Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಮಹಾ ಶಿವರಾತ್ರಿ: ಐಶ್ವರ್ಯ-ಯಶಸ್ವಿಗಾಗಿ ನಿಮ್ಮ ರಾಶಿ ಪ್ರಕಾರ ಶಿವನ ಆರಾಧನೆ
ಮಹಾದೇವನ ಕೃಪೆ ನಿಮ್ಮ ಮೇಲಿರಲಿ, ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಯಶಸ್ಸು ದೊರೆಯುವಂತಾಗಲಿ, ಈ ಮಹಾಶಿವರಾತ್ರಿ ನಿಮ್ಮೆಲ್ಲರ ಬದುಕಿನಲ್ಲಿ ಹೊಸ ಶಕ್ತಿ ತರಲಿ ಎಂದು ಹೇಳುತ್ತಾ ರಾಶಿ ಪ್ರಕಾರ ಶಿವನ ಆರಾಧನೆ ಹೇಗೆ ಮಾಡಬೇಕು ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ರಕ್ತಚಂದನ ಹಾಗೂ ಕೆಂಪು ಹೂವುಗಳನ್ನು ಅರ್ಪಿಸಿ, ಈ ದಿನ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ಶಿವಕೃಪೆಯಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು.

ವೃಷಭ ರಾಶಿ
ವೃಷಭ ರಾಶಿಯವರು ಮಹಾಶಿವರಾತ್ರಿಗೆ ಶಿವನಿಗೆ ಮಲ್ಲಿನ ಹೂವುಗಳನ್ನು ಅರ್ಪಿಸಿ, ರುದ್ರಾಷ್ಟಕ ಪಠಿಸಿ, ಹೀಗೆ ಮಾಡುವುದರಿಂದ ನಿಮ್ಮ ಬದುಕಿನಲ್ಲಿರುವ ಅಡೆತಡೆಗಳು ದೂರಾಗುವುದು, ನೀವು ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣಬಹುದು.
ಮಿಥುನ ರಾಶಿ
ಮೀನ ರಾಶಿಯವರು ಶಿವನಿಗೆ ಕಬ್ಬಿನ ಜ್ಯೂಸ್ ಅರ್ಪಿಸಿ, ಹೂವುಗಳನ್ನು ಅರ್ಪಿಸಿ, ಪಂಚಾಕ್ಷರಿ ಮಂತ್ರ ಪಠನೆ ಮಾಡಿ, ಹೀಗೆ ಮಾಡಿದರೆ ಶಿವಕೃಪೆಗೆ ಪಾತ್ರರಾಗುತ್ತೀರಿ.
ಕರ್ಕ ರಾಶಿ
ಶಿವನಿಗೆ ರುದ್ರಾಭಿಷೇಕ ಮಾಡಿ, ಶಿವನಿಗೆ ನೀವು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ, ಶಿವನ ಮಂತ್ರಗಳನ್ನು ಹೇಳುತ್ತಾ ಶಿವನ ಆರಾಧನೆ ಮಾಡುವುದರಿಂದ ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಎಲ್ಲಾ ದೂರಾಗುವುದು.
ಸಿಂಹ ರಾಶಿ
ಸಿಂಹ ರಾಶಿಯವರು ರಕ್ತ ಚಂದನ ಅರ್ಪಿಸಿ, ಕೆಂಪು ಹೂವುಗಳನ್ನು ಅರ್ಪಿಸಿ, ನಿಮ್ಮ ಇಷ್ಟಾರ್ಥ ನೆರವೇರಲು ಈ ದಿನ ಶಿಚ ಚಾಲೀಸ ಪಠಿಸಿ. ರಾಜಕಾರಣಿಗಳಿಗೆ ಈ ದಿನ ಅನುಕೂಲಕರವಾಗಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಶಿವನಿಗೆ ಬಿಲ್ವೆಪತ್ರೆ ಅರ್ಪಿಸಿ, ಪಂಚಾಕ್ಷರಿ ಮಂತ್ರ ಪಠಿಸಿ, ಹೀಗೆ ಮಾಡುವುದರಿಂದ ಶಿವ ಕೃಪೆಗೆ ಪಾತ್ರರಾಗಬಹುದು, ನಿಮ್ಮ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯಲಿದೆ.
ತುಲಾ ರಾಶಿ
ಶಿವನಿಗೆ ಹಾ;ಲಿನ ಅಭಿಷೇಕ ಮಾಡಿಸಿ, ತುಪ್ಪ ಹಾಗೂ ಸುಗಂಧದ್ರವ್ಯದ ಅಭಿಷೇಕ ಕೂಡ ಮಾಡಿ, ನಂತರ ನೈವೇದ್ಯ ಅರ್ಪಿಸಿ, ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಾಗುವುದು, ನಿಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆ ಕಾಣಬಹುದು.
ವೃಶ್ಚಿಕ ರಾಶಿ
ನೀವು ಯಶಸ್ಸು, ಖ್ಯಾತಿ ಪಡೆಯಲು ಶಿವನಿಗೆ ಕೆಂಪು ಹೂವುಗಳನ್ನು ಅರ್ಪಿಸಿ ಹಾಗೂ ರುದ್ರಾಭಿಷೇಕ ಮಾಡಿ, ರುಸ್ರಾಷ್ಟಕ ಪಠಣೆ ಮಾಡಿ.
ಧನು ರಾಶಿ
ಶಿವನಿಗೆ ಜೇನು ಮಿಕ್ಸ್ ಮಾಡಿ ಜಲಾಭಿಷೇಕ ಮಾಡಿ, ಹೀಗೆ ಮಾಡುವುದರಿಂದ ನಿಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ, ಶಿವನಿಗೆ ಅಕ್ಕಿ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ.
ಮಕರ ರಾಶಿ
ಶಿವನಿಗೆ ಬಿಲ್ವೆಪತ್ರೆ, ಹೂವುಗಳು, ನೈವೇದ್ಯ ಅರ್ಪಿಸಿ ಶಿವ, ಪಾರ್ವತಿ ಮಂತ್ರಗಳನ್ನು ಪಠಿಸಿ. ಶಿವ ಕೃಪೆಯಿಂದ ಸೌಕರ್ಯಗಳು ಹೆಚ್ಚಾಗಲಿದೆ, ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ.
ಕುಂಭ ರಾಶಿ
ಶಿವನಿಗೆ ಎಳನೀರು, ಕಬ್ಬು, ಸಾಸಿವೆಯೆಣ್ಣೆ ಅರ್ಪಿಸಿ, ಹೀಗೆ ಮಾಡುವುದರಿಂದ ಮಕ್ಕಳು ಪ್ರಗತಿ ಕಾಣುತ್ತಾರೆ, ಮಕ್ಕಳ ಅಪೇಕ್ಷೆ ಪಡುತ್ತಿರುವ ದಂಪತಿ ಸಂತಾನ ಭಾಗ್ಯ ಪಡೆಯಲು ಉಪವಾಸವಿದ್ದು ಶಿವನ ಆರಾಧನೆ ಮಾಡಿ.
ಮೀನ ರಾಶಿ
ಶಿವನಿಗೆ ಮೊಸರು, ಹಾಲಿನ ಅಭಿಷೇಕ ಮಾಡಿ, ಪಂಚಾಕ್ಷರಿ ಮಂತ್ರವನ್ನು 108 ಬಾರಿ ಪಠಿಸಿ ಇದರಿಂದ ಕುಟುಂಬದಲ್ಲಿನ ಸಮಸ್ಯೆ ಬಗೆಹರಿಯಲಿದೆ, ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
