Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ಕೂದಲಿಗೆ ಬೇಕಾದ ಐದು ಆಯುರ್ವೇದ ಔಷಧಿ ಯಾವುದು?

ಸುಲಭವಾಗಿ ಲಭ್ಯವಿರುವ, ಕೂದಲಿನ ಆರೋಗ್ಯವನ್ನು ದುಪ್ಪಟ್ಟುಗೊಳಿಸುವ ಐದು ಗಿಡಮೂಲಿಕೆಗಳಾವುವೆಂದು ತಿಳಿಯೋಣ.
* ರೀತಾ ಅಥವಾ ಅಂಟವಾಳದ ಕಾಯಿ: ಪುರಾತನ ಕಾಲದಲ್ಲಿ ಹಿಮಾಲಯದಲ್ಲಿ ಬೆಳೆಯುತ್ತಿತ್ತು ಎನ್ನಲಾದ ಈ ಗಿಡಮೂಲಿಕೆಯಿಂದ ಕೂದಲಿಗೆ ಅನೇಕ ಉಪಯೋಗಕರ ಅಂಶವಿದೆ. ಅಂಟವಾಳದಲ್ಲಿ ಕೂದಲನ್ನು ಶುದ್ಧಗೊಳಿಸಿ ರೇಷ್ಮೆಯಂತೆ ಹೊಳಪು ನೀಡುವ ಶಕ್ತಿಯಿದೆ. ಹೆಚ್ಚು ಮಾಲಿನ್ಯ ತುಂಬಿರುವ ಈ ಕಾಲದಲ್ಲಿ ಅಂಟವಾಳದ ಕಾಯಿಯನ್ನು ಉಪಯೋಗಿಸುವುದರಿಂದ ನಿಮ್ಮ ಕೂದಲು ಶುದ್ಧವಾಗಿರುತ್ತೆ.
* ಭೃಂಗರಾಜ: ಪ್ರಾಚೀನ ಭಾರತದಲ್ಲಿ ಹೆಚ್ಚು ಉಪಯೋಗಿಸಲಾಗುತ್ತಿದ್ದ ಭೃಂಗರಾಜ ಈ ಕಾಲಕ್ಕೂ ಪ್ರಸ್ತುತ. ಕೂದಲ ಪೋಷಣೆಗೆ ಆಯುರ್ವೇದ ಪದ್ಧತಿಯಲ್ಲಿ ಹೆಚ್ಚು ಬಳಕೆಯಲ್ಲಿದ್ದ ಈ ಗಿಡಮೂಲಿಕೆಯನ್ನು ಕಪ್ಪು ಕೂದಲು ಪಡೆಯಲು, ಕೂದಲುದುರುವಿಕೆ ಮತ್ತು ಬಾಲನೆರೆ ತಡೆಯಲು ಉಪಯೋಗಿಸಲಾಗುತ್ತದೆ. ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯೊಂದಿಗೆ ಇದನ್ನು ಬಿಸಿ ಮಾಡಿ ತಲೆಗೆ ಮಸಾಜ್ ಮಾಡಿಕೊಳ್ಳುವುದರಿಂದ ಹೆಚ್ಚು ಲಾಭವನ್ನು ಹೊಂದಬಹುದು.
* ಮೆಂತ್ಯೆ: ಎರಡು ರೀತಿಯಲ್ಲಿ ಮೆಂತ್ಯೆ ನಿಮ್ಮ ಕೂದಲಿನ ಸಮಸ್ಯೆ ತಡೆಯಬಲ್ಲದು. ಇದನ್ನು ಹಚ್ಚಿಕೊಳ್ಳುವುದರಿಂದ ಮತ್ತು ತಿನ್ನುವುದರಿಂದ, ಎರಡರಿಂದಲೂ ಇದರ ಉಪಯೋಗ ಹೊಂದಬಹುದು. ಮೆಂತ್ಯೆ ಕಾಳನ್ನು ಪೇಸ್ಟ್ ಮಾಡಿ ತಲೆಗೆ ಪ್ಯಾಕ್ ಹಾಕಿಕೊಳ್ಳಬಹುದು ಅಥವಾ ಮೆಂತ್ಯೆ ಸೊಪ್ಪನ್ನು ತಿಂದರೂ ಕೂದಲಿನ ಬುಡದಲ್ಲಿ ರಕ್ತಸಂಚಲ ಹೆಚ್ಚಾಗಿ ಕೂದಲು ಬೆಳವಣಿಗೆ ಹೊಂದುತ್ತದೆ.
* ಮೆಹಂದಿ: ಕೂದಲಿಗೆ ನೈಸರ್ಗಿಕ ಬಣ್ಣ ನೀಡುವ ಮೆಹಂದಿ ಕೂದಲುದುರುವಿಕೆ ವಿರುದ್ಧ ಹೋರಾಡುವಲ್ಲಿ ಹೆಚ್ಚು ಸಹಕಾರಿ. ಇದನ್ನು ಮೊಸರು ಮತ್ತು ನಿಂಬೆರಸದೊಂದಿಗೆ ಬೆರೆಸಿ ಹಚ್ಚಿಕೊಂಡರೆ ತಲೆಹೊಟ್ಟಿನ ಸಮಸ್ಯೆಯೂ ದೂರವಾಗುತ್ತದೆ. ಮೆಹಂದಿ ಕೂದಲಿನ ಬುಡವನ್ನೂ ಗಟ್ಟಿಗೊಳಿಸುತ್ತದೆ.
* ಲೋಳೆಸರ: ಕೇವಲ ಕೂದಲಿಗಷ್ಟೇ ಅಲ್ಲ, ಲೋಳೆಸರ ಒಟ್ಟಾರೆ ಸೌಂದರ್ಯಕ್ಕೂ ಉಪಯೋಗ. ಚರ್ಮಕ್ಕಾಗಿರಲಿ, ಕೂದಲಿಗಾಗಿರಲಿ, ಲೋಳೆಸರ ಆರೋಗ್ಯಕರ. ಕೂದಲು ತುಂಬಾ ತೆಳ್ಳಗಾಗುತ್ತಿದ್ದರೆ ಲೋಳೆಸರ ಉತ್ತಮ ಪರಿಹಾರ ನೀಡಬಲ್ಲದು.



Click it and Unblock the Notifications