Latest Updates
-
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು
1954ರ ಬಳಿಕ ವಿಶೇಷ ದೀಪಾವಳಿ: ಹಲವು ಯೋಗದಿಂದ ಬದಲಾಗಲಿದೆ ಈ ರಾಶಿಯವರ ಬದುಕು!
ದೀಪಾವಳಿಯ ಸಂದರ್ಭದಲ್ಲಿ ಹಲವು ರೀತಿಯ ಗ್ರಹಗಳ ಸಂಚಾರ ಹಾಗೆ ಬದಲಾವಣೆಗಳ ನೋಡಬಹುದು. 70 ವರ್ಷದ ಬಳಿಕ ಇದು ವಿಶೇಷ ದೀಪಾವಳಿ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಹಲವು ಗ್ರಹಗಳಲ್ಲಿನ ಸ್ಥಾನಪಲ್ಲಟವು ಶುಭ ಹಾಗೂ ಅಶುಭ ಲಾಭಗಳ ತರುವುದು ನೋಡಬಹುದು. ಹಾಗೆ ಹಲವು ರಾಶಿಗಳಿಗೆ ಈ ದೀಪಾವಳಿಯು ವಿಶೇಷ ರೀತಿಯ ಶುಭಗಳಿಗೆ ಕಾರಣವಾಗುತ್ತಿದೆ. ಈ ದೀಪಾವಳಿಯಲ್ಲಿ ಹಂಸರಾಜ ಮತ್ತು ಬುಧಾದಿತ್ಯ ರಾಜಯೋಗದಂತಹ ಅಪರೂಪದ ಯೋಗ ಉಂಟಾಗುತ್ತಿದೆ.
ಈ ಮೊದಲು ಈ ಹಂಸರಾಜ ಹಾಗೂ ಬುಧಾದಿತ್ಯ ರಾಜಯೋಗವು 1954ರ ದೀಪಾವಳಿಯಲ್ಲಿ ರೂಪುಗೊಂಡಿತ್ತು, ಇದಾದ ಬಳಿಕ ಈಗ ಮತ್ತೆ ಅಪರೂಪದ ದಿನದಲ್ಲಿ ರೂಪುಗೊಳ್ಳುತ್ತಿದೆ. ಗುರುವು ತನ್ನ ಉತ್ತುಂಗ ರಾಶಿಯಾದ ಕರ್ಕ ರಾಶಿಯಲ್ಲಿ ಸಾಗುತ್ತದೆ. ಸೂರ್ಯ ಮತ್ತು ಬುಧರ ಸಂಯೋಗವು ತುಲಾ ರಾಶಿಯಲ್ಲಿದ್ದು, ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸಲಿದೆ.

ಹಾಗೆ ಸೂರ್ಯನು ತುಲಾ ರಾಶಿಯಲ್ಲಿ ಚಲಿಸಲಿದ್ದು, ತುಲಾ ರಾಶಿಯಲ್ಲಿ ಮಂಗಳ ಮತ್ತು ಸೂರ್ಯನ ಸಂಯೋಗವು ಆದಿತ್ಯ ಮಂಗಳ ಯೋಗವನ್ನು ಸೃಷ್ಟಿಸುತ್ತದೆ. ಕನ್ಯಾರಾಶಿಯಲ್ಲಿ ಚಂದ್ರ ಮತ್ತು ಶುಕ್ರರ ಸಂಯೋಗವು ಕಲಾನಿಧಿ ಯೋಗವನ್ನು ಸೃಷ್ಟಿಸುತ್ತದೆ. ಹಾಗೆ ದೀಪಾವಳಿಯ ಸಮಯದಲ್ಲಿಯೇ ಸರ್ವಾರ್ಥ ಸಿದ್ದಿ ಯೋಗ ಕೂಡ ರೂಪುಗೊಳ್ಳುತ್ತಿದೆ.
ಮೇಷ ಮತ್ತು ಮಿಥುನ ಸೇರಿದಂತೆ ಐದು ರಾಶಿ ಜನರಿಗೆ ಈ ದೀಪಾವಳಿ ಶುಭ ತರಲಿದೆ. ಹಾಗಾದ್ರೆ ಈ ದೀಪಾವಳಿಯ ಬಳಿಕ ಯಾರ ಬದುಕು ಸಮೃದ್ಧಿಯಾಗಲಿದೆ. ಹಾಗಾದ್ರೆ ಈ ದೀಪಾವಳಿಯ ಬಳಿಕ ಯಾರಿಗೆ ಶುಭ ಅನ್ನೋದನ್ನು ನೋಡೋಣ.
ಮೇಷ ರಾಶಿ
ದೀಪಾವಳಿಯಂದು ಮೇಷ ರಾಶಿಯವರು ಬಹಳಷ್ಟು ಸಂತೋಷದಿಂದ ಆಶೀರ್ವದಿಸಲ್ಪಡುತ್ತಾರೆ. ಈ ದೀಪಾವಳಿಯಲ್ಲಿ ಆದಿತ್ಯ ಮಂಗಳ ಯೋಗ ಹಾಗೆ ಬುಧಾದಿತ್ಯ ಯೋಗ ರೂಪುಗೊಳ್ಳುತ್ತದೆ. 7ನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ನಿಮ್ಮ ಹಲವು ವಿಚಾರಗಳಲ್ಲಿ ಧನಾತ್ಮಕ ರೀತಿಯಾಗಿ ಬದಲಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶುಭವಾಗುತ್ತಿದೆ. ಹಾಗೆ ಇಲ್ಲಿಯವರೆಗೆ ಪರಿಹರಿಸಲಾಗದೆ ಉಳಿಸಿಕೊಂಡಿದ್ದ ಕೆಲಸಗಳನ್ನು ಪೂರ್ಣ ಮಾಡಹುದು. ನಿರುದ್ಯೋಗಿ ಯುವಕ ಯುವತಿಯರಿಗೆ ಈ ದೀಪಾವಳಿಯ ಬಳಿಕ ಅವಕಾಶಗಳು ಹುಡುಕಿ ಬರಲಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ದೀಪಾವಳಿ ಹಬ್ಬವು ನಿಮಗೆ ಸಮೃದ್ಧಿಯನ್ನು ತರಲಿದೆ. ದೀಪಾವಳಿಯ ಬಳಿಕ ನಿಮ್ಮ ಅದೃಷ್ಟ ಬದಲಾಗಲಿದೆ. ನೀವು ಆಸ್ತಿ, ನಿವೇಶನ, ಜಮೀನು ಖರೀದಿ, ಹೊಸ ಉದ್ಯಮದಂತಹ ವಿಚಾರದಲ್ಲಿ ತೊಡಗಿದ್ದರೆ ಶುಭವಾಗಲಿದೆ. ಅನೇಕರಿಗೆ ಈ ಸಮಯವು ಲಾಭಗಳ ತರುವ ಆದಾಯ ಹೊಂದಲು ಕಾರಣವಾಗಲಿದೆ. ಬಹಳ ವರ್ಷಗಳಿಂದ ಬಯಸಿದಂತಹ ವಿಚಾರವೊಂದು ಕೈಗೂಡಲಿದೆ. ವಾಹನ ಲಾಭವಿದೆ. ನಿಮ್ಮ ಮನೆಗೆ ಅಗತ್ಯವಾಗಿ ಬೇಕಿದ್ದ ವಸ್ತು ದೀಪಾವಳಿಯ ಬಳಿಕ ಬಂದು ಸೇರಲಿದೆ.
ಕರ್ಕ ರಾಶಿ
ದೀಪಾವಳಿಯ ಸಂದರ್ಭದಲ್ಲಿ ಕರ್ಕ ರಾಶಿ ಜನರು ಹಂಸ ರಾಜ್ಯಯೋಗದಿಂದ ಪ್ರಯೋಜನ ಪಡೆಯುತ್ತಾರೆ. ಗುರುವು ತನ್ನ ಉತ್ತುಂಗ ರಾಶಿಯಾದ ಕರ್ಕ ರಾಶಿಯಲ್ಲಿ ಸಾಗುತ್ತಾನೆ. ಇದು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಕಾರಣವಾಗಲಿದೆ. ಅದ್ರಲ್ಲೂ ನಿಮ್ಮ ಹಲವು ಹಣಕಾಸಿನ ವಿಚಾರಗಳು, ಆರ್ಥಿಕ ಸ್ಥಿತಿಗಳಲ್ಲಿ ಸುಧಾರಣೆ ತರಲು ಕಾರಣವಾಗಲಿದೆ.
ಕನ್ಯಾ ರಾಶಿ
ದೀಪಾವಳಿಯ ಸಂದರ್ಭದಲ್ಲಿ ಕನ್ಯಾ ರಾಶಿ ಜನರು ಕಲಾನಿಧಿ ಯೋಗದ ಶುಭ ಸಂಯೋಜನೆಯನ್ನು ಅನುಭವಿಸುತ್ತಾರೆ. ವೃತ್ತಿ ಕ್ಷೇತ್ರ ಹಾಗೆ ನಿಮ್ಮ ಉದ್ಯೋಗದಲ್ಲಿ ಸಕಾರಾತ್ಮಕ ಬೆಳವಣಿಗೆ ನೋಡಬಹುದು. ಅವಿವಾಹಿತರಲ್ಲಿ ವಿವಾಹ ಯೋಗ ಕಾಣಿಸಲಿದೆ. ಹಾಗೆ ಹೊಸ ಮನೆ ಖರೀದಿ ಅಥವಾ ನಿರ್ಮಾಣ ಸಂಬಂಧವಾಗಿ ನಿಮ್ಮ ಪರವಾದ ವಿಚಾರಗಳು ನಡೆಯಲಿದೆ.
ಮಕರ ರಾಶಿ
ದೀಪಾವಳಿಯ ನಂತರ ಮಕರ ರಾಶಿಯವರು ಸಂಪತ್ತು ಮತ್ತು ಸಮೃದ್ಧಿಯನ್ನು ಅನುಭವಿಸಬಹುದು. ಪೂರ್ಣ ಪ್ರಮಾಣದಲ್ಲಿ ನಿಮ್ಮ ಆದಾಯವು ಉಳಿತಾಯ ಕಾಣಬಹುದು. ಅವಿವಾಹಿತರಲ್ಲಿ ವಿವಾಹ ಭಾಗ್ಯ ಇರಲಿದೆ. ನೀವು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಹೊಂದಿರುತ್ತೀರಿ. ನೀವು ಬಹಳಷ್ಟು ಜ್ಞಾನವನ್ನು ಪಡೆಯುತ್ತೀರಿ. ನಿಮ್ಮ ಮಾತು ಕೂಡ ಸಿಹಿಯಾಗಿರುತ್ತದೆ.



Click it and Unblock the Notifications











