Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಹಬ್ಬಕ್ಕೆ ಎಣ್ಣೆ ಸ್ನಾನ ಮಾಡೋದು ಯಾಕೆ ಗೊತ್ತಾ?

ಎಣ್ಣೆ ಸ್ನಾನ ಮತ್ತು ಬಿಸಿ ನೀರಿನ ಸ್ನಾನದಿಂದ ಇರುವ ಉಪಯೋಗವನ್ನು ತಿಳಿದುಕೊಳ್ಳಿ:
1. ಬಿಸಿ ನೀರಿನ ಸ್ನಾನ ತ್ವಚೆಯನ್ನು ಸಾಂದ್ರಗೊಳಿಸಿ ಕ್ರಿಮಿಗಳ ವಿರುದ್ಧ ಹೋರಾಡಲು ಅನುಕೂಲ ಮಾಡಿಕೊಡುತ್ತದೆ. ಎಣ್ಣೆಯನ್ನು ದೇಹಕ್ಕೆ ಲೇಪಿಸಿಕೊಂಡು ಮಸಾಜ್ ಮಾಡುವುದರಿಂದ ರಕ್ತ ಸಂಚಲನ ಹೆಚ್ಚಾಗಿ ಆರೋಗ್ಯವೂ ಚೆನ್ನಾಗಿರುತ್ತದೆ ಮತ್ತು ತ್ವಚೆಯೂ ಶುದ್ಧವಿರುತ್ತದೆ.
2. ಬಿಸಿ ನೀರಿನ ಸ್ನಾನ ಮಾಡುವಾಗ ದೊರೆಯುವ ಆವಿಯು ದೇಹದ ದುರ್ಗಂಧವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಚರ್ಮದ ಜೀವಕಣಗಳು ಶುದ್ಧಗೊಂಡು ತ್ವಚೆಯು ಆರಾಮವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ.
3. ದೇಹದ ಹಿಂಭಾಗ, ಬೆನ್ನು, ಭುಜ ಮುಂತಾದ ಜಾಗಗಳು ಅಷ್ಟೇನೂ ಸೂಕ್ಷ್ಮವಲ್ಲದ ಕಾರಣ ಬಿಸಿ ನೀರನ್ನು ಹಾಕಿಕೊಂಡರೆ ತೊಂದರೆಯಿಲ್ಲ. ಇದು ಮೂಳೆಗಳಲ್ಲಿ ಮತ್ತು ಕೀಲುಗಳಲ್ಲಿನ ನೋವು ಮತ್ತು ಉರಿಯನ್ನು ಉಪಶಮನಗೊಳಿಸುತ್ತದೆ. ಆದರೆ ಮುಖಕ್ಕೆ ಮತ್ತು ತಲೆಯ ಬುಡಕ್ಕೆ ಬಿಸಿ ನೀರನ್ನು ಹಾಕಿಕೊಳ್ಳುವುದು ಬೇಡ. ಹೆಚ್ಚು ಬಿಸಿ ನೀರನ್ನು ತಲೆಗೆ ಹಾಕಿಕೊಂಡರೆ ಕೂದಲು ಉದುರಬಹುದು.
4. ಬಿಸಿ ನೀರಿನ ಸ್ನಾನ ಚರ್ಮವನ್ನು ಮೃದುಗೊಳ್ಳುವಂತೆ ಮಾಡುತ್ತದೆ. ಎಣ್ಣೆ ಸ್ನಾನ ಮಾಡುವವರು ಎಣ್ಣೆಗೆ ಸ್ವಲ್ಪ ಅರಿಶಿನ ಬೆರೆಸಿ ಹಚ್ಚಿಕೊಂಡು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ನೈಸರ್ಗಿಕವಾಗಿ ತ್ವಚೆಯನ್ನು ಕಾಂತಿಯುತಗೊಳಿಸಿ ದೇಹದ ದುರ್ಗಂಧವನ್ನೂ ತೊಲಗುವಂತೆ ಮಾಡುತ್ತದೆ. ಹಾಗೆಯೇಚರ್ಮಕ್ಕೆ ಸಂಬಂಧಿಸಿದಂತೆ ಅನೇಕ ರೋಗಗಳು ಬರುವುದನ್ನೂ ತಡೆಯುತ್ತದೆ.
ಎರಡು ವಾರಕ್ಕೊಮ್ಮೆಯಾದರೂ ಬಿಸಿ ನೀರಿನ ಸ್ನಾನ ದೇಹಕ್ಕೆ ಒದಗಿದರೆ ಒಳ್ಳೆಯದು. ಇದು ದೇಹವನ್ನು ಪ್ರಶಾಂತಗೊಳಿಸುವುದಷ್ಟೇ ಅಲ್ಲ ಮನಸ್ಸನ್ನೂಉಲ್ಲಸಿತಗೊಳಿಸುತ್ತದೆ. ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತದೆ. ಹೇಗೂ ನಾಳೆ ಗಣೇಶ ಹಬ್ಬ. ಎಣ್ಣೆ ಸ್ನಾನದ ಗಮ್ಮತ್ತನ್ನು ನೀವೂ ಒಂದು ಕೈ ನೋಡಿ ಬಿಡಿ.



Click it and Unblock the Notifications