Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಕುಂಭ ರಾಶಿಯಲ್ಲಿ ಶನಿ ಸಾಡೇಸಾತಿ ಎರಡನೇ ಹಂತ ಶುರು: ಈ ಅವಧಿ ತುಂಬಾ ಕಠಿಣ, ಪರಿಹಾರವೇನು?
ಶನಿ ಸಾಡೇಸಾತಿ ಮನುಷ್ಯನಿಗೆ ಬಂದರೆ ಅವನು ಆ ಏಳೂವರೆ ವರ್ಷ ಮನುಷ್ಯ ತುಂಬಾನೇ ಕಷ್ಟಪಡಬೇಕಾಗುತ್ತದೆ. ಅದರಲ್ಲಿಯೂ ಮೊದಲ ಹಂತ ಕಷ್ಟಕರ, ಎರಡನೇ ಹಂತ ತುಂಬಾನೇ ಕಠಿಣ ಎಂದು ಹೇಳಲಾಗುವುದು.
ಎರಡನೇ ಹಂತದಲ್ಲಿ ಶನಿಯು ಪಡಬಾರದ ಕಷ್ಟವನ್ನು ನೀಡುತ್ತಾನೆ, ಈ ಅವಧಿಯಲ್ಲಿ ಅವಮಾನವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುವುದು. ಹಾಗಾಗಿ ಶನಿ ಸಾಡೇಸಾತಿ ಎಂದರೆ ಎಂಥವರೂ ಬೆಚ್ಚಿ ಬೀಳುತ್ತಾರೆ. ಶನಿ ಮೆಚ್ಚಿಕೊಳ್ಳುವ ಕಾರ್ಯಗಳನ್ನು ಮಾಡಿ ಶನಿ ಸಾಡೇಸಾತಿಯ ಕಷ್ಟದಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಪಡೆಯಬಹುದು ಅಷ್ಟೇ...

ಇದೀಗ ಮೂರು ರಾಶಿಯಲ್ಲಿ ಶನಿ ಸಾಡೇಸಾತಿ ನಡೆಯುತ್ತಿದೆ
ಶನಿ ಸಾಡೇಸಾತಿ ಮಕರ, ಕುಂಭ ರಾಶಿಯಲ್ಲಿ ನಡೆಯುತ್ತಿದೆ, ಅದರಲ್ಲಿ ಮಕರ ರಾಶಿಯವರಿಗೆ ಶನಿಯ ಮೂರನೇ ಹಂತ ನಡೆಯುತ್ತಿದೆ, ಹೀಗಾಗಿ ಈ ಅವಧಿ ತೊಂದರೆಯಿಲ್ಲ, ಮೀನ ರಾಶಿಯವರಿಗೆ ಮೊದಲಿನ ಹಂತ ನಡೆಯುತ್ತಿದೆ, ಕುಂಭ ರಾಶಿಯವರಿಗೆ ಶನಿ ಸಾಡೇಸಾತಿ ಎರಡನೇ ಹಂತ ಶುರುವಾಗಿದೆ.
ಶನಿ ಸಾಡೇಸಾತಿ ಎರಡನೇ ಹಂತ ಅತ್ಯಂತ ಕಠಿಣ
ಶನಿ ಸಾಡೇಸಾತಿ ಎರಡನೇ ಹಂತದಲ್ಲಿ ಇದ್ದಾಗ ಆ ವ್ಯಕ್ತಿಯು ಒಂದರ ಹಿಂದೆ ಮತ್ತೊಂದು ಎಂಬಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾನೆ. ಈ ಅವಧಿಯಲ್ಲಿ ದೈಹಿಕ, ಮಾನಸಿಕ ಸಮಸ್ಯೆಗಳು ಎದುರಾಗುವುದು, ಆರ್ಥಿಕವಾಗಿ ತುಂಬಾ ಕಷ್ಟಗಳನ್ನು ಅನುಭವಿಸಬೇಕು. ಈ ಸಮಯದಲ್ಲಿ ಆ ವ್ಯಕ್ತಿಯನ್ನು ಯಾರಾದರೂ ಮೋಸ ಮಾಡಬಹುದು, ಮಾನಸಿಕವಾಗಿ ತುಂಬಾನೇ ನೋವುಂಟಾಗುವುದು. ಈ ಅವಧಿಯಲ್ಲಿ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುವುದು ಕಷ್ಟವಾಗುವುದು.
ಶನಿಸಾಡೇಸಾತಿ ಕಷ್ಟದಿಂದ ಪಾರಾಗಲು ಯಾವ ಪರಿಹಾರ ಒಳ್ಳೆಯದು?
ಕೆಲ ಜ್ಯೋತಿಷ್ಯ ಪರಿಹಾರ ಮಾಡಿ, ಪ್ರತಿ ಶನಿವಾರ ಶನಿದೇವಾಲಯಕ್ಕೆ ಭೇಟಿ ನೀಡಿ ನೀಡಿ, ಎಳ್ಳೆಣ್ಣೆ ದಾನ ಮಾಡಿ. ಎಳ್ಳೆಣ್ಣೆಯಲ್ಲಿ ನಿಮ್ಮ ಮುಕ ನೋಡಿ ನಂತರ ದಾನ ಮಾಡಿ.
ಬಡವರಿಗೆ ನಿಮ್ಮ ಕೈಯಲ್ಲಾದ ಸಹಾಯ ಮಾಡಿ.
ಈ ದಿನ ಉಪವಾಸವಿದ್ದು ಶನಿಯನ್ನು ಆರಾಧಿಸಿ, ಶನಿ ಮಂತ್ರವನ್ನು ಪಠಿಸಿ
ಶಿವನಿಗೆ ರುದ್ರಾಭಿಷೇಕ ಮಾಡಿಸಿ.
ಹನುಮಾನ್ ಚಾಲೀಸ ಪಠಿಸಿ.
ಆರ್ಥಿಕ ತೊಂದರೆಗಳು ಉಂಟಾಗುವುದು: ಈ ಸಮಯದಲ್ಲಿ ಆರ್ಥಿಕ ಸಮಸ್ಯೆ ಉಂಟಾಗುವುದು, ದುಡ್ಡು ಬರಬೇಕಾಗಿರುವ ಕಡೆಯಿಂದ ಬರುವುದು ಕಷ್ಟವಾಗುವುದು, ಸಾಲ ಕೇಳಿದರೆ ಸಿಗುವುದು ಕಷ್ಟ, ಖರ್ಚು ಅಧಿಕ ಬರುವುದು, ಹೀಗೆ ಆರ್ಥಿಕವಾಗಿಯೂ ಸವಾಲಿನ ಸಮಯ, ಹಣದ ಚಿಂತೆ ತುಂಬಾನೇ ಕಾಡಲಿದೆ, ಯಾವ ಕೆಲಸದಲ್ಲಿಯೂ ನಿರೀಕ್ಷೆಯಂತೆ ಲಾಭ ಸಿಗಲ್ಲ.
ಆರೋಗ್ಯ: ಈ ಅವಧಿಯಲ್ಲಿ ಆರೊಗ್ಯ ಸಂಬಂಧಿತ ಸಮಸ್ಯೆ ಕಂಡು ಬರುವುದು. ಆಸ್ಪತ್ರೆಗೆ ತುಂಬಾನೇ ಹಣ ಖರ್ಚಾಗುವುದು.
ಶನಿ ಮಂತ್ರ
ಓಂ ಹಿಲ್ಮ್ ಶಾಮ್ ಶನಾಯ ನಮ" "ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ" "ಓಂ ಶಾಮ್ ಶನೇಶ್ಚಾರ ನಮಃ" "ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications