Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಪುರುಷರೇ, ಬೇಸಿಗೆಯಲ್ಲಿ ನಿಮ್ಮ ಕೂದಲಿನ ಬಗ್ಗೆ ಎಚ್ಚರ
ಬೇಸಿಗೆ ಕಾಲದಲ್ಲಿ ಪುರುಷರು ತಮ್ಮ ಕೂದಲಿನ ಹಾಗೂ ತ್ವಚೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಸನ್ ಸ್ಕ್ರೀನ್ ಲೋಷನ್ ಅನ್ನು ಮಹಿಳೆಯರು ಮಾತ್ರವಲ್ಲ, ಪುರುಷರೂ ಹಚ್ಚುವುದು ಒಳ್ಳೆಯದು. ಬೈಕ್ ನಲ್ಲಿ ಓಡಾಡುವವರಂತೂ ಕೂದಲಿನ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಹೆಲ್ಮೆಟ್ ಹಾಕುವುದರಿಂದ ಕೂದಲು ಉದುರಲಾರಂಭಿಸುತ್ತದೆ. ಆದ್ದರಿಂದ ಹೆಲ್ಮೆಟ್ ಹಾಕುವ ಮುನ್ನ ಕರ್ಚೀಪ್ ತಲೆಗೆ ಕಟ್ಟಿ, ನಂತರ ಹೆಲ್ಮೆಟ್ ಧರಿಸಿ, ಇದರಿಂದ ಕೂದಲಿಗೆ ಹಾನಿಯುಂಟಾಗುವುದಿಲ್ಲ.
ಬಕ್ಕ ತಲೆ ಸಮಸ್ಯೆ ಪುರುಷರಲ್ಲಿ ಕಂಡುಬರುವುದು ಹೆಚ್ಚು, ಆದ್ದರಿಂದ ಪುರುಷರು ಕೂದಲಿನ ಆರೈಕೆ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಿದ್ದೇವೆ. ಅವುಗಳನ್ನು ಪಾಲಿಸಿದರೆ ಬೇಸಿಗೆಯಲ್ಲಿ ಕೂದಲಿನ ಹಾಗೂ ತ್ವಚೆಯ ರಕ್ಷಣೆ ಮಾಡಬಹುದು.

ಪ್ರತೀದಿನ ಶ್ಯಾಂಪೂ ಹಚ್ಚಿ
ಹದ ಬಿಸಿ ನೀರಿನಲ್ಲಿ ಮ ಮೃದು ಶ್ಯಾಂಪೂ ಬಳಸಿ ಪ್ರತೀದಿನ ತಲೆ ತೊಳೆದು, ಗಾಳಿಯಲ್ಲಿ ಒಣಗಿಸಿ. ತಲೆಯನ್ನು ಟವಲ್ ನಿಂದ ಒರೆಸಬೇಡಿ, ಗಾಳಿಯಲ್ಲಿ ಒಣಗಲು ಬಿಡಿ. ಸ್ನಾನ ಮಾಡಿಸಿದ ನಂತರ ಸ್ಟೈಲ್ ಗಾಗಿ ಜೆಲ್ ಹಚ್ಚುವ ಅಭ್ಯಾಸ ಬಕ್ಕ ತಲೆ ಉಂಟು ಮಾಡಬಹುದು ಜೋಕೆ.
ಕ್ಲೋರಿನ್ ನೀರು ಬಳಸಬೇಡಿ
ಈಜು ಕೊಳದಲ್ಲಿ ಸ್ನಾನ ಮಾಡಲು ಹೋದರೆ ಕ್ಲೋರಿನ್ ನೀರು ತಲೆಗೆ ತಾಗದಂತೆ ಸ್ವಿಮ್ಮಿಂಗ್ ಕ್ಯಾಪ್ ಹಾಕಿ. ಇದರಿಂದ ಕೂದಲು ಡ್ರೈಯಾಗುವುದನ್ನು ತಡೆಯಬಹುದು.
ಎಣ್ಣೆ ಹಚ್ಚುವುದು
ಸ್ನಾನ ಮಾಡುವ ಮೊದಲು ಕೂದಲಿಗೆ ಎಣ್ನೆ ಸ್ನಾನ ಮಾಡುವುದು ಒಳ್ಳೆಯದು. ಇದು ಕೂದಲನ್ನು ಮಾಯಿಶ್ಚರೈಸರ್ ಆಗಿಡುತ್ತದೆ. ಇದರಿಂದ ಶೈನಿ ಕೂದಲು ನಿಮ್ಮದಾಗುವುದು.
ಕೂದಲನ್ನು ಚಿಕ್ಕದಾಗಿ ಕತ್ತರಿಸಿ
ಕೆಲವರಿಗೆ ಬೇಸಿಗೆಯಲ್ಲಿ ತಲೆ ತುಂಬಾ ಬೆವರುತ್ತದೆ. ತಲೆಯಲ್ಲಿ ಬೆವರು ನಿಂತರೆ ಕೂದಲು ಉದುರಲಾರಂಭಿಸುತ್ತದೆ. ಕೂದಲನ್ನು ಚಿಕ್ಕದಾಗಿ ಕತ್ತರಿಸಿ, ಮಲಗುವ ಮುನ್ನ ಬರೀ ನೀರಿನಲ್ಲಿ ತಲೆ ತೊಳೆಯಿರಿ. ಇದರಿಂದ ಕೂದಲಿನಲ್ಲಿ ಬೆವರಿನಂಶ ಉಳಿಯುವುದಿಲ್ಲ, ಕೂದಲು ಉದುರುವುದಿಲ್ಲ.
ಕೂದಲಿನ ಆರೋಗ್ಯಕ್ಕಾಗಿ ಸತುವಿನಂಶವಿರುವ ಆಹಾರಗಳನ್ನು ತಿನ್ನಿ.



Click it and Unblock the Notifications