Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಪಿತೃದೋಷವಿದ್ದರೆ ಈ ಅಕ್ಟೋಬರ್ 2 ಅಮವಾಸ್ಯೆ ತುಂಬಾ ವಿಶೇಷವಾದ ದಿನವೇಕೆ?
ಪಿತೃದೋಷವಿದ್ದರೆ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಈ ಪಿತೃದೋಷ ಯಾರಿಗೆ ಉಂಟಾಗುತ್ತದೆ? ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಹಾರವೇನು, ಈ ಬರುವ ಅಕ್ಟೋಬರ್ 2 ತುಂಬಾ ವಿಶೇಷವಾದ ದಿನವೇಕೆ?
ಯಾರಿಗೆ ಪಿತೃದೋಷ ಉಂಟಾಗುವುದು?
ಪಿತೃಗಳಿಗೆ ಮೋಕ್ಷ ಸಿಗದೆ ಅಲೆಯುತ್ತಿದ್ದರೆ ಪಿತೃದೋಷ ಉಂಟಾಗುವುದು
ಮನೆಯಲ್ಲಿ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದರೆ ಪಿತೃದೋಷ ಉಂಟಾಗುವುದು
ಪಿತೃಗಳಿಗೆ ತರ್ಪಣ ನೀಡದಿದ್ದರೆ ಪಿತೃದೋಷವಿರುತ್ತದೆ.

ಇನ್ನು ಕುಂಡಲಿಯಲ್ಲಿ ಈ ಗ್ರಹಗಳ ಸ್ಥಾನ ಕೂಡ ಪಿತೃದೋಷ ಉಂಟು ಮಾಡುತ್ತದೆ:
ಶುಕ್ರ, ಶನಿ, ರಾಹು ನಿಮ್ಮ ರಾಶಿಯ 5ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು
ಕೇತು 4ನೇ ಮನೆಯಲ್ಲಿದ್ದರೆ ಚಂದ್ರನಿಂದಾಗಿ ಪಿತೃದೋಷ ಉಂಟಾಗುತ್ತದೆ
ಬುಧ ಮತ್ತು ಕೇತು 1 ಮತ್ತು 8ನೇ ಸ್ಥಾನದಲ್ಲಿದ್ದರೆ ಪಿತೃದೋಷ ಉಂಟಾಗುವುದು
ಚಂದ್ರ 3 ಅಥವಾ 6ನೇ ಮನೆಯಲ್ಲಿದ್ದರೆ ಬುಧನ ಕೆಟ್ಟ ಪ್ರಭಾವ ಬೀರಲಿದೆ
ಶುಕ್ರ, ಬುಧ ಅಥವಾ ರಾಹು ಈ ಗ್ರಹಗಳಲ್ಲಿ ಯಾವುದಾದರು ಎರಡು ಅಥವಾ ಮೂರು ಗ್ರಹಗಳು ರಾಶಿಯ 7ನೇ ಮನೆಯಲ್ಲಿದ್ದರೆ ಶುಕ್ರನ ಕೆಟ್ಟ ಪ್ರಭಾವ ಬೀರುತ್ತದೆ.
ಸೂರ್ಯ ಅಥವಾ ಶುಕ್ರ ಅಥವಾ ಈ ಎರಡೂ ಗ್ರಹಗಳು 12ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಏನಾಗುತ್ತದೆ?
- ಪಿತೃದೋಷವಿದ್ದರೆ ಬದುಕಿನಲ್ಲಿ ಬರುವ ಸವಾಲುಗಳನ್ನು ನೋಡಿ ತಿಳಿಯಬಹುದು
- ವೃತ್ತಿ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ತುಂಬಾ ಸವಾಲುಗಳು ಬರುವುದು, ವೃತ್ತಿ ಬದುಕಿನಲ್ಲಿ ಬೆಳವಣಿಗೆ ಹೊಂದಲು ಸಾಧ್ಯನೇ ಆಗಲ್ಲ,ಎಷ್ಟೇ ಪ್ರಯತ್ನಿಸಿದರೂ ಸೋಲು.. ಸೋಲು
- ಮದುವೆ ವಿಳಂಬವಾಗುವುದು
- ಮದುವೆಯಾದರೂ ವೈವಾಹಿಕ ಬದುಕಿನಲ್ಲಿ ಕಲಹ ಅಥವಾ ಮದುವೆ ವಿಳಂಬವಾಗುವುದು
- ಆರೋಗ್ಯ ಸಮಸ್ಯೆ ಕಾಡುವುದು, ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆ ಅಲೆದು ಅಲೆದು ಸಾಕಾಗುವುದು
- ಸಾಕಷ್ಟು ಮಾನಸಿಕ ಒತ್ತಡವಿರುತ್ತದೆ
- ಅಸ್ವಾಭಾವಿಕ ಸಾವು ಉಂಟಾಗಬಹುದು
- ಮನೆಯಲ್ಲಿ ಅಸ್ವಾಭಾವಿಕ ಘಟನೆಗಳು, ಅಪಘಾತ, ಬೆಂಕಿ ಬೀಳುವುದು ಈ ಬಗೆಯ ಘಟನೆ ಸಂಭವಿಸುವುದು.
- ಆರ್ಥಿಕವಾಗಿ ತುಂಬಾನೇ ಸಮಸ್ಯೆ ಎದುರಿಸುತ್ತಾರೆ
- ಬದುಕಿನಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಸಾಕಷ್ಟು ಸವಾಲುಗಳು ಎದುರಾಗುವುದು, ಇದರಿಂದಾಗಿ ಸಾಕಾಗಿ ಹೋಗಿರುತ್ತದೆ.
ಈ ಪಿತೃದೋಷಕ್ಕೆ ಜ್ಯೋತಿಷ್ಯ ಪರಿಹಾರವೇನು?
ಪಿತೃದೋಷಕ್ಕೆ ಪಿತೃ ತರ್ಪಣ ನೀಡುವುದು ಅತ್ಯುತ್ತಮವಾದ ಪರಿಹಾರವಾಗಿದೆ.
ಪಿತೃತರ್ಪಣಕ್ಕೆ ಪಿತೃಪಕ್ಷ ತುಂಬಾ ಒಳ್ಳೆಯದು:
ಈ ಪಿತೃಪಕ್ಷ ಅಕ್ಟೋಬರ್ 2ಕ್ಕೆ ಮುಕ್ತಾಯವಾಗುತ್ತಿದೆ, ನಮಗೆ ಪಿತೃದೋಷವಿರಬಹುದು ಎಂದನಿಸಿದ್ದರೆ ಅಥವಾ ಪಿತೃದೋಷವಿದ್ದರೆ ಪಿತೃತರ್ಪಣ ಮಾಡಬಹುದು.
ಅಕ್ಟೋಬರ್ 2ಕ್ಕೆ ಸರ್ವಪಿತೃಪಕ್ಷವಿದೆ
ಅಕ್ಟೋಬರ್ 2ಕ್ಕೆ ಅಮವಾಸ್ಯೆಯಂದು ಸರ್ವಪಿತೃಪಕ್ಷವಿದೆ, ಈ ದಿನ ತರ್ಪಣ ಮಾಡಿದರೆ ನಿಮ್ಮ ಕುಟುಂಬದಲ್ಲಿ ತೀರಿ ಹೋದವರಲ್ಲಿ ಮೋಕ್ಷ ಸಿಗದೆ ಇದ್ದರೆ ಅವರಿಗೂ ಮೋಕ್ಷ ಸಿಗುವುದು. ಹೀಗಾಗಿ ಪಿತೃದೋಷದಿಂದ ಮುಕ್ತರಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications