Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಸಿರಿಯಾ ಬಗ್ಗೆ ನಿಜವಾಯ್ತು ಬಾಬಾ ವಂಗಾ ಭವಿಷ್ಯ: ಸಿರಿಯಾ ಬಿದ್ದಾಗ ಹೊತ್ತಿ ಉರಿಯಲಿದೆ ವಿಶ್ವ, 2025ರ ವಂಗಾ ಭವಿಷ್ಯ
ಹೊಸ ವರ್ಷದ ಆರಂಭದ ಮುನ್ನವೇ ಜಾಗತಿಕ ಮಟ್ಟದಲ್ಲಿ ಯುದ್ಧದ ಕರಿ ನೆರಳು ಆವರಿಸಿದೆ. 2025ರಲ್ಲಿ ಸಿರಿಯಾ ಪತನವಾಗಲಿದೆ ಎಂಬ ಭವಿಷ್ಯ ನಿಜವಾಗಿ ಬಿಟ್ಟಿದೆ, 2024ರ ಕೊನೆಯ ತಿಂಗಳಿನಲ್ಲಿಯೇ ಸಿರಿಯಾ ಕ್ರಾಂತಿ ಶುರುವಾಗಿದ್ದು ಬಂಡುಕೋರರು ಸಿರಿಯಾ ಆಡಳಿತ ವಿರುದ್ಧ ದಂಗೆ ಎದ್ದಿದ್ದಾರೆ. ಬಂಡುಕೋರರ ದಾಳಿಗೆ ಸೋತು ಹೋಗಿರುವ ಅಸ್ಸಾದ್ ತನ್ನ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಅಲ್ಲಯ ನಾಗರಿಕರ ಬದುಕು ಅತಂತ್ರದಲ್ಲಿದೆ.

2000 ಇಸವಿಯಿಂದ ಸುದೀರ್ಘ ಆಡಳಿತ ನಡೆಸುತ್ತಾ ಬಂದಿದ್ದ ಬಶರ್ ಅಲ್ ಅಸ್ಸಾದ್ ಸಿರಿಯಾ ಬಿಟ್ಟು ಓಡಿ ಹೋಗಿದ್ದಾರೆ
ಅಲ್ ಅಸಾಸ್ ಅಜ್ಞಾತ ಸ್ಥಳಕ್ಕೆ ಓಡಿ ಹೋಗಿದ್ದಾರೆ ಎಂದು ಕೆಲ ವರದಿಗಳು ಹೇಳಿದರೆ, ಇನ್ನು ಕೆಲ ವರದಿಗಳು ಅವರನ್ನು ಕೊಂದು ಹಾಕಲಾಗಿದೆ ಎಂದು ಹೇಳುತ್ತಿದೆ. ದಂಡುಕೋರರು ನಿರಂತರ ಶಸ್ತ್ರ ಹೋರಾಟ ಮಾಡಿದ್ದರ ಪರಿಣಾಮ ಅಸ್ಸಾದ್ ಅಧಿಕಾರದಿಂದ ಕೆಳಗಿಳಿಯುವ, ತನ್ನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವ ಪರಿಸ್ಥಿತಿ ಉಂಟಾಯ್ತು. ಅಸ್ಸಾದ್ ಶನಿವಾರ ಆತ್ರಿ 10 ಗಂಟೆಗೆ ಖಾಸಗಿ ವಿಮಾನದಲ್ಲಿಹೋದರು ಎಂದು ಸಿರಿಯನ್ ಮಾನವ ಕ್ಕುಗಳ ಯುದ್ಧ ವೀಕ್ಷಕ ಸಂಸ್ಥೆ ಹೇಳಿದೆ.
ಆದರೆ ಆ ವಿಮಾನ ಕಣ್ಮೆರೆಯಾಗುವ ಮೊದಲು ಅಸ್ಸಾದ್ ಇದ್ದ ವಿಮಾನ ಮಾರ್ಗ ಬದಲಾಯಿಸಿದೆ, ಅವರನ್ನುಕೊಲ್ಲಲಾಗಿದೆ ಎಂಬ ಊಹಾಪೋಹಾಗಳು ಕೇಳಿ ಬರುತ್ತಿದೆ. 2015ರಿಂದ ರಷ್ಯಾವೂ ತನ್ನ ಮಿಲಿಟರಿ ಕ್ಯಾಂಪ್ ಅನ್ನು ಸಿರಿಯಾದಲ್ಲಿ ಇರಿಸಿದೆ. ಇದೀಗ ಅಸ್ಸಾದ್ ಅಧಿಕಾರದಿಂದ ಇಳಿದಿರುವುದರಿಂದ ಸಿರಿಯಾ ಜನರು ಸಂಭ್ರಮಿಸುತ್ತಿರುವುದನ್ನು ಕಾಣಬಹುದು.
ಸಿರಿಯಾ ಪತನದಿಂದ ವಿಶ್ವ ಯುದ್ಧ ನಡೆಯಲಿದೆ ಎಂಬ ಭವಿಷ್ಯ
ಬಾಬಾ ವಂಗಾ ಭವಿಷ್ಯವು ಸಿರಿಯಾ ಪತನದ ಬಳಿಕ 3ನೇ ಮಹಾಯುದ್ಧ ನಡೆಯಲಿದೆ ಎಂದು ಹೇಳಿದೆ, ಇದೀಗ ಆ ಭವಿಷ್ಯ ವಾಣಿ ನಿಜವಾಗಿದೆ, ಸಿರಿಯಾ ಪತನವಾಗಿದೆ, ಸಿರಿಯಾದಲ್ಲಿ ಈಗ ಉಂಟಾಗಿರುವ ಗೊಂದಲ 3ನೇ ವಿಶ್ವ ಮಹಾ ಯುದ್ಧಕ್ಕೆ ನಾಂದಿ ಹಾಡಲಿದೆಯೇ, ಈ ಭವಿಷ್ಯ ನಿಜವಾಗಲಿದೆಯೇ ಎಂಬ ಆತಂಕ ಮೂಡಿಸಿದೆ.
ಬಾಬಾ ವಂಗಾ 2025ರ ಕುರಿತು ನುಡಿದ ಭವಿಷ್ಯಗಳು
ಯುರೋಪ್ ನಾಶವಾಗಲಿದೆ
ಯುರೋಪ್ನಲ್ಲಿ ಜನ ಸಂಖ್ಯೆ ಕಡಿಮೆಯಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ, ಅದು ಯುದ್ಧದಿಂದಲಾ ಅಥವಾ ಪ್ರಕೃತಿ ವಿಕೋಪಗಳಿಂದಲಾ ಗೊತ್ತಿಲ್ಲ, ಆದರೆ ಯುರೋಪ್ನಲ್ಲಿ ಹೀಗಾಗಲೇ ಹಲವು ಕಡೆ ಆತಂರಿಕ ದಂಗೆಗಳು ಕಾಣುತ್ತಿದ್ದು ಇದರಿಂದ ವಿಶ್ವ ಮಹಾಯುದ್ಧ ಸಂಭವಿಸಲಿದೆ ಎಂದು ಹೇಳಲಾಗುತ್ತಿದೆ.
ವಿಜ್ಞಾನದಲ್ಲಿ ಕ್ರಾಂತಿಯಾಗಲಿದೆ
ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿಯಾಗಲಿದೆ, ಆಧುನಿಕ ಚಿಕಿತ್ಸಾ ವಿಧಾನ, ಔಷಧಗಳು ಬರಲಿವೆ. ಆರೋಗ್ಯ ವಿಭಾಗದಲ್ಲಿ ತುಂಬಾನೇ ಬದಲಾವಣೆಯಾಗಲಿದ್ದು ಈ ಬದಲಾವಣೆಯಿಂದಾಗಿ ಜೀವನ ಮಟ್ಟ ಸುಧಾರಿಸಲಿದೆ.
ಯಂತ್ರಗಳಲ್ಲಿದೆ ಟೆಲಿಪತಿ ಸಂವಹನ
ಸಂವಹನದಲ್ಲಿ ಮತ್ತಷ್ಟು ಬೆಳವಣಿಗೆಯಾಗಲಿದೆ, ಟೆಲಿಪತಿ ಸಂವಹನ ಕೂಡ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
ಏಲಿಯನ್ಗಳ ಜೊತೆ ಮನುಷ್ಯ ಅಂವಹನ ನಡೆಸಲಿದ್ದಾನೆ
ಅನ್ಗಗ್ರಹ ಜೀವಿಗಳಿವೆ, ಅವುಗಳು ಭೂಮಿಗೆ ಭೇಟಿ ನೀಡಿದ್ದೂ ಇದೆ, ಆದರೆ ಅವುಗಳ ಜೊತೆ ಸಂವಹನ ನಡೆಸಲು ಭೂಮಿಯಲ್ಲಿನ ಮಾನವನಿಗೆ ಸಾಧ್ಯವಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











