Latest Updates
-
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ!
ಜ್ಯೇಷ್ಠಮಧುವಿನ ಈ ಫೇಸ್ ಪ್ಯಾಕ್ ಹಚ್ಚಿದರೆ ಕಲೆ ಮಾಯು, ತ್ವಚೆ ಬೆಳ್ಳಗಾಗುವುದು
ಜ್ಯೇಷ್ಠಮಧು ಅತ್ಯುತ್ತಮವಾದ ಸೌಂದರ್ಯವರ್ಧಕ ಎಂದರೆ ತಪ್ಪಾಗಲ್ಲ. ತ್ವಚೆಯಲ್ಲಿರುವ ಕಲೆಯನ್ನು ಹೋಗಲಾಡಿಸಿ ತ್ವಚೆಯನ್ನು ಫಳ ಫಳ ಹೊಳೆಯುವಂತೆ ಮಾಡುವ ಗುಣ ಈ ಜ್ಯೇಷ್ಠ ಮಧುವಿನಲ್ಲಿದೆ. ನಿಮ್ಮದು ಡ್ರೈ ತ್ವಚೆಯಾಗಿರಲಿ ಅಥವಾ ಆಯಿಲಿ ತ್ವಚೆಯಾಗಿರಲಿ ಇದನ್ನು ಬಳಸಬಹುದು, ತುಂಬಾ ಸೆನ್ಸಿಟಿವ್ ಸ್ಕಿನ್ ಇರುವವರು ಕೂಡ ಇದನ್ನು ಬಳಸಬಹುದು.
ಜ್ಯೇಷ್ಠಮಧು ಬಳಸಿದರೆ ಮುಖದಲ್ಲಿರುವ ಕಪ್ಪು ಕಲೆಗಳು ದೂರಾಗುವುದು, ಕಣ್ಣಿನ ಸುತ್ತ ಇರುವ ಕಪ್ಪು ಕಲೆ ದೂರಾಗುವುದು. ತ್ವಚೆ ಆರೈಕೆಯಲ್ಲಿ ಇದನ್ನು ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ:

ಸೆನ್ಸಟಿವ್ ತ್ವಚೆ ಆಗಿದ್ದರೆ
ಸೆನ್ಸಿಟಿವ್ ತ್ವಚೆ ಇರುವವರು ತಮ್ಮ ತ್ವಚೆ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಬೇಕು, ಸ್ವಲ್ಪ ಹೆಚ್ಚು ಕಡಿಮೆಯಾದರೆ ತ್ವಚೆಯಲ್ಲಿ ಸಮಸ್ಯೆ ಉಂಟಾಗುವುದು. ನೀವು ಜ್ಯೇಷ್ಠಮಧು ಈ ರೀತಿ ಬಳಸಿದರೆ ಒಳ್ಳೆಯದು:
ಬೇಕಾಗುವ ಸಾಮಗ್ರಿ
* ಒಂದು ಚಮಚ ಜ್ಯೇಷ್ಠಮಧುವಿನ ಪುಡಿ
* 1/2 ಚಮಚ ಶ್ರೀಗಂಧದ ಪುಡಿ
* 2 ಚಮಚ ಹಸಿ ಹಾಲು
ಈ ಮೂರು ಸಾಮಗ್ರಿ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಹಚ್ಚಿ, ಮುಖಕ್ಕೆ ಮಾತ್ರವಲ್ಲ ಕುತ್ತಿಗೆ ಭಾಗಕ್ಕೂ ಹಚ್ಚಿ 15-20 ನಿಮಿಷ ಬಿಟ್ಟು ಮುಖ ತೊಳೆಯಿರಿ, ಈ ರೀತಿ ಮಾಡುತ್ತಿದ್ದರೆ ಮುಖದಲ್ಲಿರುವ ಕಪ್ಪು ಕಲೆ ದೂರಾಗುವುದು. ವಾರದಲ್ಲಿ 2-3 ಬಾರಿ ಬಳಸಿದರೂ ಉತ್ತಮ ಫಲಿತಾಂಶ ಸಿಗುವುದು.
ಎಣ್ಣೆ ತ್ವಚೆಯೇ?
ಎಣ್ಣೆ ತ್ವಚೆಯಾಗಿದ್ದರೆ ಮೊಡವೆ ಸಮಸ್ಯೆ ಉಂಟಾಗುವುದು. ನೀವು ಎಣ್ಣೆ ಜಿಡ್ಡು ಕಡಿಮೆ ಮುಖ ತಾಜಾದಿಂದ ಕಾಣಲು ಈ ರೀತಿ ಫೇಸ್ಪ್ಯಾಕ್ ಮಾಡಿ ಬಳಸಬಹುದು.
ಬೇಕಾಗುವ ಸಾಮಗ್ರಿ
1 ಚಮಚ ಜ್ಯೇಷ್ಠ ಮಧುವಿನ ಪುಡಿ
* 1 ಕಿತ್ತಳೆ ಸಿಪ್ಪೆ
* 1 ಚಮಚ ನಿಂಬೆರಸ
ಕಿತ್ತಳೆ ಸಿಪ್ಪೆ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ.
ಈ ಮೂರನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮಸಾಜ್ ಮಾಡಿ, ನಂತರ 10 ನಿಮಿಷ ಬಿಟ್ಟು ಮುಖ ತೊಳೆಯಿರಿ, ಹೀಗೆ ಮಾಡುವುದರಿಂದ ಜಿಡ್ಡಿನಂಶ ಕಡಿಮೆಯಾಗುವುದು, ತ್ವಚೆಯಲ್ಲಿ ಕಲೆಗಳು ಇರುವುದಿಲ್ಲ.
ಮುಖದ ಕಾಂತಿ ಹೆಚ್ಚಲು ಈ ಕಾಂಬಿನೇಷನ್ ಟ್ರೈ ಮಾಡಬಹುದು:
ಜ್ಯೇಷ್ಠ ಮಧು ಮತ್ತು ಲೋಳೆಸರ
ಮೂಗಿನ ಮೇಲೆ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್
ಬೇಕಾಗುವ ಸಾಮಗ್ರಿ
1 ಚಮಚ ಜ್ಯೇಷ್ಠ ಮಧುವಿನ ಪುಡಿ
1 ಚಮಚ ಲೋಳೆಸರ
1 ಚಮಚ ಆಪಲ್ ಸಿಡರ್ ವಿನೆಗರ್
ಲೋಳೆಸರ ಗಿಡದಿಂದ ಆಗಷ್ಟೆ ತೆಗೆದಿರುವುದನ್ನು ಬಳಸಿದರೆ ಇನ್ನೂ ಉತ್ತಮ, ಅದಕ್ಕೆ ಜ್ಯೇಷ್ಠಮಧುವಿನ ಪುಡಿ ಸೇರಿ ಮಿಕ್ಸ್ ಮಾಡಿ, ಆಪಲ್ ಸಿಡರ್ ವಿನಗೆರ್ ಸೇರಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಕಡ್ಲೆಹಿಟ್ಟಿನಿಂದ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚಾಗುವುದು.
ನಾರ್ಮಲ್ ಸ್ಕಿನ್ಗೆ ಜ್ಯೇಷ್ಠಮಧು ಹಾಗೂ ಜೇನಿನ ಕಾಂಬಿನೇಷನ್
ನಿಮ್ಮದು ನಾರ್ಮಲ್ ಸ್ಕಿನ್ ಆಗಿದ್ದರೆ ನೀವು ಈ ಫೇಸ್ಪ್ಯಾಕ್ ಟ್ರೈ ಮಾಡಿ ಒಳ್ಳೆಯ ರಿಸಲ್ಟ್ ಸಿಗಲಿದೆ.
2 ಚಮಚ ಜ್ಯೇಷ್ಠ ಮಧುವಿನ ಪುಡಿ
ಒಂದೂವರೆ ಚಮಚ ಜೇನು
1 ಚಮಚ ನಿಂಬೆರಸ
* ಈ ಮೂರನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.



Click it and Unblock the Notifications