Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
100 ವರ್ಷಗಳ ಬಳಿಕ ಸೂಪರ್ಮೂನ್ ದಿನ ಉಂಟಾಗಲಿದೆ ಈ ಯೋಗ: ಕಾರ್ತಿಕ ಹುಣ್ಣಿಮೆ ಬಳಿಕ 3 ರಾಶಿಗಳ ಸಂಪತ್ತು ಹೆಚ್ಚಲಿದೆ
ನವೆಂಬರ್ 15ಕ್ಕೆ ಕಾರ್ತಿಕ ಹುಣ್ಣಿಮೆ, ಅಲ್ಲದೆ ವರ್ಷದ ಕೊನೆಯ ಸೂಪರ್ ಮೂನ್ ಕೂಡ ಇದೇ ದಿನ ಕಂಡು ಬರಲಿದೆ. ಜ್ಯೋತಿಷ್ಯ ದೃಷ್ಟಿಯಿಂದ ಈ ದಿನ ತುಂಬಾನೇ ಮಹತ್ವದ್ದಾಗಿದೆ. ಸೂಪರ್ ಮೂನ್ ಎಂದರೇನು? ಜ್ಯೋತಿಷ್ಯವು ಸೂಪರ್ ಮೂನ್ ಬಳಿಕ ಕೆಲವೊಂದು ರಾಶಿಗಳಿಗೆ ತುಂಬಾನೇಅದ್ಭುತವಾಗಿರಲಿದೆ ಎಂದು ಹೇಳಿದೆ, ಈ ಎಲ್ಲದರ ಬಗ್ಗೆ ಮಾಹಿತಿ ನೋಡೋಣ:

ಮೊದಲಿಗೆ ಸೂಪರ್ ಮೂನ್ ಎಂದರೇನು?
ಸೂಪರ್ಮೂನ್ ದಿನದಂದು ಚಂದ್ರ ದೊಡ್ಡ ಬೃಹದಾಕಾರದಲ್ಲಿ ಗೋಚರಿಸುತ್ತಾನೆ. ಈ ದಿನ ಚಂದ್ರ ಮತ್ತಷ್ಟು ಪ್ರಕಾಶಮಾನವಾಗಿ ಗೋಚರಿಸುತ್ತಾರೆ. ಹುಣ್ಣಿಮೆಯಂದು ಚಂದ್ರನು ಭೂ ಕಕ್ಷೆಯ ಸಮೀಪ ಬರುತ್ತಾನೆ, ಹೀಗಾಗಿ ಚಂದ್ರನ ಗಾತ್ರ ಮತ್ತಷ್ಟು ದೊಡ್ಡದಾಗಿ ಗೋಚರಿಸುವುದು. ಇದನ್ನು ನೀವು ಬರಿಗಣ್ಣಿನಿಂದ ನೋಡಬಹುದು, ಚಂದ್ರ ದೊಡ್ಡ ಆಕಾರದಲ್ಲಿ ಗೋಚರಿಸುತ್ತಾನೆ.
ಕಾರ್ತಿಕ ಪೂರ್ಣಿಮೆಯಂದು ಸೂಪರ್ ಮೂನ್ : ಪ್ರತಿಮಾಸ ಹುಣ್ಣಿಮೆ ಮತ್ತು ಅಮವಾಸ್ಯೆ ಬರುತ್ತದೆ, ಆದರೆ ಕೆಲ ಹುಣ್ಣಿಮೆ, ಕೆಲ ಅಮವಾಸ್ಯೆ ಜ್ಯೋತಿಷ್ಯ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿರುತ್ತದೆ. ನವೆಂಬರ್ನಲ್ಲಿ ಹುಣ್ಣಿಮೆ 15ಕ್ಕೆ ಬಂದಿದೆ, ಈಗ ಕಾರ್ತಿಕ ಮಾಸ ಕೂಡ ಹೌದು, ಕಾರ್ತಿಕ ಮಾಸ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ಕಾರ್ತಿಕ ಹುಣ್ಣಿಮೆ ಮಾಡುವ ನದಿ ಸ್ನಾನ, ಕಾರ್ತಿಕ ಹುಣ್ಣಿಮೆಯಂದು ಮಾಡುವ ದಾನ ಎಲ್ಲದಕ್ಕೂ ತುಂಬಾನೇ ಮಹತ್ವವಿದೆ.
ಕಾರ್ತಿಕ ಹುಣ್ಣಿಮೆಯಂದು ಉಂಟಾಗಲಿದೆ ಗಜಕೇಸರಿ ಯೋಗ
ಕಾರ್ತಿಕ ಪೂರ್ಣಿಮೆಯಂದು ರಾತ್ರಿ ಗಜಕೇಸರಿ ಯೋಗ ಉಂಟಾಗಿದೆ, ಇದೇ ದಿನ ಬುಧಾದಿತ್ಯ ರಾಜ ಯೋಗವೂ ಇದೆ, ಈ ಯೋಗ ಕಾರ್ತಿಕ ಪೂರ್ಣಿಮೆಯಂದು ಸುಮಾರು 30 ವರ್ಷಗಳ ಬಳಿಕ ಸಂಭವಿಸಲಿದೆ. ಅಲ್ಲದೆ ಇದೇ ದಿನ ವರಿಯಾನ್ ಯೋಗ ಉಂಟಾಗುತ್ತದೆ, ಈ ಯೋಗ ಸುಮಾರು 100 ವರ್ಷಗಳ ಬಳಿಕ ಈ ವಿಶೇಷ ದಿನ ಇರಲಿದೆ. ಈ ಎಲ್ಲಾ ಯೋಗ ಕೆಲ ರಾಶಿಗಳಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.
ಈ ವಿಶೇಷ ಯೋಗದಿಂದಾಗಿ ಈ ರಾಶಿಗಳ ಸಂಪತ್ತು ವೃದ್ಧಿಸಲಿದೆ:
ಮೇಷ ರಾಶಿ
ಕಾರ್ತಿಕ ಹುಣ್ಣಿಮೆಯಂದು ಉಂಟಾಗುವ ಶುಭ ಯೋಗದಿಂದಾಗಿ ಮೇಷ ರಾಶಿಯವರ ಬದುಕಿನಲ್ಲಿ ಅದ್ಭುತ ಬೆಳವಣಿಗೆಯಾಗಲಿದೆ. ಶ್ರೀ ವಿಷ್ಣುವಿನ ಕೃಪೆ ನಿಮ್ಮ ಮೇಲಿರಲಿದೆ, ಇದರಿಂದಾಗಿ ಆರ್ಥಿಕವಾಗಿ ತುಂಬಾ ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಯೋಗವು ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಿಸಲಿದೆ. ವ್ಯಾಪಾರಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯುವಿರಿ, ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮ್ಮೆಲ್ಲಾ ಆಸೆ ಈಡೇರಲಿದೆ. ಮನೆ ಕಟ್ಟಬೇಕು, ಆಸ್ತಿ ಖರೀದಿಸಬೇಕು, ವಾಹನ ಖರೀದಿಸಬೇಕು ಈ ಬಗೆಯ ಬಯಕೆ ಇದ್ದರೆ ಈ ಯೋಗದ ಬಲದಿಂದಾಗಿ ನೆರವೇರಲಿದೆ.
ತುಲಾ ರಾಶಿ
ಈ ಎಲ್ಲಾ ಯೋಗಗಳ ಬಲದಿಂದಾಗಿ ತುಲಾ ರಾಶಿಯವರು ತುಂಬಾ ಒಳ್ಳೆಯ ಪ್ರಯೋಜನ ಪಡೆಯುತ್ತೀರಿ. ಕುಟುಂಬದಲ್ಲಿ ಪ್ರಗತಿ ಕಂಡು ಬರಲಿದೆ, ನಿಮ್ಮ ಆರ್ಥಿಕ ಸ್ಥಿತಿ ಪ್ರಗತಿಯಾಗುವುದರಿಂದ ನಿಮ್ಮ ಸೌಕರ್ಯಗಳು ಹೆಚ್ಚಾಗಲಿದೆ. ಕುಟುಂಬದ ವಾತಾವರಣ ತುಂಬಾ ಚೆನ್ನಾಗಿರಲಿದೆ. ವೃತ್ತಿ ಬದುಕಿನಲ್ಲಿ ಬಡ್ತಿ ಪಡೆಯುತ್ತೀರಿ. ನಿಮ್ಮ ಕೆಲಸ ಕಾರ್ಯಗಳು ಮೆಚ್ಚುಗೆಯನ್ನು ಪಡೆಯಲಿದೆ. ನಿಮ್ಮ ಅಂತಸ್ತು ಹೆಚ್ಚಾಗಲಿದೆ.
ಮೀನ ರಾಶಿ
ಈ ಯೋಗ ಮೀನ ರಾಶಿಯವಿರಿಗೂ ವಿಶೇಷ ಆರ್ಥಿಕ ಪ್ರಯೋಜನ ನೀಡಲಿದೆ. ಶನಿ ಸಾಡೇಸಾತಿ ಇದ್ದರೂ ಈ ಯೋಗದ ಬಲದಿಂದಾಗಿ ಹೆಚ್ಚಿನ ಆರ್ಥಿಕ ತೊಂದರೆಗಳು ಉಂಟಾಗುವುದಿಲ್ಲ. ನಿಮ್ಮ ಸಂಪತ್ತು ವೃದ್ಧಿಸಲಿದೆ, ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ದೊರೆಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications