Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ನಿಮ್ಮ ಮುಖದ ನೈಜ ಬಣ್ಣ ಕಳೆಗುಂದುತ್ತಿದೆಯಾ?

ಬಣ್ಣ ಕುಂದುವಿಕೆ ಸಮಸ್ಯೆ ನೀಗಿಸಲು ಕೆಲವು ನೈಸರ್ಗಿಕ ಸಲಹೆಗಳನ್ನು ಪಾಲಿಸಿದರೆ ಸಾಕು.
1. ಆಲೂಗಡ್ಡೆಯನ್ನು ತುರಿದು, ರಸವನ್ನು ಮುಖಕ್ಕೆ ಲೇಪಿಸಬೇಕು. ಆಲೂಗಡ್ಡೆ ರಸದಲ್ಲಿನ ಬ್ಲೀಚಿಂಗ್ ಅಂಶ ಚರ್ಮವನ್ನು ಬೆಳ್ಳಗೆ ಮಾಡುತ್ತದೆ.
2. ದಿನವೂ ಮೊಸರಿನಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿಕೊಂಡು ತಣ್ಣನೆ ನೀರಿನಿಂದ ತೊಳೆದುಕೊಂಡರೆ ಕಪ್ಪು ಕಲೆ ಕ್ರಮೇಣ ಕಡಿಮೆಗೊಳ್ಳುತ್ತದೆ. ಮುಖದ ಮೇಲಿನ ಕೂದಲನ್ನು ಬ್ಲೀಚ್ ಮಾಡಿ ನೈಜ ಬಣ್ಣವನ್ನು ನಿಮಗೆ ನೀಡುತ್ತದೆ.
3. ನಿಂಬೆ ಮತ್ತು ಟೊಮೆಟೊ ರಸ ನಿರ್ಜೀವ ಬಣ್ಣ ಹೋಗಿಸಲು ಪರಿಣಾಮಕಾರಿ. ಈ ಎರಡೂ ರಸವನ್ನು ಬೆರೆಸಿ ಅದರಲ್ಲಿ ಹತ್ತಿ ಅದ್ದಿ ಅದನ್ನು ಮುಖದ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿಕೊಂಡರೆ ಚರ್ಮ ಕಾಂತಿಯುತವಾಗುತ್ತದೆ.
4. ಪರಂಗಿ, ಓಟ್ ಮೀಲ್ ಮತ್ತು ಜೇನಿನ ಫೇಸ್ ಪ್ಯಾಕ್ ಹಾಕಿಕೊಂಡರೆ ನಿರ್ಜೀವ ಕಳೆ ಹೋಗಿ ಮುಖ ಹೊಳೆಯುವಂತೆ ಮಾಡುತ್ತದೆ.
5. ವಿಳ್ಳೆಯದೆಲೆಯೂ ಸೂರ್ಯನ ಕಿರಣಗಳಿಂದ ಕಪ್ಪಾದ ಚರ್ಮಕ್ಕೆ ಹೆಚ್ಚು ಪರಿಣಾಮಕಾರಿ. ವಿಳ್ಳೆಯದೆಲೆಯ ರಸವನ್ನು ಕಪ್ಪಾದ ಜಾಗಕ್ಕೆ ಹಚ್ಚಿಕೊಂಡು ತಣ್ಣಗಿನ ನೀರಿನಿಂದ ತೊಳೆದುಕೊಂಡರೆ ಕ್ರಮೇಣ ಸಮಸ್ಯೆ ದೂರವಾಗುತ್ತದೆ.
6. ಕಡಲೆ ಹಿಟ್ಟು, ಹಾಲು ಮಿಶ್ರಿತ ಫೇಸ್ ಪ್ಯಾಕ್ ಈ ಸಮಸ್ಯೆಗೆ ಸರಳೋಪಾಯ. ನಿರ್ಜೀವ ಚರ್ಮವನ್ನು ತೊಲಗಿಸಿ ತ್ವಚೆ ತಾಜಾ ಆಗಿರುವಂತೆ ನೋಡಿಕೊಳ್ಳುತ್ತದೆ.
ಯಾವುದೇ ಅಡ್ಡ ಪರಿಣಾಮ ಉಂಟುಮಾಡದೆ, ನೈಸರ್ಗಿಕ ಬಣ್ಣವನ್ನು ಮರಳಿ ಪಡೆಯಲು ಸಹಾಯ ಮಾಡುವ ಈ ಅಂಶಗಳನ್ನು ಪಾಲಿಸಿದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.



Click it and Unblock the Notifications
