Latest Updates
-
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ!
ದೀಪಾವಳಿಗೆ ಒಂದು ದಿನ ಮುನ್ನ ಹನುಮಂತನ ಪೂಜೆಯಿಂದ ದೊರೆಯುವ ಪ್ರಯೋಜನಗಳೇನು?
ಹನುಮಂತನ ಆರಾಧನೆ ಮಾಡಿದರೆ ಎಂಥದ್ದೇ ಕಷ್ಟವಿರಲಿ ಕಷ್ಟಗಳಿಂದ ಪಾರಾಗಲು ಹನುಮಂತ ನಮಗೆ ಶಕ್ತಿಯನ್ನು ನೀಡುತ್ತಾನೆ ಎಂಬುವುದು ಹನುಮಂತನ ಭಕ್ತರ ಬಲವಾದ ನಂಬಿಕೆ. ಕೆಲವು ಕಡೆಗಳಲ್ಲಿ ದೀಪಾವಳಿಗೆ ಮುನ್ನ ಹನುಮಂತನನಿಗೆ ವಿಶೇಷ ಪೂಜೆ ಸಲ್ಲಿಸುವ ವಾಡಿಕೆಯಿದೆ. ಈ ದಿನ ಹನುಮಂತನ ಆರಾಧನೆ ಮಾಡಿದರೆ ಕೆಟ್ಟ ಶಕ್ತಿಗಳಿಂದ ನಮಗೆ ಶಕ್ತಿ ಸಿಗುವುದು ಎಂಬ ನಂಬಿಕೆ.

ದೀಪಾವಳಿಯಂದು ಶ್ರೀರಾಮ 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಎಂದು ಹೇಳಲಾಗುವುದು. ಹನುಮಂತ ಶ್ರೀ ರಾಮ ಭಕ್ತ, ದೀಪಾವಳಿ ಹಬ್ಬಂದು ದೀಪಾವಳಿಗಿಂತ ಒಂದು ದಿನ ಮುಂಚೆ ಹನುಮಂತನ ಆರಾಧನೆ ಮಾಡಲಾಗುವುದು.
ಅದರಲ್ಲೂ ಈ ಬಾರಿ ಭಾನುವಾರದಂದು ದೀಪಾವಳಿ ಬಂದಿದೆ, ಆದ್ದರಿಂದ ಶನಿವಾರ ಹನುಮಂತನ ಪೂಜೆ ಮಾಡಬೇಕು. ಶನಿವಾರ ಹನುಮಂತನ ಪೂಜೆಗೆ ಶ್ರೇಷ್ಠವಾದ ದಿನವಾಗಿದ್ದು ಈ ದಿನ ಈ ಶುಭ ಸಮಯದಲ್ಲಿ ಹನುಮಂತನ ಆರಾಧಿಸಿ
ಹನುಮಂತನ ಆರಾಧನೆಗೆ ಶುಭ ಸಮಯ
ಹನುಮಂತನನ್ನು ಪ್ರೀತಿ ಯೋಗದಲ್ಲಿ ಆರಾಧಿಸಿ. ಚತುರ್ದಶಿ ನವೆಂಬರ್ 11 ಮಧ್ಯಾಹ್ನ 01:59ರಿಂದ ಭಾನುವಾರ ಮಧ್ಯಾಹ್ನ 02:46ರವರೆಗೆ ಇರಲಿದೆ.
ಪ್ರೀತಿ ಯೋಗ
ಪ್ರೀತಿಯೋಗ ನವೆಂಬರ್ 10, ಸಂಜೆ 05:04ರಿಂದ ಪ್ರಾರಂಭವಾಗಿದೆ, ನವೆಂಬರ್ 11 ಸಂಜೆ 04:59ರವರೆಗೆ ಇರಲಿದೆ.
ಜ್ಯೋತಿಷ್ಯ ಪ್ರಕಾರ ಹನುಮಂತನ ಆರಾಧನೆಯಿಂದ ದೊರೆಯುವ ಪ್ರಯೋಜನಗಳೇನು?
* ನಿಮ್ಮ ಯಾವುದಾದರೂ ಕೆಲಸ ಪೂರ್ಣವಾಗಲು ಅಡೆತಡೆಗಳಿದ್ದರೆ ಶನಿವಾರ ಹನುಮಂತನನ್ನು ಆರಾಧಿಸುವುದರಿಂದ ಅ ಕೆಲಸ ಪೂರ್ನವಾಗುವುದು.
* ಏನಾದರೂ ನಕರಾತ್ಮಕ ಆಲೋಚನೆಗಳು ಕಾಡುತ್ತಿದ್ದರೆ ಹನುಮಂತನನ್ನು ಆರಾಧಿಸುವುದರಿಂದ , ಹನುಮನ್ ಚಾಲೀಸ ಪಠಿಸುವುದರಿಂದ ಅಂಥ ಆಲೋಚನೆಗಳು ದೂರಾಗಿ ಧನಾತ್ಮಕ ಭಾವನೆ ಹೆಚ್ಚಾಗುವುದು.
* ಆರ್ಥಿಕ ಸಂಕಷ್ಟದಿಂದ ದೂರಾಗಲು ಶನಿವಾರದಂದು ಹನುಮಂತನಿಗೆ ಪ್ರಸಾದ ಅರ್ಪಿಸಿ ನಂತರ ಬಡವರಿಗೆ ಆಹಾರ ದಾನ ಮಾಡಿ.
* ಪಿತೃದೋಷ ಇದ್ದರೆ ನಿರಂತರ ಹನುಮಾನ್ ಚಾಲೀಸ ಪಠಿಸುವುದರಿಂದ ಸಮಸ್ಯೆ ದೂರಾಗುವುದು
* ಆರೋಗ್ಯ ಸಮಸ್ಯೆಯಿಂದ ಹೊರಬರಲು 108 ಬಾರಿ ಹನುಮಾನ್ ಚಾಲೀಸ ಪಠಿಸಿ.
* ಕಾನೂನು ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದರೆ ಹನುಮಂತನ ದೇವಾಲಯಕ್ಕೆ ಕೆಂಪು ಧ್ವಜ ಅರ್ಪಿಸಿ.
ವಿದ್ಯಾಭ್ಯಾಸದಲ್ಲಿನ ಅಡೆತಡೆಗಳನ್ನು ಹೋಗಲಾಡಿಸಲು
ಪೂಜ್ಯಾಯ ವಾಯುಪುತ್ರಾಯ ವಾಗ್ದೋಷ ವಿನಾಶನ |
ಸಕಲ ವಿದ್ಯಾಂಕುರಮೇ ದೇವ ರಾಮದೂತ ನಮೋಸ್ತುತೆ ||
ಒಳ್ಳೆಯ ಉದ್ಯೋಗ ದೊರೆಯಲು
ಹನುಮಾನ್ ಸರ್ವಧರ್ಮಜ್ಞ ಸರ್ವಾ ಪೀಡಾ ವಿನಾಶಿನೇ |
ಉದ್ಯೋಗ ಪ್ರಾಪ್ತ ಸಿದ್ಧ್ಯರ್ಥಂ ಶಿವರೂಪಾ ನಮೋಸ್ತುತೇ |
ಕಾರ್ಯ ಸಾಧನೆಗೆ
ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ |
ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ ||
ಗ್ರಹದೋಷ ನಿವಾರಣೆಗೆ
ಮರ್ಕಟೇಶ ಮಹೋತ್ಸಹಃ ನವಗ್ರಹ ದೋಷ ನಿವಾರಣಃ |
ಶತ್ರೂನ್ ಸಂಹಾರ ಮಾಂ ರಕ್ಷ ಶ್ರಿಯಂ ದಾಪಯಾ ದೇಹಿಮೇ ಪ್ರಭೋ ||
ಆರೋಗ್ಯ ಸಮಸ್ಯೆ ಹೋಗಲಾಡಿಸಲು
ಆಯುಃ ಪ್ರಜ್ಞ ಯಶೋ ಲಕ್ಷ್ಮೀ ಶ್ರದ್ಧಾ ಪುತ್ರಾಸ್ಸುಶೀಲತಾ |
ಆರೋಗ್ಯಂ ದೇಹ ಸೌಖ್ಯಾಂಚ ಕಪಿನಾಥ ನಮೋಸ್ತುತೇ ||
ಮಕ್ಕಳ ಭಾಗ್ಯಕ್ಕಾಗಿ
ಪೂಜ್ಯಾಯ ಅಂಜನೇಯ ಗರ್ಭದೋಷಾಪಹಾರಿತೋ |
ಸಂತಾನಂ ಕುರುಮೇ ದೇವ ರಾಮದೂತ ನಮೋಸ್ತುತೇ ||
ವ್ಯವಹಾರದಲ್ಲಿ ಪ್ರಗತಿಗೆ
ಸರ್ವ ಕಲ್ಯಾಣ ದಾತಾರಮ್ ಸರ್ವಾಪತ್ ನಿವಾರಕಮಂ|
ಅಪಾರ ಕರುಣಾಮೂರ್ತಿಂ ಆಂಜನೇಯಂ ಸಮಾಮ್ಯಹಂ ||
ಕಂಕಣ ಬಲ ಕೂಡಿ ಬರಲು
ಯೋಗಿ ಧ್ಯೇ ಯಾಂ ಘ್ರೀ ಪದ್ಮಾಯ ಜಗತಾಂ ಪತಯೇ ನಮಃ |
ವಿವಾಹಂ ಕುರುಮೇದೇವ ರಾಮದೂತ ನಮೋಸ್ತುತೇ ||
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications