರಕ್ತಚಂದನವನ್ನು ನೀರಿನಲ್ಲಿ ತೇದಿ ಅದಕ್ಕೆ 4 ಚಮಚ ರೋಸ್ ವಾಟರ್ ಬೆರೆಸಿ ಲೇಪ ತಯಾರಿಸಿ ಮುಖಕ್ಕೆ ಹಚ್ಚಿದರೆ ಮುಖದ ಜಿಡ್ಡು ನಿವಾರಣೆಯಾಗುತ್ತದೆ.
2. ಮುಲ್ತಾನಿಮಿಟ್ಟಿ ( ಫುಲ್ಲರ್ ಅರ್ತ್ ) ಪೌಡರನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಮಾಡಿ ಮುಖ, ಕತ್ತು, ಕೈಕಾಲುಗಳಿಗೆ ಹಚ್ಚಿ 19-20 ನಿಮಿಷ ಬಿಟ್ಟು ತೊಳೆದರೆ ಚರ್ಮದ ಹೊಳಪು ಹೆಚ್ಚುತ್ತದೆ.
3. ಸೇಬು ಹಣ್ಣಿನ ತಿರುಳಿಗೆ ಒಂದು ನಿಂಬೆಹಣ್ಣಿನ ರಸ ಬೆರೆಸಿ ಮುಖಕ್ಕೆ ಲೇಪಿಸಿದರೆ ಒಳ್ಳೆಯದು.
4. ಮುಖ ತುಂಬಾ ಜಿಡ್ಡಾಗಿದ್ದರೆ 2 ಚಮಚ ರೋಸ್ ವಾಟರ್ ಅನ್ನು 4 ಚಮಚ ಐಸ್ ನೀರಿಗೆ ಬೆರೆಸಿ ಅದಕ್ಕೆ ಹತ್ತಿಯ ಉಂಡೆಯನ್ನು ಅದ್ದಿ ಮುಖವನ್ನು ಶುಚಿಗೊಳಿಸಿದರೆ ಮುಖ ತಾಜಾತನದಿಂದ ಹೊಳೆಯುತ್ತದೆ.
5. ಅಧಿಕ ಜಿಡ್ಡಿನಂಶ ಇರುವವರು ಪುದೀನಾ ರಸ ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ ನಂತರ ಮುಖ ತೊಳೆದರೆ ಎಣ್ಣೆ ತ್ವಚೆ ನಿವಾರಣೆಯಾಗುವುದು.
ಶುಷ್ಕ ತ್ವಚೆಯ ಆರೈಕೆ
1. ಸೀಬೆ ಹಣ್ಣಿನ ತಿರುಳಿಗೆ ಜೇನು ಬೆರೆಸಿ ಮಿಶ್ರ ಮಾಡಿ ಈ ಲೇಪನವನ್ನು ಹಚ್ಚಿ 20 ನಿಮಿಷದ ಬಳಿಕ ತೊಳೆದರೆ ಒಣ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ.
2. ಹಾಲಿನ ಕೆನೆಯನ್ನು ಹಚ್ಚಿದರೆ ಮುಖ ನುಣಪನ್ನು ಪಡೆಯುತ್ತದೆ. ಹಾಲಿನ ಕೆನೆಗೆ ಜೇನು ತುಪ್ಪ ಬೇಕಾದರೂ ಸೇರಿಸಬಹುದು.
3. ಬಾಳೆಹಣ್ಣಿಗೆ ಸ್ವಲ್ಪ ಮೊಸರು ಮಿಶ್ರ ಮಾಡಿ ಮುಖಕ್ಕೆ ದಪ್ಪವಾಗಿ ಹಚ್ಚಿದರೆ ಒಳ್ಳೆಯದು.
4. ರೋಸ್ ವಾಟರ್ ನಿಂದ ಕ್ಲೆನ್ಸ್ ಮಾಡುವುದು ತುಂಬಾ ಒಳ್ಳೆಯದು.
5. ತ್ವಚೆ ಸ್ವಲ್ಪ ಬಾಡಿದಾಗ ತಾಜಾ ಹಾಲಿನ ಕೆನೆಗೆ ಸ್ವಲ್ಪ ಜೇನುತುಪ್ಪ ಮಿಶ್ರ ಮಾಡಿ ಹಚ್ಚಿ 1 ಗಂಟೆಯ ಬಳಿಕ ಸ್ನಾನ ಮಾಡಿದರೆ ಚರ್ಮ ಹೊಳಪನ್ನು ಪಡೆಯುತ್ತದೆ.



Click it and Unblock the Notifications
