Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಪಿತೃದೋಷವಿದ್ದರೆ ಈ ಅಕ್ಟೋಬರ್ 2 ಅಮವಾಸ್ಯೆ ತುಂಬಾ ವಿಶೇಷವಾದ ದಿನವೇಕೆ?
ಪಿತೃದೋಷವಿದ್ದರೆ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಈ ಪಿತೃದೋಷ ಯಾರಿಗೆ ಉಂಟಾಗುತ್ತದೆ? ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಹಾರವೇನು, ಈ ಬರುವ ಅಕ್ಟೋಬರ್ 2 ತುಂಬಾ ವಿಶೇಷವಾದ ದಿನವೇಕೆ?
ಯಾರಿಗೆ ಪಿತೃದೋಷ ಉಂಟಾಗುವುದು?
ಪಿತೃಗಳಿಗೆ ಮೋಕ್ಷ ಸಿಗದೆ ಅಲೆಯುತ್ತಿದ್ದರೆ ಪಿತೃದೋಷ ಉಂಟಾಗುವುದು
ಮನೆಯಲ್ಲಿ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದರೆ ಪಿತೃದೋಷ ಉಂಟಾಗುವುದು
ಪಿತೃಗಳಿಗೆ ತರ್ಪಣ ನೀಡದಿದ್ದರೆ ಪಿತೃದೋಷವಿರುತ್ತದೆ.

ಇನ್ನು ಕುಂಡಲಿಯಲ್ಲಿ ಈ ಗ್ರಹಗಳ ಸ್ಥಾನ ಕೂಡ ಪಿತೃದೋಷ ಉಂಟು ಮಾಡುತ್ತದೆ:
ಶುಕ್ರ, ಶನಿ, ರಾಹು ನಿಮ್ಮ ರಾಶಿಯ 5ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು
ಕೇತು 4ನೇ ಮನೆಯಲ್ಲಿದ್ದರೆ ಚಂದ್ರನಿಂದಾಗಿ ಪಿತೃದೋಷ ಉಂಟಾಗುತ್ತದೆ
ಬುಧ ಮತ್ತು ಕೇತು 1 ಮತ್ತು 8ನೇ ಸ್ಥಾನದಲ್ಲಿದ್ದರೆ ಪಿತೃದೋಷ ಉಂಟಾಗುವುದು
ಚಂದ್ರ 3 ಅಥವಾ 6ನೇ ಮನೆಯಲ್ಲಿದ್ದರೆ ಬುಧನ ಕೆಟ್ಟ ಪ್ರಭಾವ ಬೀರಲಿದೆ
ಶುಕ್ರ, ಬುಧ ಅಥವಾ ರಾಹು ಈ ಗ್ರಹಗಳಲ್ಲಿ ಯಾವುದಾದರು ಎರಡು ಅಥವಾ ಮೂರು ಗ್ರಹಗಳು ರಾಶಿಯ 7ನೇ ಮನೆಯಲ್ಲಿದ್ದರೆ ಶುಕ್ರನ ಕೆಟ್ಟ ಪ್ರಭಾವ ಬೀರುತ್ತದೆ.
ಸೂರ್ಯ ಅಥವಾ ಶುಕ್ರ ಅಥವಾ ಈ ಎರಡೂ ಗ್ರಹಗಳು 12ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಏನಾಗುತ್ತದೆ?
- ಪಿತೃದೋಷವಿದ್ದರೆ ಬದುಕಿನಲ್ಲಿ ಬರುವ ಸವಾಲುಗಳನ್ನು ನೋಡಿ ತಿಳಿಯಬಹುದು
- ವೃತ್ತಿ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ತುಂಬಾ ಸವಾಲುಗಳು ಬರುವುದು, ವೃತ್ತಿ ಬದುಕಿನಲ್ಲಿ ಬೆಳವಣಿಗೆ ಹೊಂದಲು ಸಾಧ್ಯನೇ ಆಗಲ್ಲ,ಎಷ್ಟೇ ಪ್ರಯತ್ನಿಸಿದರೂ ಸೋಲು.. ಸೋಲು
- ಮದುವೆ ವಿಳಂಬವಾಗುವುದು
- ಮದುವೆಯಾದರೂ ವೈವಾಹಿಕ ಬದುಕಿನಲ್ಲಿ ಕಲಹ ಅಥವಾ ಮದುವೆ ವಿಳಂಬವಾಗುವುದು
- ಆರೋಗ್ಯ ಸಮಸ್ಯೆ ಕಾಡುವುದು, ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆ ಅಲೆದು ಅಲೆದು ಸಾಕಾಗುವುದು
- ಸಾಕಷ್ಟು ಮಾನಸಿಕ ಒತ್ತಡವಿರುತ್ತದೆ
- ಅಸ್ವಾಭಾವಿಕ ಸಾವು ಉಂಟಾಗಬಹುದು
- ಮನೆಯಲ್ಲಿ ಅಸ್ವಾಭಾವಿಕ ಘಟನೆಗಳು, ಅಪಘಾತ, ಬೆಂಕಿ ಬೀಳುವುದು ಈ ಬಗೆಯ ಘಟನೆ ಸಂಭವಿಸುವುದು.
- ಆರ್ಥಿಕವಾಗಿ ತುಂಬಾನೇ ಸಮಸ್ಯೆ ಎದುರಿಸುತ್ತಾರೆ
- ಬದುಕಿನಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಸಾಕಷ್ಟು ಸವಾಲುಗಳು ಎದುರಾಗುವುದು, ಇದರಿಂದಾಗಿ ಸಾಕಾಗಿ ಹೋಗಿರುತ್ತದೆ.
ಈ ಪಿತೃದೋಷಕ್ಕೆ ಜ್ಯೋತಿಷ್ಯ ಪರಿಹಾರವೇನು?
ಪಿತೃದೋಷಕ್ಕೆ ಪಿತೃ ತರ್ಪಣ ನೀಡುವುದು ಅತ್ಯುತ್ತಮವಾದ ಪರಿಹಾರವಾಗಿದೆ.
ಪಿತೃತರ್ಪಣಕ್ಕೆ ಪಿತೃಪಕ್ಷ ತುಂಬಾ ಒಳ್ಳೆಯದು:
ಈ ಪಿತೃಪಕ್ಷ ಅಕ್ಟೋಬರ್ 2ಕ್ಕೆ ಮುಕ್ತಾಯವಾಗುತ್ತಿದೆ, ನಮಗೆ ಪಿತೃದೋಷವಿರಬಹುದು ಎಂದನಿಸಿದ್ದರೆ ಅಥವಾ ಪಿತೃದೋಷವಿದ್ದರೆ ಪಿತೃತರ್ಪಣ ಮಾಡಬಹುದು.
ಅಕ್ಟೋಬರ್ 2ಕ್ಕೆ ಸರ್ವಪಿತೃಪಕ್ಷವಿದೆ
ಅಕ್ಟೋಬರ್ 2ಕ್ಕೆ ಅಮವಾಸ್ಯೆಯಂದು ಸರ್ವಪಿತೃಪಕ್ಷವಿದೆ, ಈ ದಿನ ತರ್ಪಣ ಮಾಡಿದರೆ ನಿಮ್ಮ ಕುಟುಂಬದಲ್ಲಿ ತೀರಿ ಹೋದವರಲ್ಲಿ ಮೋಕ್ಷ ಸಿಗದೆ ಇದ್ದರೆ ಅವರಿಗೂ ಮೋಕ್ಷ ಸಿಗುವುದು. ಹೀಗಾಗಿ ಪಿತೃದೋಷದಿಂದ ಮುಕ್ತರಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications