Latest Updates
-
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ!
ಯುಗಾದಿಯಂದು ಯಾವ ಸಮಯದಲ್ಲಿ ಪೂಜೆ ಮಾಡಬೇಕು? ಯಾವ ಸ್ಥಳಗಳಲ್ಲಿ ದೀಪವನ್ನು ಹಚ್ಚಿಡಬೇಕು?
ಯುಗಾದಿ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೀಗೆ ಪ್ರತಿವರ್ಷ ಹೊಸತನ ಹೊತ್ತು ಯುಗಾದಿ ಬರುತ್ತದೆ, ಯುಗಾದಿ ಅಂದರೆ ಏನೋ ಸಂಭ್ರಮ, ಸಡಗರ. ಈ ವರ್ಷ ಯುಗಾದಿ ನಮ್ಮ ಬಾಳಲ್ಲಿ ಎಲ್ಲಾ ಸಂತೋಷ ನೀಡಲಿ, ಸಮಥದ್ಧಿ ಹೆಚ್ಚಲಿ, ಕಹಿ ಕಡಿಮೆಯಾಗಿ ಸಿಹಿ ಹೆಚ್ಚಾಗಲಿ ಎಂಬ ಆಶಯದೊಂದಿಗೆ ಯುಗಾದಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತೇವೆ. ಯುಗಾದಿಯಿಂದ ಹೊಸ ವರ್ಷ ಶುರು.

ಯುಗಾದಿಯ ಸಂಪ್ರದಾಯವೇನು?
ಯುಗಾದಿಯಂದು ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಲಾಗುವುದು, ನಂತರ ಪೂಜೆ ಮಾಡಿ ಎಳ್ಳು ಬೆಲ್ಲ ಸವಿಯುತ್ತೇವೆ. ಈ ಎಳ್ಳು ಬೆಲ್ಲ ತಿನ್ನುವುದು ಜೀವನದ ಸಂಕೇತವಾಗಿ. ಬದುಕಿನಲ್ಲಿ ಸಿಹಿ ಕಹಿ ಎರಡೂ ಇರುತ್ತದೆ. ಅದನ್ನು ಒಂದೇ ರೀತಿಯಲ್ಲಿ ಸ್ವೀಕರಿಸಬೇಕು ಎಂಬುವುದ ಸಂಕೇತ ಎಳ್ಳು ಬೆಲ್ಲ. ಇನ್ನು ಆರೋಗ್ಯದ ದೃಷ್ಟಿಯಿಂದಲೂ ಈ ಎಳ್ಳು ಬೆಲ್ಲದ ಸೇವನೆ ತುಂಬಾನೇ ಒಳ್ಳೆಯದು.
ಮನೆಯನ್ನು ತಳಿರು ತೋರಣ, ರಂಗೋಲಿಯಿಂದ ಅಲಂಕರಿಸಲಾಗುವುದು
ಈ ದಿನ ಮನೆಯಲ್ಲಿ ಸಂಭ್ರಮ ತುಂಬಿ ತುಳುಕುತ್ತಿರುತ್ತದೆ, ಈ ದಿನ ಎಣ್ಣೆ ಸ್ನಾನ ಮಾಡಲಾಗುವುದು, ಮಕ್ಕಳಿಗೆ ಹೊಟ್ಟೆ ಬಟ್ಟೆ ತೊಡಿಸಲಾಗುವುದು, ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುವುದು. ಮನೆ ಮುಂದೆ ರಂಗೋಲಿ ಹಾಕಲಾಗುವುದು, ಹೊಸ ವರ್ಷ ಸಂತೋಷವಾಗಿರಲಿ ಎಂದು ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುವುದು.
ಪೂಜೆಗೆ ಸಮಯ
ಏಪ್ರಿಲ್ 8 ಸಂಜೆಯಿಂದ ಪ್ರತಿಪಾದ ತಿಥಿ ಶುರುವಾಗಿದೆ, ಇದು ಏಪ್ರಿಲ್ 9 ಸಂಜೆಯವರೆಗೆ ಇರಲಿದೆ. ಪ್ರತಿಪಾದ ತಿಥಿ ಏಪ್ರಿಲ್ 9 ರಾತ್ರಿ 8:30ರವರೆಗೆ ಇರಲಿದೆ.
ಭಾರತದಲ್ಲಿ ವಿವಿಧ ಕಡೆಯ ವಿವಿಧ ಆಚರಣೆ
ಯುಗಾದಿಯನ್ನುದಕ್ಷಿಣ ಭಾರತದಲ್ಲಿ ಅಂದರೆ ಕರ್ನಾಟಕ, ತೆಲಂಗಾಣ, ಆಂಧ್ರದಲ್ಲಿ ಯುಗಾದಿಯೆಂದು ಆಚರಿಸಲಾಗುವುದು. ಉತ್ತರ ಭಾರತದ ಕಡೆ ಗುಡಿಪರ್ವ ಎಂದು ಆಚರಿಸಲಾಗುವುದು.
ಯುಗಾದಿಯಿಂದ ಹೊಸ ಸಂವತ್ಸರ ಶುರು
ಈ ಯುಗಾದಿಯಿಂದ ಕ್ರೋಧಿ ನಾಮ ಸಂವತ್ಸರ ಶುರುವಾಗಲಿದೆ.
ದೀಪಾವಳಿಯಂತೆ ಈ ದಿನವೂ ಕೆಲವು ಕಡೆ ದೀಪಗಳನ್ನು ಹಚ್ಚಿಡಬೇಕು ಎಂದು ಹೇಳಲಾಗುವುದು?
ಮನೆಯ ಮುಂದೆ
ಮನೆಯ ಮುಂಭಾಗಿಲಿನ ಬಳಿ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚಿಟ್ಟರೆ ಒಳ್ಳೆಯದು. ಈ ರೀತಿ ದೀಪ ಹಚ್ಚಿಡುವುದರಿಂದ ಮನೆಗೆ ತುಂಬಾನೇ ಶುಭ ಎಂದು ಹೇಳಲಾಗುವುದು.
ತುಳಸಿ ಕಟ್ಟೆಯ ಮೇಲೆ
ಈ ದಿನ ತುಳಸಿ ಗಿಡದ ಬಳಿ ದೀಪ ಹಚ್ಚಿಡಬೇಕು. ಹೀಗೆ ತುಳಸಿಗೆ ಪೂಜೆ ಸಲ್ಲಿಸುವುದರಿಂದ ಸಮಸ್ಯೆಗಳು ದೂರಾಗುವುದು ಎಂದು ಹೇಳಲಾಗುವುದು.
ಮನೆ ಬಳಿ ಬಾವಿಯಿದ್ದರೆ
ನಿಮ್ಮ ಮನೆಯಲ್ಲಿ ಬಾವಿಯಿದ್ದರೆ ಅದರ ಮೇಲೆ ಪೂರ್ವ ದಿಕ್ಕಿಗೆ ದೀಪವನ್ನು ಹಚ್ಚಿಡಿ, ಈ ರೀತಿ ಹಚ್ಚಿಡುವುದರಿಂದ ಆರ್ಥಿಕ ಸಂಪತ್ತು ಹೆಚ್ಚಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications