Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ನವೆಂಬರ್ ಮಾಸದಲ್ಲಿ ಈ 10 ದಿನಗಳು ಹಿಂದೂ ಧರ್ಮದ ಪ್ರಕಾರ ತುಂಬಾನೇ ಮಹತ್ವದ್ದಾಗಿದೆ
ನವೆಂಬರ್ ಮಾಸದ ಮೊದಲ ದಿನವೇ ದೀಪಾವಳಿ ಹಬ್ಬದ ಸಡಗರದಿಂದ ಶುರುವಾಗಲಿದೆ, ಅದಾದ ಬಳಿಕಕಾರ್ತಿಕ ಮಾಸ ಶುರು, ಕಾರ್ತಿಕ ಮಾಸದ ಅಷ್ಟೂ ದಿನಗಳು ವಿಶೇಷವಾದದ್ದೇ ಅದರಲ್ಲಿಯೂ ಪ್ರತಿ ಕಾರ್ತಿಕ ಸೋಮವಾರ ಶಿವ ಭಕ್ತ ಪಾಲಿಗೆ ತುಂಬಾ ವಿಶೇಷವಾದ ದಿನ.
ನವೆಂಬರ್ ಮಾಸದ ಬಹುತೇಕ ದಿನಗಳು ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವದ್ದಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ವಿಶೇಷ ದಿನಗಳ ಬಗ್ಗೆ ನೋಡೋಣ:

ನವೆಂಬರ್ 1 ದೀಪಾವಳಿ
ದೀಪಾವಳಿಯಂದು ಹಣತೆಗಳನ್ನು ಹಚ್ಚಿ ಸಂಭ್ರಮಿಸಲಾಗುವುದು, ಶ್ರೀ ಕೃಷ್ಣನು ಈ ದಿನ ನನಗೆ ಅತ್ಯಂತ ಇಷ್ಟವಾದ ದಿನ, ಈ ದಿನದಂದು ಜನರುದೀಪಗಳನ್ನು ಹಚ್ಚಿ ಸಂತೋಷದಿಂದ ಕಳೆಯುತ್ತಾರೆ ಎಂದು ಹೇಳಿರುವುದಾಗಿ ಹೇಳಲಾಗಿದೆ. ಈ ದಿನ ಶ್ರೀಗಣೇಶ ಹಾಗೂ ಲಕ್ಷ್ಮಿಯನ್ನು ಆರಾಧಿಸಲಾಗುವುದು. ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ ಎಂದು ನಂಬಲಾಗಿದೆ.
ಗೋರ್ವಧನ ಪೂಜೆ: ನವೆಂಬರ್ 2
ದೀಪಾವಳಿ ಬಳಿಕ ಗೋರ್ವಧನ ಪೂಜೆ ಮಾಡಲಾಗುವುದು8, ಈ ದಿನ ಶ್ರೀಕೃಷ್ಣನ ಆರಾಧನೆ ಮಾಡಲಾಗುವುದು. ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧದದ ಸಂಕೇತವಾಗಿ ಈ ದಿನ ಆಚರಿಸಲಾಗುವುದು. ಕಾರ್ತಿಕ ಮಾಸದ ಶುಕ್ಲಪಕ್ಷದ ಪ್ರತಿಪಾದದಲ್ಲಿ ಗೋವರ್ಧನ ಪೂಜೆ ಮಾಡಲಾಗುವುದು. ಗೋವರ್ಧನ ಬೆಟ್ಟ ಮಾಡಿ ವಿವಿಧ ಬಗೆಯ ಭಕ್ಷ್ಯಗಳನ್ನು ಮಾಡಿ ಗೋವರ್ಧನ ಬೆಟ್ಟಕ್ಕೆ ಅರ್ಪಿಸಿ ಗೋವರ್ಧನ ಪೂಜೆ ನೆರವೇರಿಸಲಾಗುವುದು.
ಸೂರ್ಯ ಷಷ್ಠಿ: ನವೆಂಬರ್ 7
ಈ ದಿನ ಕೂಡ ಧಾರ್ಮಿಕ ದೃಷ್ಟಿಯಿಂದ ತುಂಬಾನೇ ಮಹತ್ವವಾದ ದಿನವಾಗಿದೆ. ದೀಪಾವಳಿ ಆಗಿ 6ನೇ ದಿನಕ್ಕೆ ಷಷ್ಠಿ ಪೂಜೆ ಅಥವಾ ಸೂರ್ಯ ಷಷ್ಠಿ ಪೂಜೆ ಮಾಡಲಾಗುವುದು. ಈ ದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ ಸೂfಯ ಮಂತ್ರಗಳನ್ನು ಪಠಿಸಲಾಗುವುದು.
ದೇವೋತ್ಥಾನಿ ಏಕಾದಶಿ: ನವೆಂಬರ್ 12
ಶ್ರೀ ವಿಷ್ಣುವಿನ ಆರಾಧನೆಗೆ ಮೀಸಲಾದ ದಿನ ಇದಾಗಿದೆ. ಇದು ಧಾರ್ಮಿಕ ದೃಷ್ಟಿಯಿಂದಮುಖ್ಯವಾಗಿದೆ. ಚಾರ್ತುಮಾಸದಲ್ಲಿ ನಿದ್ದೆಗೆ ಜಾರಿದ ಶ್ರೀ ವಿಷ್ಣು ದೇವೋತ್ಥಾನಿ ಏಕಾದಶಿಗೆ ಎಚ್ಚರವಾಗುತ್ತಾನೆ ಎಂದು ಹೇಳಲಾಗುವುದು, ಹೀಗಾಗಿ ಈ ದಿನ ತುಂಬಾನೇ ವಿಶೇಷವಾಗಿದೆ.
ಪ್ರದೋಷ ವ್ರತ: ನವೆಂಬರ್ 13
ಕಾರ್ತಿಕ ಮಾಸ ಶಿವನಿಗೆ ಮೀಸಲಾದ ತಿಂಗಳು, ಕಾರ್ತಿಕ ಮಾಸದಲ್ಲಿ ಬರುವ ಪ್ರದೋಷ ವ್ರತ ಇನ್ನು ಹೆಚ್ಚಿನ ಫಲಕಾರಿಯಾಗಿದೆ. ಈ ದಿನ ಉಪವಾಸವಿದ್ದು ಪ್ರದೋಷ ವ್ರತ ಮಾಡುತ್ತಾರೆ.
ಕಾರ್ತಿಕ ಪೂರ್ಣಿಮಾ: ನವೆಂಬರ್ 15
ಕಾರ್ತಿಕ ಪೂರ್ಣಿಮಾ ಕೂಡ ಧಾರ್ಮಿಕ ದಷ್ಟಿಯಿಂದ ಪ್ರಮುಖವಾದ ದಿನವಾಗಿದೆ. ಕಾರ್ತಿಕ ಪೂರ್ಣಿಮೆಯಂದು ಕೃತಿಕಾ ನಕ್ಷತ್ರ ಬಂದರೆ ಮಹಾಕಾರ್ತಿಕಿ ಎಂದು ಕರೆಯಲಾಗುವುದು. ಈ ದಿನ ಶ್ರೀವಿಷ್ಣುಗೆ ವಿಶೇಷ ಆರಾಧನೆ ಮಾಡಲಾಗುವುದು.
ವೃಶ್ಚಿಕ ಸಂಕ್ರಾಂತಿ : ನವೆಂಬರ್ 16
ನವೆಂಬರ್ 16ಕ್ಕೆ ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಬರುತ್ತದೆ. ಈಸೂರ್ಯ ಪ್ರಭಾವ ಪ್ರತಿಯೊಂದು ರಾಶಿಗಳ ಮೇಲೂ ಇರುತ್ತದೆ.
ಸಂಕಷ್ಠಿ ಚತುರ್ಥಿ: ನವೆಂಬರ್ 18
ಕಾರ್ತಿಕ ಮಾಸದಲ್ಲಿ ಈ ದಿನದಂದು ವಿಘ್ನ ನಿವಾರಕನಾದ ಶ್ರೀ ಕೃಷ್ಣನನ್ನು ಆರಾಧನೆ ಮಾಡಲಾಗುವುದು. ಈ ದಿನ ಶ್ರೀ ಗಣೇಶನ ಮಂತ್ರಗಳನ್ನು ಪಠಿಸಿ.
ಉತ್ಪನ್ನ ಏಕಾದಶಿ: ನವೆಂಬರ್ 26
ಈ ಏಕಾದಶಿ ಆಚರಣೆ ಮಾಡುವುದರಿಂದ ಸಂಪತ್ತು, ಸಮೃದ್ಧಿ ಹೆಚ್ಚಾಗಲಿದೆ ಎಂದು ಹೇಳಲಾಗುವುದು, ಆರ್ಥಿಕ ಸಮಸ್ಯೆವಿದ್ದರೆ ದೂರಾಗಲಿದೆ.
ಮಾಸಿಕ ಶಿವರಾತ್ರಿ: ನವೆಂಬರ್ 29
ಕಾರ್ತಿಕ ಮಾಸ ಪೂರ್ತಿ ಶಿವನ ಆರಾಧನೆ ಆಚರಣೆ ಮಾಡಲಾಗುವುದು, ಪ್ರತಿ ಮಾಸ ಮಾಸಿಕ ಶಿವರಾತ್ರಿಯಂದು ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು. ಹೀಗೆ ಇಡೀ ಮಾಸ ಧಾರ್ಮಿಕ ದೃಷ್ಟಿಯಿಂದ ತುಂಬಾ ಮುಖ್ಯವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications