Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ತ್ವಚೆಗೆ ತಕ್ಕಂತೆ ಆರೈಕೆ ಹೆಚ್ಚಿಸುವುದು ಸೌಂದರ್ಯ

ಸಾಮಾನ್ಯ ತ್ವಚೆ ಆರೈಕೆ:
1. 1 ಕ್ಯಾರೆಟ್ ತುರಿ, ಅರ್ಧ ಮೊಟ್ಟೆಯ ಬಿಳಿಭಾಗ, ಸ್ವಲ್ಪ ಹಾಲು ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ ಮುಖಕ್ಕೆ 15 ನಿಮಿಷದ ಬಳಿಕ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.
2. 8 ಬಾದಾಮಿ ರಾತ್ರಿ ನೀರಲ್ಲಿ ತೊಳೆದು ನೆನೆಸಿ ಅದೇ ನೀರಲ್ಲಿ ಗುಲಾಬಿ ದಳಗಳೊಂದಿಗೆ ಅರೆಯಬೇಕು. ಇದಕ್ಕೆ ಶುದ್ಧ ಪಚ್ಚ ಕರ್ಪೂರ ಚಿಟಿಕೆಯಷ್ಟು ಬೆರೆಸಿ ಮುಖಕ್ಕೆ ಲೇಪಿಸಿ ಮೃದುವಾಗಿ ಮಸಾಜು ಮಾಡಿ 20 ನಿಮಿಷದ ಬಳಿಕ ಮತ್ತೆ ಮಸಾಜು ಮಾಡಿ ತೊಳೆಯಬೇಕು. ಈ ರೀತಿ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.
3. 15 - 20 ತುಳಸೀ ಎಲೆ, 15 ಕರಿಬೇವು, 15 - 20 ಪುದೀನಾ ಎಲೆಗಳನ್ನು ಅರೆದು, ಸೌತೆಕಾಯಿಯ ರಸ ಬೆರೆಸಿ ಲೇಪ ತಯಾರಿಸಿ ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಸಾಮಾನ್ಯ ತ್ವಚೆ ಮೇಲೆ ಉತ್ತಮವಾದ ಪರಿಣಾಮ ಬೀಳುತ್ತದೆ.
4. ಬಾಳೆಹಣ್ಣು ಹಾಗೂ ಸ್ಟ್ರಾಬೆರಿ ಹಣ್ಣನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿದರೆ ಮತ್ತು ಈ ಹಣ್ಣುಗಳ ಜ್ಯೂಸ್ ಕುಡಿದರೆ ಮುಖದ ಹೊಳಪು ಹೆಚ್ಚುವುದು.
5. ಸಾಮಾನ್ಯ ತ್ವಚೆ ಇರುವವರು ಎಳನೀರಿಗೆ ಹತ್ತಿಯ ಉಂಡೆಯನ್ನು ಅದ್ದಿ ಮುಖವನ್ನು ಕ್ಲೆನ್ಸ್ ಮಾಡಿದರೆ ಚರ್ಮ ತಾಜಾ ಆಗಿ ಹೊಳೆಯುತ್ತದೆ.
ಎಣ್ಣೆ ತ್ವಚೆಯ ಆರೈಕೆ:
1. ರಕ್ತಚಂದನವನ್ನು ನೀರಿನಲ್ಲಿ ತೇದಿ ಅದಕ್ಕೆ 4 ಚಮಚ ರೋಸ್ ವಾಟರ್ ಬೆರೆಸಿ ಲೇಪ ತಯಾರಿಸಿ ಮುಖಕ್ಕೆ ಹಚ್ಚಿದರೆ ಮುಖದ ಜಿಡ್ಡು ನಿವಾರಣೆಯಾಗುತ್ತದೆ.
2. ಮುಲ್ತಾನಿಮಿಟ್ಟಿ ( ಫುಲ್ಲರ್ ಅರ್ತ್ ) ಪೌಡರನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಮಾಡಿ ಮುಖ, ಕತ್ತು, ಕೈಕಾಲುಗಳಿಗೆ ಹಚ್ಚಿ 19-20 ನಿಮಿಷ ಬಿಟ್ಟು ತೊಳೆದರೆ ಚರ್ಮದ ಹೊಳಪು ಹೆಚ್ಚುತ್ತದೆ.
3. ಸೇಬು ಹಣ್ಣಿನ ತಿರುಳಿಗೆ ಒಂದು ನಿಂಬೆಹಣ್ಣಿನ ರಸ ಬೆರೆಸಿ ಮುಖಕ್ಕೆ ಲೇಪಿಸಿದರೆ ಒಳ್ಳೆಯದು.
4. ಮುಖ ತುಂಬಾ ಜಿಡ್ಡಾಗಿದ್ದರೆ 2 ಚಮಚ ರೋಸ್ ವಾಟರ್ ಅನ್ನು 4 ಚಮಚ ಐಸ್ ನೀರಿಗೆ ಬೆರೆಸಿ ಅದಕ್ಕೆ ಹತ್ತಿಯ ಉಂಡೆಯನ್ನು ಅದ್ದಿ ಮುಖವನ್ನು ಶುಚಿಗೊಳಿಸಿದರೆ ಮುಖ ತಾಜಾತನದಿಂದ ಹೊಳೆಯುತ್ತದೆ.
5. ಅಧಿಕ ಜಿಡ್ಡಿನಂಶ ಇರುವವರು ಪುದೀನಾ ರಸ ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ ನಂತರ ಮುಖ ತೊಳೆದರೆ ಎಣ್ಣೆ ತ್ವಚೆ ನಿವಾರಣೆಯಾಗುವುದು.
ಶುಷ್ಕ ತ್ವಚೆಯ ಆರೈಕೆ
1. ಸೀಬೆ ಹಣ್ಣಿನ ತಿರುಳಿಗೆ ಜೇನು ಬೆರೆಸಿ ಮಿಶ್ರ ಮಾಡಿ ಈ ಲೇಪನವನ್ನು ಹಚ್ಚಿ 20 ನಿಮಿಷದ ಬಳಿಕ ತೊಳೆದರೆ ಒಣ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ.
2. ಹಾಲಿನ ಕೆನೆಯನ್ನು ಹಚ್ಚಿದರೆ ಮುಖ ನುಣಪನ್ನು ಪಡೆಯುತ್ತದೆ. ಹಾಲಿನ ಕೆನೆಗೆ ಜೇನು ತುಪ್ಪ ಬೇಕಾದರೂ ಸೇರಿಸಬಹುದು.
3. ಬಾಳೆಹಣ್ಣಿಗೆ ಸ್ವಲ್ಪ ಮೊಸರು ಮಿಶ್ರ ಮಾಡಿ ಮುಖಕ್ಕೆ ದಪ್ಪವಾಗಿ ಹಚ್ಚಿದರೆ ಒಳ್ಳೆಯದು.
4. ರೋಸ್ ವಾಟರ್ ನಿಂದ ಕ್ಲೆನ್ಸ್ ಮಾಡುವುದು ತುಂಬಾ ಒಳ್ಳೆಯದು.
5. ತ್ವಚೆ ಸ್ವಲ್ಪ ಬಾಡಿದಾಗ ತಾಜಾ ಹಾಲಿನ ಕೆನೆಗೆ ಸ್ವಲ್ಪ ಜೇನುತುಪ್ಪ ಮಿಶ್ರ ಮಾಡಿ ಹಚ್ಚಿ 1 ಗಂಟೆಯ ಬಳಿಕ ಸ್ನಾನ ಮಾಡಿದರೆ ಚರ್ಮ ಹೊಳಪನ್ನು ಪಡೆಯುತ್ತದೆ.



Click it and Unblock the Notifications