Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ವಿಜಯದಶಮಿಯಂದೇ ಬುಧ-ಮಂಗಳ ಸಂಯೋಗ: 50 ವರ್ಷದ ಬಳಿಕ ವಿಶೇಷ ಯೋಗ!
ಜ್ಯೋತಿಷ್ಯ ಶಾಸ್ತ್ರದಲ್ಲಿ 9 ಗ್ರಹಗಳ ಚಲನೆಯು ಒಂದೊಂದು ರೀತಿಯಲ್ಲಿ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲು ಕೆಲವೊಂದು ಗ್ರಹಗಳ ಚಲನೆ ನೇರವಾಗಿವಾಗಿಯೂ ಹಾಗೆ ಮತ್ತೆ ಕೆಲವು ಪರೋಕ್ಷವಾಗಿಯೂ ಪರಿಣಾಮ ಉಂಟು ಮಾಡಲಿದೆ. ಗ್ರಹಗಳ ಸಂಚಾರದಿಂದ ಎಲ್ಲಾ 9 ಗ್ರಹಗಳ ಮೇಲೆಯೂ ಅದರ ಪ್ರಭಾವ ಇರಲಿದೆ.
ಹಾಗೆ ಗ್ರಹಗಳ ಸಂಯೋಗಗಳು ಶುಭ ಹಾಗೂ ಅಶುಭ ಪ್ರಯೋಜನಗಳ ತರುವುದು ಸಹ ನಾವು ನೋಡಬಹುದು. ಇನ್ನು ಒಂದು ಗ್ರಹ ಒಂದು ರಾಶಿಯಲ್ಲಿ ನಿರ್ದಿಷ್ಟ ಸಮಯದಲ್ಲಿ ಚಲಿಸುವಾಗ ಆ ರಾಶಿಯಲ್ಲಿನ ಗ್ರಹದೊಂದಿಗೆ ಸಂಯೋಗವಾಗುವುದು ನೋಡಬಹುದು. ಮಂಗಳವನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಮಂಗಳವು ಧೈರ್ಯ, ಶೌರ್ಯ, ಶಕ್ತಿ ಮತ್ತು ಧೈರ್ಯದ ಅಂಶವಾಗಿದೆ.

ಪ್ರಸ್ತುತ, ಮಂಗಳವು ತುಲಾ ರಾಶಿಯಲ್ಲಿ ಪ್ರಯಾಣಿಸುತ್ತಿದೆ. ಮತ್ತೊಂದೆಡೆ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿದ್ದು, ಬುಧನು ಈಗ ತುಲಾ ರಾಶಿ ಪ್ರವೇಶಿಸಲಿದ್ದಾನೆ. ಅಕ್ಟೋಬರ್ 2ರ ವಿಜಯದಶಮಿಯಂದು ಬುಧನು ತುಲಾ ರಾಶಿಗೆ ಚಲಿಸುತ್ತಾನೆ. ಇದು ಮಂಗಳ ಹಾಗೂ ಬುಧನ ಸಂಯೋಗಕ್ಕೆ ಕಾರಣವಾಗುತ್ತಿದೆ.
ಅದ್ರಲ್ಲೂ ವಿಜಯದಶಮಿಯಂದು ಈ ಎರಡೂ ಗ್ರಹಗಳ ಸಂಯೋಗವು ವಿಶೇಷವಾಗಿರಲಿದೆ. ಈ ವಿಜಯದಶಮಿಯಂದು ಮಂಗಳ ಮತ್ತು ಬುಧನ ಸಂಯೋಗವು ತುಲಾ ರಾಶಿಯಲ್ಲಿ ಸಂಭವಿಸುತ್ತದೆ. ಈ ಸಂಯೋಗವು ಸುಮಾರು 50 ವರ್ಷಗಳ ನಂತರ ಸಂಭವಿಸುತ್ತಿದೆ. ಈ ಗ್ರಹಗಳ ಅಪರೂಪದ ಸಂಯೋಗದ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಪ್ರಭಾವ ಉಂಟುಮಾಡಲಿದೆ.
ವಿಶೇಷ ದಿನದಲ್ಲಿ ವಿಶೇಷ ಗ್ರಹಗಳ ಸಂಯೋಗವು ಹಲವು ರಾಶಿಗಳಿಗೆ ಶುಭವಾಗುತ್ತಿವೆ. ಹಲವು ರೀತಿಯ ಅದೃಷ್ಟಗಳಿಗೆ ಇದು ಕಾರಣವಾಗಲಿದೆ. ವ್ಯವಹಾರಗಳು, ಸಂತೋಷಗಳು, ಭೌತಿಕ ವಿಚಾರಗಳು, ಹಣಕಾಸು ಪರಿಸ್ಥಿತಿಗಳ ವಿಚಾರದಲ್ಲಿ ನಿಮಗೆ ಹಲವು ರೀತಿ ಅನುಕೂಲವಿದೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಇದು ಶುಭಕರ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಧನು ರಾಶಿ
ಬುಧ ಮತ್ತು ಮಂಗಳ ಗ್ರಹಗಳು ಧನು ರಾಶಿಯ 11 ನೇ ಮನೆಯಲ್ಲಿ ಸಂಯೋಗವಾಗಲಿದೆ. ಇದು ನಿಮಗೆ ಹಲವು ರೀತಿ ಅನುಕೂಲಗಳಿಗೆ ಕಾರಣವಾದರೂ ಮುಖ್ಯವಾಗಿ ನಿಮ್ಮ ಆದಾಯ ಹೆಚ್ಚಳಕ್ಕೆ ನೇರ ಕಾರಣ ಆಗಲಿದೆ. ಹೊಸ ಆದಾಯ ಮೂಲಗಳನ್ನು ನೀವು ಹುಡುಕಬಹುದು, ವ್ಯಾಪಾರಿಗಳು ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ. ಹಣಗಳಿಸುವ ಅವಕಾಶವಿದೆ. ಹೂಡಿಕೆಗಳು ಅದೃಷ್ಟದ ಕಾರಣಕ್ಕೆ ಲಾಭ ಮಾಡಲಿವೆ. ನಿಮ್ಮ ಹಳೆಯ ಸಾಲಗಳು ಮರುಪಾವತಿಯಾಗಲಿದೆ.
ಮೇಷ ರಾಶಿ
ಬುಧ ಮತ್ತು ಮಂಗಳ ಮೇಷ ರಾಶಿಯ 7ನೇ ಮನೆಯಲ್ಲಿ ಸಂಯೋಗವಾಗುತ್ತಾನೆ. ವಿವಾಹಿತರ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಜಂಟಿ ವ್ಯವಹಾರ ಮಾಡುವವರಿಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಕುಟುಂಬ ಜೀವನ ಸಂತೋಷವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ವಿದೇಶ ಪ್ರವಾಸ, ಕುಟುಂಬಸ್ಥರೊಂದಿಗೆ ಪುಣ್ಯಕ್ಷೇತ್ರಗಳ ಭೇಟಿ ನೀಡುವ ಕುರಿತು ಆಲೋಚಿಸಬಹುದು.
ಕರ್ಕ ರಾಶಿ
ಕರ್ಕ ರಾಶಿಯ 4ನೇ ಮನೆಯಲ್ಲಿ ಬುಧ ಮತ್ತು ಮಂಗಳ ಸಂಯೋಗವಾಗಲಿದ್ದಾರೆ. ಇದರಿಂದಾಗಿ ಉತ್ತಮ ಭೌತಿಕ ಸುಖಗಳನ್ನು ಪಡೆಯಲಿದ್ದಾರೆ. ಹೊಸ ಮನೆ ನಿರ್ಮಾಣ ಮತ್ತು ವಾಹನ ಖರೀದಿಸುವ ಅವಕಾಶಗಳು ಇರುತ್ತವೆ. ಉತ್ತಮ ಆರ್ಥಿಕ ಲಾಭಗಳೂ ಇರುತ್ತವೆ. ಬಹಳಷ್ಟು ಹಣವನ್ನು ಗಳಿಸುವ ಅವಕಾಶಗಳಿವೆ. ಮುಖ್ಯವಾಗಿ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ. ಪ್ರೇಮ ಸಂಬಂಧಗಳು ಮಧುರವಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications