Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಕೂದಲಿಗೆ ಬೇಕಾದ ಐದು ಆಯುರ್ವೇದ ಔಷಧಿ ಯಾವುದು?

ಸುಲಭವಾಗಿ ಲಭ್ಯವಿರುವ, ಕೂದಲಿನ ಆರೋಗ್ಯವನ್ನು ದುಪ್ಪಟ್ಟುಗೊಳಿಸುವ ಐದು ಗಿಡಮೂಲಿಕೆಗಳಾವುವೆಂದು ತಿಳಿಯೋಣ.
* ರೀತಾ ಅಥವಾ ಅಂಟವಾಳದ ಕಾಯಿ: ಪುರಾತನ ಕಾಲದಲ್ಲಿ ಹಿಮಾಲಯದಲ್ಲಿ ಬೆಳೆಯುತ್ತಿತ್ತು ಎನ್ನಲಾದ ಈ ಗಿಡಮೂಲಿಕೆಯಿಂದ ಕೂದಲಿಗೆ ಅನೇಕ ಉಪಯೋಗಕರ ಅಂಶವಿದೆ. ಅಂಟವಾಳದಲ್ಲಿ ಕೂದಲನ್ನು ಶುದ್ಧಗೊಳಿಸಿ ರೇಷ್ಮೆಯಂತೆ ಹೊಳಪು ನೀಡುವ ಶಕ್ತಿಯಿದೆ. ಹೆಚ್ಚು ಮಾಲಿನ್ಯ ತುಂಬಿರುವ ಈ ಕಾಲದಲ್ಲಿ ಅಂಟವಾಳದ ಕಾಯಿಯನ್ನು ಉಪಯೋಗಿಸುವುದರಿಂದ ನಿಮ್ಮ ಕೂದಲು ಶುದ್ಧವಾಗಿರುತ್ತೆ.
* ಭೃಂಗರಾಜ: ಪ್ರಾಚೀನ ಭಾರತದಲ್ಲಿ ಹೆಚ್ಚು ಉಪಯೋಗಿಸಲಾಗುತ್ತಿದ್ದ ಭೃಂಗರಾಜ ಈ ಕಾಲಕ್ಕೂ ಪ್ರಸ್ತುತ. ಕೂದಲ ಪೋಷಣೆಗೆ ಆಯುರ್ವೇದ ಪದ್ಧತಿಯಲ್ಲಿ ಹೆಚ್ಚು ಬಳಕೆಯಲ್ಲಿದ್ದ ಈ ಗಿಡಮೂಲಿಕೆಯನ್ನು ಕಪ್ಪು ಕೂದಲು ಪಡೆಯಲು, ಕೂದಲುದುರುವಿಕೆ ಮತ್ತು ಬಾಲನೆರೆ ತಡೆಯಲು ಉಪಯೋಗಿಸಲಾಗುತ್ತದೆ. ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯೊಂದಿಗೆ ಇದನ್ನು ಬಿಸಿ ಮಾಡಿ ತಲೆಗೆ ಮಸಾಜ್ ಮಾಡಿಕೊಳ್ಳುವುದರಿಂದ ಹೆಚ್ಚು ಲಾಭವನ್ನು ಹೊಂದಬಹುದು.
* ಮೆಂತ್ಯೆ: ಎರಡು ರೀತಿಯಲ್ಲಿ ಮೆಂತ್ಯೆ ನಿಮ್ಮ ಕೂದಲಿನ ಸಮಸ್ಯೆ ತಡೆಯಬಲ್ಲದು. ಇದನ್ನು ಹಚ್ಚಿಕೊಳ್ಳುವುದರಿಂದ ಮತ್ತು ತಿನ್ನುವುದರಿಂದ, ಎರಡರಿಂದಲೂ ಇದರ ಉಪಯೋಗ ಹೊಂದಬಹುದು. ಮೆಂತ್ಯೆ ಕಾಳನ್ನು ಪೇಸ್ಟ್ ಮಾಡಿ ತಲೆಗೆ ಪ್ಯಾಕ್ ಹಾಕಿಕೊಳ್ಳಬಹುದು ಅಥವಾ ಮೆಂತ್ಯೆ ಸೊಪ್ಪನ್ನು ತಿಂದರೂ ಕೂದಲಿನ ಬುಡದಲ್ಲಿ ರಕ್ತಸಂಚಲ ಹೆಚ್ಚಾಗಿ ಕೂದಲು ಬೆಳವಣಿಗೆ ಹೊಂದುತ್ತದೆ.
* ಮೆಹಂದಿ: ಕೂದಲಿಗೆ ನೈಸರ್ಗಿಕ ಬಣ್ಣ ನೀಡುವ ಮೆಹಂದಿ ಕೂದಲುದುರುವಿಕೆ ವಿರುದ್ಧ ಹೋರಾಡುವಲ್ಲಿ ಹೆಚ್ಚು ಸಹಕಾರಿ. ಇದನ್ನು ಮೊಸರು ಮತ್ತು ನಿಂಬೆರಸದೊಂದಿಗೆ ಬೆರೆಸಿ ಹಚ್ಚಿಕೊಂಡರೆ ತಲೆಹೊಟ್ಟಿನ ಸಮಸ್ಯೆಯೂ ದೂರವಾಗುತ್ತದೆ. ಮೆಹಂದಿ ಕೂದಲಿನ ಬುಡವನ್ನೂ ಗಟ್ಟಿಗೊಳಿಸುತ್ತದೆ.
* ಲೋಳೆಸರ: ಕೇವಲ ಕೂದಲಿಗಷ್ಟೇ ಅಲ್ಲ, ಲೋಳೆಸರ ಒಟ್ಟಾರೆ ಸೌಂದರ್ಯಕ್ಕೂ ಉಪಯೋಗ. ಚರ್ಮಕ್ಕಾಗಿರಲಿ, ಕೂದಲಿಗಾಗಿರಲಿ, ಲೋಳೆಸರ ಆರೋಗ್ಯಕರ. ಕೂದಲು ತುಂಬಾ ತೆಳ್ಳಗಾಗುತ್ತಿದ್ದರೆ ಲೋಳೆಸರ ಉತ್ತಮ ಪರಿಹಾರ ನೀಡಬಲ್ಲದು.



Click it and Unblock the Notifications
