Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಹೋಳಿ ದಿನ ಈ ರೀತಿ ಮಾಡಿದರೆ ಮನೆಗೆ ಶುಭ: ಸಂತೋಷ, ಸಮೃದ್ಧಿ ಹೆಚ್ಚಾಗುವುದು
ಹೋಳಿ ಹಿಂದೂಗಳಿಗೆ ಪ್ರಮುಖ ಆಚರಣೆ, ಈ ದಿನವನ್ನು ವಿಜಯದ ಸಂಕೇತವಾಗಿ ಆಚರಿಸಲಾಗುವುದು. ಬಣ್ಣವನ್ನು ಎರಚುತ್ತಾ ಸಂತೋಷ, ಸಂಭ್ರಮದಿಂದ ಈ ದಿನ ಆಚರಿಸಲಾಗುವುದು. ಹೋಳಿ ಹಬ್ಬವನ್ನು ಫಾಲ್ಗುಣ ಶುಕ್ಲ ಪಕ್ಷದ ಹುಣ್ಣಿಮೆಯ ರಾತ್ರಿ ನಡೆಸಲಾಗುವುದು.
ಈ ವರ್ಷ ಮಾರ್ಚ್ 24ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು. ಈ ದಿನದಂದು ವಿಧಿ ವಿಧಾನಗಳ ಪ್ರಕಾರ ಪೂಜೆ ಮಾಡಬೇಕೆಂಬ ನಿಯಮವಿದೆ. ಆ ಮನೆಯ ಸಂತೋಷ , ಸಮದ್ಧಿಗೆ ಈ ದಿನ ಕೆಲ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಏನು ಮಾಡಿದರೆ ಮನೆಗೆ ಶುಭವಾಗುವುದು ಎಂದು ನೋಡೋಣ ಬನ್ನಿ:

ಬೆಳ್ಳಿ ನಾಣ್ಯ ಖರೀದಿಸಿ
ವಾಸ್ತು ಪ್ರಕಾರ, ಹೋಳಿ ದಿನದಂದು ಬೆಳ್ಳಿ ನಾಣ್ಯದ ಶಾಪಿಂಗ್ ಮಾಡಿದರೆ ಒಳ್ಳೆಯದು, ಇದನ್ನು ಮನೆಯ ಲಕ್ಷ್ಮಿ ಫೋಟೋದ ಜೊತೆ ಇಟ್ಟರೆ ಆರ್ಥಿಕ ಸಮೃದ್ಧಿ ಉಂಟಾಗುವುದು ಎಂಬ ನಂಬಿಕೆ.
ಮಾವಿನ ಎಲೆಯ ತೋರಣ
ಸಾಮಾನ್ಯವಾಗಿ ಹಿಂದುಗಳ ಯಾವುದೇ ಶುಭ ಕಾರ್ಯವಾಗಿರಲಿ ಮನೆಯ ಮುಂದೆ ಮಾವಿನೆಲೆಯ ತಳಿರು-ತೋರಣ ಕಟ್ಟಲಾಗುವುದು, ಹೋಳಿ ದಿನದಂದೂ ಮನೆ ಮುಂದೆ ಮಾವಿನ ಎಲೆಯ ತೋರಣ ಇದ್ದರೆ ಋಣಾತ್ಮಕ ಶಕ್ತಿ ಮನೆಯೊಳಗೆ ಬರದಂತೆ ತಡೆಗಟ್ಟುವುದು. ಮನೆ ಬಾಗಿಲಿನಲ್ಲಿ ತೋರಣವಿದ್ದರೆ ಮನೆಗೆ ವಿಶೇಷ ಕಳೆ, ಮನೆ ನೋಡುವಾಗಲೇ ಧನಾತ್ಮಕ ಶಕ್ತಿಯ ಅನುಭವ ಉಂಟಾಗುವುದು.
ಬಿದಿರು ಗಿಡ ನೆಡಿ
ಹೋಳಿ ಹಬ್ಬದಂದು ನೀವು 7 ಅಥವಾ 11 ಕೋಲುಗಳಿರುವ ಬಿದಿರಿನ ಗಿಡ ನೆಡಿ, ಈ ಗಿಡ ಮನೆಯೊಳಗಡೆ ಇದ್ದರೆ ಶುಭ ಎಂದು ಹೇಳಲಾಗುವುದು. ವಾಸ್ತು ಶಾಸ್ತ್ರದಲ್ಲಿಯೂ ಈ ರೀತಿ ಬಿದಿರು ಗಿಡ ನೆಡುವುದು ಒಳ್ಳೆಯದು ಎಂದು ಹೇಳಲಾಗುವುದು.
ಲೋಹದ ಆಮೆ
ಈ ದಿನದಂದು ಮನೆಗೆ ಲೋಹದ ಆಮೆ ತನ್ನಿ, ಆಮೆಯ ಹಿಂಭಾಗದಲ್ಲಿ ಶ್ರೀ ಯಂತ್ರ ಅಥವಾ ಕುಬೇರ ಯಂತ್ರವನ್ನು ಬರೆದಿರಬೇಕು, ಇದನ್ನು ಮನೆಯಲ್ಲಿ ಇಡುವುದರಿಂದ ಸಂಪತ್ತು ಹೆಚ್ಚಾಗುವುದು.
ಈ ದಿನ ಹೀಗೆ ಮಾಡಿ
- ಈ ದಿನ ಸಾಸಿವೆಯೆಣ್ಣೆ ಮೈ ಹಚ್ಚಿ ಸ್ನಾನ ಮಾಡಬೇಕು, ಹೀಗೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಹಾಗೂ ಯಾವುದೇ ಋಣಾತ್ಮಕದ ಪ್ರಭಾವ ನಮ್ಮ ಮೇಲೆ ಇರಲ್ಲ.
- ಹೋಲಿಕಾ ದಹನದ ನಂತರ, ಉಳಿದ ಭಸ್ಮವನ್ನು ಹಣೆಯ ಮೇಲೆ ಹಚ್ಚಿಕೊಳ್ಳಿ, ಹೀಗೆ ಮಾಡುವುದರಿಂದ 27 ದೇವತೆಗಳು ಪ್ರಸನ್ನರಾಗುತ್ತಾರೆ. ಮೊದಲ ಸಾಲಿನ ಅಧಿಪತಿ ಮಹಾದೇವ, ಎರಡನೇ ಸಾಲಿನ ಮಹೇಶ್ವರ ಮತ್ತು ಮೂರನೇ ಸಾಲಿನ ಅಧಿಪತಿ ಎಂದು ಆಯುಧ, ಇವುಗಳು ನಮಗೆ ವಿಜಯವನ್ನು ನೀಡುತ್ತದೆ.
- ಈ ದಿನ ದಾನ ಮಾಡಿ: ಹೋಳಿಯ ದಿನದಂದು ನೀವು ದಾನ ಮಾಡುವುದರಿಂದ ಪುಣ್ಯ ಫಲ ಸಿಗುವುದು.
- ಇನ್ನು ವೃತ್ತಿ ಜೀವನದಲ್ಲಿ ಏನಾದರೂ ಅಡೆತಡೆಗಳಿದ್ದರೆ ಅದರ ನಿವಾರಣೆಗೆ ಈ ದಿನ ಹೋಲಿಕಾ ಅಗ್ನಿಯಲ್ಲಿ ತೆಂಗಿನಕಾಯಿ ಹಾಕಿ.
- ಹೋಳಿ ದಿನದಂದು ಸಿಹಿ ತಿಂಡಿ ಹಂಚಿ, ಇದರಿಂದ ಮನೆಯಲ್ಲಿ ಸಂತೋಷ ಹೆಚ್ಚಾಗುವುದು, ನಿಮ್ಮ ಆಸೆ ಈಡೇರುವುದು.
- ದಾನ ಮಾಡಿ: ಈ ದಿನ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ, ಬಡವರಿಗೆ ಆಹಾರ ವಸ್ತುಗಳನ್ನು ದಾನ ಮಾಡಿ, ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯ ಮಾಡಿ.
ಹೋಳಿ ಪೂಜೆಯ ಮುಹೂರ್ತ
ಹೋಲಿಕಾ ದಹನ್ ಮುಹೂರ್ತ: ಮಾರ್ಚ್ 24ರಂದು ಬೆಳಗ್ಗೆ 09:54ರಿಂದ ರಾfರಿ 11:13ರವರೆಗೆ
ಹೋಳಿ: ಮಾರ್ಚ್ 25
ಪೂರ್ಣಿಮ ತಿಥಿ ಪ್ರಾರಂಭ: ಮಾರ್ಚ್ 24 ಬೆಳಗ್ಗೆ 09:54ಕ್ಕೆ
ಪೂರ್ಣಿಮಾ ತಿಥಿ ಮುಕ್ತಾಯ: ಮಾರ್ಚ್ 25 ಮಧ್ಯಾಹ್ನ 12:29ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications