Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಜ್ಯೇಷ್ಠಮಧುವಿನ ಈ ಫೇಸ್ ಪ್ಯಾಕ್ ಹಚ್ಚಿದರೆ ಕಲೆ ಮಾಯು, ತ್ವಚೆ ಬೆಳ್ಳಗಾಗುವುದು
ಜ್ಯೇಷ್ಠಮಧು ಅತ್ಯುತ್ತಮವಾದ ಸೌಂದರ್ಯವರ್ಧಕ ಎಂದರೆ ತಪ್ಪಾಗಲ್ಲ. ತ್ವಚೆಯಲ್ಲಿರುವ ಕಲೆಯನ್ನು ಹೋಗಲಾಡಿಸಿ ತ್ವಚೆಯನ್ನು ಫಳ ಫಳ ಹೊಳೆಯುವಂತೆ ಮಾಡುವ ಗುಣ ಈ ಜ್ಯೇಷ್ಠ ಮಧುವಿನಲ್ಲಿದೆ. ನಿಮ್ಮದು ಡ್ರೈ ತ್ವಚೆಯಾಗಿರಲಿ ಅಥವಾ ಆಯಿಲಿ ತ್ವಚೆಯಾಗಿರಲಿ ಇದನ್ನು ಬಳಸಬಹುದು, ತುಂಬಾ ಸೆನ್ಸಿಟಿವ್ ಸ್ಕಿನ್ ಇರುವವರು ಕೂಡ ಇದನ್ನು ಬಳಸಬಹುದು.
ಜ್ಯೇಷ್ಠಮಧು ಬಳಸಿದರೆ ಮುಖದಲ್ಲಿರುವ ಕಪ್ಪು ಕಲೆಗಳು ದೂರಾಗುವುದು, ಕಣ್ಣಿನ ಸುತ್ತ ಇರುವ ಕಪ್ಪು ಕಲೆ ದೂರಾಗುವುದು. ತ್ವಚೆ ಆರೈಕೆಯಲ್ಲಿ ಇದನ್ನು ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ:

ಸೆನ್ಸಟಿವ್ ತ್ವಚೆ ಆಗಿದ್ದರೆ
ಸೆನ್ಸಿಟಿವ್ ತ್ವಚೆ ಇರುವವರು ತಮ್ಮ ತ್ವಚೆ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಬೇಕು, ಸ್ವಲ್ಪ ಹೆಚ್ಚು ಕಡಿಮೆಯಾದರೆ ತ್ವಚೆಯಲ್ಲಿ ಸಮಸ್ಯೆ ಉಂಟಾಗುವುದು. ನೀವು ಜ್ಯೇಷ್ಠಮಧು ಈ ರೀತಿ ಬಳಸಿದರೆ ಒಳ್ಳೆಯದು:
ಬೇಕಾಗುವ ಸಾಮಗ್ರಿ
* ಒಂದು ಚಮಚ ಜ್ಯೇಷ್ಠಮಧುವಿನ ಪುಡಿ
* 1/2 ಚಮಚ ಶ್ರೀಗಂಧದ ಪುಡಿ
* 2 ಚಮಚ ಹಸಿ ಹಾಲು
ಈ ಮೂರು ಸಾಮಗ್ರಿ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಹಚ್ಚಿ, ಮುಖಕ್ಕೆ ಮಾತ್ರವಲ್ಲ ಕುತ್ತಿಗೆ ಭಾಗಕ್ಕೂ ಹಚ್ಚಿ 15-20 ನಿಮಿಷ ಬಿಟ್ಟು ಮುಖ ತೊಳೆಯಿರಿ, ಈ ರೀತಿ ಮಾಡುತ್ತಿದ್ದರೆ ಮುಖದಲ್ಲಿರುವ ಕಪ್ಪು ಕಲೆ ದೂರಾಗುವುದು. ವಾರದಲ್ಲಿ 2-3 ಬಾರಿ ಬಳಸಿದರೂ ಉತ್ತಮ ಫಲಿತಾಂಶ ಸಿಗುವುದು.
ಎಣ್ಣೆ ತ್ವಚೆಯೇ?
ಎಣ್ಣೆ ತ್ವಚೆಯಾಗಿದ್ದರೆ ಮೊಡವೆ ಸಮಸ್ಯೆ ಉಂಟಾಗುವುದು. ನೀವು ಎಣ್ಣೆ ಜಿಡ್ಡು ಕಡಿಮೆ ಮುಖ ತಾಜಾದಿಂದ ಕಾಣಲು ಈ ರೀತಿ ಫೇಸ್ಪ್ಯಾಕ್ ಮಾಡಿ ಬಳಸಬಹುದು.
ಬೇಕಾಗುವ ಸಾಮಗ್ರಿ
1 ಚಮಚ ಜ್ಯೇಷ್ಠ ಮಧುವಿನ ಪುಡಿ
* 1 ಕಿತ್ತಳೆ ಸಿಪ್ಪೆ
* 1 ಚಮಚ ನಿಂಬೆರಸ
ಕಿತ್ತಳೆ ಸಿಪ್ಪೆ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ.
ಈ ಮೂರನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮಸಾಜ್ ಮಾಡಿ, ನಂತರ 10 ನಿಮಿಷ ಬಿಟ್ಟು ಮುಖ ತೊಳೆಯಿರಿ, ಹೀಗೆ ಮಾಡುವುದರಿಂದ ಜಿಡ್ಡಿನಂಶ ಕಡಿಮೆಯಾಗುವುದು, ತ್ವಚೆಯಲ್ಲಿ ಕಲೆಗಳು ಇರುವುದಿಲ್ಲ.
ಮುಖದ ಕಾಂತಿ ಹೆಚ್ಚಲು ಈ ಕಾಂಬಿನೇಷನ್ ಟ್ರೈ ಮಾಡಬಹುದು:
ಜ್ಯೇಷ್ಠ ಮಧು ಮತ್ತು ಲೋಳೆಸರ
ಮೂಗಿನ ಮೇಲೆ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್
ಬೇಕಾಗುವ ಸಾಮಗ್ರಿ
1 ಚಮಚ ಜ್ಯೇಷ್ಠ ಮಧುವಿನ ಪುಡಿ
1 ಚಮಚ ಲೋಳೆಸರ
1 ಚಮಚ ಆಪಲ್ ಸಿಡರ್ ವಿನೆಗರ್
ಲೋಳೆಸರ ಗಿಡದಿಂದ ಆಗಷ್ಟೆ ತೆಗೆದಿರುವುದನ್ನು ಬಳಸಿದರೆ ಇನ್ನೂ ಉತ್ತಮ, ಅದಕ್ಕೆ ಜ್ಯೇಷ್ಠಮಧುವಿನ ಪುಡಿ ಸೇರಿ ಮಿಕ್ಸ್ ಮಾಡಿ, ಆಪಲ್ ಸಿಡರ್ ವಿನಗೆರ್ ಸೇರಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಕಡ್ಲೆಹಿಟ್ಟಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚಾಗುವುದು.
ನಾರ್ಮಲ್ ಸ್ಕಿನ್ಗೆ ಜ್ಯೇಷ್ಠಮಧು ಹಾಗೂ ಜೇನಿನ ಕಾಂಬಿನೇಷನ್
ನಿಮ್ಮದು ನಾರ್ಮಲ್ ಸ್ಕಿನ್ ಆಗಿದ್ದರೆ ನೀವು ಈ ಫೇಸ್ಪ್ಯಾಕ್ ಟ್ರೈ ಮಾಡಿ ಒಳ್ಳೆಯ ರಿಸಲ್ಟ್ ಸಿಗಲಿದೆ.
2 ಚಮಚ ಜ್ಯೇಷ್ಠ ಮಧುವಿನ ಪುಡಿ
ಒಂದೂವರೆ ಚಮಚ ಜೇನು
1 ಚಮಚ ನಿಂಬೆರಸ
* ಈ ಮೂರನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.



Click it and Unblock the Notifications