Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
ಪಿತೃದೋಷವಿದ್ದರೆ ಈ ಅಕ್ಟೋಬರ್ 2 ಅಮವಾಸ್ಯೆ ತುಂಬಾ ವಿಶೇಷವಾದ ದಿನವೇಕೆ?
ಪಿತೃದೋಷವಿದ್ದರೆ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಈ ಪಿತೃದೋಷ ಯಾರಿಗೆ ಉಂಟಾಗುತ್ತದೆ? ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಹಾರವೇನು, ಈ ಬರುವ ಅಕ್ಟೋಬರ್ 2 ತುಂಬಾ ವಿಶೇಷವಾದ ದಿನವೇಕೆ?
ಯಾರಿಗೆ ಪಿತೃದೋಷ ಉಂಟಾಗುವುದು?
ಪಿತೃಗಳಿಗೆ ಮೋಕ್ಷ ಸಿಗದೆ ಅಲೆಯುತ್ತಿದ್ದರೆ ಪಿತೃದೋಷ ಉಂಟಾಗುವುದು
ಮನೆಯಲ್ಲಿ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದರೆ ಪಿತೃದೋಷ ಉಂಟಾಗುವುದು
ಪಿತೃಗಳಿಗೆ ತರ್ಪಣ ನೀಡದಿದ್ದರೆ ಪಿತೃದೋಷವಿರುತ್ತದೆ.

ಇನ್ನು ಕುಂಡಲಿಯಲ್ಲಿ ಈ ಗ್ರಹಗಳ ಸ್ಥಾನ ಕೂಡ ಪಿತೃದೋಷ ಉಂಟು ಮಾಡುತ್ತದೆ:
ಶುಕ್ರ, ಶನಿ, ರಾಹು ನಿಮ್ಮ ರಾಶಿಯ 5ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು
ಕೇತು 4ನೇ ಮನೆಯಲ್ಲಿದ್ದರೆ ಚಂದ್ರನಿಂದಾಗಿ ಪಿತೃದೋಷ ಉಂಟಾಗುತ್ತದೆ
ಬುಧ ಮತ್ತು ಕೇತು 1 ಮತ್ತು 8ನೇ ಸ್ಥಾನದಲ್ಲಿದ್ದರೆ ಪಿತೃದೋಷ ಉಂಟಾಗುವುದು
ಚಂದ್ರ 3 ಅಥವಾ 6ನೇ ಮನೆಯಲ್ಲಿದ್ದರೆ ಬುಧನ ಕೆಟ್ಟ ಪ್ರಭಾವ ಬೀರಲಿದೆ
ಶುಕ್ರ, ಬುಧ ಅಥವಾ ರಾಹು ಈ ಗ್ರಹಗಳಲ್ಲಿ ಯಾವುದಾದರು ಎರಡು ಅಥವಾ ಮೂರು ಗ್ರಹಗಳು ರಾಶಿಯ 7ನೇ ಮನೆಯಲ್ಲಿದ್ದರೆ ಶುಕ್ರನ ಕೆಟ್ಟ ಪ್ರಭಾವ ಬೀರುತ್ತದೆ.
ಸೂರ್ಯ ಅಥವಾ ಶುಕ್ರ ಅಥವಾ ಈ ಎರಡೂ ಗ್ರಹಗಳು 12ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಏನಾಗುತ್ತದೆ?
- ಪಿತೃದೋಷವಿದ್ದರೆ ಬದುಕಿನಲ್ಲಿ ಬರುವ ಸವಾಲುಗಳನ್ನು ನೋಡಿ ತಿಳಿಯಬಹುದು
- ವೃತ್ತಿ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ತುಂಬಾ ಸವಾಲುಗಳು ಬರುವುದು, ವೃತ್ತಿ ಬದುಕಿನಲ್ಲಿ ಬೆಳವಣಿಗೆ ಹೊಂದಲು ಸಾಧ್ಯನೇ ಆಗಲ್ಲ,ಎಷ್ಟೇ ಪ್ರಯತ್ನಿಸಿದರೂ ಸೋಲು.. ಸೋಲು
- ಮದುವೆ ವಿಳಂಬವಾಗುವುದು
- ಮದುವೆಯಾದರೂ ವೈವಾಹಿಕ ಬದುಕಿನಲ್ಲಿ ಕಲಹ ಅಥವಾ ಮದುವೆ ವಿಳಂಬವಾಗುವುದು
- ಆರೋಗ್ಯ ಸಮಸ್ಯೆ ಕಾಡುವುದು, ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆ ಅಲೆದು ಅಲೆದು ಸಾಕಾಗುವುದು
- ಸಾಕಷ್ಟು ಮಾನಸಿಕ ಒತ್ತಡವಿರುತ್ತದೆ
- ಅಸ್ವಾಭಾವಿಕ ಸಾವು ಉಂಟಾಗಬಹುದು
- ಮನೆಯಲ್ಲಿ ಅಸ್ವಾಭಾವಿಕ ಘಟನೆಗಳು, ಅಪಘಾತ, ಬೆಂಕಿ ಬೀಳುವುದು ಈ ಬಗೆಯ ಘಟನೆ ಸಂಭವಿಸುವುದು.
- ಆರ್ಥಿಕವಾಗಿ ತುಂಬಾನೇ ಸಮಸ್ಯೆ ಎದುರಿಸುತ್ತಾರೆ
- ಬದುಕಿನಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಸಾಕಷ್ಟು ಸವಾಲುಗಳು ಎದುರಾಗುವುದು, ಇದರಿಂದಾಗಿ ಸಾಕಾಗಿ ಹೋಗಿರುತ್ತದೆ.
ಈ ಪಿತೃದೋಷಕ್ಕೆ ಜ್ಯೋತಿಷ್ಯ ಪರಿಹಾರವೇನು?
ಪಿತೃದೋಷಕ್ಕೆ ಪಿತೃ ತರ್ಪಣ ನೀಡುವುದು ಅತ್ಯುತ್ತಮವಾದ ಪರಿಹಾರವಾಗಿದೆ.
ಪಿತೃತರ್ಪಣಕ್ಕೆ ಪಿತೃಪಕ್ಷ ತುಂಬಾ ಒಳ್ಳೆಯದು:
ಈ ಪಿತೃಪಕ್ಷ ಅಕ್ಟೋಬರ್ 2ಕ್ಕೆ ಮುಕ್ತಾಯವಾಗುತ್ತಿದೆ, ನಮಗೆ ಪಿತೃದೋಷವಿರಬಹುದು ಎಂದನಿಸಿದ್ದರೆ ಅಥವಾ ಪಿತೃದೋಷವಿದ್ದರೆ ಪಿತೃತರ್ಪಣ ಮಾಡಬಹುದು.
ಅಕ್ಟೋಬರ್ 2ಕ್ಕೆ ಸರ್ವಪಿತೃಪಕ್ಷವಿದೆ
ಅಕ್ಟೋಬರ್ 2ಕ್ಕೆ ಅಮವಾಸ್ಯೆಯಂದು ಸರ್ವಪಿತೃಪಕ್ಷವಿದೆ, ಈ ದಿನ ತರ್ಪಣ ಮಾಡಿದರೆ ನಿಮ್ಮ ಕುಟುಂಬದಲ್ಲಿ ತೀರಿ ಹೋದವರಲ್ಲಿ ಮೋಕ್ಷ ಸಿಗದೆ ಇದ್ದರೆ ಅವರಿಗೂ ಮೋಕ್ಷ ಸಿಗುವುದು. ಹೀಗಾಗಿ ಪಿತೃದೋಷದಿಂದ ಮುಕ್ತರಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications