Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನವೆಂಬರ್ 13ರಂದು ತುಳಸಿ ವಿವಾಹ: ಇಷ್ಟಾರ್ಥ ನೆರವೇರಲು ಪೂಜಾವಿಧಾನ ಹಾಗೂ ಮಂತ್ರಗಳು
ನವೆಂಬರ್ 12ರಂದು ದೇವೋತ್ಥಾನ ಏಕಾದಶಿ, ಅದರ ಮಾರನೇಯ ದಿನವೇ ತುಳಸಿ ವಿವಾಹ, ಅಂದರೆ ನವೆಂಬರ್ 13ರಂದು ತುಳಸಿ ವಿವಾಹವನ್ನು ಆಚರಿಸಲಾಗುವುದು. ತುಳಸಿ ವಿವಾಹದ ಧಾರ್ಮಿಕ ಮಹತ್ವವೇನು, ಈ ದಿನ ಮಾಡಬೇಕಾದ ಕಾರ್ಯಗಳೇನು ಎಂದು ನೋಡೋಣ ಬನ್ನಿ:

ತುಳಸಿ ವಿವಾಹದ ಧಾರ್ಮಿಕ ಮಹತ್ವೇನು?
ತುಳಸಿಯನ್ನು ಅತ್ಯಂತ ಪವಿತ್ರ ಗ್ರಹವೆಂದು ಪರಿಗಣಿಸಲಾಗಿದೆ, ತುಳಸಿಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಹಾಗಾಗಿ ಶ್ರೀ ವಿಷ್ಣು ಹಾಗೂ ಶ್ರೀ ಕೃಷ್ಣ ಆರಾಧನೆಯಲ್ಲಿ ತುಳಸಿ ಕಡ್ಡಾಯವಾಗಿರಲೇಬೇಕು, ತುಳಸಿ ವಿವಾಹದಂದು ತುಳಸಿ ಮತ್ತು ಸಾಲಿಗ್ರಾಮ ಕಲ್ಲಿಗೆ ವಿವಾಹ ಮಾಡಲಾಗುವುದು. ತುಳಸಿ ವಿವಾಹ ಮಾಡುವುದರಿಂದ ಕನ್ಯಾದಾನ ಫಲ ಸಿಗುವುದು, ಸಂತಾನ ಅಪೇಕ್ಷಿತ ದಂಪತಿ ಈ ತುಳಸಿ ವಿವಾಹ ಮಾಡುವುದರಿಂದ ಸಂತಾನ ಭಾಗ್ಯ ಸಿಗುತ್ತೆ, ವೈವಾಹಿಕ ಜೀವನದಲ್ಲಿನ ಸಮಸ್ಯೆ ಬಗೆಹರಿಯಲಿದೆ, ಅವಾಹಿತರು ಕಂಕಣ ಭಾಗ್ಯವನ್ನು ಪಡೆಯುತ್ತಾರೆ ಎಂದು ಹೇಳಲಾಗುವುದು.
ತುಳಸಿ ವಿವಾಹದ ಪೂಜಾ ವಿಧಿಗಳೇನು?
ಈ ದಿನ ಶ್ರೀವಿಷ್ಣು ಹಾಗೂ ಲಕ್ಷ್ಮಿಗೆ ಪೂಜೆಯನ್ನು ಸಲ್ಲಿಸಲಾಗುವುದು. ತುಳಸಿ ಕಟ್ಟೆಯನ್ನು ಅಲಂಕರಿಸಿ, ನೆಲ್ಲಿಕಾಯಿ ಗಿಡ ನೆಟ್ಟು ಪೂಜೆಯನ್ನು ಮಾಡಲಾಗುವುದು, ಈ ಪೂಜೆಗೆ ಮುತ್ತೈದೆಯರನ್ನು ಕರೆದು ಅವರಿಂದ ಆಶೀರ್ವಾದ ಪಡೆಯಬೇಕು.
ತುಳಸಿ ವಿವಾಹವನ್ನು ಪ್ರದೋಷ ಸಮಯದಲ್ಲಿ ಮಾಡಬೇಕು, ಪೂಜೆಗೆ ಮುನ್ನ ಸಿದ್ಧತೆ ಮಾಡಿಕೊಳ್ಳಬೇಕು
- ತುಳಸಿಕಟ್ಟೆಯನ್ನು ಸ್ವಚ್ಛಗೊಳಿಸಬೇಕು, ನಂತರ ಆಸನ ಸಿದ್ಧಪಡಿಸಿ ತುಳಸಿಯನ್ನು ಸ್ಥಾಪಿಸಬೇಕು, ಅದರ ಪಕ್ಕದಲ್ಲಿಯೇ ಸಾಲಿಗ್ರಾಮ ಸ್ಥಾಪಿಸಬೇಕು
- ಈಗ ಈ ಆಸನಗಳಿಗೆ ಕಬ್ಬಿನ ತೋರಣ ಕಟ್ಟಿ
- ಕಲಶ ಸಿದ್ಧ ಪಡಿಸಿ, ಕಲಶದಲ್ಲು ನೀರು ತುಂಬಿ ಕಲಶವನ್ನು 5 ಅಥವಾ ಏಳು ಮಾವಿನ ಎಲೆಗಳಿಂದ ಅಂಕರಿಸಬೇಕು
- ತುಳಸಿ ಕಟ್ಟೆಯ ಮುಂದೆ ರಂಗೋಲಿ ಹಾಕಬೇಕು
- ತುಳಸಿ ಪಕ್ಕದಲ್ಲಿ ನೆಲ್ಲಿಕಾಯಿ ಗಿಡ ಅಥವಾ ಅದರ ಕೊಂಬೆ ಇಟ್ಟು ಅದಕ್ಕೂ ಅಲಂಕಾರ ಮಾಡಬೇಕು.
- ತುಳಸಿಗೆ ಕೆಂಪು ಚುನರಿ,ಬಳೆ, ಬಿಂದಿ ಹೀಗೆ ಅಲಂಕಾರಿಕ ವಸ್ತುಗಳನ್ನುಅರ್ಪಿಸಬೇಕು
- ಬಳಿಕ ತುಪ್ಪದ ದೀಪ ಹಚ್ಚಿ
- ಬಳಕ ತುಳಸಿಯನ್ನು ಕೈಯಲ್ಲಿ ಹಿಡಿದು ಆ ಆಸನದ ಸುತ್ತ ಏಳು ಬಾರಿ ಪ್ರದಕ್ಷಣೆ ಬಂದು ನಮಸ್ಕರಿಸಬೇಕು.
- ನಂತರ ಆರತಿ ಬೆಳಗಿ ದೇವರ ಆಶೀರ್ವಾದ ಬೇಡಬೇಕು.
- ಆರತಿಯನ್ನು ನೆಲ್ಲಿಕಾಯಿಯಿಂದ ಎತ್ತಬೇಕು, ಈ ನೆಲ್ಲಿಕಾಯಿಯನ್ನು ಎರಡು ದಿನದ ಬಳಿಕ ಜಜ್ಜಿ ಎಣ್ಣೆಗೆ ಹಾಕಿ ಕಾಯಿ ಆ ಎಣ್ಣೆಯನ್ನು ತಲೆ ಮತ್ತು ಮೈಗೆ ಹಾಕಿ ತಿಕ್ಕಿದರೆ ತುಂಬಾ ಒಳ್ಳೆಯದು.
ತುಳಸಿ ವಿವಾಹದಿಂದ ದೊರೆಯುವ ಪ್ರಯೋಜನಗಳು
- ಯಾರು ತುಳಸಿ ವಿವಾಹ ಮಾಡುತ್ತಾರೋ ಅವರ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ, ಮನೆಯ ಮಕ್ಕಳಿಗೆ ವಿವಾಹ ಸಂಬಂಧ ಕೂಡಿ ಬಂದಿಲ್ಲ ಎಂದಾದರೆ ಶೀಘ್ರವೇ ಅವರಿಗೆ ಮದುವೆ ಸಂಬಂಧ ಕೂಡಿ ಬರಲಿದೆ
- ತುಳಸಿ ವಿವಾಹ ಮಾಡುವುದರಿಂದ ಮೋಕ್ಷ ಪಡೆಯುತ್ತಾರೆ
- ಈ ಪೂಜೆ ಮಾಡುವಾಗ ಏನಾದರೂ ಸಂಕಲ್ಪ ತೆಗೆದುಕೊಂಡರೆ ಇಷ್ಟಾರ್ಥ ನೆರವೇರುವುದು.
ತುಳಸಿ ವಿವಾಹದಂದು ಏನು ಮಾಡಬೇಕು, ಏನು ಮಾಡಬಾರದು?
- ತುಳಸಿ ವಿವಾಹದಂದು ಉಪವಾಸವಿದ್ದು ಪೂಜಿಸಬೇಕು
- ಈ ದಿನ ತುಳಸಿಗೆ ಅಲಂಕಾರಿಕ ವಸ್ತು ಅರ್ಪಿಸಿ
- ಅವಲಕ್ಕಿ, ಉಸ್ಲಿ, ಪಂಚಕಜ್ಜಾಯ, ಕೋಸಂಬರಿ ಇವುಗಳನ್ನು ನೈವೇದ್ಯವಾಗಿ ಅರ್ಪಿಸಬಹುದು.
- ಏನು ಮಾಡಬಾರದು?
- ಮದ್ಯ, ಮಾಂಸಾಹಾರ ಸೇವನೆ ಮಾಡಬಾರದು
- ಹಿರಿಯರ ಮನಸ್ಸು ನೋಯಿಸಬೇಡಿ
ಈ ಮಂತ್ರ ಪಠಣೆ ಮಾಡುತ್ತಾ ತುಳಸಿ ಪೂಜೆ ಮಾಡಿ
ಕಾಯೇನ ವಾಚ ಮನಸೇಂದ್ರಿಯೈರ್ವಾ !
ಬುದ್ಧ್ಯಾತ್ಮನಾ ವಾ ಪ್ರಕೃತೇ: ಸ್ವಭಾವಾತ್ !
ಕರೋಮಿ ಯದ್ಯತ್ ಸಕಲಂ ಪರಸ್ಮೈ !
ನಾರಾಯಣ ಯೇತಿ ಸಮರ್ಪಯಾಮಿ !!
ಅಚ್ಚುತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ, ಅಚ್ಚುತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ ಅಚ್ಚುತಾನಂತ ಗೋವಿಂದೇಭ್ಯೋ ನಮಃ. ಎಂದು ಹೇಳಬೇಕು. ಇದು
ಯಾರು ಬೇಕಾದರೂ ಮಾಡಬಹುದಾದ ಸರಳವಾದ ಪೂಜಾ ವಿಧಾನ.
ಅರ್ಘ್ಯದ ಮಂತ್ರ:-
ತುಲಸಿ ಪ್ರಾರ್ಥನೆ ನಂತರ, ಪ್ರಸನ್ನಾರ್ಘ್ಯಂ !
ಪುಷ್ಪಾಂಜಲಿ ವಿಧಾನೇನ, ಪ್ರದಕ್ಷಿಣ ವಿಧಾನತ: !
ತುಲಸೀಂ ಸರ್ವಸಿದ್ಧ್ಯರ್ಥಂ ಸೇಚಯೇಚ್ಛುದ್ಧವಾರಿಣಾ!!
ಶ್ರೇಯ:ಪ್ರಿಯೇ ಶ್ರೀಯವಾಸೇ ! ನಿತ್ಯಂ ಶ್ರೀಧರವಲ್ಲಭೇ!
ಭಕ್ತ್ಯಾ ದತ್ತಂ ಮಯಾರ್ಘ್ಯಂ ಶ್ರೀ ತುಲಸೀ ಪ್ರತಿಗೃಹ್ಯತಾಂ !!
(ಉದ್ಧರಣೆಯಿಂದ ನೀರನ್ನು ಬಿಡುತ್ತಾ ) ತುಲಸ್ಯೈ ನಮಃ!
ಪ್ರಸನ್ನಾರ್ಘ್ಯಂ ಸಮರ್ಪಯಾಮಿ !!
ಆನೇನ ತುಲಸೀ ಕಲ್ಪೋಕ್ತಾ
ಪೂಜಾ ಕರ್ಮಣಾ ತುಲಸ್ಯಂತರ್ಗತ
ಕೇಶವಾದಿ ದ್ವಾದಶ ಮೂರ್ತ್ಯಾತ್ಮಕ
ಮಾಸ ನಿಯಾಮಕ ಕಾರ್ತಿಕ ದಾಮೋದರಾತ್ಮಕ
ಶ್ರೀ ಗೋಪಾಲಕೃಷ್ಣ ಪ್ರಿಯತಾಂ ತುಲಸೀ ಕಲ್ಪೋಕ್ತ ಪೂಜಾವಿಧಿ: !!
(ಮಂತ್ರ: ಸಂಗ್ರಹ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











