Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಫೆ.6ರಂದು ಷಟಿಲಾ ಏಕಾದಶಿ: ಅದೃಷ್ಟಕ್ಕಾಗಿ, ಆರೋಗ್ಯಕ್ಕಾಗಿ ಯಾವ ಪರಿಹಾರ ಮಾಡಿದರೆ ಒಳ್ಳೆಯದು?
ಫೆಬ್ರವರಿ 6ಕ್ಕೆ ಷಟಿಲಾ ಏಕಾದಶಿ, ಪ್ರತಿಯೊಂದು ಏಕಾದಶಿ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಈ ಏಕಾದಶಿಯಂದ ಅನ್ನದಾನಕ್ಕೆ ತುಂಬಾನೇ ಮಹತ್ವವಿದೆ. ಅನ್ನದಾನ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವುದು, ಅಲ್ಲದೆ ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂಬ ನಿಯಮಗಳಿವೆ, ಈ ದಿನ ಯಾವ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಷಟಿಲಾ ಏಕಾದಶಿಯ ಪೂಜಾ ಮುಹೂರ್ತ
ತಿಥಿ ಪ್ರಾರಂಭ: ಮಾಘ ಮಾಸದ ಸಕೃಷ್ಣ ಏಕಾದಶಿ ದಿನಾಂಕ ಆರಂಭ: 5 ಫೆಬ್ರವರಿ ಸಂಜೆ 05:24ಕ್ಕೆ ಪ್ರಾರಂಭ
ಮಾಘ ಕೃಷ್ಣ ಏಕಾದಶಿ ತಿಥಿಯ ಅಂತ್ಯ: ಫೆಬ್ರವರಿ 6, ಸಂಜೆ 04:07 ಕ್ಕೆ
ಪಾರಣ ಸಮಯ: 7 ಫೆಬ್ರವರಿ ಬೆಳಗ್ಗೆ 07:06 ರಿಂದ 09:18 ರವರೆಗೆ
ಷಟಿಲಾ ಏಕಾದಶಿಯಂದು ಏನು ಮಾಡಬೇಕು?
- ಷಟಿಲಾ ಏಕಾದಶಿಯ ದಿನದಂದು ಪುಣ್ಯ ನದಿಯಲ್ಲಿ ಸ್ನಾನ ಮಾಡುವುದು ಒಳ್ಳೆಯದು, ಪುಣ್ಯ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಬಕೆಟ್ ನೀರಿಗೆ ಸ್ವಲ್ಪ ಗಂಗಾಜಲ ಸೇರಿಸಿ ಸ್ನಾನ ಮಾಡಿ.
- ಈ ದಿನದ ದಾನಕ್ಕೂ ವಿಶೇಷ ಮಹತ್ವವಿದೆ. ಈ ದಿನದಂದು ಎಳ್ಳನ್ನು ದಾನ ಮಾಡುವುದರಿಂದ ಸಮಸ್ಯೆಗಳು ದೂರಾಗುವುದು.
- ಷಟಿಲಾ ಏಕಾದಶಿಯ ದಿನದಂದು ಎಳ್ಳನ್ನು ವಿಷ್ಣುವಿಗೆ ಅರ್ಪಿಸಬೇಕು ಹೀಗೆ ಅರ್ಪಿಸುವಾಗ ವಿಷ್ಣು ಮಂತ್ರಗಳನ್ನು ಪಠಿಸುತ್ತಾ ಎಳ್ಳನ್ನು ಅರ್ಪಿಸಿ. ದೇವರ ಪಂಚಾಮೃತದಲ್ಲಿ ಎಳ್ಳು ಬೆರೆಸಿ ತಯಾರಿಸಿ.
- ಈ ದಿನ ಸ್ನಾನದ ನೀರಿಗೂ ಎಳ್ಳು ಸೇರಿಸಬೇಕು. ಹೀಗೆ ಮಾಡುವುದರಿಂದ ರೋಗ ಬಾಧೆಯಿಂದ ಮುಕ್ತರಾಗುವುದು ಎಂದು ನಂಬಲಾಗಿದೆ.
- ಷಟಿಲಾ ಏಕಾದಶಿಯ ದಿನದಂದು ಉಪವಾಸವಿದ್ದು ವಿಷ್ಣುವನ್ನು ಸ್ಮರಿಸಿ.
ಷಟಿಲಾ ಏಕಾದಶಿಯಂದು ಏನು ಮಾಡಬಾರದು?
- ಷಟಿಲಾ ಏಕಾದಶಿಯಂದು ತಾಮಸಿಕ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.
- ಷಟಿಲಾ ಏಕಾದಶಿಯಂದು ದೈಹಿಕ ಸಂಪರ್ಕ ಮಾಡಬಾರದು, ಇಡೀ ದಿನ ವಿಷ್ಣುವಿನ ಧ್ಯಾನದಲ್ಲಿ ಕಾಲ ಕಳೆಯಬೇಕು
- ಈ ದಿನ ಬದನೆಯನ್ನು ಸೇವಿಸಬೇಡಿ.
- ಈ ದಿನ ಕೋಪಗೊಳ್ಳಬೇಡಿ, ಬೇರೆಯವರಿಗೆ ನೋವುಂಟು ಮಾಡಬೇಡಿ
- ಏಕಾದಶಿಯ ದಿನ ಸೌದೆ ಒಡೆಯಬೇಡಿ.
ಷಟಿಲಾ ಏಕಾದಶಿಯಂದು ಪರಿಹಾರ
ಉತ್ತಮ ಆರೋಗ್ಯಕ್ಕೆ
ಏಕಾದಶಿಯಂದು ಸ್ನಾನ ಮಾಡುವಾಗ ಅದಕ್ಕೆ ಸ್ವಲ್ಪ ಎಳ್ಳನ್ನು ಹಾಕಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳು ದೂರಾಗುವುದು ಎಂದು ಹೇಳಲಾಗುವುದು. ಎಳ್ಳು ತಿನ್ನುವುದರಿಂದ ವ್ಯಕ್ತಿಯ ಆರೋಗ್ಯವು ಉತ್ತಮವಾಗಿರುತ್ತದೆ.
ಅದೃಷ್ಟಕ್ಕಾಗಿ
ಎಳ್ಳುಂಡೆ ಹಾಗೂ ನಾಣ್ಯಗಳನ್ನು ದಾನ ಮಾಡಿ, ಹೀಗೆ ಮಾಡುವುದರಿಂದ ನಿಮ್ಮ ಅದೃಷ್ಟ ಬಲವಾಗುವುದು ಎಂದು ಹೇಳಲಾಗುವುದು.
ಶನಿದೋಷಕ್ಕೆ ಪರಿಹಾರ
ನಿಮ್ಮ ಜಾತಕದಲ್ಲಿ ಶನಿ ದೋಷವಿದ್ದರೆ, ರಾಹು ಅಥವಾ ಕೇತು ಅಥವಾ ಪಿತ್ರ ದೋಷಗಳ ದುಷ್ಪರಿಣಾಮಗಳು ಇದ್ದರೆ, ನೀವು ಷಟಿಲಾ ಏಕಾದಶಿಯ ದಿನದಂದು ಕಪ್ಪು ಎಳ್ಳನ್ನು ದಾನ ಮಾಡಬೇಕು.
ಅನ್ನದಾನ
ಈ ದಿನ ಬಡವರಿಗೆ , ನಿರ್ಗತಿಕರಿಗೆ ಅನ್ನದಾನ ಮಾಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











