Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಸಫಲಾ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು, ತಲೆಸ್ನಾನ ಮಾಡಬಾರದು
ವರ್ಷದ ಮೊದಲ ಏಕಾದಶಿ ಸಫಲಾ ಏಕಾದಶಿಯನ್ನು ಜನವರಿ 1ರಂದು ಆಚರಿಸಲಾಗುತ್ತಿದೆ. ಸಫಲಾ ಏಕಾದಶಿಯಂದು ಉಪವಾಸದ ಜೊತೆಗೆ ಕೆಲವು ವ್ರತ ನಿಯಮಗಳನ್ನು ಪಾಲಿಸಿದರೆ ವಿಷ್ಣು ಕೃಪೆಯಿಂದ ನೀವು ಬಯಸಿದ್ದು ನೆರವೇರುವುದು. ಸಫಲಾ ಏಕಾದಶಿಯಂದು ಏನು ಮಾಡಬಾರದು, ಏನು ಮಾಡಬೇಕು ಎಂದು ನೋಡೋಣ ಬನ್ನಿ:

ಬ್ರಹ್ಮಚರ್ಯೆ ಪಾಲಿಸಬೇಕು: ಏಕಾದಶಿಯ ದಿನದಂದು ಸದಾ ವಿಷ್ಣುವಿನ ಸ್ಮರಣೆಯಲ್ಲಿರಬೇಕು. ಆದ್ದರಿಂದ ಈ ದಿನ ಬ್ರಹ್ಮಚರ್ಯೆ ನಿಯಮ ಪಾಲಿಸಬೇಕು, ದಂಪತಿ ವಿಷ್ಣುವಿನ ಸ್ಮರಣೆ ಮಾಡುತ್ತಾ ಕಾಲ ಕಳೆಯಬೇಕು.
ಯಾರಿಗೂ ನೋವುಂಟು ಮಾಡಬೇಡಿ: ಈ ದಿನ ನಿಮ್ಮ ಮಾತುಗಳಿಂದ, ನಡವಳಿಕೆಯಿಂದ ಯಾರನ್ನೂ ದೂರ ಮಾಡಬೇಡಿ. ಬೇರೆಯವರಿಗೆ ನೋವುಂಟು ಮಾಡಿದರೆ ಪೂಜೆ ಫಲ ಸಿಗುವುದಿಲ್ಲ.
ನೀರು ಕುಡಿಯಬೇಡಿ: ಈ ದಿನ ಸಂಪೂರ್ಣ ಉಪವಾಸವಿದ್ದರೆ ಒಳ್ಳೆಯದು, ಕಠಿಣ ಉಪವಾಸ ಮಾಡಲು ಸಾಧ್ಯವೇ ಇಲ್ಲ ಎನ್ನುವವರು ಹಾಲು , ಹಣ್ಣು ಸೇವನೆ ಮಾಡಿ.
ಕೋಪಗೊಳ್ಳಬೇಡಿ: ಈ ದಿನ ನೀವು ಕೋಪಗೊಳ್ಳಬೇಡಿ, ನೀವು ಕೋಪಗೊಂಡರೆ ವ್ರತ ಪಾಲಿಸಿದರೂ ಅದರ ಫಲ ಸಂಪೂರ್ಣ ಫಲ ಸಿಗುವುದಿಲ್ಲ.
ಹಿಂಸೆ ಮಾಡಬಾರದು: ಈ ದಿನ ಮನುಷ್ಯರಿಗೆ ಆಗಲಿ, ಪ್ರಾಣಿಗಳಾಗಲಿ ಹಿಂಸೆ ಮಾಡಬೇಡಿ.
ಏಕಾದಶಿಯ ದಿನದಂದು ಏನು ಮಾಡಬೇಕು?
* ಈ ದಿನ ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಬೇಕು, ನಂತರ ಮಡಿ ಬಟ್ಟೆ ಧರಿಸಿ
* ಈ ದಿನ ಮಾಂಸ, ಮೀನು, ಬೆಳ್ಳುಳ್ಳಿ, ಮಿಟ್ಟೆ, ಮದ್ಯ ಮುಂತಾದ ತಾಮಸಿಕ ಆಹಾರ ಸೇವಿಸಬೇಡಿ.
* ಈ ದಿನ ದಾನ್ಯಗಳು, ಕಾಳುಗಳನ್ನು ಸೇವಿಸುವಂತಿಲ್ಲ.
* ಏಕಾದಶಿ ದಿನ ಬಳಸುವ ಪ್ರಸಾದಕ್ಕೆ ನೀವು ಎಣ್ಣೆ ಹಾಕಬಾರದು. ತುಪ್ಪ ಬಳಸಿ ಪ್ರಸಾದ ತಯಾರಿಸಬೇಕು.
* ಏಕಾದಶಿಯಂದು ತಲೆಸ್ನಾನ ಮಾಡಬಾರದು, ದಶಮಿಯಂದೇ ತಲೆ ಸ್ನಾನ ಮಾಡಿ.
* ವಿಷ್ಣುವಿನ ಮಂತ್ರಗಳನ್ನು ಪಠಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications