Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
Raksha Bandhan 2025: ಈ ದಿನ ಭದ್ರ ಕಾಲ ಇದ್ಯಾ? ರಾಖಿ ಕಟ್ಟಿದರೆ ಏನಾಗುತ್ತೆ? ಇಲ್ಲಿದೆ ಆ ರಹಸ್ಯ
ರಕ್ಷಾ ಬಂಧನವು ಸಹೋದರ ಸಹೋದರಿಯರ ನಡುವಿನ ಪ್ರೀತಿ, ಬಾಂಧವ್ಯದ ಸಂಕೇತ. ರಕ್ಷಾ ಬಂಧನ (Raksha Bandhan 2025) ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಕ್ಷೆ (ರಾಖಿ) ಕಟ್ಟುತ್ತಾರೆ. ಅದರಂತೆ ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ. ಈ ವರ್ಷ ಶ್ರಾವಣ ಪೂರ್ಣಿಮೆಯ ದಿನದಂದು ಭದ್ರದ ಯೋಗವು ಸೃಷ್ಟಿಯಾಗುತ್ತಿದೆ. ಆದ್ದರಿಂದ ರಾಖಿ ಕಟ್ಟುವ ಸಮಯವನ್ನು ಎಚ್ಚರಿಕೆಯಿಂದ ಆರಿಸುವುದು ಬಹಳ ಮುಖ್ಯ. ಭದ್ರ ಕಾಲದಲ್ಲಿ (Raksha Bandhan 2025 Bhadra Time) ರಾಖಿ ಕಟ್ಟುವುದು ಅಶುಭವೆಂದು ಹೇಳಲಾಗಿದೆ. ಹೀಗಾಗಿ, ಶುಭ ಮುಹೂರ್ತದಲ್ಲಿ ರಕ್ಷಾ ಸೂತ್ರವನ್ನು ಕಟ್ಟಬೇಕು. ಹಾಗಿದ್ರೆ, ರಾಖಿ ಕಟ್ಟಲು ಶುಭ ಸಮಯ ಯಾವುದು? ಇಲ್ಲಿದೆ ಮಾಹಿತಿ.
ಭದ್ರ ಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ವರ್ಜಿತ ಎಂದು ಪರಿಗಣಿಸಲಾಗುತ್ತದೆ. ಇದು ಅಶುಭ ಮತ್ತು ವಿಘ್ನಕಾರಿ. ಕಳೆದ ಕೆಲವು ವರ್ಷಗಳಲ್ಲಿ ರಕ್ಷಾ ಬಂಧನದ ಸಮಯದಲ್ಲಿ ಭದ್ರ ಕಾಲದ ಕಾರಣದಿಂದಾಗಿ ರಾಖಿ ಕಟ್ಟುವ ಸಮಯವನ್ನು ಬದಲಾಯಿಸಬೇಕಾಯಿತು. ಈ ಕಾರಣದಿಂದ ಎಲ್ಲರೂ ಸರಿಯಾದ ಮುಹೂರ್ತಕ್ಕಾಗಿ ಕಾಯುತ್ತಾರೆ. ಈ ವರ್ಷವೂ ರಕ್ಷಾ ಬಂಧನದ ದಿನ ಭದ್ರಾ ಇರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ, ಭದ್ರದ ಸ್ಥಿತಿ ಮತ್ತು ಶುಭ ಮುಹೂರ್ತದ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಮುಖ್ಯ. ಈ ಮೂಲಕ ರಕ್ಷಾ ಬಂಧನವನ್ನು ಶುಭ ರೀತಿಯಲ್ಲಿ ಆಚರಿಸಬಹುದು.

ರಕ್ಷಾ ಬಂಧನ ಯಾವಾಗ?
ಈ ವರ್ಷ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 9 ರಂದು ಶನಿವಾರ ಆಚರಿಸಲಾಗುವುದು. ಯಾಕಂದ್ರೆ, ಅದೇ ದಿನ ಶ್ರಾವಣ ಮಾಸದ ಹುಣ್ಣಿಮೆ ಇದೆ. ಪಂಚಾಂಗದ ಪ್ರಕಾರ, ಹುಣ್ಣಿಮೆ ತಿಥಿಯು ಆಗಸ್ಟ್ 8 ರಂದು ಮಧ್ಯಾಹ್ನ 2.12 ರಿಂದ ಪ್ರಾರಂಭವಾಗಿ ಆಗಸ್ಟ್ 9 ರಂದು ಮಧ್ಯಾಹ್ನ 1.24 ರವರೆಗೆ ಇರುತ್ತದೆ. ಈ ಅವಧಿಯಲ್ಲಿ ರಾಖಿ ಕಟ್ಟಲು ಶುಭ ಸಮಯ ಇರುತ್ತದೆ.
ರಕ್ಷಾ ಬಂಧನದ ಮೇಲೆ ಭದ್ರ ಕಾಲ ಇದೆಯೇ?
ಈ ವರ್ಷ ರಕ್ಷಾ ಬಂಧನದ ಬಗ್ಗೆ ಜನರ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆ ಎಂದರೆ, ಈ ಬಾರಿ ಭದ್ರ ಕಾಲ ಇದೆಯೇ? ಏಕೆಂದರೆ ಭದ್ರದ ಸಮಯದಲ್ಲಿ ರಾಖಿ ಕಟ್ಟುವುದು ನಿಷೇಧವೆಂದು ಪರಿಗಣಿಸಲಾಗಿದೆ. ಆಗಸ್ಟ್ 8 ರಂದು ಮಧ್ಯಾಹ್ನ 2.12ಕ್ಕೆ ಭದ್ರ ಕಾಲವೂ ಪ್ರಾರಂಭವಾಗುತ್ತದೆ. ಈ ಭದ್ರವು ಆಗಸ್ಟ್ 9 ರಂದು ಬೆಳಗ್ಗೆ 1.52 ರವರೆಗೆ ಇರುತ್ತದೆ. ಆದರೂ, ಇದು ಪಾತಾಳ ಲೋಕದ ಭದ್ರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಇದರ ಪರಿಣಾಮವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಶುಭ ಕಾರ್ಯಕ್ಕಾಗಿ ಇದು ಮುಗಿದ ನಂತರವೇ ರಾಖಿ ಕಟ್ಟುವುದು ಉತ್ತಮ.
ಈ ಸಮಯ ಶುಭ ಮತ್ತು ಫಲಪ್ರದ
ಈ ವರ್ಷ ರಕ್ಷಾ ಬಂಧನದ ದಿನದಂದು ಒಂದು ಒಳ್ಳೆಯ ವಿಷಯವೆಂದರೆ, ಭದ್ರ ಕಾಲವು ಸೂರ್ಯೋದಯಕ್ಕೆ ಮುಂಚೆಯೇ ಮುಕ್ತಾಯವಾಗುತ್ತದೆ. ಆಗಸ್ಟ್ 9 ರಂದು ಶ್ರಾವಣ ಹುಣ್ಣಿಮೆಯೊಂದಿಗೆ ರಕ್ಷಾ ಬಂಧನವನ್ನು ಆಚರಿಸಲಾಗುವುದು. ಆ ಸಮಯದಲ್ಲಿ ಭದ್ರದ ನೆರಳು ಇರುವುದಿಲ್ಲ. ಆದ್ದರಿಂದ, ನೀವು ಪೂರ್ಣ ಭಕ್ತಿಯಿಂದ ಮತ್ತು ಶುಭ ಮುಹೂರ್ತದಲ್ಲಿ ರಾಖಿ ಹಬ್ಬವನ್ನು ಆಚರಿಸಬಹುದು. ಶಾಸ್ತ್ರಗಳ ಪ್ರಕಾರ, ರಕ್ಷಾ ಬಂಧನವನ್ನು ಭದ್ರ ರಹಿತ ಸಮಯದಲ್ಲಿ ಆಚರಿಸುವುದು ಶುಭ ಮತ್ತು ಫಲಪ್ರದ ಎಂದು ಪರಿಗಣಿಸಲಾಗಿದೆ.
ಭದ್ರ ಕಾಲದಲ್ಲಿ ರಾಖಿ ಏಕೆ ಕಟ್ಟಬಾರದು?
ಭದ್ರವನ್ನು ಹಿಂದೂ ಧರ್ಮದಲ್ಲಿ ಅಶುಭ ಸಮಯ ಎಂದು ಪರಿಗಣಿಸಲಾಗಿದೆ. ವಿಶೇಷವಾಗಿ, ಇದು ಭೂಮಿ ಅಥವಾ ಪಾತಾಳ ಲೋಕದಲ್ಲಿ ನೆಲೆಸಿದಾಗ. ಈ ಸಮಯದಲ್ಲಿ ರಕ್ಷಾ ಬಂಧನ ಹಬ್ಬ ಆಚರಣೆಯನ್ನು ತಪ್ಪಿಸಲಾಗುತ್ತದೆ. ಭದ್ರ ಕಾಲದಲ್ಲಿ ಮಾಡಿದ ಮಂಗಳ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಅನಪೇಕ್ಷಿತ ಬಿಕ್ಕಟ್ಟುಗಳು ಉಂಟಾಗಬಹುದು. ರಕ್ಷಾ ಬಂಧನದ ಮೇಲೆ ಭದ್ರ ಇದ್ದರೆ, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವುದಿಲ್ಲ. ಏಕೆಂದರೆ, ಹಾಗೆ ಮಾಡುವುದರಿಂದ ಅವರ ಜೀವನದಲ್ಲಿ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ಒಂದು ವೇಳೆ ಭದ್ರ ಸ್ವರ್ಗದಲ್ಲಿದ್ದರೆ, ರಾಖಿ ಕಟ್ಟುವಲ್ಲಿ ಯಾವುದೇ ದೋಷವಿಲ್ಲ. ಹೀಗಾಗಿ, ಭದ್ರ ಕಾಲದ ಸ್ಥಿತಿಯನ್ನು ತಿಳಿದುಕೊಂಡೇ ರಕ್ಷಾ ಬಂಧನದ ಮುಹೂರ್ತವನ್ನು ನಿರ್ಧರಿಸಲಾಗುತ್ತದೆ.
ರಾಖಿ ಕಟ್ಟಲು ಶುಭ ಸಮಯ
ಈ ವರ್ಷ ರಕ್ಷಾ ಬಂಧನವನ್ನು ಆಗಸ್ಟ್ 9 ರಂದು ಆಚರಿಸಲಾಗುವುದು. ರಾಖಿ ಕಟ್ಟಲು ಅತ್ಯಂತ ಶುಭ ಸಮಯ ಎಂದರೆ ಬೆಳಗ್ಗೆ 5.47 ರಿಂದ ಮಧ್ಯಾಹ್ನ 1.24 ರವರೆಗೆ. ಈ ಸಮಯದಲ್ಲಿ ನೀವು ಒಟ್ಟು 7 ಗಂಟೆ 37 ನಿಮಿಷಗಳ ಕಾಲ ಸಹೋದರನಿಗೆ ರಕ್ಷೆ (ರಾಖಿ) ಕಟ್ಟಬಹುದು. ಈ ಮುಹೂರ್ತವನ್ನು ವಿಶೇಷವಾಗಿ ಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನ ಭದ್ರ ಕಾಲ ಮುಕ್ತಾಯವಾಗುತ್ತದೆ. ಒಟ್ಟಾರೆಯಾಗಿ, ಭದ್ರ ಕಾಲವು ಬೆಳಗ್ಗೆ ಮುಗಿಯುವುದರಿಂದ ಶುಭ ಮುಹೂರ್ತದಲ್ಲಿ ರಾಖಿ ಕಟ್ಟಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












