Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ವರ್ಷ ಕಾರ್ತಿಕ ಪೂರ್ಣಿಮಾ ಯಾವಾಗ? ಈ ದಿನ ನದಿ ಸ್ನಾನದ ಪ್ರಾಮುಖ್ಯತೆಯೇನು?
ಕಾರ್ತಿಕ ಮಾಸವನ್ನು ದೇವರ ಸೇವೆಗೆ, ಸಾಧನೆಗೆ ಶ್ರೇಷ್ಠವಾದ ತಿಂಗಳು ಎಂದು ಕರೆಯಲಾಗುವುದು. ಏಕೆಂದರೆ ಈ ತಿಂಗಳು ಶಿವ ಆರಾಧನೆಗೆ ಮೀಸಲಾದ ತಿಂಗಳಾಗಿದೆ , ಇದೇ ತಿಂಗಳಿನಲ್ಲಿ ಶ್ರೀ ವಿಷ್ಣು ಚಾತುರ್ಮಾಸ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಾನೆ, ತಿರುಪತಿ, ಶಬರಿ ಮಲೆ, ಧರ್ಮಸ್ಥಳ ಮುಂತಾದ ಪ್ರಮುಖ ದೇವಾಲಯಗಳನ್ನು ಈ ತಿಂಗಳಿನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು.
ಕಾರ್ತಿಕ ತಿಂಗಳಿನಲ್ಲಿ ಪ್ರತಿ ದಿನ ದೀಪಗಳನ್ನು ಹಚ್ಚಿಟ್ಟು ಪೂಜಿಸಲಾಗುವುದು, ಅದರಲ್ಲಿ ಕಾರ್ತಿಕ ಸೋಮವಾರ ಹಾಗೂ ಕಾರ್ತಿಕ ಪೂರ್ಣಿಮಾ ತುಂಬಾ ದಿನಗಳಾಗಿವೆ, ಈ ತಿಂಗಳಿನಲ್ಲಿ ಕಾರ್ತಿಕ ಪೂರ್ಣಿಮೆಯನ್ನು ನವೆಂಬರ್ 27ರಂದು ಆಚರಿಸಲಾಗುವುದು. ಈ ದಿನ ಮಾಡುವ ಸ್ನಾನಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ದಿನದ ವಿಶೇಷತೆಯೇನು, ಏಕೆ ಈ ದಿನ ನದಿ ಸ್ನಾನಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇದೆ, ಈ ದಿನ ವಿಷ್ಣುವಿನ ಪೂಜೆಗೆ ಶುಭ ಮುಹೂರ್ತ ಯಾವಾಗ ಎಂದು ನೋಡೋಣ ಬನ್ನಿ:

ಕಾರ್ತಿಕ ಪೂರ್ಣಿಮೆಯಂದು ನದಿ ಸ್ನಾನದ ಮಹತ್ವ
ಈ ದಿನ ಶಿವನು ರಾಕ್ಷಸ ತ್ರಿಪುರಾಸುರನನ್ನು ಕೊಂದನು. ಈ ಸಂತಸದಲ್ಲಿ ದೇವತೆಗಳು ದೀಪ ಬೆಳಗಿಸಿ ಸಂಭ್ರಮಿಸಿದರು. ಇದನ್ನು ದೇವ್ ದೀಪಾವಳಿ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ ಈ ದಿನ ನದಿಯಲ್ಲಿ ಸ್ನಾನ ಮಾಡಬೇಕಂದು ಹೇಳಲಾಗುವುದು, ನದಿಯಲ್ಲಿ ಪಣ್ಯ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದು ಎಂದು ಹೇಳಲಾಗುವುದು.
ಕಾರ್ತಿಕ ಪೂರ್ಣಿಮೆಯ ಪೂಜಾ ವಿಧಾನ:
ಕಾರ್ತಿಕ ಹುಣ್ಣಿಮೆಯಂದು ಬೆಳಗ್ಗೆ ಬೇಗನೆ ಎದ್ದು ನದಿ ಸ್ನಾನ ಮಾಡಬೇಕು. ನದಿಗೆ ಹೋಗಿ ಸ್ನಾನ ಮಾಡಲು ಸಾಧ್ಯವಾಗದೇ ಇದ್ದರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲವನ್ನು ಹಾಕಿ ಸ್ನಾನ ಮಾಡಿ.
* ಈ ದಿನ ದೀಪಗಳನ್ನು ದಾನ ಮಾಡಬೇಕೆಂದು ಹೇಳಲಾಗುವುದು
* ಈ ದಿನ ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನು ಸಲ್ಲಿಸಲಾಗುವುದು.
* ಈ ದಿನ ಅಮೃತಬಳ್ಳಿ ಕೆಳಗಡೆ ಆಹಾರವನ್ನು ಸೇವಿಸಿ ಸಂಜೆ ದೀಪವನ್ನು ದಾನ ಮಾಡುವವರಿಗೆ ಇಷ್ಟಾರ್ಥಗಳು ನೆರವೇರುತ್ತದೆ.
* ಕಾರ್ತಿಕ ಹುಣ್ಣಿಮೆಯನ್ನು ಪುಷ್ಕರ್ತೀರ್ಥ, ದ್ವಾರಕಾಪುರಿ, ಸುಕರಕ್ಷೇತ್ರಗಳಲ್ಲಿ ಉಪವಾಸ ಮಾಡುವುದು ವಿಶೇಷವಾಗಿ ಫಲ ನೀಡುತ್ತದೆ
ಎಂದು ಭಾವಿಸಲಾಗಿದೆ.
* ಈ ದಿನಬ ಶ್ರೀ ವಿಷ್ಣುವಿಗೆ ತುಪ್ಪದ ದೀಪವನ್ನು ಹಚ್ಚಿ. ಶ್ರೀ ಹರಿಗೆ ಧೂಪ, ದೀಪ, ಹಣ್ಣುಗಳು, ಹೂವುಗಳನ್ನು ಅರ್ಪಿಸಿ. ಸಂಜೆ ಮತ್ತೆ ವಿಷ್ಣುವನ್ನು ಆರಾಧಿಸಿ, ಭಗವಂತನಿಗೆ ಪಂಚಾಮೃತವನ್ನು ಅರ್ಪಿಸಿ.
* ಈ ದಿನ ನೈವೇದ್ಯ ಮಾಡುವಾಗ ಅದಕ್ಕೆ ತುಳಸಿ ಎಲೆ ಹಾಕಿ ದೇವರಿಗೆ ಅರ್ಪಿಸಿ.
* ಈ ದಿನ ಉಪವಾಸವನ್ನು ರಾತ್ರಿ ಚಂದ್ರನ ನೋಡಿದ ಮೂಲಕ ಮುರಿಯಿರಿ.
ಈ ದಿನ ದೀಪದಾನದ ಮಹತ್ವ
ಈ ದಿನ ಗಂಗಾ ನದಿಯ ದಡದಲ್ಲಿ ದೀಪಗಳನ್ನು ಬೆಳಗುತ್ತಾರೆ. ಈ ದಿನ ಹಿಟ್ಟಿನ ದೀಪಗಳನ್ನು ಮಾಡಿ ಅದನ್ನು ಹಚ್ಚಿ ಅದನ್ನು ನದಿಯಲ್ಲಿ ಹರಿಯ ಬಿಡುವುದರಿಂದ ಇಷ್ಟಾರ್ಥಗಳು ನೆರವೇರುವುದು. ಈ ರೀತಿ ದೀಪಗಳನ್ನು ಹಚ್ಚಿ ನದಿಗೆ ಬಿಡುವುದರಿಂದ ಪಿತೃದೋಷ ನಿವಾರಣೆಯಾಗುವುದು ಎಂದು ಹೇಳಲಾಗುವುದು.
ಈ ದಿನ ದಾನಗಳನ್ನು ಮಾಡಬೇಕು
ಈ ದಿನ ದಾನವನ್ನು ಮಾಡಿದರೆ ಪುಣ್ಯಫಲ ಸಿಗುವುದು. ಈ ದಿನ ದಾನಗಳನ್ನು ಮಾಡುವುದರಿಂದ ಯಜ್ಞಳನ್ನು ಮಾಡಿದ ಫಲ ಸಿಗುವುದು. ಈ ದಿನ ನೀವು ನಿಮ್ಮ ಕೈಲಾದ ಸಹಾಯ ಮಾಡಿ, ದಾನ ಮಾಡಿ, ಇದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
ಶ್ರೀವಿಷ್ಣು ಜೊತೆಗೆ ಲಕ್ಷ್ಮಿಯನ್ನು ಆರಾಧಿಸಿ
ಈ ದಿನ ಲಕ್ಷ್ಮಿ ಅಕ್ಕಿ ಪಾಯಸದ ನೈವೇದ್ಯ ಅರ್ಪಿಸಿ ಅಥವಾ ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ಅರ್ಪಿಸಿ.
ಅರಳಿ ಮರದ ಕೆಳಗಡೆ ದೀಪವನ್ನು ಹಚ್ಚಿಡಿ
ಈ ದಿನ ಅರಳಿ ಮರದ ಸುತ್ತ ಪ್ರದಕ್ಷಣೆ ಹಾಕಿ 11 ಬಾರಿ ಸುತ್ತು ಹಾಕಿ, ಈ ದಿನ ತುಳಸಿಯನ್ನು ಆರಾಧಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications