Latest Updates
-
ಬೆಳಗ್ಗೆ ಮಾಡಿದ ರೊಟ್ಟಿ ಸಂಜೆಯಾದರೂ ಫ್ರೆಶ್ & ಸಾಫ್ಟ್ ಆಗಿರುತ್ತೆ! ಅಮ್ಮನ ಸೂಪರ್ ಕಿಚನ್ ಟಿಪ್ಸ್ ಇಲ್ಲಿದೆ -
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ಇಲ್ಲಿದೆ -
ಉಳಿದ ಅನ್ನದಿಂದ ಮಾಡಿ ಗರಿಗರಿಯಾದ ಕುರ್ಕುರೆ! ಹೊರಗಿನ ಸ್ನ್ಯಾಕ್ಗೂ ಮೀರಿದ ರುಚಿ.. ಮಾಡೋದು ಹೇಗೆ? -
30 ವರ್ಷ ದಾಟಿದ್ರಾ? ಈ 5 ಅಭ್ಯಾಸಗಳನ್ನು ತಕ್ಷಣ ಬದಲಿಸಿ.. ಜೀವನಪೂರ್ತಿ ಫಿಟ್ ಆಗಿರಿ! -
Happy Holi 2026: ನಿಮ್ಮ ಪ್ರೀತಿಪಾತ್ರರಿಗೆ ಕಳಿಸಿ ಈ ಸ್ಪೆಷಲ್ ಶುಭಾಶಯಗಳು! ಸ್ನೇಹ, ಪ್ರೀತಿ, ಸಂತೋಷ ತುಂಬಿದ ಮೆಸೇಜ್ ಇಲ್ಲಿವೆ -
ಹಸಿ ಬಟಾಣಿ ಬಳಸಿ ಖಸ್ತ ಪೂರಿ ಹೀಗೆ ಮಾಡಿ.. ಪ್ರತಿ ಪುರಿಯೂ ಹೂವಿನಂತೆ ಉಬ್ಬಿ ಬರುತ್ತೆ! ಸೂಪರ್ ರುಚಿ, 15 ನಿಮಿಷಗಳಲ್ಲಿ ರೆಡಿ! -
ಈ ದಿನ ಕೌಟುಂಬಿಕ ಸುಖ ಪ್ರಾಪ್ತಿ! ಪ್ರೇಮ ಜೀವನದಲ್ಲಿ ತೊಂದರೆಗಳು -
March 02 Horoscope: ಸಾಲದ ಕುರಿತಾದ ಚಿಂತೆಯೊಂದು ದೂರಾಗಲಿದೆ! -
ಮಾರ್ಚ್ನಲ್ಲಿ ಸೂರ್ಯ-ಕೇತು ಸಮನ್ವಯ ಚಲನೆ: ಮೂರು ರಾಶಿಯವರ ಬದುಕಲ್ಲಿ ಅದೃಷ್ಟ! -
Weekly Horoscope: ಮಾರ್ಚ್ 01 ರಿಂದ ಮಾರ್ಚ್ 07ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಸಫಲಾ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು, ತಲೆಸ್ನಾನ ಮಾಡಬಾರದು
ವರ್ಷದ ಮೊದಲ ಏಕಾದಶಿ ಸಫಲಾ ಏಕಾದಶಿಯನ್ನು ಜನವರಿ 1ರಂದು ಆಚರಿಸಲಾಗುತ್ತಿದೆ. ಸಫಲಾ ಏಕಾದಶಿಯಂದು ಉಪವಾಸದ ಜೊತೆಗೆ ಕೆಲವು ವ್ರತ ನಿಯಮಗಳನ್ನು ಪಾಲಿಸಿದರೆ ವಿಷ್ಣು ಕೃಪೆಯಿಂದ ನೀವು ಬಯಸಿದ್ದು ನೆರವೇರುವುದು. ಸಫಲಾ ಏಕಾದಶಿಯಂದು ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಬ್ರಹ್ಮಚರ್ಯೆ ಪಾಲಿಸಬೇಕು: ಏಕಾದಶಿಯ ದಿನದಂದು ಸದಾ ವಿಷ್ಣುವಿನ ಸ್ಮರಣೆಯಲ್ಲಿರಬೇಕು. ಆದ್ದರಿಂದ ಈ ದಿನ ಬ್ರಹ್ಮಚರ್ಯೆ ನಿಯಮ ಪಾಲಿಸಬೇಕು, ದಂಪತಿ ವಿಷ್ಣುವಿನ ಸ್ಮರಣೆ ಮಾಡುತ್ತಾ ಕಾಲ ಕಳೆಯಬೇಕು.
ಯಾರಿಗೂ ನೋವುಂಟು ಮಾಡಬೇಡಿ: ಈ ದಿನ ನಿಮ್ಮ ಮಾತುಗಳಿಂದ, ನಡವಳಿಕೆಯಿಂದ ಯಾರನ್ನೂ ದೂರ ಮಾಡಬೇಡಿ. ಬೇರೆಯವರಿಗೆ ನೋವುಂಟು ಮಾಡಿದರೆ ಪೂಜೆ ಫಲ ಸಿಗುವುದಿಲ್ಲ.
ನೀರು ಕುಡಿಯಬೇಡಿ: ಈ ದಿನ ಸಂಪೂರ್ಣ ಉಪವಾಸವಿದ್ದರೆ ಒಳ್ಳೆಯದು, ಕಠಿಣ ಉಪವಾಸ ಮಾಡಲು ಸಾಧ್ಯವೇ ಇಲ್ಲ ಎನ್ನುವವರು ಹಾಲು , ಹಣ್ಣು ಸೇವನೆ ಮಾಡಿ.
ಕೋಪಗೊಳ್ಳಬೇಡಿ: ಈ ದಿನ ನೀವು ಕೋಪಗೊಳ್ಳಬೇಡಿ, ನೀವು ಕೋಪಗೊಂಡರೆ ವ್ರತ ಪಾಲಿಸಿದರೂ ಅದರ ಫಲ ಸಂಪೂರ್ಣ ಫಲ ಸಿಗುವುದಿಲ್ಲ.
ಹಿಂಸೆ ಮಾಡಬಾರದು: ಈ ದಿನ ಮನುಷ್ಯರಿಗೆ ಆಗಲಿ, ಪ್ರಾಣಿಗಳಾಗಲಿ ಹಿಂಸೆ ಮಾಡಬೇಡಿ.
ಏಕಾದಶಿಯ ದಿನದಂದು ಏನು ಮಾಡಬೇಕು?
* ಈ ದಿನ ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು, ನಂತರ ಮಡಿ ಬಟ್ಟೆ ಧರಿಸಿ
* ಈ ದಿನ ಮಾಂಸ, ಮೀನು, ಬೆಳ್ಳುಳ್ಳಿ, ಮಿಟ್ಟೆ, ಮದ್ಯ ಮುಂತಾದ ತಾಮಸಿಕ ಆಹಾರ ಸೇವಿಸಬೇಡಿ.
* ಈ ದಿನ ದಾನ್ಯಗಳು, ಕಾಳುಗಳನ್ನು ಸೇವಿಸುವಂತಿಲ್ಲ.
* ಏಕಾದಶಿ ದಿನ ಬಳಸುವ ಪ್ರಸಾದಕ್ಕೆ ನೀವು ಎಣ್ಣೆ ಹಾಕಬಾರದು. ತುಪ್ಪ ಬಳಸಿ ಪ್ರಸಾದ ತಯಾರಿಸಬೇಕು.
* ಏಕಾದಶಿಯಂದು ತಲೆಸ್ನಾನ ಮಾಡಬಾರದು, ದಶಮಿಯಂದೇ ತಲೆ ಸ್ನಾನ ಮಾಡಿ.
* ವಿಷ್ಣುವಿನ ಮಂತ್ರಗಳನ್ನು ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











