Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಅಪರೂಪದ ಶನಿ ಪುಷ್ಯ ಯೋಗ: ಕಷ್ಟನಿವಾರಣೆಗೆ ಶನಿಗೆ ಈ ಪರಿಹಾರ ಮಾಡುವುದು ಒಳ್ಳೆಯದು
ನವೆಂಬರ್ ತಿಂಗಳ ಮೊದಕಲ ಶನಿವಾರ ಬಹಳ ವಿಶೇಷವಾಗಿದೆ. ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳಲ್ಲಿ ಪುಷ್ಯ ನಕ್ಷತ್ರವನ್ನು ತುಂಬಾ ಶ್ರೇಷ್ಠ ನಕ್ಷತ್ರವೆಂದು ಪರಿಗಣಿಸಲಾಗಿದೆ. ಈ ಶನಿವಾರದಂದು ಶನಿ ಪುಷ್ಯ ಯೋಗದ ಅಪರೂಪದ ಸಂಯೋಜನೆ ನಡೆಯಲಿದೆ. ಈ ರೀತಿಯ ಅಪರೂಪದ ಘಟನೆ ವರ್ಷದಲ್ಲಿ ಒಂದು ಬಾರಿ ಮಾತ್ರ ಸಂಭವಿಸಲಿದೆ, ಅದರಲ್ಲೂ ಈ ಬಾರಿ ಶನಿ ಪುಷ್ಯ ಹಾಗೂ ರವಿ ಪುಷ್ಯ ಏರ್ಪಟ್ಟಿದೆ, 400 ವರ್ಷಗಳಿಗೊಮ್ಮೆ ಸಂಭವಿಸುವುದು ಎಂದು ಹೇಳಲಾಗುವುದು.
ಅಲ್ಲದೆ ಈ ದಿನ ಶನಿಯೂ ರಾಶಿ ಬದಲಾವಣೆ ಮಾಡುತ್ತಿರುವುದು ಕಾಕತಾಳೀಯವೇ ಸರಿ. ಜ್ಯೋತಿಷ್ಯದಲ್ಲಿ ಗುರು ಪುಷ್ಯ ಯೋಗದಷ್ಟೇ ಶನಿ ಪುಷ್ಯ ಯೋಗವೂ ಮಂಗಳಕರ ಹಾಗೂ ಅಪರೂಪದ ಯೋಗವಾಗಿದೆ.

ಈ ಶನಿ ಪುಷ್ಯ ಯೋಗದಲ್ಲಿ ದೀರ್ಘಕಾಲದ ಹೂಡಿಕೆ ಮಾಡುವುದು ಬಹಳ ಮಂಗಳಕರವೆಂದು ಹೇಳಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪುಷ್ಯ ನಕ್ಷತ್ರದಲ್ಲಿ ಮಾಡುವ ಪೂಜೆ ಮತ್ತು ಪರಿಹಾರಗಳು ಕೂಡ ಶುಭ ಫಲವನ್ನು ನೀಡುತ್ತವೆ. ಈ ಬಾರಿ ಇಂದು ಅಂದರೆ ಜೂನ್ 4, ಶನಿವಾರದಂದು ಪುಷ್ಯ ನಕ್ಷತ್ರದ ನಿಮಿತ್ತ ಶನಿ-ಪುಷ್ಯರ ಶುಭ ಸಂಯೋಗ ಉಂಟಾಗಿದೆ.
ಶನಿ ಪುಷ್ಯ ಯೋಗದಂದ ಈ ಪರಿಹಾರಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು:
* ಈ ದಿನ ಹನುಮಂತನನ್ನು ಆರಾಧಿಸಿ.
* ಶನಿವಾರದಂದು ಹನುಮಾನ್ ಚಾಲೀಸಾ ಅಥವಾ ಹನುಮಾನ್ ಬಹು ಅಷ್ಟಕವನ್ನು ಪಠಿಸುವುದರಿಂದ ಶನಿಯ ಬಾಧೆಯಿಂದ ಪರಿಹಾರ ಸಿಗುವುದು.
* ಆಲದ ಮರದ ಎಲೆಯಲ್ಲಿ ಓಂ ಶಂ ಶನೈಶ್ಚರಾಯ ನಮಃ ಎಂಬ ಮಂತ್ರವನ್ನು ಬರೆದು ಈ ಮಂತ್ರವನ್ನು 108 ಬಾರಿ ಪಠಿಸುತ್ತಾ ಆಲದ ಮರಕ್ಕೆ ಸುತ್ತು ಹಾಕಿ.
* ಈ ದಿನ ಶನಿ ದೇವರಿಗೆ ಸಾಸಿವೆಯೆಣ್ಣೆ ಅರ್ಪಿಸಿ.
* ಅನಾಥರಿಗೆ ದಾನ ಮಾಡಿ
* ಕಪ್ಪು ಎಳ್ಳು, ಕಪ್ಪು ಕಂಬಳಿಗಳನ್ನು ದಾನ ಮಾಡಿ
ಶನಿ ಮಂತ್ರಗಳನ್ನು ಪಠಿಸಿ
ಶನಿ ಮಹಾಮಂತ್ರ
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ|
ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ||''
ಶನಿ ಗಾಯತ್ರಿ ಮಂತ್ರ
ಓಂ ಭಗಭವಾಯ ವಿದ್ಮಹೈಂ ಮೃತ್ಯುರೂಪಾಯ ಧೀಮಹಿ ತನ್ನೋ ಶನಿಃ ಪ್ರಚೋದಯಾತ್|
ಓಂ ಶನ್ನೋದೇವೀರ್ಭೀಷ್ಟಯ ಆಪೋ ಭವಂತು ಪೀತಯೇ ಶಂಯೋರ್ಭಿಶ್ರವಂತು ನಃ|''
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications