Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ನಿಮ್ಮ ತ್ವಚೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ಇಷ್ಟೆಲ್ಲಾ ಮಾಡಿದರೂ ಕೆಲವೊಮ್ಮೆ, ಮೊಡವೆ, ಕಲೆ, ಬ್ಲ್ಯಾಕ್ ಹೆಡ್ಸ್, ಮುಖದಲ್ಲಿ ರಂಧ್ರ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ತ್ವಚೆ ಆರೈಕೆ ಕಡೆಗೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ಇಲ್ಲಿ ಕೆಲವೊಂದು ಆರ್ಯುವೇದದ ವಿಧಾನದಿಂದ ತ್ವಚೆ ಆರೈಕೆ ಹೇಗೆ ಎಂದು ಹೇಳಲಾಗಿದೆ. ಈ ಸಲಹೆಗಳನ್ನು ಪಾಲಿಸಿದರೆ ಆರೋಗ್ಯಕರವಾದ ಆಕರ್ಷಕವಾದ ತ್ವಚೆ ನಿಮ್ಮದಾಗುವುದು.
ನೆರಿಗೆ ತಡೆಗಟ್ಟಲು: ಪ್ರತಿದಿನ ಹರಳೆಣ್ಣೆಯಿಂದ ಮುಖ ಹಾಗೂ ಕುತ್ತಿಗೆಯ ಭಾಗವನ್ನು ಮಸಾಜ್ ಮಾಡಿದರೆ ತ್ವಚೆ ಮೃದುವಾಗುವುದು ಹಾಗೂ ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ.
ಮುಖದಲ್ಲಿ ರಂಧ್ರ ಮರೆ ಮಾಚಲು: ಪ್ರತಿದಿನ ಸ್ವಲ್ಪ ಹಾಲಿಗೆ ಹತ್ತಿಯನ್ನು ಅದ್ದಿ, ಆ ಹತ್ತಿಯಿಂದ ಮುಖವನ್ನು ಉಜ್ಜಬೇಕು. ಈ ರೀತಿ ಪ್ರತಿದಿನ ಕ್ಲೆನ್ಸ್ ಮಾಡಿದರೆ ಮುಖದಲ್ಲಿ ರಂಧ್ರಗಳು ಎದ್ದು ಕಾಣುವುದಿಲ್ಲ.
ಮಾಯಿಶ್ಚರೈಸರ್: ತ್ವಚೆ ಒಣಗದಿರಲು ಸ್ವಲ್ಪ ಮೊಸರಿಗೆ ಒಂದು ಚಮಚ ನಿಂಬೆ ರಸ, ಒಂದು ಚಮಚ ಕಿತ್ತಳೆ ರಸ ಹಾಕಿ ಮಿಶ್ರಣ ಮಾಡಿ ಮೈಗೆ ಹಚ್ಚಿ ಅರ್ಧಗಂಟೆಯ ಬಳಿಕ ಸ್ನಾನ ಮಾಡಬೇಕು. ಈ ರೀತಿ ವಾರದಲ್ಲಿ 2 ಬರಿ ಮಾಡಿದರೂ ತ್ವಚೆ ಒಣಗುವ ಸಮಸ್ಯೆ ಕಂಡು ಬರುವುದಿಲ್ಲ.
ಸ್ಕಿನ್ ಕಂಡೀಷನರ್: 2 ಚಮಚ ಹಾಲಿನ ಕೆನೆಗೆ 1 ಚಮಚ ಜೇನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬೇಕು. ನಂತರ ಒದ್ದೆ ಟವಲ್ ನಿಂದ ಮುಖ ಒರೆಸಬೇಕು. ಈ ರೀತಿ ಮಾಡಿದರೆ ಮುಖದ ಹೊಳಪು ಹೆಚ್ಚುವುದು.
ಕಪ್ಪು ಕಲೆ ನಿವಾರಣೆಗೆ: ಹಸಿ ಆಲೂಗೆಡ್ಡೆಯನ್ನು ವೃತ್ತಾಕಾರವಾಗಿ ಕತ್ತರಿಸಿ ಅದರಿಂದ ಮುಖವನ್ನು ಉಜ್ಜಿದರೆ ಕಪ್ಪು ಕಲೆಗಳು ಕಡಿಮೆಯಾಗುವುದು.
ತ್ವಚೆ ಮೃದುವಾಗಲು: ಕಿತ್ತಳೆ ರಸವನ್ನು ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ತ್ವಚೆ ಮೃದುವಾಗುವುದು.
ಮುಖದ ರೋಮ ಹೋಗಲಾಡಿಸಲು: ಎಳ್ಳೆಣ್ಣೆಗೆ ಅರಿಶಿಣ ಪುಡಿ ಹಾಗೂ ಗೋಧಿ ಪುಡಿಯನ್ನು ಸಮ ಪ್ರಮಾಣದಲ್ಲಿ ಹಾಕಿ ಮುಖಕ್ಕೆ ತಿಕ್ಕಿದರೆ ಮುಖದ ರೋಮ ಕಡಿಮೆಯಾಗುವುದು.



Click it and Unblock the Notifications