ಅಕ್ಟೋಬರ್ 16ಕ್ಕೆ ಶರದ್‌ ಹುಣ್ಣಿಮೆ: ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರಿಗೂ ನೀಡಬೇಡಿ

ಪ್ರತಿತಿಂಗಳು ಹುಣ್ಣಿಮೆ ಹಾಗೂ ಅಮವಾಸ್ಯೆ ಬರುತ್ತದೆ, ಈ ಎರಡು ದಿನಗಳು ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ಅಕ್ಟೋಬರ್‌ 16ಕ್ಕೆ ಶರದ್‌ ಪೂರ್ಣಿಮಾ ಎಂದು ಆಚರಿಸಲಾಗುವುದು. ಅಶ್ವಿನ್ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುವುದು.

ಈ ಶರದ್‌ ಪೂರ್ಣಿಮೆಯಂದು ಕೆಲವೊಂದು ಕಾರ್ಯ ಮಾಡಬೇಕು,ಕೆಲವೊಂದು ಕಾರ್ಯಗಳನ್ನು ಮಾಡಲೇಬಾರದು ಎಂದು ಹೇಳಲಾಗುವುದು. ಇನ್ನು ಈ ದಿನ ಕೆಲ ವಸ್ತುಗಳನ್ನು ದಾನ ಮಾಡಿದರೆ ಅದು ನಮ್ಮ ಮೇಲೆ ನಕರಾತ್ಮಕ ಪರಿಣಾಮ ಬೀರುವುದು ಎಂಬ ಧಾರ್ಮಿಕ ನಂಬಿಕೆಯಿದೆ. ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

Sharad Purnima

ಶರದ್‌ ಪೂರ್ಣಿಮೆಯಂದು ವಿಷ್ಣು ಮತ್ತು ಲಕ್ಷ್ಮಿಯನ್ನು ಆರಾಧಿಸಿ

ಈ ದಿನ ಶ್ರೀವಿಷ್ಣು ಹಾಗೂ ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು,ಆರ್ಥಿಕ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ ಎಂದು ಹೇಳಲಾಗುವುದು. ಸಂಜೆ ಶ್ರೀ ವಿಷ್ಣು ಮತ್ತು ಲಕ್ಷ್ಮಿಗೆ ತುಪ್ಪದ ದೀಪ ಹಚ್ಚಿ, ತುಳಸಿ ಅರ್ಪಿಸಿ ಪೂಜೆ ಸಲ್ಲಿಸಿ.

ಶರದ್ ಪೂರ್ಣಿಮಾ ಮಹತ್ವವೇನು?
ಶರದ್‌ ಪೂರ್ಣಿಮಾ ಬಳಿಕ ಚಳಿಗಾಲ ಶುರುವಾಗುವುದು, ಮಳೆಗಾಲ ಕಳೆದು ಚಳಿಗಾಲ ಶುರುವಾಗುವುದು, ಹಾಗಾಗಿ ಈ ದಿನ ಲಜ್ಷ್ಮಿ ಪೂಜೆಯಿಂದ ಈ ದಿನ ಶುರುವಾಗುವುದು.

ಈ ದಿನ ಮಾಡುವ ದಾನ ಧರ್ಮಕ್ಕೆ ತುಂಬಾನೇಮಹತ್ವವಿದೆ
ಈದಿನ ಬಡವರಿಗೆ ಆಹಾರ, ಬಟ್ಟೆ, ಅಗ್ಯತವಿರುವ ವಸ್ತುಗಳನ್ನು ದಾನ ಮಾಡಬೇಕು ಎಂದು ಹೇಳಲಾಗುವುದು. ಈ ಶುಭ ದಿನದಲ್ಲಿ ದಾನ ಮಾಡುವುದರಿಂದ ಧಾರ್ಮಿಕ ದೃಷ್ಟಿಯಿಂದ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ, ಹೀಗೆ ಮಾಡುವುದರಿಂದ ಪುಣ್ಯದ ಫಲ ಹೆಚ್ಚುವುದು, ನಮ್ಮ ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ.

ತುಂಬಾ ಕಡೆ ಶರದ್‌ ಪೂರ್ಣಿಮಾವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡುವುದು
ಹೊಸ ಋತುವಿನ ಆರಂಭ, ಈ ದಿನದಂದು ಪಾಯಸ ಮಾಡಿ, ಹುಣ್ಣಿಮೆಯ ಬೆಳತಿಂಗಳಿನಲ್ಲಿ ಎಲ್ಲರು ಜೊತೆಯಾಗಿ ಸೇರಿ ತಿನ್ನುವ ಸಂಪ್ರದಾಯವಿರುತ್ತದೆ. ಮನೆ ಮುಂದೆ ರಂಗೋಲಿ ಹಾಕಿ ದೀಪ ಬೆಳಗಿ , ಎಲ್ಲರೂ ಜೊತೆಯಾಗಿ ಸಂತೋಷ-ಸಂಭ್ರಮದಿಂದ ಈ ದಿನ ಆಚರಿಸಲಾಗುವುದು.

ಶರದ್ ಪೂರ್ಣಿಮಾ ದಿನಾಂಕ: ಅಕ್ಟೋಬರ್ 16

ಪೂರ್ಣಿಮಾ ತಿಥಿ ಪ್ರಾರಂಭ ರಾತ್ರಿ:08:04ಕ್ಕೆ
ಪೂರ್ಣಿಮಾ ತಿಥಿ ಮುಕ್ತಾಯ ಅಕ್ಟೋಬರ್ 17 ಸಂಜೆ 04:55ಕ್ಕೆ
ಚಂದ್ರೋದಯ:ಅಕ್ಟೋಬರ್ 16 ಸಂಜೆ 05:13ಕ್ಕೆ
ಈ ಚಂದ್ರ ಚಂದ್ರನು 16 ಕಲಶದ ಹೊಳಪಿನಿಂದ ಕೂಡಿರುತ್ತಾನೆ, ಈ ದಿನ ಲಕ್ಷ್ಮಿಯ ಆರಾಧನೆ ಮಾಡುವುದರಿಂದ ಸಂಪತ್ತು, ಸಮೃದ್ಧಿ ಹೆಚ್ಚಾಗುವುದು ಎಂದು ನಂಬಲಾಗಿದೆ.

ಶರದ್ ಪೂರ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಬಾರದು ಎಂದು ಹೇಳಲಾಗುವುದು

ಈ ದಿನ ನೀವು ಪಾತ್ರೆ ಹಾಗೂ ಕಬ್ಬಿಣದ ವಸ್ತುಗಳನ್ನು ದಾನ ಮಾಡಬಾರದು
ಈ ರೀತಿ ಮಾಡಿದರೆ ದರಿದ್ರ ಉಂಟಾಗುವುದು ಎಂದು ಹೇಳಲಾಗುವುದು. ಕಬ್ಬಿಣದ ವಸ್ತುಗಳನ್ನು ದಾನ ಮಾಡಿದರೆ ಕಷ್ಟ ಅನುಭವಿಸುವಂತಾಗುವುದು ಎಂಬ ನಂಬಿಕೆಯಿದೆ.

ಹಾಲಿನ ಉತ್ಪನ್ನಗಳು
ಶರದ್‌ ಪೂರ್ಣಿಮೆಯಂದು ಮೊಸರು, ಮಜ್ಜಿಗೆ ಈ ಬಗೆಯ ವಸ್ತುಗಳನ್ನು ದಾನ ಮಾಡಬಾರದು ಎಂದು ಹೇಳಲಾಗುವುದು. ಹಾಲಿನ ಉತ್ಪನ್ನಗಳನ್ನು ದಾನ ಮಾಡಿದರೆ ಶುಕ್ರದೋಷ ಉಂಟಾಗುವುದು ಎಂದು ಹೇಳಲಾಗುವುದು. ಶುಕ್ರದೋಷ ಉಂಟಾದರೆ ಆರ್ಥಿಕ ತೊಂದರೆಗಳು, ಕೆಲಸದಲ್ಲಿ ಅಡೆತಡೆ ಈ ಬಗೆಯ ಸಮಸ್ಯೆ ಉಂಟಾಗುವುದು.

ಉಪ್ಪು
ಉಪ್ಪು ದಾನ ಮಾಡಬೇಡಿ, ಉಪ್ಪು ಕೊಡುವುದರಿಂದ ಅಥವಾ ಉಪ್ಪು ಸಾಲ ಪಡೆಯುವುದರಿಂದ ನಕರಾತ್ಮಕ ಪರಿಣಾಮ ಬೀರುವುದು ಎಂದು ಹೇಳಲಾಗುವುದು.

ಹೊಸ ಋತು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಚೈತನ್ಯ, ಹುಮ್ಮಸು ತರಲಿ, ಸಮೃದ್ಧಿ, ಸಂಪತ್ತು ತುಂಬಿರಲಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Sharad Purnima: Don't Gove These Things To Other On Sharad Purnima

Sharad Purnima: What should do what not on sharad Purnima, read o
X
Desktop Bottom Promotion