19 ವರ್ಷಗಳ ಬಳಿಕ ಮಕರ ಸಂಕ್ರಾಂತಿಯಂದು ಬಂದಿದೆ ಪುಷ್ಯಾ ನಕ್ಷತ್ರ: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ

ಸೂರ್ಯ ಮಕರ ರಾಶಿಗೆ ಸಂಚರಿಸಿದಾಗ ಮಕರ ಸಂಕ್ರಾಂತಿ, ಮಕರ ಸಂಕ್ರಾಂತಿ ದಿನ ಸನಾತನ ಧರ್ಮದಲ್ಲಿ ತುಂಬಾನೇ ವಿಶೇಷವಾದ ದಿನ. ಈ ದಿನ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಲಾಗುವುದು. ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲಾಗುವುದು, ವೈದಿಕ ದೃಷ್ಟಿಯಿಂದಲೂ ಈ ದಿನ ಶುಭವಾಗಿದೆ. ಈ ದಿನ ಅತ್ಯಂತ ಶುಭ ಯೋಗಗಳು ಸಂಭವಿಸಲಿದೆ, ಇದರಿಂದಾಗಿ ಈ ಮಕರ ಸಂಕ್ರಾಂತಿ ಈ ರಾಶಿಗಳಿಗೆ ತುಂಬಾನೇ ಅದೃಷ್ಟಕರವಾಗಿದೆ:

ಮಕರ ಸಂಕ್ರಾಂತಿಯಂದು ಬಂದಿದೆ ಪುಷ್ಯಾ ನಕ್ಷತ್ರ, ಇದರಿಂದಾಗಿ ಈ ದಿನ ಮತ್ತಷ್ಟು ಶುಭವಾಗಿದೆ:

Pushya Nakshtra In Makara Sankranti

ಕರ್ಕ ರಾಶಿ
ಮಕರ ಸಂಕ್ರಾಂತಿಯಂದು ಪುಷ್ಯಾ ನಕ್ಷತ್ರ ಬಂದಿದ್ದು ಈ ಯೋಗವು ಕರ್ಕ ರಾಶಿಯವರಿಗೆ ಅದ್ಭುತ ಪ್ರಯೋಜನ ತಂದಿದೆ. ಈ ಮಕರ ಸಂಕ್ರಾಂತಿಯ ಬಳಿಕ ಕರ್ಕ ರಾಶಿಯವರ ಬದುಕಿನಲ್ಲಿ ಅದ್ಭುತ ಪ್ರಯೋಜನ ಪಡೆಯುತ್ತೀರಿ. ಹೊಸ ವ್ಯಾಪಾರ- ವ್ಯವಹಾರ ಪ್ರಾರಂಭಿಸಲು ಈ ದಿನ ತುಂಬಾ ಉತ್ತಮವಾಗಿದೆ. ಕುಟುಂಬ ಬದುಕು ತುಂಬಾ ಚೆನ್ನಾಗಿರಲಿದೆ. ವ್ಯಾಪಾರಸ್ಥರು ಉತ್ತಮ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಏನಾದರು ಬದಲಾವಣೆ ಮಾಡಲು ಬಯಸುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಕೆಲಸ ಹುಡುಕುತ್ತಿದ್ದರೆ ಬಯಸಿದ ಕೆಲಸ ಸಿಗಲಿದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಮಕರ ಸಂಕ್ರಾಂತಿಯ ಅವಧಿ ತುಂಬಾನೇ ಪ್ರಯೋಜನಕಾರಿಯಾಗಿದೆ. ಮನೆಯಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಆರ್ಥಿಕವಾಗಿ ಉತ್ತಮವಾಗಿದೆ, ಉಳಿತಾಯ ಮಾಡಲು ಸಾಧ್ಯವಾಗುವುದು. ಹೂಡಿಕೆ ಮಾಡಿದ್ದರೆ ಈ ಅವಧಿಯಲ್ಲಿ ನೀವು ಉತ್ತಮ ಪ್ರಯೊಜನ ಪಡೆಯುತ್ತೀರಿ. ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆಯೇ ಪೂರ್ಣಗೊಳ್ಳುವುದರಿಂದ ಲಾಭ ದೊರೆಯಲಿದೆ.

ಮೀನ ರಾಶಿ
ಮಿನ ರಾಶಿಯವರಿಗೆ ಈ ಮಕರ ಸಂಕ್ರಾಂತಿ ಸಂಪತ್ತಿನ ಭಾಗ್ಯ ಹೊತ್ತು ಬಂದಿದೆ. ಮಕರ ಸಂಕ್ರಾಂತಿ ಬಳಿಕ ನಿಮ್ಮ ಆರ್ಥಿಕ ಬದುಕಿನಲ್ಲಿ ಉತ್ತಮ ಪ್ರಯೊಜನ ಪಡೆಯುತ್ತೀರಿ. ವ್ಯಾಪಾರಸ್ಥರು ಉತ್ತಮ ಪ್ರಯೊಜನ ಪಡೆಯುತ್ತೀರಿ. ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆವಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡ ಬರಲಿದೆ.

ಮಕರ ಸಂಕ್ರಾಂತಿಯಂದು ಶಿವ ಯೋಗ ಕೂಡ ಬಂದಿದೆ
ಮಕರ ಸಂಕ್ರಾಂತಿಯ ದಿನ ಶಿವ ಯೋಗವೂ ಇದೆ, ಈ ದಿನದಂದು ಬೆಳಗ್ಗೆ 09:03ರಿಂದ ಸಂಜೆ 5:46ರವರೆಗೆ ಇದೆ, ಈ ಅವಧಿಯಲ್ಲಿ ಪೂಜೆಯನ್ನು ಸಲ್ಲಿಸಲಾಗುವುದು. ಇನ್ನು ಈ ದಿನದಂದು ಮಹಾಪುಣ್ಯ ಅವಧಿ ಬೆಳಗ್ಗೆ 09:03ರಿಂದ 10:48ರವರೆಗೆ ಇದೆ.

ಮಕರ ಸಂಕ್ರಾಂತಿ ಪ್ರಾಮುಖ್ಯತೆ:

ಮಕರ ಸಂಕ್ರಾಂತಿ ವರ್ಷದ ಮೊದಲ ಹಬ್ಬ, ದೇಶದೆಲ್ಲಡೆ ಈ ಹಬ್ಬವನ್ನು ಆಚರಿಸಲಾಗುವುದು, ಈ ಹಬ್ಬವನ್ನು ಸೌರಮಾನ ಕ್ಯಾಲೆಂಡರ್‌ ಪ್ರಕಾರ ಆಚರಣೆ ಮಾಡಲಾಗುವುದು. ಈ ಹಬ್ಬದಲ್ಲಿ ಎಳ್ಳು-ಬೆಲ್ಲ ಸವಿದು ಹಬ್ಬದ ಸಂಭ್ರಮ ಪಡುತ್ತಾರೆ, ಧಾರ್ಮಿಕವಾಗಿ ನೋಡುವುದಾದರೆ ಈ ದಿನ ಮಹತ್ವದ್ದಾಗಿದೆ. ಏಕೆಂದರೆ ಈ ದಿನದಿಂದ ಉತ್ತಾರಾಯಣ ಪ್ರಾರಂಭ.

ಮಕರ ಸಂಕ್ರಾಂತಿಯಿಂದ 6 ತಿಂಗಳು ಉತ್ತರಾಯಣ, ಉತ್ತರಾಯಣನ್ನು ಮೋಕ್ಷ ಪಡೆಯಲು ಉತ್ತಮ ಸಮಯ ಎಂದು ಪರಿಗಣಿಸಲಾಗಿದೆ, ಮಹಾಭಾರತದಲ್ಲಿ ಭೂಷ್ಮ ಉತ್ತಾರಾಯಣ ಕಾಲದವರೆಗೆ ಕಾದು ದೇಹ ತ್ಯಾಗ ಮಾಡಿದರು ಎಂಬ ಉಲ್ಲೇಖವಿದೆ.

ಈ ಹಬ್ಬವನ್ನು ಕರ್ನಾಟ, ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾಂತಿಯೆಂದು, ತಮಿಳುನಾಡಿನಲ್ಲಿ ಪೊಂಗಲ್ ಎಂದು, ಕೇರಳದಲ್ಲಿ ಮಕರ ವಿಳಕ್ಕು ಎಂದು ಆಚರಿಸಲಾಗುವುದು. ಈ ದಿನ ಗಾಳಿಪಟ ಹಾರಿಸುವ ಸ್ಪರ್ಧೆ ಹಲವು ಕಡೆ ನಡೆಯಲಿದೆ. ಸುಗ್ಗಿಯ ಈ ಹಬ್ಬ ಬದುಕಿನಲ್ಲಿ ಸಕಲ ಐಶ್ವರ್ಯ ತರಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.........

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Pushya Nakshtra In Makara Sankranti 2025: Lucky To These Zodiac Signs

Pushya Nakshtra In Makara Sankranti 2025: These 3 Zodiac Gets More Benefits, read on.......
X
Desktop Bottom Promotion