Latest Updates
-
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ! -
ರಕ್ತದಾನದ ನಂತರ ಜಿಮ್ಗೆ ಹೋಗುವ ಮುನ್ನ ಎಚ್ಚರ! ಈ ತಪ್ಪುಗಳನ್ನು ಮಾಡಬೇಡಿ
ವಾಸ್ತು ಪ್ರಕಾರ ಹೋಳಿಯ ಈ ದಿನ ಈ ರೀತಿ ಮಾಡಿದರೆ ಮನೆಯಲ್ಲಿನ ಸಮಸ್ಯೆ ದೂರಾಗುವುದು, ಸಮೃದ್ಧಿ ಹೆಚ್ಚುವುದು
ಮಾರ್ಚ್ 25ಕ್ಕೆ ಹೋಳಿಯನ್ನು ಆಚರಿಸಲಾಗುವುದು. ಹೋಳಿ ಹಬ್ಬವೆಂದರೆ ಬರೀ ಬಣ್ಣ ಎರಚುವುದಲ್ಲ, ಈ ಹಬ್ಬವನ್ನು ವಿಧಿ ವಿಧಾನಗಳ ಪ್ರಕಾರ ಪೂಜೆ ಮಾಡಬೇಕೆಂಬ ನಿಯಮವಿದೆ. ಈ ದಿನದಂದು ತಮ್ಮ ಕುಟುಂಬ ಚೆನ್ನಾಗಿರಬೇಕು, ಕುಟುಂಬದಲ್ಲಿನ ಸಮಸ್ಯೆ ದೂರಾಗಬೇಕು ಎಂದು ಕೆಲವು ಪರಿಹಾರ ಮಾಡುತ್ತಾರೆ.
ಈ ದಿನ ಕೆಲ ವಾಸ್ತು ಪರಿಹಾರ ಮಾಡಿದರೆ ಒಳ್ಲೆಯದು ಎಂದು ಹೇಳಲಾಗುವುದು. ಈ ದಿನ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುವುದು, ಈ ದಿನ ಯಾವ ವಸ್ತುಗಳನ್ನು ತಂದರೆ ಒಳ್ಳೆಯದು, ಮನೆಗೆ ಶುಭವಾಗುತ್ತದೆ ಎಂದು ನೋಡೋಣ ಬನ್ನಿ:

ಈ ದಿನ ಬೆಳ್ಳಿ ನಾಣ್ಯ ಖರೀದಿಸಿದರೆ ಒಳ್ಳೆಯದು
ವಾಸ್ತು ಪ್ರಕಾರ ಹೋಳಿ ದಿನ ಬೆಳ್ಳಿ ನಾಣ್ಯವನ್ನು ಖರೀದಿಸುವುದು ಮಂಗಳಕರವಾಗಿದೆ. ಹೋಳಿ ದಿನದಂದು ಈ ನಾಣ್ಯವನ್ನು ಪೂಜಿಸಿ ಅದನ್ನು ಲಕ್ಷ್ಮಿ ಫೋಟೋ ಬಳಿ ಇಡಿ, ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರಾಗುವುದು ಎಂದು ಹೇಳಲಾಗುವುದು.
ತಳಿರು-ತೋರಣ
ಹೋಳಿ ಹಬ್ಬದಂದು ತಳಿರು ತೋರಣ ಮನೆಯ ಮುಂಭಾಗ ಕಟ್ಟಿದರೆ ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು ಯಾವುದೇ ನರಾತ್ಮಕ ಶಕ್ತಿ ಒಳಗೆ ಬರುವುದು ಒಳ್ಳೆಯದಲ್ಲ ಎಂದು ಹೇಳಲಾಗುವುದು.
ಬಿದಿರಿನ ಗಿಡ
ಈ ದಿನ ಚಿಕ್ಕ ಬಿದಿರಿನ ಕಡ್ಡಿಗಳನ್ನು ನೆಡುವುದು ಶುಭ ಎಂದು ಹೇಳಲಾಗುವುದು. ಈ ಬಿದಿರು ಗಿಡವನ್ನು ಚಿಕ್ಕ ಹೂಕುಂಡದಲ್ಲಿ ನೆಟ್ಟು ಅದನ್ನು ಮನೆಯೊಳಗಡೆ ಇಡುವುದು ಒಳ್ಳೆಯದು.
ಆಮೆ
ವಾಸ್ತು ಶಾಸ್ತ್ರದಲ್ಲಿ ಈ ದಿನ ಲೋಹದ ಆಮೆಯನ್ನು ಮನೆಗೆ ತರುವುದು ಒಳ್ಳೆಯದು, ಇದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುವುದು ಎಂದು ಹೇಳಲಾಗುವುದು.
ಅಲ್ಲದೆ ಈ ದಿನ ರಾಶಿಪ್ರಕಾರ ಈ ಪರಿಹಾರ ಮಾಡಿದರೆ ಒಳ್ಖೆಯದು
ಮೇಷ ರಾಶಿ: ಮೇಷ ರಾಶಿಯವರ ಅಧಿಪತಿ ಮಂಗಳ. ಈ ದಿನ ನೀವು ಕೆಂಪು ಧಾನ್ಯಗಳನ್ನು ದಾನ ಮಾಡಿ.
ವೃಷಭ ರಾಶಿ: ವೃಷಭ ರಾಶಿಯವರು ಅಧಿಪತಿ ಗುರು, ಈ ದಿನ ಅರಿಶಿಣ, ಜೇನು ಅಥವಾ ಓದುವ ಬಡ ಮಕ್ಕಳಿಗೆ ಪುಸ್ತಕ ದಾನ ಮಾಡಿ.
ಮಿಥುನ ರಾಶಿ: ಮಿಥುನ ರಾಶಿಯವರ ಅಧಿಪತಿ ಶನಿ. ನೀವು ಕಪ್ಪು ಎಳ್ಳು, ಸಾಸಿವೆಯೆಣ್ಣೆ ದಾನ ಮಾಡುವುದು ಒಳ್ಳೆಯದು.
ಕರ್ಕ ರಾಶಿ: ಕರ್ಕ ರಾಶಿಯವರು, ಈ ದಿನ ಕಬ್ಬಿಣದ ವಸ್ತುಗಳನ್ನು ದಾನ ಮಾಡಿ.
ಸಿಂಹ ರಾಶಿ: ಈ ದಿನ ತುಪ್ಪ, ಕೇಸರಿ ಈ ಬಗೆಯ ವಸ್ತುಗಳನ್ನು ದಾನ ಮಾಡಿ.
ಕನ್ಯಾ ರಾಶಿ: ಕನ್ಯಾ ರಾಶಿಯವರು ಈ ದಿನ ಸಿಹಿ ತಿಂಡಿಗಳನ್ನು ದಾನ ಮಾಡಬೇಕು.
ತುಲಾ ರಾಶಿ: ಅಕ್ಕಿ, ಧಾನ್ಯಗಳು, ಸುಗಂಧ ದ್ರವ್ಯಗಳನ್ನು ದಾನ ಮಾಡಿ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಈ ದಿನ ಹಸಿರು ಬಣ್ಣದ ಧಾನ್ಯಗಳನ್ನು ದಾನ ಮಾಡುವುದು ಒಳ್ಳೆಯದು.
ಧನು ರಾಶಿ: ಈ ದಿನ ಕಡ್ಲೆಬೇಳೆ ದಾನ ಮಾಡಿ.
ಮಕರ ರಾಶಿ: ಧಾನ್ಯಗಳು, ಬೆಲ್ಲ ಇವುಗಳನ್ನು ದಾನ ಮಾಡಿ.
ಕುಂಭ ರಾಶಿ: ಈ ದಿನ ಕಪ್ಪು ವಸ್ತ್ರಗಳನ್ನು ದಾನ ಮಾಡಿ.
ಮೀನ ರಾಶಿ: ಮೀನ ರಾಶಿಯವರು ಹಳದಿ ಬಣ್ಣದ ಧಾನ್ಯಗಳನ್ನು ದಾನ ಮಾಡಿ.
ಈ ಹೋಳಿ ಹಬ್ಬದಲ್ಲಿ ನಾವು ಹಲವು ಬಣ್ಣಗಳಿಂದ ಹೋಳಿಯಾಟ ಆಡುತ್ತೇವೆ, ಆ ಬಣ್ಣಗಳಂತೆ ನಿಮ್ಮೆಲ್ಲರ ಬದುಕು ಆಕರ್ಷಕವಾಗಿರಲಿ, ನಿಮ್ಮೆಲ್ಲಾ ಕಷ್ಟಗಳು ದೂರಾಗಿ ಸಂತೋಷ ಹೆಚ್ಚಲಿ, ಹೋಳಿ ಹಬ್ಬದ ಶುಭಾಶಯಗಳು... ರಾಸಾಯನಿಕ ಬಣ್ಣದ ಪುಡಿ ಬದಲಿಗೆ ನೈಸರ್ಗಿಕ ಬಣ್ಣದ ಪುಡಿ ಜೊತೆ ಹೋಳಿ ಹಬ್ಬವನ್ನು ಸಂಭ್ರಮಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications