Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
100 ವರ್ಷಗಳ ಬಳಿಕ ಸೂಪರ್ಮೂನ್ ದಿನ ಉಂಟಾಗಲಿದೆ ಈ ಯೋಗ: ಕಾರ್ತಿಕ ಹುಣ್ಣಿಮೆ ಬಳಿಕ 3 ರಾಶಿಗಳ ಸಂಪತ್ತು ಹೆಚ್ಚಲಿದೆ
ನವೆಂಬರ್ 15ಕ್ಕೆ ಕಾರ್ತಿಕ ಹುಣ್ಣಿಮೆ, ಅಲ್ಲದೆ ವರ್ಷದ ಕೊನೆಯ ಸೂಪರ್ ಮೂನ್ ಕೂಡ ಇದೇ ದಿನ ಕಂಡು ಬರಲಿದೆ. ಜ್ಯೋತಿಷ್ಯ ದೃಷ್ಟಿಯಿಂದ ಈ ದಿನ ತುಂಬಾನೇ ಮಹತ್ವದ್ದಾಗಿದೆ. ಸೂಪರ್ ಮೂನ್ ಎಂದರೇನು? ಜ್ಯೋತಿಷ್ಯವು ಸೂಪರ್ ಮೂನ್ ಬಳಿಕ ಕೆಲವೊಂದು ರಾಶಿಗಳಿಗೆ ತುಂಬಾನೇಅದ್ಭುತವಾಗಿರಲಿದೆ ಎಂದು ಹೇಳಿದೆ, ಈ ಎಲ್ಲದರ ಬಗ್ಗೆ ಮಾಹಿತಿ ನೋಡೋಣ:

ಮೊದಲಿಗೆ ಸೂಪರ್ ಮೂನ್ ಎಂದರೇನು?
ಸೂಪರ್ಮೂನ್ ದಿನದಂದು ಚಂದ್ರ ದೊಡ್ಡ ಬೃಹದಾಕಾರದಲ್ಲಿ ಗೋಚರಿಸುತ್ತಾನೆ. ಈ ದಿನ ಚಂದ್ರ ಮತ್ತಷ್ಟು ಪ್ರಕಾಶಮಾನವಾಗಿ ಗೋಚರಿಸುತ್ತಾರೆ. ಹುಣ್ಣಿಮೆಯಂದು ಚಂದ್ರನು ಭೂ ಕಕ್ಷೆಯ ಸಮೀಪ ಬರುತ್ತಾನೆ, ಹೀಗಾಗಿ ಚಂದ್ರನ ಗಾತ್ರ ಮತ್ತಷ್ಟು ದೊಡ್ಡದಾಗಿ ಗೋಚರಿಸುವುದು. ಇದನ್ನು ನೀವು ಬರಿಗಣ್ಣಿನಿಂದ ನೋಡಬಹುದು, ಚಂದ್ರ ದೊಡ್ಡ ಆಕಾರದಲ್ಲಿ ಗೋಚರಿಸುತ್ತಾನೆ.
ಕಾರ್ತಿಕ ಪೂರ್ಣಿಮೆಯಂದು ಸೂಪರ್ ಮೂನ್ : ಪ್ರತಿಮಾಸ ಹುಣ್ಣಿಮೆ ಮತ್ತು ಅಮವಾಸ್ಯೆ ಬರುತ್ತದೆ, ಆದರೆ ಕೆಲ ಹುಣ್ಣಿಮೆ, ಕೆಲ ಅಮವಾಸ್ಯೆ ಜ್ಯೋತಿಷ್ಯ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿರುತ್ತದೆ. ನವೆಂಬರ್ನಲ್ಲಿ ಹುಣ್ಣಿಮೆ 15ಕ್ಕೆ ಬಂದಿದೆ, ಈಗ ಕಾರ್ತಿಕ ಮಾಸ ಕೂಡ ಹೌದು, ಕಾರ್ತಿಕ ಮಾಸ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ಕಾರ್ತಿಕ ಹುಣ್ಣಿಮೆ ಮಾಡುವ ನದಿ ಸ್ನಾನ, ಕಾರ್ತಿಕ ಹುಣ್ಣಿಮೆಯಂದು ಮಾಡುವ ದಾನ ಎಲ್ಲದಕ್ಕೂ ತುಂಬಾನೇ ಮಹತ್ವವಿದೆ.
ಕಾರ್ತಿಕ ಹುಣ್ಣಿಮೆಯಂದು ಉಂಟಾಗಲಿದೆ ಗಜಕೇಸರಿ ಯೋಗ
ಕಾರ್ತಿಕ ಪೂರ್ಣಿಮೆಯಂದು ರಾತ್ರಿ ಗಜಕೇಸರಿ ಯೋಗ ಉಂಟಾಗಿದೆ, ಇದೇ ದಿನ ಬುಧಾದಿತ್ಯ ರಾಜ ಯೋಗವೂ ಇದೆ, ಈ ಯೋಗ ಕಾರ್ತಿಕ ಪೂರ್ಣಿಮೆಯಂದು ಸುಮಾರು 30 ವರ್ಷಗಳ ಬಳಿಕ ಸಂಭವಿಸಲಿದೆ. ಅಲ್ಲದೆ ಇದೇ ದಿನ ವರಿಯಾನ್ ಯೋಗ ಉಂಟಾಗುತ್ತದೆ, ಈ ಯೋಗ ಸುಮಾರು 100 ವರ್ಷಗಳ ಬಳಿಕ ಈ ವಿಶೇಷ ದಿನ ಇರಲಿದೆ. ಈ ಎಲ್ಲಾ ಯೋಗ ಕೆಲ ರಾಶಿಗಳಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.
ಈ ವಿಶೇಷ ಯೋಗದಿಂದಾಗಿ ಈ ರಾಶಿಗಳ ಸಂಪತ್ತು ವೃದ್ಧಿಸಲಿದೆ:
ಮೇಷ ರಾಶಿ
ಕಾರ್ತಿಕ ಹುಣ್ಣಿಮೆಯಂದು ಉಂಟಾಗುವ ಶುಭ ಯೋಗದಿಂದಾಗಿ ಮೇಷ ರಾಶಿಯವರ ಬದುಕಿನಲ್ಲಿ ಅದ್ಭುತ ಬೆಳವಣಿಗೆಯಾಗಲಿದೆ. ಶ್ರೀ ವಿಷ್ಣುವಿನ ಕೃಪೆ ನಿಮ್ಮ ಮೇಲಿರಲಿದೆ, ಇದರಿಂದಾಗಿ ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಯೋಗವು ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಿಸಲಿದೆ. ವ್ಯಾಪಾರಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯುವಿರಿ, ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮ್ಮೆಲ್ಲಾ ಆಸೆ ಈಡೇರಲಿದೆ. ಮನೆ ಕಟ್ಟಬೇಕು, ಆಸ್ತಿ ಖರೀದಿಸಬೇಕು, ವಾಹನ ಖರೀದಿಸಬೇಕು ಈ ಬಗೆಯ ಬಯಕೆ ಇದ್ದರೆ ಈ ಯೋಗದ ಬಲದಿಂದಾಗಿ ನೆರವೇರಲಿದೆ.
ತುಲಾ ರಾಶಿ
ಈ ಎಲ್ಲಾ ಯೋಗಗಳ ಬಲದಿಂದಾಗಿ ತುಲಾ ರಾಶಿಯವರು ತುಂಬಾ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ. ಕುಟುಂಬದಲ್ಲಿ ಪ್ರಗತಿ ಕಂಡು ಬರಲಿದೆ, ನಿಮ್ಮ ಆರ್ಥಿಕ ಸ್ಥಿತಿ ಪ್ರಗತಿಯಾಗುವುದರಿಂದ ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಕುಟುಂಬದ ವಾತಾವರಣ ತುಂಬಾ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿ ಬಡ್ತಿ ಪಡೆಯುತ್ತೀರಿ. ನಿಮ್ಮ ಕೆಲಸ ಕಾರ್ಯಗಳು ಮೆಚ್ಚುಗೆಯನ್ನು ಪಡೆಯಲಿದೆ. ನಿಮ್ಮ ಅಂತಸ್ತು ಹೆಚ್ಚಾಗಲಿದೆ.
ಮೀನ ರಾಶಿ
ಈ ಯೋಗ ಮೀನ ರಾಶಿಯವಿರಿಗೂ ವಿಶೇಷ ಆರ್ಥಿಕ ಪ್ರಯೋಜನ ನೀಡಲಿದೆ. ಶನಿ ಸಾಡೇಸಾತಿ ಇದ್ದರೂ ಈ ಯೋಗದ ಬಲದಿಂದಾಗಿ ಹೆಚ್ಚಿನ ಆರ್ಥಿಕ ತೊಂದರೆಗಳು ಉಂಟಾಗುವುದಿಲ್ಲ. ನಿಮ್ಮ ಸಂಪತ್ತು ವೃದ್ಧಿಸಲಿದೆ, ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ದೊರೆಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications