Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಪಿತೃದೋಷವಿದ್ದರೆ ಈ ಅಕ್ಟೋಬರ್ 2 ಅಮವಾಸ್ಯೆ ತುಂಬಾ ವಿಶೇಷವಾದ ದಿನವೇಕೆ?
ಪಿತೃದೋಷವಿದ್ದರೆ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಈ ಪಿತೃದೋಷ ಯಾರಿಗೆ ಉಂಟಾಗುತ್ತದೆ? ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಹಾರವೇನು, ಈ ಬರುವ ಅಕ್ಟೋಬರ್ 2 ತುಂಬಾ ವಿಶೇಷವಾದ ದಿನವೇಕೆ?
ಯಾರಿಗೆ ಪಿತೃದೋಷ ಉಂಟಾಗುವುದು?
ಪಿತೃಗಳಿಗೆ ಮೋಕ್ಷ ಸಿಗದೆ ಅಲೆಯುತ್ತಿದ್ದರೆ ಪಿತೃದೋಷ ಉಂಟಾಗುವುದು
ಮನೆಯಲ್ಲಿ ಹಿರಿಯರನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದರೆ ಪಿತೃದೋಷ ಉಂಟಾಗುವುದು
ಪಿತೃಗಳಿಗೆ ತರ್ಪಣ ನೀಡದಿದ್ದರೆ ಪಿತೃದೋಷವಿರುತ್ತದೆ.

ಇನ್ನು ಕುಂಡಲಿಯಲ್ಲಿ ಈ ಗ್ರಹಗಳ ಸ್ಥಾನ ಕೂಡ ಪಿತೃದೋಷ ಉಂಟು ಮಾಡುತ್ತದೆ:
ಶುಕ್ರ, ಶನಿ, ರಾಹು ನಿಮ್ಮ ರಾಶಿಯ 5ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು
ಕೇತು 4ನೇ ಮನೆಯಲ್ಲಿದ್ದರೆ ಚಂದ್ರನಿಂದಾಗಿ ಪಿತೃದೋಷ ಉಂಟಾಗುತ್ತದೆ
ಬುಧ ಮತ್ತು ಕೇತು 1 ಮತ್ತು 8ನೇ ಸ್ಥಾನದಲ್ಲಿದ್ದರೆ ಪಿತೃದೋಷ ಉಂಟಾಗುವುದು
ಚಂದ್ರ 3 ಅಥವಾ 6ನೇ ಮನೆಯಲ್ಲಿದ್ದರೆ ಬುಧನ ಕೆಟ್ಟ ಪ್ರಭಾವ ಬೀರಲಿದೆ
ಶುಕ್ರ, ಬುಧ ಅಥವಾ ರಾಹು ಈ ಗ್ರಹಗಳಲ್ಲಿ ಯಾವುದಾದರು ಎರಡು ಅಥವಾ ಮೂರು ಗ್ರಹಗಳು ರಾಶಿಯ 7ನೇ ಮನೆಯಲ್ಲಿದ್ದರೆ ಶುಕ್ರನ ಕೆಟ್ಟ ಪ್ರಭಾವ ಬೀರುತ್ತದೆ.
ಸೂರ್ಯ ಅಥವಾ ಶುಕ್ರ ಅಥವಾ ಈ ಎರಡೂ ಗ್ರಹಗಳು 12ನೇ ಮನೆಯಲ್ಲಿದ್ದರೆ ಪಿತೃದೋಷ ಉಂಟಾಗುವುದು.
ಪಿತೃದೋಷವಿದ್ದರೆ ಏನಾಗುತ್ತದೆ?
- ಪಿತೃದೋಷವಿದ್ದರೆ ಬದುಕಿನಲ್ಲಿ ಬರುವ ಸವಾಲುಗಳನ್ನು ನೋಡಿ ತಿಳಿಯಬಹುದು
- ವೃತ್ತಿ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ತುಂಬಾ ಸವಾಲುಗಳು ಬರುವುದು, ವೃತ್ತಿ ಬದುಕಿನಲ್ಲಿ ಬೆಳವಣಿಗೆ ಹೊಂದಲು ಸಾಧ್ಯನೇ ಆಗಲ್ಲ,ಎಷ್ಟೇ ಪ್ರಯತ್ನಿಸಿದರೂ ಸೋಲು.. ಸೋಲು
- ಮದುವೆ ವಿಳಂಬವಾಗುವುದು
- ಮದುವೆಯಾದರೂ ವೈವಾಹಿಕ ಬದುಕಿನಲ್ಲಿ ಕಲಹ ಅಥವಾ ಮದುವೆ ವಿಳಂಬವಾಗುವುದು
- ಆರೋಗ್ಯ ಸಮಸ್ಯೆ ಕಾಡುವುದು, ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆ ಅಲೆದು ಅಲೆದು ಸಾಕಾಗುವುದು
- ಸಾಕಷ್ಟು ಮಾನಸಿಕ ಒತ್ತಡವಿರುತ್ತದೆ
- ಅಸ್ವಾಭಾವಿಕ ಸಾವು ಉಂಟಾಗಬಹುದು
- ಮನೆಯಲ್ಲಿ ಅಸ್ವಾಭಾವಿಕ ಘಟನೆಗಳು, ಅಪಘಾತ, ಬೆಂಕಿ ಬೀಳುವುದು ಈ ಬಗೆಯ ಘಟನೆ ಸಂಭವಿಸುವುದು.
- ಆರ್ಥಿಕವಾಗಿ ತುಂಬಾನೇ ಸಮಸ್ಯೆ ಎದುರಿಸುತ್ತಾರೆ
- ಬದುಕಿನಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಸಾಕಷ್ಟು ಸವಾಲುಗಳು ಎದುರಾಗುವುದು, ಇದರಿಂದಾಗಿ ಸಾಕಾಗಿ ಹೋಗಿರುತ್ತದೆ.
ಈ ಪಿತೃದೋಷಕ್ಕೆ ಜ್ಯೋತಿಷ್ಯ ಪರಿಹಾರವೇನು?
ಪಿತೃದೋಷಕ್ಕೆ ಪಿತೃ ತರ್ಪಣ ನೀಡುವುದು ಅತ್ಯುತ್ತಮವಾದ ಪರಿಹಾರವಾಗಿದೆ.
ಪಿತೃತರ್ಪಣಕ್ಕೆ ಪಿತೃಪಕ್ಷ ತುಂಬಾ ಒಳ್ಳೆಯದು:
ಈ ಪಿತೃಪಕ್ಷ ಅಕ್ಟೋಬರ್ 2ಕ್ಕೆ ಮುಕ್ತಾಯವಾಗುತ್ತಿದೆ, ನಮಗೆ ಪಿತೃದೋಷವಿರಬಹುದು ಎಂದನಿಸಿದ್ದರೆ ಅಥವಾ ಪಿತೃದೋಷವಿದ್ದರೆ ಪಿತೃತರ್ಪಣ ಮಾಡಬಹುದು.
ಅಕ್ಟೋಬರ್ 2ಕ್ಕೆ ಸರ್ವಪಿತೃಪಕ್ಷವಿದೆ
ಅಕ್ಟೋಬರ್ 2ಕ್ಕೆ ಅಮವಾಸ್ಯೆಯಂದು ಸರ್ವಪಿತೃಪಕ್ಷವಿದೆ, ಈ ದಿನ ತರ್ಪಣ ಮಾಡಿದರೆ ನಿಮ್ಮ ಕುಟುಂಬದಲ್ಲಿ ತೀರಿ ಹೋದವರಲ್ಲಿ ಮೋಕ್ಷ ಸಿಗದೆ ಇದ್ದರೆ ಅವರಿಗೂ ಮೋಕ್ಷ ಸಿಗುವುದು. ಹೀಗಾಗಿ ಪಿತೃದೋಷದಿಂದ ಮುಕ್ತರಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications