Latest Updates
-
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ!
ನವದಂಪತಿ ನವರಾತ್ರಿ ಆಚರಣೆ ಹೇಗೆ ಮಾಡಿದರೆ ಒಳ್ಳೆಯದು?
ನವರಾತ್ರಿ ಎಂಬುವುದು 9 ದಿನಗಳ ಆಚರಣೆ. ಈ ಸಮಯದಲ್ಲಿ ಸರಸ್ವತಿ, ದುರ್ಗೆ, ಲಕ್ಷ್ಮಿಯನ್ನು ಆರಾಧಿಸಲಾಗುವುದು. ಇನ್ನು ನವರಾತ್ರಿಯಲ್ಲಿ ನವ ದಂಪತಿಗಳು ನವರಾತ್ರಿ ಆಚರಣೆ ಮಾಡುವುದರಿಂದ ಅವರ ದಾಂಪತ್ಯ ಜೀವನ ಚೆನ್ನಾಗಿರಲಿದೆ, ನವರಾತ್ರಿಯನ್ನು ಆಚರಣೆ ಮಾಡುವಾಗ ಈ ಅಂಶಗಳ ಕಡೆ ಗಮನಹರಿಸಿ:
* ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆಯನ್ನು ಸ್ವಚ್ಛವಾಗಿ ಇಡದಿದ್ದರೆ ಲಕ್ಷ್ಮಿ ಬರುವುದಿಲ್ಲ ಎಂದು ಹೇಳಲಾಗುವುದು.
* ಘಟಸ್ಥಾಪನ ಸಮಯದಲ್ಲಿ ಕಲಶ ಇರಿಸಬೇಕು. ವೀಳ್ಯೆದೆಲೆ, ಅಡಿಗೆ, ನಾಣ್ಯ, ಧಾನ್ಯಗಳನ್ನು ಹಾಕಿ ಕಲಶದ ಮೇಲೆ ತೆಂಗಿನಕಾಯಿ ಇರಿಸಿ ನಂತರ ಕೆಂಪು ದಾರದಿಂದ ಕಲಶವನ್ನು ಸುತ್ತಬೇಕು. ಈ ಕಲಶ 9 ದಿನಗಳು ಇರಬೇಕು.

* ಕಲಶವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಲಶದ ಮೇಲೆ ಇಡಬೇಕು. ಈ ತೆಂಗಿನಕಾಯಿಯನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬಹುದು.
* ಧಾನ್ಯ ಬೆಳೆಯುವುದು: ಮಣ್ಣಿನ ಮಡಿಕೆಗೆ ಮಣ್ಣು ತುಂಬಿ ಅದರಲ್ಲಿ ನವ ಧಾನ್ಯಗಳನ್ನು ಹಾಕಿಡಿ, ಆ ಧಾನ್ಯಗಳು ಮೊಳಕೆ ಬರುತ್ತದೆ, ಅದನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬೇಕು.
* ದೇವಿಗೆ ಈ ವಸ್ತುಗಳನ್ನು ಅರ್ಪಿಸಿ: ದೇವಿಗೆ ಕೆಂಪು ಬಳೆಗಳು, ಸಿಂದೂರ, ಕುಂಕುಮ, ಮೆಹಂದಿ ಹೀಗೆ ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ, ಇದರಿಂದ ದೇವಿ ವೈವಾಹಿಕ ಜೀವನದಲ್ಲಿ ಇಷ್ಟಾರ್ಥ ನೆರವೇರಿಸುತ್ತಾಳೆ ಎಂದು ಹೇಳಲಾಗುವುದು.
* ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು: ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು, ಈ ಜ್ಯೋತಿ ನಿರಂತರ ಉರಿಯಬೇಕು, ಹಗಲು-ರಾತ್ರಿ ಈ ದೀಪ ಆರದಂತೆ ನೋಡಿಕೊಳ್ಳಬೇಕು. ಈ ರೀತಿ ಅಖಂಡ ಜ್ಯೋತಿ ಬೆಳಗವುದರಿಂದ ಎಲ್ಲಾ ಋಣಾತ್ಮಕ ಶಕ್ತಿ ದೂರಾಗುವುದು.
* ಲವಂಗ: ದೇವಿಗೆ ಆರತಿ ಬೆಳಗುವಾಗ ಕರ್ಪೂರ ಜೊತೆಗೆ ವೀಳ್ಯೆದೆಲೆಯಲ್ಲಿ ಲವಂಗ, ಜೇನು ತುಪ್ಪ ಹಾಕಿ ಅರ್ಪಿಸಿ. ಈ ರೀತಿ ಆರತಿ ಬೆಳಗಯವುದರಿಂದ ಮನೆಗೆ ಒಳಿತಾಗುವುದು.
ಪತಿ-ಪತ್ನಿ ಈ ದಿನಗಳಲ್ಲಿ ಸೇರಬಾರದು
ನವದಂಪತಿ ದುರ್ಗೆಯ ಆರಾಧನೆ ಮಾಡುವಾಗ ಸರಸ-ಸಲ್ಲಾಪ ಮಾಡಬಾರದು. ಶ್ರದ್ಧೆಯಿಂದ ದೇವಿಯನ್ನು ಆರಾಧಿಸಬೇಕು. 9 ದಿನಗಳು ಭಕ್ತಿಯಿಂದ ಅವಳನ್ನು ಆರಾಧನೆ ಮಾಡಿದರೆ ದೇವಿ ನಿಮಗೆ ಸಂತಾನ ಭಾಗ್ಯ ನೀಡುತ್ತಾಳೆ ಅಲ್ಲದೆ ನಿಮ್ಮ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications