Latest Updates
-
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ!
ನವದಂಪತಿ ನವರಾತ್ರಿ ಆಚರಣೆ ಹೇಗೆ ಮಾಡಿದರೆ ಒಳ್ಳೆಯದು?
ನವರಾತ್ರಿ ಎಂಬುವುದು 9 ದಿನಗಳ ಆಚರಣೆ. ಈ ಸಮಯದಲ್ಲಿ ಸರಸ್ವತಿ, ದುರ್ಗೆ, ಲಕ್ಷ್ಮಿಯನ್ನು ಆರಾಧಿಸಲಾಗುವುದು. ಇನ್ನು ನವರಾತ್ರಿಯಲ್ಲಿ ನವ ದಂಪತಿಗಳು ನವರಾತ್ರಿ ಆಚರಣೆ ಮಾಡುವುದರಿಂದ ಅವರ ದಾಂಪತ್ಯ ಜೀವನ ಚೆನ್ನಾಗಿರಲಿದೆ, ನವರಾತ್ರಿಯನ್ನು ಆಚರಣೆ ಮಾಡುವಾಗ ಈ ಅಂಶಗಳ ಕಡೆ ಗಮನಹರಿಸಿ:
* ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆಯನ್ನು ಸ್ವಚ್ಛವಾಗಿ ಇಡದಿದ್ದರೆ ಲಕ್ಷ್ಮಿ ಬರುವುದಿಲ್ಲ ಎಂದು ಹೇಳಲಾಗುವುದು.
* ಘಟಸ್ಥಾಪನ ಸಮಯದಲ್ಲಿ ಕಲಶ ಇರಿಸಬೇಕು. ವೀಳ್ಯೆದೆಲೆ, ಅಡಿಗೆ, ನಾಣ್ಯ, ಧಾನ್ಯಗಳನ್ನು ಹಾಕಿ ಕಲಶದ ಮೇಲೆ ತೆಂಗಿನಕಾಯಿ ಇರಿಸಿ ನಂತರ ಕೆಂಪು ದಾರದಿಂದ ಕಲಶವನ್ನು ಸುತ್ತಬೇಕು. ಈ ಕಲಶ 9 ದಿನಗಳು ಇರಬೇಕು.

* ಕಲಶವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಲಶದ ಮೇಲೆ ಇಡಬೇಕು. ಈ ತೆಂಗಿನಕಾಯಿಯನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬಹುದು.
* ಧಾನ್ಯ ಬೆಳೆಯುವುದು: ಮಣ್ಣಿನ ಮಡಿಕೆಗೆ ಮಣ್ಣು ತುಂಬಿ ಅದರಲ್ಲಿ ನವ ಧಾನ್ಯಗಳನ್ನು ಹಾಕಿಡಿ, ಆ ಧಾನ್ಯಗಳು ಮೊಳಕೆ ಬರುತ್ತದೆ, ಅದನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬೇಕು.
* ದೇವಿಗೆ ಈ ವಸ್ತುಗಳನ್ನು ಅರ್ಪಿಸಿ: ದೇವಿಗೆ ಕೆಂಪು ಬಳೆಗಳು, ಸಿಂದೂರ, ಕುಂಕುಮ, ಮೆಹಂದಿ ಹೀಗೆ ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ, ಇದರಿಂದ ದೇವಿ ವೈವಾಹಿಕ ಜೀವನದಲ್ಲಿ ಇಷ್ಟಾರ್ಥ ನೆರವೇರಿಸುತ್ತಾಳೆ ಎಂದು ಹೇಳಲಾಗುವುದು.
* ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು: ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು, ಈ ಜ್ಯೋತಿ ನಿರಂತರ ಉರಿಯಬೇಕು, ಹಗಲು-ರಾತ್ರಿ ಈ ದೀಪ ಆರದಂತೆ ನೋಡಿಕೊಳ್ಳಬೇಕು. ಈ ರೀತಿ ಅಖಂಡ ಜ್ಯೋತಿ ಬೆಳಗವುದರಿಂದ ಎಲ್ಲಾ ಋಣಾತ್ಮಕ ಶಕ್ತಿ ದೂರಾಗುವುದು.
* ಲವಂಗ: ದೇವಿಗೆ ಆರತಿ ಬೆಳಗುವಾಗ ಕರ್ಪೂರ ಜೊತೆಗೆ ವೀಳ್ಯೆದೆಲೆಯಲ್ಲಿ ಲವಂಗ, ಜೇನು ತುಪ್ಪ ಹಾಕಿ ಅರ್ಪಿಸಿ. ಈ ರೀತಿ ಆರತಿ ಬೆಳಗಯವುದರಿಂದ ಮನೆಗೆ ಒಳಿತಾಗುವುದು.
ಪತಿ-ಪತ್ನಿ ಈ ದಿನಗಳಲ್ಲಿ ಸೇರಬಾರದು
ನವದಂಪತಿ ದುರ್ಗೆಯ ಆರಾಧನೆ ಮಾಡುವಾಗ ಸರಸ-ಸಲ್ಲಾಪ ಮಾಡಬಾರದು. ಶ್ರದ್ಧೆಯಿಂದ ದೇವಿಯನ್ನು ಆರಾಧಿಸಬೇಕು. 9 ದಿನಗಳು ಭಕ್ತಿಯಿಂದ ಅವಳನ್ನು ಆರಾಧನೆ ಮಾಡಿದರೆ ದೇವಿ ನಿಮಗೆ ಸಂತಾನ ಭಾಗ್ಯ ನೀಡುತ್ತಾಳೆ ಅಲ್ಲದೆ ನಿಮ್ಮ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications