Latest Updates
-
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಕರ್ನಾಟಕ ಬಂದ್ 2026: ಬೆಂಗಳೂರಿನಲ್ಲಿ ಜನಜೀವನ ಹೇಗಿದೆ? ಇಲ್ಲಿದೆ ಇಂದಿನ ಲೇಟೆಸ್ಟ್ ಅಪ್ಡೇಟ್ -
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ
ಕೂದಲಿಗೆ ಬೇಕಾದ ಐದು ಆಯುರ್ವೇದ ಔಷಧಿ ಯಾವುದು?

ಸುಲಭವಾಗಿ ಲಭ್ಯವಿರುವ, ಕೂದಲಿನ ಆರೋಗ್ಯವನ್ನು ದುಪ್ಪಟ್ಟುಗೊಳಿಸುವ ಐದು ಗಿಡಮೂಲಿಕೆಗಳಾವುವೆಂದು ತಿಳಿಯೋಣ.
* ರೀತಾ ಅಥವಾ ಅಂಟವಾಳದ ಕಾಯಿ: ಪುರಾತನ ಕಾಲದಲ್ಲಿ ಹಿಮಾಲಯದಲ್ಲಿ ಬೆಳೆಯುತ್ತಿತ್ತು ಎನ್ನಲಾದ ಈ ಗಿಡಮೂಲಿಕೆಯಿಂದ ಕೂದಲಿಗೆ ಅನೇಕ ಉಪಯೋಗಕರ ಅಂಶವಿದೆ. ಅಂಟವಾಳದಲ್ಲಿ ಕೂದಲನ್ನು ಶುದ್ಧಗೊಳಿಸಿ ರೇಷ್ಮೆಯಂತೆ ಹೊಳಪು ನೀಡುವ ಶಕ್ತಿಯಿದೆ. ಹೆಚ್ಚು ಮಾಲಿನ್ಯ ತುಂಬಿರುವ ಈ ಕಾಲದಲ್ಲಿ ಅಂಟವಾಳದ ಕಾಯಿಯನ್ನು ಉಪಯೋಗಿಸುವುದರಿಂದ ನಿಮ್ಮ ಕೂದಲು ಶುದ್ಧವಾಗಿರುತ್ತೆ.
* ಭೃಂಗರಾಜ: ಪ್ರಾಚೀನ ಭಾರತದಲ್ಲಿ ಹೆಚ್ಚು ಉಪಯೋಗಿಸಲಾಗುತ್ತಿದ್ದ ಭೃಂಗರಾಜ ಈ ಕಾಲಕ್ಕೂ ಪ್ರಸ್ತುತ. ಕೂದಲ ಪೋಷಣೆಗೆ ಆಯುರ್ವೇದ ಪದ್ಧತಿಯಲ್ಲಿ ಹೆಚ್ಚು ಬಳಕೆಯಲ್ಲಿದ್ದ ಈ ಗಿಡಮೂಲಿಕೆಯನ್ನು ಕಪ್ಪು ಕೂದಲು ಪಡೆಯಲು, ಕೂದಲುದುರುವಿಕೆ ಮತ್ತು ಬಾಲನೆರೆ ತಡೆಯಲು ಉಪಯೋಗಿಸಲಾಗುತ್ತದೆ. ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯೊಂದಿಗೆ ಇದನ್ನು ಬಿಸಿ ಮಾಡಿ ತಲೆಗೆ ಮಸಾಜ್ ಮಾಡಿಕೊಳ್ಳುವುದರಿಂದ ಹೆಚ್ಚು ಲಾಭವನ್ನು ಹೊಂದಬಹುದು.
* ಮೆಂತ್ಯೆ: ಎರಡು ರೀತಿಯಲ್ಲಿ ಮೆಂತ್ಯೆ ನಿಮ್ಮ ಕೂದಲಿನ ಸಮಸ್ಯೆ ತಡೆಯಬಲ್ಲದು. ಇದನ್ನು ಹಚ್ಚಿಕೊಳ್ಳುವುದರಿಂದ ಮತ್ತು ತಿನ್ನುವುದರಿಂದ, ಎರಡರಿಂದಲೂ ಇದರ ಉಪಯೋಗ ಹೊಂದಬಹುದು. ಮೆಂತ್ಯೆ ಕಾಳನ್ನು ಪೇಸ್ಟ್ ಮಾಡಿ ತಲೆಗೆ ಪ್ಯಾಕ್ ಹಾಕಿಕೊಳ್ಳಬಹುದು ಅಥವಾ ಮೆಂತ್ಯೆ ಸೊಪ್ಪನ್ನು ತಿಂದರೂ ಕೂದಲಿನ ಬುಡದಲ್ಲಿ ರಕ್ತಸಂಚಲ ಹೆಚ್ಚಾಗಿ ಕೂದಲು ಬೆಳವಣಿಗೆ ಹೊಂದುತ್ತದೆ.
* ಮೆಹಂದಿ: ಕೂದಲಿಗೆ ನೈಸರ್ಗಿಕ ಬಣ್ಣ ನೀಡುವ ಮೆಹಂದಿ ಕೂದಲುದುರುವಿಕೆ ವಿರುದ್ಧ ಹೋರಾಡುವಲ್ಲಿ ಹೆಚ್ಚು ಸಹಕಾರಿ. ಇದನ್ನು ಮೊಸರು ಮತ್ತು ನಿಂಬೆರಸದೊಂದಿಗೆ ಬೆರೆಸಿ ಹಚ್ಚಿಕೊಂಡರೆ ತಲೆಹೊಟ್ಟಿನ ಸಮಸ್ಯೆಯೂ ದೂರವಾಗುತ್ತದೆ. ಮೆಹಂದಿ ಕೂದಲಿನ ಬುಡವನ್ನೂ ಗಟ್ಟಿಗೊಳಿಸುತ್ತದೆ.
* ಲೋಳೆಸರ: ಕೇವಲ ಕೂದಲಿಗಷ್ಟೇ ಅಲ್ಲ, ಲೋಳೆಸರ ಒಟ್ಟಾರೆ ಸೌಂದರ್ಯಕ್ಕೂ ಉಪಯೋಗ. ಚರ್ಮಕ್ಕಾಗಿರಲಿ, ಕೂದಲಿಗಾಗಿರಲಿ, ಲೋಳೆಸರ ಆರೋಗ್ಯಕರ. ಕೂದಲು ತುಂಬಾ ತೆಳ್ಳಗಾಗುತ್ತಿದ್ದರೆ ಲೋಳೆಸರ ಉತ್ತಮ ಪರಿಹಾರ ನೀಡಬಲ್ಲದು.



Click it and Unblock the Notifications