Jagannath Rath Yatra: ಈ 4 ರಾಶಿಯವರಿಗೆ ಅಪಾರ ಸಂಪತ್ತು! ಇವರ ಮೇಲೆ ಜಗನ್ನಾಥನಿಗೆ ಲವ್ ಜಾಸ್ತಿ

ಹಿಂದೂ ಧರ್ಮಗ್ರಂಥಗಳಲ್ಲಿ ಜಗನ್ನಾಥನಿಗೆ (Lord Jagannath) ಪ್ರಿಯವಾದ ರಾಶಿಗಳ ಬಗ್ಗೆ ಉಲ್ಲೇಖಗಳಿವೆ. ಜಗನ್ನಾಥನ ವಿಶೇಷ ಆಶೀರ್ವಾದದಿಂದ ಕೆಲವು ರಾಶಿಯವರಿಗೆ ಜೀವನದಲ್ಲಿ ಯಶಸ್ಸು ಮತ್ತು ಪ್ರಗತಿ ದೊರೆಯುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಗನ್ನಾಥನಿಗೆ ಪ್ರಿಯವಾದ ನಾಲ್ಕು ರಾಶಿಗಳಿವೆ. ಕೆಲವೇ ದಿನಗಳಲ್ಲಿ ರಥಯಾತ್ರೆ (Jagannath Rath Yatra 2025) ನಡೆಯಲಿದ್ದು, ಆ ದಿನ ಜಗನ್ನಾಥ, ಬಲರಾಮ ಮತ್ತು ಸುಭದ್ರಾ ದೇವಿಯರು ನಗರ ಪ್ರದಕ್ಷಿಣೆ ಮಾಡುತ್ತಾರೆ. ಈ ಸಮಯದಲ್ಲಿ ಜಗನ್ನಾಥನಿಗೆ ಇಷ್ಟವಾದ ರಾಶಿಯವರಿಗೆ ಅಪಾರ ಸಂಪತ್ತು ಪ್ರಾಪ್ತಿಯಾಗಲಿದೆ. ಮೇಷದಿಂದ ಮೀನದವರೆಗಿನ 12 ರಾಶಿಗಳಲ್ಲಿ ಜಗನ್ನಾಥನಿಗೆ ಯಾವ ರಾಶಿಗಳು ಅಚ್ಚುಮೆಚ್ಚು ಎಂಬುದನ್ನು ಇಲ್ಲಿ ನೋಡೋಣ.

ಪ್ರತಿ ವರ್ಷದಂತೆ ಈ ವರ್ಷವೂ ಜಗನ್ನಾಥ ದೇವರ ರಥಯಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಬಾರಿ ಜೂನ್ 27 ರಂದು ಪುರಿಯಲ್ಲಿ ಈ ಪವಿತ್ರ ಹಬ್ಬ ನಡೆಯಲಿದೆ. ಈ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಜಗನ್ನಾಥ ಸ್ವಾಮಿಯನ್ನು ಬೃಹತ್ ರಥಗಳನ್ನು ಕಣ್ತುಂಬಿಕೊಳ್ಳುತ್ತಾರೆ. ರಥಯಾತ್ರೆಯು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಬದಲಿಗೆ ಭಗವಂತನ ಕೃಪೆ ಮತ್ತು ಆಶೀರ್ವಾದದ ಸಂಕೇತ. ಜಗನ್ನಾಥನು ಶ್ರೀಕೃಷ್ಣನ ಅವತಾರವಾಗಿದ್ದು, ಇಡೀ ಜಗತ್ತಿನಲ್ಲಿ ಆರಾಧಿಸಲ್ಪಡುತ್ತಾನೆ. ಆತನ ದೊಡ್ಡ ದುಂಡಗಿನ ಕಣ್ಣುಗಳು, ನಗುತ್ತಿರುವ ಮುಖ ಮತ್ತು ಕೈಕಾಲುಗಳಿಲ್ಲದೆ ಕೆತ್ತಲಾದ ವಿಗ್ರಹವು ಭಕ್ತರನ್ನು ಆಕರ್ಷಿಸುತ್ತದೆ. ಜಗನ್ನಾಥ ಎಂದರೆ 'ವಿಶ್ವದ ಒಡೆಯ' ಎಂದರ್ಥ. ಆತನ ದೃಷ್ಟಿ ಎಲ್ಲೆಡೆ ಇರುತ್ತದೆ ಮತ್ತು ಆತನು ಎಲ್ಲರನ್ನೂ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

Jagannath Rath Yatra 2025

ಜಗನ್ನಾಥನ ಕೃಪೆಗೆ ಪಾತ್ರರಾಗುವ 4 ರಾಶಿಗಳು

ಜ್ಯೋತಿಷ್ಯದ ಪ್ರಕಾರ, ಭಗವಾನ್ ಜಗನ್ನಾಥನು ಎಲ್ಲಾ ಭಕ್ತರನ್ನು ಸಮಾನವಾಗಿ ಪ್ರೀತಿಸಿದರೂ, ಕೆಲವು ರಾಶಿಯವರಿಗೆ ಆತನ ವಿಶೇಷ ಪ್ರೀತಿ ಮತ್ತು ಆಶೀರ್ವಾದಗಳು ಲಭಿಸುತ್ತವೆ. ಈ ರಾಶಿಚಕ್ರದ ಚಿಹ್ನೆಗಳನ್ನು ಹೊಂದಿರುವ ಜನರು ಜಗನ್ನಾಥನ ಕೃಪೆಯಿಂದ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುತ್ತಾರೆ. ಜಗನ್ನಾಥನ ಆಶೀರ್ವಾದದಿಂದ ಮಾನಸಿಕ ಶಾಂತಿ, ಸಮೃದ್ಧಿ ಮತ್ತು ಯಶಸ್ಸು ಲಭಿಸುತ್ತದೆ. ಜಗನ್ನಾಥನ ಕೃಪೆಯಿಂದ ಯಾವ ರಾಶಿಯವರ ಜೀವನ ಬದಲಾಗುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ವೃಷಭ ರಾಶಿ

ಜಗನ್ನಾಥನಿಗೆ ವೃಷಭ ರಾಶಿಯಲ್ಲಿ ಜನಿಸಿದವರು ಅಚ್ಚುಮೆಚ್ಚು. ಜಗನ್ನಾಥನ ಆಶೀರ್ವಾದದಿಂದ ಇವರು ಜೀವನದಲ್ಲಿ ಅನೇಕ ಅಡೆತಡೆಗಳನ್ನು ಸುಲಭವಾಗಿ ನಿವಾರಿಸುತ್ತಾರೆ. ಪ್ರತಿಯೊಂದು ವಿಷಯದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. ಇವರು ಶ್ರದ್ಧೆ ಮತ್ತು ಸಹನೆಯನ್ನು ಹೊಂದಿರುತ್ತಾರೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರ ಮೇಲೆ ಜಗನ್ನಾಥನಿಗೆ ವಿಶೇಷ ಪ್ರೀತಿ ಇರುತ್ತದೆ. ಈ ರಾಶಿಯವರು ಬಹಳ ಭಾವನಾತ್ಮಕವಾಗಿರುತ್ತಾರೆ ಮತ್ತು ಆಧ್ಯಾತ್ಮಿಕ ಅಭಿರುಚಿಯನ್ನು ಹೊಂದಿರುತ್ತಾರೆ. ಜಗನ್ನಾಥನ ಆಶೀರ್ವಾದದಿಂದ ಇವರು ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತಾರೆ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.

ಸಿಂಹ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಧೈರ್ಯಶಾಲಿಗಳು, ಶಕ್ತಿಶಾಲಿಗಳು ಮತ್ತು ಕಷ್ಟಪಟ್ಟು ದುಡಿಯುವವರು. ಜಗನ್ನಾಥನ ಅನುಗ್ರಹದಿಂದ ಇವರು ತಮ್ಮ ಶ್ರಮಕ್ಕೆ ತಕ್ಕ ಫಲವನ್ನು ಸುಲಭವಾಗಿ ಪಡೆದು ವೃತ್ತಿ ಜೀವನದಲ್ಲಿ ಯಶಸ್ಸಿನ ಶಿಖರವನ್ನು ತಲುಪುತ್ತಾರೆ.

ತುಲಾ ರಾಶಿ

ತುಲಾ ರಾಶಿಯವರು ಸಮತೋಲನದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಜಗನ್ನಾಥನ ಆಶೀರ್ವಾದದಿಂದ ಇವರಿಗೆ ಜೀವನದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಪ್ರೀತಿ ಲಭಿಸುತ್ತದೆ. ಸಮಾಜದಲ್ಲಿ ಗೌರವ ಮರ್ಯಾದೆಗಳನ್ನು ಪಡೆಯುತ್ತಾರೆ. ಹೀಗೆ ಜಗನ್ನಾಥನ ಕೃಪೆಯಿಂದ ಈ ನಾಲ್ಕು ರಾಶಿಯವರು ರಥಯಾತ್ರೆಯ ಬಳಿಕ ಅಭಿವೃದ್ಧಿ ಹೊಂದುವರು ಎಂದು ಹೇಳಲಾಗಿದೆ. ಆದರೆ, ಇದು ಕೇವಲ ನಂಬಿಕೆಗಳನ್ನು ಆಧರಿಸಿದ್ದು, ವೈಯಕ್ತಿಕ ಅನುಭವಗಳು ಭಿನ್ನವಾಗಿರಬಹುದು.

ಜಗನ್ನಾಥ ರಥಯಾತ್ರೆ ಯಾವಾಗ ಪ್ರಾರಂಭ?

ವಿಶ್ವವಿಖ್ಯಾತ ಪುರಿ ಜಗನ್ನಾಥ ಯಾತ್ರೆ. ಇದು ಒಡಿಶಾದ ಧಾರ್ಮಿಕ ಭಾವನೆಗಳ ಸಾಂಸ್ಕೃತಿಕ ಸಂಕೇತ. ಜಗನ್ನಾಥ ಯಾತ್ರೆ (Jagannath Rath Yatra Date) ಯಾವಾಗ ಪ್ರಾರಂಭವಾಗುತ್ತದೆ ಎಂಬುದು ಎಲ್ಲರ ಕುತೂಹಲ. ಹಿಂದೂ ಕ್ಯಾಲೆಂಡರ್ ಪ್ರಕಾರ, ಜಗನ್ನಾಥ ಯಾತ್ರೆಯು ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನಾಂಕದಂದು ಪ್ರಾರಂಭವಾಗುತ್ತದೆ. ಅದರಂತೆ, ಈ ವರ್ಷ ಜೂನ್ 26, 2025 ರಂದು ಮಧ್ಯಾಹ್ನ 1.25 ರಿಂದ ಪ್ರಾರಂಭವಾಗುತ್ತದೆ. ದ್ವಿತೀಯಾರ್ಧ ಅಂತ್ಯ (ಎರಡನೇ ದಿನಾಂಕ) ಜೂನ್ 27, 2025 ರಂದು ಬೆಳಗ್ಗೆ 11.19ಕ್ಕೆ ಕೊನೆಗೊಳ್ಳುತ್ತದೆ. ಇನ್ನು ಜಗನ್ನಾಥ ಯಾತ್ರೆಯು ಜುಲೈ 5 ರಂದು ಮುಕ್ತಾಯವಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Jagannath Rath Yatra 2025: these 4 zodiac signs getting luck and wealth

Lord Jagannath Rath Yatra 2025: these 4 zodiac signs getting luck and wealth
Story first published: Thursday, June 26, 2025, 13:55 [IST]
X
Desktop Bottom Promotion