Latest Updates
-
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ!
ಡಿಸೆಂಬರ್ 5ಕ್ಕೆ ವಿನಾಯಕ ಚತುರ್ಥಿ: ಈ ದಿನ ಬಂದಿದೆ ವಿಶೇಷ ಯೋಗ, ಗಣೇಶ ಪೂಜೆಯಿಂದ ಇಷ್ಟಾರ್ಥ ಸಿದ್ಧಿ
ಯಾವುದೇ ಪೂಜೆ ಮಾಡುವ ಮುನ್ನ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಬೇಕು. ನಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ನಮಗೆ ಶ್ರೀ ಗಣೇಶನ ಸಹಾಯ ಬೇಕು, ಗಣೇಶನ ಆರಾಧನೆಗೆ ಕೆಲವೊಂದು ದಿನಗಳು ತುಂಬಾನೇ ವಿಶೇಷವಾಗಿದೆ, ಅದರಲ್ಲೊಂದು ವಿನಾಯಕ ಚತುರ್ಥಿ. ಈ ದಿನ ವಿನಾಯಕನನ್ನು ಭಕ್ತಿಯಿಂದ ಆರಾಧಿಸಿದರೆ ನಾವು ಬಯಸಿದ್ದು ನೆರವೇರಲಿದೆ, ಅಲ್ಲದೆ ಶ್ರೀ ಗಣೇಶನ ನಮ್ಮ ಬದುಕಿನಲ್ಲಿ ಸಂತೋಷ, ಸಮೃದ್ಧಿ ತರುತ್ತಾನೆ.
ಡಿಸೆಂಬರ್ ಮಾಸದಲ್ಲಿ ವಿನಾಯಕ ಚತುರ್ಥಿಯನ್ನು ಡಿಸೆಂಬರ್ 5ರಂದು ಆಚರಣೆ ಮಾಡಲಾಗುವುದು. ಮಾರ್ಗಶಿರ ಮಾಸದಲ್ಲಿ ಬರುವ ವಿನಾಯಕ ಚತುರ್ಥಿಯ ಪೂಜಾ ಸಮಯ, ಈ ದಿನ ಉಂಟಾಗಿದೆ 3 ವಿಶೇಷ ಯೋಗ, ಆ ಯೋಗಗಳಾವುವು ಇವೆಲ್ಲದರ ಮಾಹಿತಿ ನೋಡೋಣ:

ಮಾರ್ಗಶಿರ ಮಾಸದಲ್ಲಿ ಬಂದಿರುವ ವಿನಾಯ ಚತುರ್ಥಿ ಪೂಜಾ ಸಮಯ
ವಿನಾಯಕ ಚತುರ್ಥಿ ತಿಥಿ ಡಿಸೆಂಬರ್ 4 ಮಧ್ಯಾಹ್ನ 01:10ಕ್ಕೆ ಪ್ರಾರಂಭವಾಗಿದೆ
ಡಿಸೆಂಬರ್ 05 ಮಧ್ಯಾಹ್ನ 12:49ಕ್ಕೆ ಮುಕ್ತಾಯವಾಗಲಿದೆ
ಉದಯ ತಿಥಿಯ ಪ್ರಕಾರ ಡಿಸೆಂಬರ್ 5ರಂದು ವಿನಾಯಕ ಚತುರ್ಥಿ ಆಚರಣೆ ಮಾಡಲಾಗುವುದು..
ಈ ದಿನ ಜ್ಯೋತಿಷ್ಯ ದೃಷ್ಟಿಯಿಂದಲೂ ಏರ್ಪಟ್ಟಿದೆ 3 ಮಹಾಯೋಗ
ಮಧ್ಯಾಹ್ನ 12:28ಕ್ಕೆ ವೃದ್ಧಿ ಯೋಗವಿದೆ
ನಂತರ ಧ್ರುವ ಯೋಗ ಬಂದಿದೆ
ಸಂಜೆ 05:26ಕ್ಕೆ ರವಿಯೋಗವೂ ಇದೆ
ಹಾಗಾಗಿ ವಿನಾಯಕ ಚತುರ್ಥಿ ಪೂಜಾ ವಿಧಿ ಪಾಲಿಸಿದರೆ ಮತ್ತಷ್ಟು ಪ್ರಯೋಜನ ಸಿಗಲಿದೆ.
ಈ ಯೋಗ ಇರುವಾಗ ಗಣೇಶನ ಆರಾಧನೆ ಮಾಡಿದರೆ ಮತ್ತಷ್ಟು ಶುಭ ಫಲಿತಾಂಶ ದೊರೆಯಲಿದೆ ಎಂದು ಹೇಳಲಾಗುವುದು.
ಈ ದಿನ ಚಂದ್ರನ ದರ್ಶನ ಮಾಡಬಾರದು
ವಿನಾಯಕ ತುರ್ಥಿಯಂದು ಚಂದ್ರನ ನೋಡಬಾರದು,ತುಂಬಾನೇ ಕಷ್ಟ ಉಂಟಾಗುವುದು ಎಂಬ ನಂಬಿಕೆ ಇದೆ.
ವಿನಾಯಕ ಚತುರ್ಥಿ ಎಂದರೇನು?
ಶುಕ್ಲ ಪಕ್ಷದಲ್ಲಿ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿಯೆಂದು ಆಚರಿಸಲಾಗುವುದು. ಕೃಷ್ಣ ಕ್ಷದಲ್ಲಿ ಬರುವ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿಯೆಂದು ಆಚರಿಸಲಾಗುವುದು. ವರ್ಷದಲ್ಲಿ 12 ವಿನಾಯಕ ಚತುರ್ಥಿ ಬರುತ್ತದೆ.
ವಿನಾಯಕ ಚತುರ್ಥಿ ಆಚರಣೆ ಮಾಡುವುದರಿಂದ ಇಷ್ಟಾರ್ಥ ನೆರವೇರುವುದು
ವಿನಾಯಕ ಚತುರ್ಥಿಯನ್ನು ಉಪವಾಸವಿದ್ದು ಆಚರಣೆ ಮಾಡಲಾಗುವುದು, ವಿನಾಯಕ ಚತುರ್ಥಿ ಆಚರಣೆ ಮಾಡುವುದರಿಂದ ಇಷ್ಟಾರ್ಥ ನೆರವೇರಲಿದೆ. ಮನಸ್ಸಿನಲ್ಲಿಯಾವುದಾದರು ಸಂಕಲ್ಪ ತೆಗೆದುಕೊಂಡು ಆಚರಣೆ ಮಾಡಿದರೆ ಸಂಕಲ್ಪ ನೆರವೇರಲಿದೆ.
ಗಣೇಶ ಬೀಜ ಮಂತ್ರ:
ಓಂ ಗಮ್ ಗಣಪತಯೇ ನಮಃ
ಓಂ ಶ್ರೀಮ್ ಸುಭಗಾಯ ಓಂ ಶ್ರೀಮ್ ಸುಭಗಾಯ ಗಣಪತೆಯೇ ವರಾವರ್ಧ್ ಸರ್ವಜ್ಞಾನಮ್ ಮೇನ್ ವಶ್ಮನಾಯ ನಮಃ
ಈ ಮಂತ್ರ ಪಠಣೆ ಮಾಡುವುದರಿಂದ ಭವಿಷ್ಯ ಮತ್ತಷ್ಟು ಉತ್ತಮವಾಗಲಿದೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications