Latest Updates
-
ನಿಮ್ಮ ಅತ್ತಿಗೆಗೆ ಈ ಹಾರ್ಟ್ ಟಚಿಂಗ್ ಶಾಯರಿ ಕಳಿಸಿ! ಲವ್ & ಕನೆಕ್ಷನ್ ಡಬಲ್ ಆಗುತ್ತೆ - Happy Holi 2026 -
ಸಿಸ್ಟರ್.. 40ರ ಬಳಿಕ ಪಿಸ್ತಾ ಒಂದು ವರ! ಮೂಳೆ, ಹೃದಯ & ಹಾರ್ಮೋನ್ ಬ್ಯಾಲೆನ್ಸ್.. ಪಿಸ್ತಾನೇ ಏಕೆ ಬೇಕು? -
ಹೋಳಿ ಹಬ್ಬದಂದೇ 4 ಗ್ರಹಗಳ ವಕ್ರ ನಡೆ: ಈ 5 ರಾಶಿಗಳ ಮೇಲೆ ಭಾರೀ ಪರಿಣಾಮ.. ಭರ್ಜರಿ ಧನಲಾಭ! ನೀವೂ ಲಕ್ಕಿನಾ? -
ದೇಸಿ ಮಸಾಲೆಯ ಘಮ, ಮಣ್ಣಿನ ಮಡಕೆಯ ರುಚಿ! ಮನೆಯಲ್ಲೇ ಮಾಡಿ ಛತ್ತೀಸ್ಗಢ ಸ್ಪೆಷಲ್ ಚಿಕನ್ ಕರಿ.. ಈಸಿ ರೆಸಿಪಿ ಇಲ್ಲಿದೆ -
ಮಾತಿನ ಹೋಳಿ.. ಮನದ ಸಂಭ್ರಮ.. ಇದು ಬಣ್ಣಗಳ ಕೇಳಿ! ರೊಮ್ಯಾಂಟಿಕ್ ಶುಭಾಶಯಗಳು ಇಲ್ಲಿವೆ -
ಚಂದ್ರಗ್ರಹಣದ ದಿನ.. ಪ್ರೇಮ ಜೀವನದಲ್ಲಿ ಸಂಕಷ್ಟ! ಪ್ರಣಯ ಸಂಬಂಧಗಳಲ್ಲಿ ಎಚ್ಚರ -
March 03 Horoscope: ವರ್ಷದ ಮೊದಲ ಚಂದ್ರಗ್ರಹಣ.. ಅಪಘಾತ ಸಂಭವಿಸುವ ಸಾಧ್ಯತೆ! ಖರ್ಚುಗಳು ಹೆಚ್ಚಾಗಲಿವೆ -
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ?
ನವದಂಪತಿ ನವರಾತ್ರಿ ಆಚರಣೆ ಹೇಗೆ ಮಾಡಿದರೆ ಒಳ್ಳೆಯದು?
ನವರಾತ್ರಿ ಎಂಬುವುದು 9 ದಿನಗಳ ಆಚರಣೆ. ಈ ಸಮಯದಲ್ಲಿ ಸರಸ್ವತಿ, ದುರ್ಗೆ, ಲಕ್ಷ್ಮಿಯನ್ನು ಆರಾಧಿಸಲಾಗುವುದು. ಇನ್ನು ನವರಾತ್ರಿಯಲ್ಲಿ ನವ ದಂಪತಿಗಳು ನವರಾತ್ರಿ ಆಚರಣೆ ಮಾಡುವುದರಿಂದ ಅವರ ದಾಂಪತ್ಯ ಜೀವನ ಚೆನ್ನಾಗಿರಲಿದೆ, ನವರಾತ್ರಿಯನ್ನು ಆಚರಣೆ ಮಾಡುವಾಗ ಈ ಅಂಶಗಳ ಕಡೆ ಗಮನಹರಿಸಿ:
* ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆಯನ್ನು ಸ್ವಚ್ಛವಾಗಿ ಇಡದಿದ್ದರೆ ಲಕ್ಷ್ಮಿ ಬರುವುದಿಲ್ಲ ಎಂದು ಹೇಳಲಾಗುವುದು.
* ಘಟಸ್ಥಾಪನ ಸಮಯದಲ್ಲಿ ಕಲಶ ಇರಿಸಬೇಕು. ವೀಳ್ಯೆದೆಲೆ, ಅಡಿಗೆ, ನಾಣ್ಯ, ಧಾನ್ಯಗಳನ್ನು ಹಾಕಿ ಕಲಶದ ಮೇಲೆ ತೆಂಗಿನಕಾಯಿ ಇರಿಸಿ ನಂತರ ಕೆಂಪು ದಾರದಿಂದ ಕಲಶವನ್ನು ಸುತ್ತಬೇಕು. ಈ ಕಲಶ 9 ದಿನಗಳು ಇರಬೇಕು.

* ಕಲಶವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಲಶದ ಮೇಲೆ ಇಡಬೇಕು. ಈ ತೆಂಗಿನಕಾಯಿಯನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬಹುದು.
* ಧಾನ್ಯ ಬೆಳೆಯುವುದು: ಮಣ್ಣಿನ ಮಡಿಕೆಗೆ ಮಣ್ಣು ತುಂಬಿ ಅದರಲ್ಲಿ ನವ ಧಾನ್ಯಗಳನ್ನು ಹಾಕಿಡಿ, ಆ ಧಾನ್ಯಗಳು ಮೊಳಕೆ ಬರುತ್ತದೆ, ಅದನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬೇಕು.
* ದೇವಿಗೆ ಈ ವಸ್ತುಗಳನ್ನು ಅರ್ಪಿಸಿ: ದೇವಿಗೆ ಕೆಂಪು ಬಳೆಗಳು, ಸಿಂದೂರ, ಕುಂಕುಮ, ಮೆಹಂದಿ ಹೀಗೆ ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ, ಇದರಿಂದ ದೇವಿ ವೈವಾಹಿಕ ಜೀವನದಲ್ಲಿ ಇಷ್ಟಾರ್ಥ ನೆರವೇರಿಸುತ್ತಾಳೆ ಎಂದು ಹೇಳಲಾಗುವುದು.
* ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು: ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು, ಈ ಜ್ಯೋತಿ ನಿರಂತರ ಉರಿಯಬೇಕು, ಹಗಲು-ರಾತ್ರಿ ಈ ದೀಪ ಆರದಂತೆ ನೋಡಿಕೊಳ್ಳಬೇಕು. ಈ ರೀತಿ ಅಖಂಡ ಜ್ಯೋತಿ ಬೆಳಗವುದರಿಂದ ಎಲ್ಲಾ ಋಣಾತ್ಮಕ ಶಕ್ತಿ ದೂರಾಗುವುದು.
* ಲವಂಗ: ದೇವಿಗೆ ಆರತಿ ಬೆಳಗುವಾಗ ಕರ್ಪೂರ ಜೊತೆಗೆ ವೀಳ್ಯೆದೆಲೆಯಲ್ಲಿ ಲವಂಗ, ಜೇನು ತುಪ್ಪ ಹಾಕಿ ಅರ್ಪಿಸಿ. ಈ ರೀತಿ ಆರತಿ ಬೆಳಗಯವುದರಿಂದ ಮನೆಗೆ ಒಳಿತಾಗುವುದು.
ಪತಿ-ಪತ್ನಿ ಈ ದಿನಗಳಲ್ಲಿ ಸೇರಬಾರದು
ನವದಂಪತಿ ದುರ್ಗೆಯ ಆರಾಧನೆ ಮಾಡುವಾಗ ಸರಸ-ಸಲ್ಲಾಪ ಮಾಡಬಾರದು. ಶ್ರದ್ಧೆಯಿಂದ ದೇವಿಯನ್ನು ಆರಾಧಿಸಬೇಕು. 9 ದಿನಗಳು ಭಕ್ತಿಯಿಂದ ಅವಳನ್ನು ಆರಾಧನೆ ಮಾಡಿದರೆ ದೇವಿ ನಿಮಗೆ ಸಂತಾನ ಭಾಗ್ಯ ನೀಡುತ್ತಾಳೆ ಅಲ್ಲದೆ ನಿಮ್ಮ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











