Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಜ್ಯೇಷ್ಠಮಧುವಿನ ಈ ಫೇಸ್ ಪ್ಯಾಕ್ ಹಚ್ಚಿದರೆ ಕಲೆ ಮಾಯು, ತ್ವಚೆ ಬೆಳ್ಳಗಾಗುವುದು
ಜ್ಯೇಷ್ಠಮಧು ಅತ್ಯುತ್ತಮವಾದ ಸೌಂದರ್ಯವರ್ಧಕ ಎಂದರೆ ತಪ್ಪಾಗಲ್ಲ. ತ್ವಚೆಯಲ್ಲಿರುವ ಕಲೆಯನ್ನು ಹೋಗಲಾಡಿಸಿ ತ್ವಚೆಯನ್ನು ಫಳ ಫಳ ಹೊಳೆಯುವಂತೆ ಮಾಡುವ ಗುಣ ಈ ಜ್ಯೇಷ್ಠ ಮಧುವಿನಲ್ಲಿದೆ. ನಿಮ್ಮದು ಡ್ರೈ ತ್ವಚೆಯಾಗಿರಲಿ ಅಥವಾ ಆಯಿಲಿ ತ್ವಚೆಯಾಗಿರಲಿ ಇದನ್ನು ಬಳಸಬಹುದು, ತುಂಬಾ ಸೆನ್ಸಿಟಿವ್ ಸ್ಕಿನ್ ಇರುವವರು ಕೂಡ ಇದನ್ನು ಬಳಸಬಹುದು.
ಜ್ಯೇಷ್ಠಮಧು ಬಳಸಿದರೆ ಮುಖದಲ್ಲಿರುವ ಕಪ್ಪು ಕಲೆಗಳು ದೂರಾಗುವುದು, ಕಣ್ಣಿನ ಸುತ್ತ ಇರುವ ಕಪ್ಪು ಕಲೆ ದೂರಾಗುವುದು. ತ್ವಚೆ ಆರೈಕೆಯಲ್ಲಿ ಇದನ್ನು ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ:

ಸೆನ್ಸಟಿವ್ ತ್ವಚೆ ಆಗಿದ್ದರೆ
ಸೆನ್ಸಿಟಿವ್ ತ್ವಚೆ ಇರುವವರು ತಮ್ಮ ತ್ವಚೆ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಬೇಕು, ಸ್ವಲ್ಪ ಹೆಚ್ಚು ಕಡಿಮೆಯಾದರೆ ತ್ವಚೆಯಲ್ಲಿ ಸಮಸ್ಯೆ ಉಂಟಾಗುವುದು. ನೀವು ಜ್ಯೇಷ್ಠಮಧು ಈ ರೀತಿ ಬಳಸಿದರೆ ಒಳ್ಳೆಯದು:
ಬೇಕಾಗುವ ಸಾಮಗ್ರಿ
* ಒಂದು ಚಮಚ ಜ್ಯೇಷ್ಠಮಧುವಿನ ಪುಡಿ
* 1/2 ಚಮಚ ಶ್ರೀಗಂಧದ ಪುಡಿ
* 2 ಚಮಚ ಹಸಿ ಹಾಲು
ಈ ಮೂರು ಸಾಮಗ್ರಿ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಹಚ್ಚಿ, ಮುಖಕ್ಕೆ ಮಾತ್ರವಲ್ಲ ಕುತ್ತಿಗೆ ಭಾಗಕ್ಕೂ ಹಚ್ಚಿ 15-20 ನಿಮಿಷ ಬಿಟ್ಟು ಮುಖ ತೊಳೆಯಿರಿ, ಈ ರೀತಿ ಮಾಡುತ್ತಿದ್ದರೆ ಮುಖದಲ್ಲಿರುವ ಕಪ್ಪು ಕಲೆ ದೂರಾಗುವುದು. ವಾರದಲ್ಲಿ 2-3 ಬಾರಿ ಬಳಸಿದರೂ ಉತ್ತಮ ಫಲಿತಾಂಶ ಸಿಗುವುದು.
ಎಣ್ಣೆ ತ್ವಚೆಯೇ?
ಎಣ್ಣೆ ತ್ವಚೆಯಾಗಿದ್ದರೆ ಮೊಡವೆ ಸಮಸ್ಯೆ ಉಂಟಾಗುವುದು. ನೀವು ಎಣ್ಣೆ ಜಿಡ್ಡು ಕಡಿಮೆ ಮುಖ ತಾಜಾದಿಂದ ಕಾಣಲು ಈ ರೀತಿ ಫೇಸ್ಪ್ಯಾಕ್ ಮಾಡಿ ಬಳಸಬಹುದು.
ಬೇಕಾಗುವ ಸಾಮಗ್ರಿ
1 ಚಮಚ ಜ್ಯೇಷ್ಠ ಮಧುವಿನ ಪುಡಿ
* 1 ಕಿತ್ತಳೆ ಸಿಪ್ಪೆ
* 1 ಚಮಚ ನಿಂಬೆರಸ
ಕಿತ್ತಳೆ ಸಿಪ್ಪೆ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ.
ಈ ಮೂರನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮಸಾಜ್ ಮಾಡಿ, ನಂತರ 10 ನಿಮಿಷ ಬಿಟ್ಟು ಮುಖ ತೊಳೆಯಿರಿ, ಹೀಗೆ ಮಾಡುವುದರಿಂದ ಜಿಡ್ಡಿನಂಶ ಕಡಿಮೆಯಾಗುವುದು, ತ್ವಚೆಯಲ್ಲಿ ಕಲೆಗಳು ಇರುವುದಿಲ್ಲ.
ಮುಖದ ಕಾಂತಿ ಹೆಚ್ಚಲು ಈ ಕಾಂಬಿನೇಷನ್ ಟ್ರೈ ಮಾಡಬಹುದು:
ಜ್ಯೇಷ್ಠ ಮಧು ಮತ್ತು ಲೋಳೆಸರ
ಮೂಗಿನ ಮೇಲೆ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್
ಬೇಕಾಗುವ ಸಾಮಗ್ರಿ
1 ಚಮಚ ಜ್ಯೇಷ್ಠ ಮಧುವಿನ ಪುಡಿ
1 ಚಮಚ ಲೋಳೆಸರ
1 ಚಮಚ ಆಪಲ್ ಸಿಡರ್ ವಿನೆಗರ್
ಲೋಳೆಸರ ಗಿಡದಿಂದ ಆಗಷ್ಟೆ ತೆಗೆದಿರುವುದನ್ನು ಬಳಸಿದರೆ ಇನ್ನೂ ಉತ್ತಮ, ಅದಕ್ಕೆ ಜ್ಯೇಷ್ಠಮಧುವಿನ ಪುಡಿ ಸೇರಿ ಮಿಕ್ಸ್ ಮಾಡಿ, ಆಪಲ್ ಸಿಡರ್ ವಿನಗೆರ್ ಸೇರಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಕಡ್ಲೆಹಿಟ್ಟಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚಾಗುವುದು.
ನಾರ್ಮಲ್ ಸ್ಕಿನ್ಗೆ ಜ್ಯೇಷ್ಠಮಧು ಹಾಗೂ ಜೇನಿನ ಕಾಂಬಿನೇಷನ್
ನಿಮ್ಮದು ನಾರ್ಮಲ್ ಸ್ಕಿನ್ ಆಗಿದ್ದರೆ ನೀವು ಈ ಫೇಸ್ಪ್ಯಾಕ್ ಟ್ರೈ ಮಾಡಿ ಒಳ್ಳೆಯ ರಿಸಲ್ಟ್ ಸಿಗಲಿದೆ.
2 ಚಮಚ ಜ್ಯೇಷ್ಠ ಮಧುವಿನ ಪುಡಿ
ಒಂದೂವರೆ ಚಮಚ ಜೇನು
1 ಚಮಚ ನಿಂಬೆರಸ
* ಈ ಮೂರನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.



Click it and Unblock the Notifications