Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ನವರಾತ್ರಿ: ಮನೆಯಲ್ಲಿ ದುರ್ಗೆಯ ಆರಾಧಿಸುವುದಾದರೆ ಪಾಲಿಸಬೇಕಾದ ಧಾರ್ಮಿಕ ನಿಯಮಗಳು
ನವರಾತ್ರಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ನವರಾತ್ರಿ ಘಟಸ್ಥಾಪನ ಮಾಡುವ ಮೂಲಕ ಪ್ರಾರಂಭವಾಗುವುದು. 9 ದಿನಗಳ ಆಚರಣೆಯಲ್ಲಿ ದುರ್ಗೆಯ 9 ಅವತಾರಗಳನ್ನು ಆರಾಧಿಸಲಾಗುವುದು. ಕೆಲವು ಕಡೆ ದೇವಾಲಯದಲ್ಲಿ ನವರಾತ್ರಿ ಆಚರಿಸಿದರೆ ಇನ್ನು ಕೆಲವರು ಮನೆಯಲ್ಲಿಯೇ ಆಚರಿಸುತ್ತಾರೆ. ನೀವು ನವರಾತ್ರಿ ಮನೆಯಲ್ಲಿಯೇ ಮಾಡುವುದಾದರೆ ದೇವಿಯ ಆರಾಧನೆ ಮಾಡುವ ಈ ಧಾರ್ಮಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.

ಘಟಸ್ಥಾಪನದಿಂದ ನವರಾತ್ರಿ ಪ್ರಾರಂಭ
ಘಟಸ್ಥಾಪನ ಮುಹೂರ್ತ ಪ್ರತಿಪಾದ ತಿಥಿಯಂದು ಬರುತ್ತದೆ ಘಟಸ್ಥಾಪನೆ ಮುಹೂರ್ತ ನಿಷೇಧಿತ ಚಿತ್ರ ನಕ್ಷತ್ರದಲ್ಲಿ ಬಂದಿದೆ. ಈ ಬಾರಿ ಘಟಸ್ಥಾಪನೆ ಮುಹೂರ್ತ ನಿಷೇಧಿತ ವೈಧೃತಿ ಯೋಗದಲ್ಲಿ ಬಂದಿದೆ.
ಘಟಸ್ಥಾಪನ ಮುಹೂರ್ತ: ಅಕ್ಟೋಬರ್ 15 ಬೆಳಗ್ಗೆ 06:14ರಿಂದ 10:09ರವರೆಗೆ
ಘಟಸ್ಥಾಪನ ಅಭಿಜಿತ್ ಮುಹೂರ್ತ: ಬೆಳಗ್ಗೆ 11:43ರಿಂದ ಮಧ್ಯಾಹ್ನ 12:30ರವರೆಗೆ
ಪ್ರತಿಪಾದ ತಿಥಿ ಪ್ರಾರಂಭ: ಅಕ್ಟೋಬರ್ 14 ರಾತ್ರಿ 11:24ಕ್ಕೆ
ಪ್ರತಿಪಾದ ತಿಥಿ ಮುಕ್ತಾಯ: ಅಕ್ಟೋಬರ್ 15 ಮಧ್ಯರಾತ್ರಿ 12:32ರವರೆಗೆ
ಚಿತ್ರ ನಕ್ಷತ್ರ ಪ್ರಾರಂಭ: ಅಕ್ಟೋಬರ್ 14 ಮಧ್ಯಾಹ್ನ 04:24ಕ್ಕೆ
ಚಿತ್ರ ನಕ್ಷತ್ರ ಮುಕ್ತಾಯ: ಅಕ್ಟೋಬರ್ 15 ಸಂಜೆ 06:13ಕ್ಕೆ
ವೈಧೃತಿ ಯೋಗ ಯೋಗ ಪ್ರಾರಂಭ: ಅಕ್ಟೋಬರ್ 14 ಬೆಳಗ್ಗೆ 10:25ಕ್ಕೆ
ವೈಧೃತಿ ಯೋಗ ಯೋಗ ಮುಕ್ತಾಯ: ಅಕ್ಟೋಬರ್ 15 ಬೆಳಗ್ಗೆ 10:25ಕ್ಕೆ
ಘಟಸ್ಥಾಪನ ಮಾಡುವುದೇಕೆ?
ದೇವಿ ಶಕ್ತಿಯನ್ನು ಆಹ್ವಾನಿಸಲು ಘಟಸ್ಥಾಪನ ಮಾಡಲಾಗುವುದು. ಧಾರ್ಮಿಕ ನಂಬಿಕೆಗಳ ಪ್ರಕಾರ ಕಲಶದಲ್ಲಿ ದೇವಾನು ದೇವತೆಗಳು ನೆಲೆಸಿದ್ದಾರೆ. ಈ ಕಲಶ ಪ್ರತಿಷ್ಠಾಪನೆ ಮಾಡುವುದರಿಂದ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ.
ಧಾನ್ಯಗಳನ್ನು ಬಿತ್ತಬೇಕು
ಘಟಸ್ಥಾಪನೆ ಮಾಡುವಾಗ ಧಾನ್ಯಗಳನ್ನು ಬಿತ್ತಬೇಕು. ಬಾಯಿ ಅಗಲವಾದ ಮಣ್ಣಿನ ಮಾತ್ರೆಗೆ ಮಣ್ಣು ತುಂಬಿ ಅದರಲ್ಲಿ ಧಾನ್ಯಗಳನ್ನು ಹಾಕಬೇಕು. 7 ಬಗೆಯ ಧಾನ್ಯಗಳನ್ನು ಭಿತ್ತಬೇಕು.
ಘಟಸ್ಥಾಪನ ಪೂಜಾ ವಿಧಾನ:
* ನೀವು ಶುಭ ಮುಹೂರ್ತದಲ್ಲಿ ಮಾಡಬೇಕು.
* ಧಾನ್ಯಗಳನ್ನು ಭಿತ್ತಿ
* ಪೂಜಾ ಮಣೆಯ ಮೇಲೆ ಕೆಂಪು ಬಟ್ಟೆ ಹಾಸಿ ಅದರಲ್ಲಿ ದುರ್ಗೆಯ ಫೋಟೋವನ್ನು ಪ್ರತಿಷ್ಠಾಪಿಸಿ
* ನಂತರ ಕಲಶದಲ್ಲು ಗಂಗಾಜಲ, ಗರಿಕೆ, ಅಕ್ಷತೆಕಾಳು, ನಾಣ್ಯ, ವೀಳ್ಯೆದೆಲೆ, ಕುಂಕುಮ ಹಾಕಿ. ಕಲಶಕ್ಕೆ ಮಾವಿನ ಎಲೆಗಳಿಂದ ಅಲಂಕರಿಸಿ.
* ಕೆಂಪು ಬಟ್ಟೆಯಲ್ಲಿ ಸುತ್ತಿದ ತೆಂಗಿನಕಾಯಿ ಇಡಿ.
* ಕಲಶದಲ್ಲಿ ಸ್ವಸ್ತಿಕ ಚಿಹ್ನೆ ಬಳಸಿ.
* ನಂತರ ಧಾನ್ಯ ಬಿತ್ತಿದ ಮಡಕೆ ಹಾಗೂ ಕಲಶವನ್ನು ದೇವಿಯ ಫೋಟೋದ ಮುಂದೆ ಇರಿಸಿ.
ಓಂ ಆ ಜಿಘ್ರ ಕಲಶಂ ಮಹ್ಯ ತ್ವಾ ವಿಶಾಂತ್ವಿಂದವ:. ಪುನರುರ್ಜಾ ನಿ ವರ್ತಸ್ವ ಸಾ ನ ಸಹಸ್ರಾನ್ ಧುಕ್ಷ್ವೋರುಧರಾ ಪಯಸ್ವತೀ ಪುನರ್ಮಾ ವಿಷ್ಟದಾಯಿಃ ॥
ಈ ಮಂತ್ರ ಪಠಿಸಿ.
ಧಾನ್ಯಗಳನ್ನು ಬಿತ್ತುವಾಗ ಈ ಮಂತ್ರಗಳನ್ನು ಪಠಿಸಿ
ಓಂ ಧಾನ್ಯಮಸಿ ಧೀನುಹಿ ದೇವಾನ್ ಪ್ರಾಣಾಯ ತ್ಯೋ ದಾನಾಯ ತ್ವಾ ವ್ಯಾನಯ ತ್ವಾ । ಧರ್ಗಮನು ಪ್ರಸೀತಿಮಾಯುಷೇ ಧಾ ದೇವೋ ವಃ ಸವಿತಾ ಹಿರಣ್ಯಪಾಣಿಃ ಪ್ರತಿ ಗರ್ಭಿಣಿ, ಪಾಣಿನಾ ಚಕ್ಷುಷೇ ತ್ವಾ ಮಾಸಮಂ ಪಯೋಸ್ಸಿ ।
ಕಲಶವನ್ನು ಇಡುವಾಗ ಈ ಮಂತ್ರ ಪಠಿಸಿ
ಓಂ ಯಾಃ ಫಲಿನಿರಿಯಾ ಅಫಲಾ ಅಪುಷ್ಪ ಯಾಶ್ಚ ಪುಷ್ಪಿಣಿಃ । ಬೃಹಸ್ಪತಿಪ್ರಸೂತಸ್ತಾ ನೋ ಮುಂಚನ್ತ್ವಾ ಹಸಃ ।
ನೀವು ಘಟಸ್ಥಾಪನ ಮುಹೂರ್ತ ಅಥವಾ ಅಭಿಜಿತ್ ಮುಹೂರ್ತದಲ್ಲಿ ಘಟಸ್ಥಾಪನೆ ಮಾಡಬಹುದು. ದೇಹ ಹಾಗೂ ಮನಸ್ಸು ಮಡಿಯಾಗಿರಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications