Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮೇ 26ಕ್ಕೆ ಸಂಕಷ್ಟಿ ಚತುರ್ಥಿ: ಕಷ್ಟ ನಿವಾರಣೆಗೆ ಪೂಜಾ ವಿಧಾನ, ಸಂತಾನ ಭಾಗ್ಯಕ್ಕಾಗಿ ಈ ಮಂತ್ರ ಪಠಿಸಿ
ಪ್ರತಿಮಾಸ ಸಂಕಷ್ಟಿ ಚತುರ್ಥಿ ಆಚರಿಸಲಾಗುವುದು. ಸಂಕಷ್ಟಿ ಚತುರ್ಥಿ ಶ್ರೀ ಗಣೇಶ, ಲಂಭೋದರನಿಗೆ ಮೀಸಲಾದ ದಿನ. ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಮಾಡುವುದಾದರೂ ಶ್ರೀ ಗಣೇಶನಿಗೆ ಮೊದಲು ಪೂಜೆಯನ್ನು ಮಾಡಬೇಕು, ನಂತರ ಉಳಿದ ದೇವರುಗಳಿಗೆ ಮಾಡಲಾಗುವುದು.
ನಾವು ಮಾಡುವ ಪೂಜಾ ಕಾರ್ಯಗಳಾಗಲಿ, ನಾವು ಮಾಡುವ ಶುಭ ಕಾರ್ಯಗಳಾಗಲಿ ಯಾವುದೇ ವಿಘ್ನವಿಲ್ಲದೆ ನೆರವೇರಲು ಶ್ರೀಗಣೇಶನ ಆಶೀರ್ವಾದ ಕೋರುತ್ತೇವೆ.

ಇನ್ನು ಬದುಕಿನಲ್ಲಿರುವ ಸಂಕಷ್ಟಗಳನ್ನು ದೂರ ಮಾಡಲು ನಾವು ಗಣೇಶನ ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು ಎಂಬುವುದು, ಅವನ ಭಕ್ತರ ಅಚಲ ನಂಬಿಕೆ. ಶ್ರೀಗಣೇಶನನ್ನು ವಾರದಲ್ಲಿ ಬುಧವಾರದಂದು ಉಪವಾಸವಿದ್ದು ಗಣಪತಿಯನ್ನು ಆರಾಧನೆ ಮಾಡಲಾಗುವುದು, ಇನ್ನು ತಿಂಗಳಿನಲ್ಲಿ ಬರುವ ವಿನಾಯಕ ಸಂಕಷ್ಟಿ ಚತುರ್ಥಿ ಗಣೇಶನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನವಾಗಿದೆ. ಈ ದಿನದಲ್ಲಿ ಪೂಜೆ ಮಾಡಿದರೆ ವಿಶೇಷ ಫಲ ಸಿಗಲಿದೆ ಎಂದು ಹೇಳಲಾಗುವುದು.
ಮೇ 26ಕ್ಕೆ ಏಕದಂತ ಸಂಕಷ್ಟಿ ಚತುರ್ಥಿ
ಈ ಮೇ 26ಕ್ಕೆ ಸಂಕಷ್ಟಿ.
ಚತುರ್ಥಿ ತಿಥಿ ಪ್ರಾರಂಭ ಸಂಜೆ 06:06ರಿಂದ ಪ್ರಾರಂಭ
ಚತುರ್ಥಿ ತಿಥಿ ಮುಕ್ತಾಯ: ಮೇ 27 ಸಂಜೆ 04:53ರವರೆಗೆ
ಚಂದ್ರೋದಯ ಸಮಯ: ರಾತ್ರಿ 10:12ರವರೆಗೆ
ಕುಟುಂಬದ ಶ್ರೇಯೋಭುವೃದ್ಧಿಗಾಗಿ ಸಂಕಷ್ಟಿ ಚತುರ್ಥಿ ಆಚರಿಸಲಾಗುವುದು
ಈ ಸಂಕಷ್ಟಿಯನ್ನು ಆಚರಣೆ ಮಾಡುವುದರಿಂದ ಕುಟುಂಬಕ್ಕೆ ತುಂಬಾನೇ ಒಳಿತಾಗುವುದು. ಮನೆಯಲ್ಲಿ ಇರುವ ಕಷ್ಟಗಳು ದೂರಾಗುವುದು, ಮಾನಸಿಕ ನೆಮ್ಮದಿ ಇರಲಿದೆ, ಆರ್ಥಿಕ ಸಮಸ್ಯೆಗಳು ದೂರಾಗಲಿದೆ, ಆರೋಗ್ಯ ಚೆನ್ನಾಗಿರಲಿದೆ. ಸಂತಾನ ಭಾಗ್ಯ ದೊರೆಯಲಿದೆ. ಹೀಗಾಗಿ ಸಕಲ ಕಷ್ಟಗಳು ದೂರಮಾಡು, ನಮ್ಮ ಕೆಲಸಗಳು ಸುಲಭವಾಗಿ ನೆರವೇರುವಂತೆ ಮಾಡು ಎಂದು ಪ್ರಾರ್ಥಿಸಿದರೆ ಶ್ರೀ ಗಣೇಶ ನಮ್ಮೆಲ್ಲಾ ಸಮಸ್ಯೆ ನಿವಾರಿಸುತ್ತಾನೆ ಎಂಬ ನಂಬಿಕೆ.
ಸಂತಾನ ಭಾಗ್ಯಕ್ಕಾಗಿ ದಂಪತಿ ಜೊತೆಗೂಡಿ ಪೂಜೆಯನ್ನು ಮಾಡಬೇಕು?
ಮಗುವನ್ನು ಬಯಸಿರುವ ದಂಪತಿ ಸಂಕಷ್ಟಿಯಂದು ಉಪವಾಸವಿದ್ದು ಶ್ರೀ ಗಣೇಶನ ಆರಾಧನೆ ಮಾಡಬೇಕು, ಹೀಗೆ ಆರಾಧಿಸುವುದರಿಂದ ಸಂತಾನಭಾಗ್ಯ ದೊರೆಯಲಿದೆ.
ಸಂತಾನ ಭಾಗ್ಯಕ್ಕಾಗಿ ಈ ಮಂತ್ರಗಳನ್ನು ಪಠಿಸಿ
ನಮೋಽಸ್ತು ಗಣನಾಥಾಯ ಸಿದ್ಧಿಬುದ್ಧಿಯುತಾಯ ಚ | ಸರ್ವಪ್ರದಾಯ ದೇವಾಯ ಪುತ್ರವೃದ್ಧಿಪ್ರದಾಯ ಚ || ೧ ||
ಗುರೂದರಾಯ ಗುರವೇ ಗೋಪ್ತ್ರೇ ಗುಹ್ಯಾಸಿತಾಯ ತೇ | ಗೋಪ್ಯಾಯ ಗೋಪಿತಾಶೇಷಭುವನಾಯ ಚಿದಾತ್ಮನೇ || ೨ ||
ವಿಶ್ವಮೂಲಾಯ ಭವ್ಯಾಯ ವಿಶ್ವಸೃಷ್ಟಿಕರಾಯ ತೇ | ನಮೋ ನಮಸ್ತೇ ಸತ್ಯಾಯ ಸತ್ಯಪೂರ್ಣಾಯ ಶುಂಡಿನೇ || ೩ ||
ಏಕದಂತಾಯ ಶುದ್ಧಾಯ ಸುಮುಖಾಯ ನಮೋ ನಮಃ | ಪ್ರಪನ್ನಜನಪಾಲಾಯ ಪ್ರಣತಾರ್ತಿವಿನಾಶಿನೇ || ೪ ||
ತೇ ಸರ್ವೇ ತವ ಪೂಜಾರ್ಥಂ ನಿರತಾಃ ಸ್ಯುರ್ವರೋಮತಃ | ಪುತ್ರಪ್ರದಮಿದಂ ಸ್ತೋತ್ರಂ ಸರ್ವಸಿದ್ಧಿಪ್ರದಾಯಕಮ್ || ೬ || ಇತಿ ಸಂತಾನ ಗಣಪತಿ ಸ್ತೋತ್ರಂ ಸಂಪೂರ್ಣಮ್ ||
ಶರಣಂ ಭವ ದೇವೇಶ ಸಂತತಿಂ ಸುದೃಢಾ ಕುರು | ಭವಿಷ್ಯಂತಿ ಚ ಯೇ ಪುತ್ರಾ ಮತ್ಕುಲೇ ಗಣನಾಯಕ || ೫ ||
ಗರಿಕೆಯನ್ನು ಅರ್ಪಿಸಿ
ಶ್ರೀ ಗಣೇಶನ ಪೂಜೆಗೆ ನೀವು ಬರಿ ಗರಿಕೆ ಅರ್ಪಿಸಿದರೆ ಸಾಕು. ಯಾವುದೇ ವಸ್ತುಗಳನ್ನು, ಹಣ್ಣು-ಹಂಪಲುಗಳನ್ನು ಅರ್ಪಿಸಿ ಗರಿಕೆಯನ್ನು ಅರ್ಪಿಸದಿದ್ದರೆ ಗಣೇಶನ ಪೂಜೆ ಸಂಪೂರ್ಣವಾಗಲ್ಲ, ಆದ್ದರಿಂದ ಗಣೇಶನಿಗೆ ಗರಿಕೆಯನ್ನು ಈ ದಿನ ತಪ್ಪದೇ ಅರ್ಪಿಸಿ.
ಓಂ ಗಮ್ ಗಣಪತಯೇ ನಮಃ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











