Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ನವದಂಪತಿ ನವರಾತ್ರಿ ಆಚರಣೆ ಹೇಗೆ ಮಾಡಿದರೆ ಒಳ್ಳೆಯದು?
ನವರಾತ್ರಿ ಎಂಬುವುದು 9 ದಿನಗಳ ಆಚರಣೆ. ಈ ಸಮಯದಲ್ಲಿ ಸರಸ್ವತಿ, ದುರ್ಗೆ, ಲಕ್ಷ್ಮಿಯನ್ನು ಆರಾಧಿಸಲಾಗುವುದು. ಇನ್ನು ನವರಾತ್ರಿಯಲ್ಲಿ ನವ ದಂಪತಿಗಳು ನವರಾತ್ರಿ ಆಚರಣೆ ಮಾಡುವುದರಿಂದ ಅವರ ದಾಂಪತ್ಯ ಜೀವನ ಚೆನ್ನಾಗಿರಲಿದೆ, ನವರಾತ್ರಿಯನ್ನು ಆಚರಣೆ ಮಾಡುವಾಗ ಈ ಅಂಶಗಳ ಕಡೆ ಗಮನಹರಿಸಿ:
* ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆಯನ್ನು ಸ್ವಚ್ಛವಾಗಿ ಇಡದಿದ್ದರೆ ಲಕ್ಷ್ಮಿ ಬರುವುದಿಲ್ಲ ಎಂದು ಹೇಳಲಾಗುವುದು.
* ಘಟಸ್ಥಾಪನ ಸಮಯದಲ್ಲಿ ಕಲಶ ಇರಿಸಬೇಕು. ವೀಳ್ಯೆದೆಲೆ, ಅಡಿಗೆ, ನಾಣ್ಯ, ಧಾನ್ಯಗಳನ್ನು ಹಾಕಿ ಕಲಶದ ಮೇಲೆ ತೆಂಗಿನಕಾಯಿ ಇರಿಸಿ ನಂತರ ಕೆಂಪು ದಾರದಿಂದ ಕಲಶವನ್ನು ಸುತ್ತಬೇಕು. ಈ ಕಲಶ 9 ದಿನಗಳು ಇರಬೇಕು.

* ಕಲಶವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಲಶದ ಮೇಲೆ ಇಡಬೇಕು. ಈ ತೆಂಗಿನಕಾಯಿಯನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬಹುದು.
* ಧಾನ್ಯ ಬೆಳೆಯುವುದು: ಮಣ್ಣಿನ ಮಡಿಕೆಗೆ ಮಣ್ಣು ತುಂಬಿ ಅದರಲ್ಲಿ ನವ ಧಾನ್ಯಗಳನ್ನು ಹಾಕಿಡಿ, ಆ ಧಾನ್ಯಗಳು ಮೊಳಕೆ ಬರುತ್ತದೆ, ಅದನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬೇಕು.
* ದೇವಿಗೆ ಈ ವಸ್ತುಗಳನ್ನು ಅರ್ಪಿಸಿ: ದೇವಿಗೆ ಕೆಂಪು ಬಳೆಗಳು, ಸಿಂದೂರ, ಕುಂಕುಮ, ಮೆಹಂದಿ ಹೀಗೆ ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ, ಇದರಿಂದ ದೇವಿ ವೈವಾಹಿಕ ಜೀವನದಲ್ಲಿ ಇಷ್ಟಾರ್ಥ ನೆರವೇರಿಸುತ್ತಾಳೆ ಎಂದು ಹೇಳಲಾಗುವುದು.
* ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು: ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು, ಈ ಜ್ಯೋತಿ ನಿರಂತರ ಉರಿಯಬೇಕು, ಹಗಲು-ರಾತ್ರಿ ಈ ದೀಪ ಆರದಂತೆ ನೋಡಿಕೊಳ್ಳಬೇಕು. ಈ ರೀತಿ ಅಖಂಡ ಜ್ಯೋತಿ ಬೆಳಗವುದರಿಂದ ಎಲ್ಲಾ ಋಣಾತ್ಮಕ ಶಕ್ತಿ ದೂರಾಗುವುದು.
* ಲವಂಗ: ದೇವಿಗೆ ಆರತಿ ಬೆಳಗುವಾಗ ಕರ್ಪೂರ ಜೊತೆಗೆ ವೀಳ್ಯೆದೆಲೆಯಲ್ಲಿ ಲವಂಗ, ಜೇನು ತುಪ್ಪ ಹಾಕಿ ಅರ್ಪಿಸಿ. ಈ ರೀತಿ ಆರತಿ ಬೆಳಗಯವುದರಿಂದ ಮನೆಗೆ ಒಳಿತಾಗುವುದು.
ಪತಿ-ಪತ್ನಿ ಈ ದಿನಗಳಲ್ಲಿ ಸೇರಬಾರದು
ನವದಂಪತಿ ದುರ್ಗೆಯ ಆರಾಧನೆ ಮಾಡುವಾಗ ಸರಸ-ಸಲ್ಲಾಪ ಮಾಡಬಾರದು. ಶ್ರದ್ಧೆಯಿಂದ ದೇವಿಯನ್ನು ಆರಾಧಿಸಬೇಕು. 9 ದಿನಗಳು ಭಕ್ತಿಯಿಂದ ಅವಳನ್ನು ಆರಾಧನೆ ಮಾಡಿದರೆ ದೇವಿ ನಿಮಗೆ ಸಂತಾನ ಭಾಗ್ಯ ನೀಡುತ್ತಾಳೆ ಅಲ್ಲದೆ ನಿಮ್ಮ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
