Latest Updates
-
UGC NET ಪರೀಕ್ಷೆ: ಪರೀಕ್ಷೆಯ ಒತ್ತಡದ ನಡುವೆ ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈಗಲೇ ಈ ಕೆಲಸ ಮಾಡಿ! -
ಭಾರಿ ಮಳೆ, ವಿದ್ಯುತ್ ಕಡಿತ: ಸಂಕಷ್ಟದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಆಹಾರ ಸುರಕ್ಷತೆ ಕಾಪಾಡಿಕೊಳ್ಳುವುದು ಹೇಗೆ? -
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ!
ಕೂದಲು ಉದುರುವುದು ತಡೆಗಟ್ಟಲು ಈ ಪುರಾತನ ಮದ್ದೇ ಬೆಸ್ಟ್ ಎಂದ ರವೀನಾ ಟಂಡನ್
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಬಹುತೇಕ ಜನರ ಸಮಸ್ಯೆಯಾಗಿದೆ. ಕೆಲವರಂತೂ ಈ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ ಎಂದು ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುತ್ತಾರೆ. ಕೆಲವರು ದುಬಾರಿ ಶ್ಯಾಂಪೂ, ಹೇರ್ ಕಂಡೀಷನರ್ ಟ್ರೈ ಮಾಡುತ್ತಾರೆ, ಇನ್ನು ಕೆಲವರು ಚಿಕಿತ್ಸೆ ಪಡೆದುಕೊಳ್ಳುತ್ತಾರೆ.
ಕೂದಲಿನ ಚಿಕಿತ್ಸೆ ತುಂಬಾ ದುಬಾರಿಯೇ ಆಗಿರುತ್ತದೆ. ಆದರೆ ಕೂದಲು ಉದುರುವುದನ್ನು ತಗಡೆಗಟ್ಟಲು ಇದ್ಯಾವುದಕ್ಕಿಂತಲೂ ಸರಳವಾದ ಹಾಗೂ ಪುರಾತನವಾದ ವಿಧಾನ ಅನುಸರಿದರೆ ಸಾಕು, ಕೂದಲು ಉದುರುವುದು ಕಡಿಮೆಯಾಗುವುದು ಹಾಗೂ ಸೊಂಪಾಗಿ ಬೆಳೆಯುವುದು ಎನ್ನುತ್ತಾರೆ ರವೀನಾ ಟಂಡನ್.
ತಮ್ಮಇನ್ಸ್ಟಾಗ್ರಾಮ್ನಲ್ಲಿ ಕೂದಲು ಉದುರುವುದನ್ನು ತಡೆಗಟ್ಟಿ, ಕೂದಲು ದಪ್ಪವಾಗಿ ಬೆಳೆಯಲು ಕೆಲವೊಂದು ಸಲಹೆ ನೀಡಿದ್ದಾರೆ. ಇವರು ನೀಡಿರುವ ಸಲಹೆ ಪ್ರತಿಯೊಬ್ಬರು ಪಾಲಿಸಬಹುದಾಗಿದ್ದು ಅಲ್ಲದೆ ದುಬಾರಿಯೂ ಅಲ್ಲ. ಬನ್ನಿ ಆ ಅದ್ಭುತ ಸಲಹೆ ಏನು ಎಂದು ನೋಡೋಣ:

ದಿನಾ ಆಮ್ಲ/ನೆಲ್ಲಿಕಾಯಿ ತಿನ್ನಿ
ಕೂದಲಿನ ಪೋಷಣೆಗೆ ನೆಲ್ಲಿಕಾಯಿ ತುಂಬಾನೇ ಸಹಾಯ ಮಾಡುತ್ತದೆ. ಕೂದಲು ಚೆನ್ನಾಗಿರಲು ದಿನಾ ನೆಲ್ಲಿಕಾಯಿ ತಿನ್ನುವಂತೆ ಸಲಹೆ ನೀಡಿದ್ದಾರೆ. ಪ್ರತಿದಿನ ನೆಲ್ಲಿಕಾಯಿ ತಿನ್ನುವುದು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ದೇಹಕ್ಕೆ ಅಗ್ಯತವಿರುವ ವಿಟಮಿನ್ ಸಿ ಸಿಗುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಕೂದಲನ್ನು ಬುಡದಿಂದಲೇ ಪೋಷಣೆ ಮಾಡುತ್ತದೆ. ಆದ್ದರಿಂದ ದಿನದಲ್ಲಿ ಒಂದರಿಂದ ಎರಡು ನೆಲ್ಲಿಕಾಯಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.

ನೆಲ್ಲಿಕಾಯಿಯನ್ನು ತಲೆಗೆ ಹೇಗೆ ಬಳಸಬೇಕು?
ಒಂದು ಕಪ್ ಹಾಲಿಗೆ ನಾಲ್ಕರಿಂದ ಐದು ನೆಲ್ಲಿಕಾಯಿ ಹಾಕಿ ಕುದಿಸಬೇಕು. ನೆಲ್ಲಿಕಾಯಿ ಚೆನ್ನಾಗಿ ಬೆಂದು ಮೆತ್ತಗಾಗಬೇಕು. ನಂತರ ಅದನ್ನು ಉರಿಯಿಂದ ಇಳಿಸಿ, ತಣ್ಣಗಾದ ಮೇಲೆ ಹಾಲಿನಲ್ಲಿಯೇ ಮ್ಯಾಶ್ ಮಾಡಿ. ಈಗ ಈ ಹಾಲಿನ ಮಿಶ್ರಣವನ್ನು ತಲೆಗೆ ಹಚ್ಚಿ 30 ನಿಮಿಷ ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ತೊಳೆಯಬೇಕು.

ತಲೆ ತೊಳೆಯುವ ಶ್ಯಾಂಪೂ ಹಚ್ಚುವ ಅಗ್ಯತವಿಲ್ಲ
ನೆಲ್ಲಿಕಾಯಿ ಮತ್ತು ಹಾಲಿನ ಹೇರ್ ಮಾಸ್ಕ್ ಮಾಡಿದರೆ ಕೂದಲಿಗೆ ಶ್ಯಾಂಪೂ ಹಚ್ಚುವ ಅಗ್ಯತವಿಲ್ಲ. ಏಕೆಂದರೆ ಹಾಗೇ ತಿಕ್ಕಿ ತೊಳೆದರೂ ಕೂದಲಿನ ಬುಡದಲ್ಲಿರುವ ಕೊಳೆ ಸಂಪೂರ್ಣವಾಗಿ ಹೋಗುವುದು, ಕೂದಲಿನಲ್ಲಿ ಯಾವುದೇ ಜಿಡ್ಡಿನಂಶ ಉಳಿಯುವುದಿಲ್ಲ ಆದ್ದರಿಂದ ಯಾವುದೇ ಶ್ಯಾಂಪೂ ಹಚ್ಚದೆ ಕೂದಲಿನ ಆರೈಕೆ ಮಾಡಬಹುದು. ಕೂದಲು ತುಂಬಾ ಹೊಳಪಿನಿಂದಲೂ ಕೂಡಿರುತ್ತದೆ.

ಆಮ್ಲ ಏಕೆ ಕೂದಲಿಗೆ ಒಳ್ಳೆಯದು?
ಆಮ್ಲದಲ್ಲಿ ವಿಟಮಿನ್ ಸಿ, ಇ, ರಂಜಕ ಟಾನ್ನಿಸ್, ಕಬ್ಬಿಣದಂಶ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರಲ್ಲಿ ವಿಟಮಿನ್ ಇ ಅಧಿಕವಿರುವುದರಿಂದ ಕೂದಲಿನ ಬೆಳವಣಿಗೆಗೆ ಸಹಕಾರಿ. ಇನ್ನು ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ ಕೂದಲಿನ ಬುಡವನ್ನು ಸ್ವಚ್ಛವಾಗಿ ಇಡುವುದರ ಜೊತೆಗೆ ಯಾವುದೇ ತಲೆಹೊಟ್ಟಿನ ಸಮಸ್ಯೆ ಕೂಡ ಕಾಡುವುದಿಲ್ಲ.
View this post on InstagramA post shared by Raveena Tandon (@officialraveenatandon) on



Click it and Unblock the Notifications