Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ದಾಸವಾಳದ ಚಟ್ನಿ ಮಾಡಿದ್ದೀರಾ, ಒಮ್ಮೆ ಟ್ರೈ ಮಾಡಿ ನೋಡಿ, ರುಚಿ ಸೂಪರ್ ಅನ್ನುವಿರಿ
ದಾಸವಾಳ ಹೂವಿನ ಚಟ್ನಿ ಮಾಡಿದ್ದೀರಾ? ಇದು ಸೂಪರ್ ಆಗಿರುತ್ತದೆ, ಒಮ್ಮೆ ಟ್ರೈ ಮಾಡಿ ನೋಡಿ, ಅಲ್ಲದೆ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು, ಬನ್ನಿ ದಾಸವಾಳ ಹೂವಿನ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಕೆಂಪು ದಾಸವಳ ಹೂವು , ಬಿಳಿ ಇದ್ದರೆ ಅದನ್ನು ಕೂಡ ಸೇರಿಸಬಹುದು
2-3 ಒಣ ಮೆಣಸು
3-4 ಎಸಳು ಬೆಳ್ಳುಳ್ಳಿ
ಚಿಕ್ಕ ತುಂಡು ಶುಂಠಿ
8-10 ಎಲೆ ಕರಿಬೇವು
1 ಕಪ್ ತೆಂಗಿನತುರಿ
ಸ್ವಲ್ಪ ನಿಂಬೆರಸ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ (ಸಾರಿಗೆ ಬಳಸುವ ತೆಂಗಿನೆಣ್ಣೆಯಾದರೆ ಇನ್ನೂ ಒಳ್ಳೆಯದು)
ಸ್ವಲ್ಪ ಕರಿಬೇವು
ಸ್ವಲ್ಪ ಸಾಸಿವೆ
ಒಣಮೆಣಸು ಕೂಡ ಮುರಿದು ಹಾಕಬಹುದು
ಮಾಡುವ ವಿಧಾನ
- ನೀವು ದಾಸವಾಳ ಹೂವು 5-6 ಬಳಸಬಹುದು, ಇದನ್ನು ನೀರಿನಲ್ಲಿ ತೊಳೆದು ಅದರ ಎಸಳು ಬಿಡಿಸಿ
- ಈಗ ಮಿಕ್ಸಿ ಜಾರ್ಗೆ ದಾಸವಾಳ ಹೂವು, ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ತೆಂಗಿನತುರಿ, ನಿಂಬೆರಸ, ರುಚಿಗೆ ತಕ್ಕ ಉಪ್ಪು, ಒಣ ಮೆಣಸು ಸೇರಿಸಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
- ಈಗ ನೀವು ರೆಡಿಯಾದ ಚಟ್ನಿಗೆ ಒಗ್ಗರಣೆ ಹಾಕಿ, ರುಚಿಯಾದ ಚಟ್ನಿಯನ್ನು ನೀವು ದೋಸೆ ಅಥವಾ ಇಡ್ಲಿ ಜೊತೆ ಸವಿದು ನೋಡಿ ಸೂಪರ್ ಆಗಿರುತ್ತದೆ.
ದಾಸವಾಳದ ಪ್ರಯೋಜನ
ಇದರಲ್ಲಿ antioxidants ಇರುವುದರಿಂದ ಶರೀರಕ್ಕೆ ತುಂಬಾನೇ ಒಳ್ಳೆಯದು, ಅಲ್ಲದೆ ವಿಟಮಿನ್ ಸಿ ಕೂಡ ಇರುವುದರಿಂದ ರೋಗ ನಿರೋಧಕಶಕ್ತಿ ವೃದ್ಧಿಸುವುದು. ಇದು ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕಲು ತುಂಬಾನೇ ಸಹಕಾರಿ, ಅಲ್ಲದೆ ಇದು ಅನೇಕ ಕಾಯಿಲೆಗಳನ್ನು ತಡೆಗಟ್ಟುತ್ತದೆ. ದಾಸವಾಳ ಮಹಿಳೆಯರ ಆರೋಗ್ಯಕ್ಕೆ ಅಂತೂ ತುಂಬಾನೇ ಒಳ್ಳೆಯದು.
ಉರಿಯೂತ ತಡೆಗಟ್ಟುತ್ತದೆ
ದಾಸವಾಳ ಉರಿಯೂತದ ಸಮಸ್ಯೆ ತಡೆಗಟ್ಟುತ್ತದೆ ಎಂದು ಹಲವು ಸಂಶೋಧನೆಗಳು ಹೇಳಿವೆ, ದಾಸವಾಳದ ಹೂವು ಸಂಧಿವಾತದ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು.
ರಕ್ತದೊತ್ತಡ ನಿಯಂತ್ರಿಸುತ್ತದೆ
ಅತ್ಯಧಿಕ ರಕ್ತದೊತ್ತಡ ಹೃದಯಾಘಾತ, ಪಾರ್ಶ್ವವಾಯು ಈ ಬಗೆಯ ಸಮಸ್ಯೆಗೆ ಕಾರಣವಾಗಿದೆ. ದಾಸವಾಳದ ಹೂವು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಲಿದೆ.
ತೂಕ ನಿಯಂತ್ರಣಕ್ಕೆ ಕಾರಣ
ದಾಸವಾಳದ ಹೂವು ತೂಕ ನಿಯಂತ್ರಣಕ್ಕೂ ತುಂಬಾನೇ ಸಹಕಾ ರಿ, ಇದು ಮೈ ಬೊಜ್ಜು ತಡೆಗಟ್ಟಲು ಸಹಕಾರಿ ಆದರೆ ಇದರ ಬಗ್ಗೆ ಮತ್ತಷ್ಟು ಸಹಕಾರಿ
ಲಿವರ್ನ ಆರೋಗ್ಯಕ್ಕೆ ಒಳ್ಳೆಯದು
ದಾಸವಾಳದ ಹೂವು ಲಿವರ್ನ ಡಿಟಾಕ್ಸ್ ಮಾಡುತ್ತದೆ ಲಿವರ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications