Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹಬ್ಬಕ್ಕೆ ಎಣ್ಣೆ ಸ್ನಾನ ಮಾಡೋದು ಯಾಕೆ ಗೊತ್ತಾ?

ಎಣ್ಣೆ ಸ್ನಾನ ಮತ್ತು ಬಿಸಿ ನೀರಿನ ಸ್ನಾನದಿಂದ ಇರುವ ಉಪಯೋಗವನ್ನು ತಿಳಿದುಕೊಳ್ಳಿ:
1. ಬಿಸಿ ನೀರಿನ ಸ್ನಾನ ತ್ವಚೆಯನ್ನು ಸಾಂದ್ರಗೊಳಿಸಿ ಕ್ರಿಮಿಗಳ ವಿರುದ್ಧ ಹೋರಾಡಲು ಅನುಕೂಲ ಮಾಡಿಕೊಡುತ್ತದೆ. ಎಣ್ಣೆಯನ್ನು ದೇಹಕ್ಕೆ ಲೇಪಿಸಿಕೊಂಡು ಮಸಾಜ್ ಮಾಡುವುದರಿಂದ ರಕ್ತ ಸಂಚಲನ ಹೆಚ್ಚಾಗಿ ಆರೋಗ್ಯವೂ ಚೆನ್ನಾಗಿರುತ್ತದೆ ಮತ್ತು ತ್ವಚೆಯೂ ಶುದ್ಧವಿರುತ್ತದೆ.
2. ಬಿಸಿ ನೀರಿನ ಸ್ನಾನ ಮಾಡುವಾಗ ದೊರೆಯುವ ಆವಿಯು ದೇಹದ ದುರ್ಗಂಧವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಚರ್ಮದ ಜೀವಕಣಗಳು ಶುದ್ಧಗೊಂಡು ತ್ವಚೆಯು ಆರಾಮವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ.
3. ದೇಹದ ಹಿಂಭಾಗ, ಬೆನ್ನು, ಭುಜ ಮುಂತಾದ ಜಾಗಗಳು ಅಷ್ಟೇನೂ ಸೂಕ್ಷ್ಮವಲ್ಲದ ಕಾರಣ ಬಿಸಿ ನೀರನ್ನು ಹಾಕಿಕೊಂಡರೆ ತೊಂದರೆಯಿಲ್ಲ. ಇದು ಮೂಳೆಗಳಲ್ಲಿ ಮತ್ತು ಕೀಲುಗಳಲ್ಲಿನ ನೋವು ಮತ್ತು ಉರಿಯನ್ನು ಉಪಶಮನಗೊಳಿಸುತ್ತದೆ. ಆದರೆ ಮುಖಕ್ಕೆ ಮತ್ತು ತಲೆಯ ಬುಡಕ್ಕೆ ಬಿಸಿ ನೀರನ್ನು ಹಾಕಿಕೊಳ್ಳುವುದು ಬೇಡ. ಹೆಚ್ಚು ಬಿಸಿ ನೀರನ್ನು ತಲೆಗೆ ಹಾಕಿಕೊಂಡರೆ ಕೂದಲು ಉದುರಬಹುದು.
4. ಬಿಸಿ ನೀರಿನ ಸ್ನಾನ ಚರ್ಮವನ್ನು ಮೃದುಗೊಳ್ಳುವಂತೆ ಮಾಡುತ್ತದೆ. ಎಣ್ಣೆ ಸ್ನಾನ ಮಾಡುವವರು ಎಣ್ಣೆಗೆ ಸ್ವಲ್ಪ ಅರಿಶಿನ ಬೆರೆಸಿ ಹಚ್ಚಿಕೊಂಡು ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ನೈಸರ್ಗಿಕವಾಗಿ ತ್ವಚೆಯನ್ನು ಕಾಂತಿಯುತಗೊಳಿಸಿ ದೇಹದ ದುರ್ಗಂಧವನ್ನೂ ತೊಲಗುವಂತೆ ಮಾಡುತ್ತದೆ. ಹಾಗೆಯೇಚರ್ಮಕ್ಕೆ ಸಂಬಂಧಿಸಿದಂತೆ ಅನೇಕ ರೋಗಗಳು ಬರುವುದನ್ನೂ ತಡೆಯುತ್ತದೆ.
ಎರಡು ವಾರಕ್ಕೊಮ್ಮೆಯಾದರೂ ಬಿಸಿ ನೀರಿನ ಸ್ನಾನ ದೇಹಕ್ಕೆ ಒದಗಿದರೆ ಒಳ್ಳೆಯದು. ಇದು ದೇಹವನ್ನು ಪ್ರಶಾಂತಗೊಳಿಸುವುದಷ್ಟೇ ಅಲ್ಲ ಮನಸ್ಸನ್ನೂಉಲ್ಲಸಿತಗೊಳಿಸುತ್ತದೆ. ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತದೆ. ಹೇಗೂ ನಾಳೆ ಗಣೇಶ ಹಬ್ಬ. ಎಣ್ಣೆ ಸ್ನಾನದ ಗಮ್ಮತ್ತನ್ನು ನೀವೂ ಒಂದು ಕೈ ನೋಡಿ ಬಿಡಿ.



Click it and Unblock the Notifications