Latest Updates
-
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ!
ನಿಮ್ಮ ಮುಖದ ನೈಜ ಬಣ್ಣ ಕಳೆಗುಂದುತ್ತಿದೆಯಾ?

ಬಣ್ಣ ಕುಂದುವಿಕೆ ಸಮಸ್ಯೆ ನೀಗಿಸಲು ಕೆಲವು ನೈಸರ್ಗಿಕ ಸಲಹೆಗಳನ್ನು ಪಾಲಿಸಿದರೆ ಸಾಕು.
1. ಆಲೂಗಡ್ಡೆಯನ್ನು ತುರಿದು, ರಸವನ್ನು ಮುಖಕ್ಕೆ ಲೇಪಿಸಬೇಕು. ಆಲೂಗಡ್ಡೆ ರಸದಲ್ಲಿನ ಬ್ಲೀಚಿಂಗ್ ಅಂಶ ಚರ್ಮವನ್ನು ಬೆಳ್ಳಗೆ ಮಾಡುತ್ತದೆ.
2. ದಿನವೂ ಮೊಸರಿನಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿಕೊಂಡು ತಣ್ಣನೆ ನೀರಿನಿಂದ ತೊಳೆದುಕೊಂಡರೆ ಕಪ್ಪು ಕಲೆ ಕ್ರಮೇಣ ಕಡಿಮೆಗೊಳ್ಳುತ್ತದೆ. ಮುಖದ ಮೇಲಿನ ಕೂದಲನ್ನು ಬ್ಲೀಚ್ ಮಾಡಿ ನೈಜ ಬಣ್ಣವನ್ನು ನಿಮಗೆ ನೀಡುತ್ತದೆ.
3. ನಿಂಬೆ ಮತ್ತು ಟೊಮೆಟೊ ರಸ ನಿರ್ಜೀವ ಬಣ್ಣ ಹೋಗಿಸಲು ಪರಿಣಾಮಕಾರಿ. ಈ ಎರಡೂ ರಸವನ್ನು ಬೆರೆಸಿ ಅದರಲ್ಲಿ ಹತ್ತಿ ಅದ್ದಿ ಅದನ್ನು ಮುಖದ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿಕೊಂಡರೆ ಚರ್ಮ ಕಾಂತಿಯುತವಾಗುತ್ತದೆ.
4. ಪರಂಗಿ, ಓಟ್ ಮೀಲ್ ಮತ್ತು ಜೇನಿನ ಫೇಸ್ ಪ್ಯಾಕ್ ಹಾಕಿಕೊಂಡರೆ ನಿರ್ಜೀವ ಕಳೆ ಹೋಗಿ ಮುಖ ಹೊಳೆಯುವಂತೆ ಮಾಡುತ್ತದೆ.
5. ವಿಳ್ಳೆಯದೆಲೆಯೂ ಸೂರ್ಯನ ಕಿರಣಗಳಿಂದ ಕಪ್ಪಾದ ಚರ್ಮಕ್ಕೆ ಹೆಚ್ಚು ಪರಿಣಾಮಕಾರಿ. ವಿಳ್ಳೆಯದೆಲೆಯ ರಸವನ್ನು ಕಪ್ಪಾದ ಜಾಗಕ್ಕೆ ಹಚ್ಚಿಕೊಂಡು ತಣ್ಣಗಿನ ನೀರಿನಿಂದ ತೊಳೆದುಕೊಂಡರೆ ಕ್ರಮೇಣ ಸಮಸ್ಯೆ ದೂರವಾಗುತ್ತದೆ.
6. ಕಡಲೆ ಹಿಟ್ಟು, ಹಾಲು ಮಿಶ್ರಿತ ಫೇಸ್ ಪ್ಯಾಕ್ ಈ ಸಮಸ್ಯೆಗೆ ಸರಳೋಪಾಯ. ನಿರ್ಜೀವ ಚರ್ಮವನ್ನು ತೊಲಗಿಸಿ ತ್ವಚೆ ತಾಜಾ ಆಗಿರುವಂತೆ ನೋಡಿಕೊಳ್ಳುತ್ತದೆ.
ಯಾವುದೇ ಅಡ್ಡ ಪರಿಣಾಮ ಉಂಟುಮಾಡದೆ, ನೈಸರ್ಗಿಕ ಬಣ್ಣವನ್ನು ಮರಳಿ ಪಡೆಯಲು ಸಹಾಯ ಮಾಡುವ ಈ ಅಂಶಗಳನ್ನು ಪಾಲಿಸಿದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.



Click it and Unblock the Notifications