Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಫಲಾ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು, ತಲೆಸ್ನಾನ ಮಾಡಬಾರದು
ವರ್ಷದ ಮೊದಲ ಏಕಾದಶಿ ಸಫಲಾ ಏಕಾದಶಿಯನ್ನು ಜನವರಿ 1ರಂದು ಆಚರಿಸಲಾಗುತ್ತಿದೆ. ಸಫಲಾ ಏಕಾದಶಿಯಂದು ಉಪವಾಸದ ಜೊತೆಗೆ ಕೆಲವು ವ್ರತ ನಿಯಮಗಳನ್ನು ಪಾಲಿಸಿದರೆ ವಿಷ್ಣು ಕೃಪೆಯಿಂದ ನೀವು ಬಯಸಿದ್ದು ನೆರವೇರುವುದು. ಸಫಲಾ ಏಕಾದಶಿಯಂದು ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಬ್ರಹ್ಮಚರ್ಯೆ ಪಾಲಿಸಬೇಕು: ಏಕಾದಶಿಯ ದಿನದಂದು ಸದಾ ವಿಷ್ಣುವಿನ ಸ್ಮರಣೆಯಲ್ಲಿರಬೇಕು. ಆದ್ದರಿಂದ ಈ ದಿನ ಬ್ರಹ್ಮಚರ್ಯೆ ನಿಯಮ ಪಾಲಿಸಬೇಕು, ದಂಪತಿ ವಿಷ್ಣುವಿನ ಸ್ಮರಣೆ ಮಾಡುತ್ತಾ ಕಾಲ ಕಳೆಯಬೇಕು.
ಯಾರಿಗೂ ನೋವುಂಟು ಮಾಡಬೇಡಿ: ಈ ದಿನ ನಿಮ್ಮ ಮಾತುಗಳಿಂದ, ನಡವಳಿಕೆಯಿಂದ ಯಾರನ್ನೂ ದೂರ ಮಾಡಬೇಡಿ. ಬೇರೆಯವರಿಗೆ ನೋವುಂಟು ಮಾಡಿದರೆ ಪೂಜೆ ಫಲ ಸಿಗುವುದಿಲ್ಲ.
ನೀರು ಕುಡಿಯಬೇಡಿ: ಈ ದಿನ ಸಂಪೂರ್ಣ ಉಪವಾಸವಿದ್ದರೆ ಒಳ್ಳೆಯದು, ಕಠಿಣ ಉಪವಾಸ ಮಾಡಲು ಸಾಧ್ಯವೇ ಇಲ್ಲ ಎನ್ನುವವರು ಹಾಲು , ಹಣ್ಣು ಸೇವನೆ ಮಾಡಿ.
ಕೋಪಗೊಳ್ಳಬೇಡಿ: ಈ ದಿನ ನೀವು ಕೋಪಗೊಳ್ಳಬೇಡಿ, ನೀವು ಕೋಪಗೊಂಡರೆ ವ್ರತ ಪಾಲಿಸಿದರೂ ಅದರ ಫಲ ಸಂಪೂರ್ಣ ಫಲ ಸಿಗುವುದಿಲ್ಲ.
ಹಿಂಸೆ ಮಾಡಬಾರದು: ಈ ದಿನ ಮನುಷ್ಯರಿಗೆ ಆಗಲಿ, ಪ್ರಾಣಿಗಳಾಗಲಿ ಹಿಂಸೆ ಮಾಡಬೇಡಿ.
ಏಕಾದಶಿಯ ದಿನದಂದು ಏನು ಮಾಡಬೇಕು?
* ಈ ದಿನ ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು, ನಂತರ ಮಡಿ ಬಟ್ಟೆ ಧರಿಸಿ
* ಈ ದಿನ ಮಾಂಸ, ಮೀನು, ಬೆಳ್ಳುಳ್ಳಿ, ಮಿಟ್ಟೆ, ಮದ್ಯ ಮುಂತಾದ ತಾಮಸಿಕ ಆಹಾರ ಸೇವಿಸಬೇಡಿ.
* ಈ ದಿನ ದಾನ್ಯಗಳು, ಕಾಳುಗಳನ್ನು ಸೇವಿಸುವಂತಿಲ್ಲ.
* ಏಕಾದಶಿ ದಿನ ಬಳಸುವ ಪ್ರಸಾದಕ್ಕೆ ನೀವು ಎಣ್ಣೆ ಹಾಕಬಾರದು. ತುಪ್ಪ ಬಳಸಿ ಪ್ರಸಾದ ತಯಾರಿಸಬೇಕು.
* ಏಕಾದಶಿಯಂದು ತಲೆಸ್ನಾನ ಮಾಡಬಾರದು, ದಶಮಿಯಂದೇ ತಲೆ ಸ್ನಾನ ಮಾಡಿ.
* ವಿಷ್ಣುವಿನ ಮಂತ್ರಗಳನ್ನು ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications