Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನವೆಂಬರ್ 12ಕ್ಕೆ ದೇವೋತ್ಥಾನ ಏಕಾದಶಿ: ಉಳಿದ 23 ಏಕಾದಶಿಗಿಂತ ತುಂಬಾ ವಿಶೇಷವಾದ ಏಕಾದಶಿಯಿದು, ಏಕೆ?
ದೇವೋತ್ಥಾನ ಏಕಾದಶಿ ಧಾರ್ಮಿಕ ಕಾರಣಗಳಿಂದ ತುಂಬಾನೇ ಮಹತ್ವದ ದಿನ, ಇತರ 23 ಏಕಾದಶಿಗಿಂತೀ ಏಕಾದಶಿ ತುಂಬಾನೇ ವಿಶೇಷವಾದದ್ದು. ದೇವೋತ್ಥಾನ ಏಕಾದಶಿ ನವೆಂಬರ್ 12ರಂದು ಆಚರಿಸಲಾಗುತ್ತಿದೆ, ಈ ಏಕಾದಶಿಯ ಮಹತ್ವವೇನು , ಪೂಜಾ ಸಮಯವೇನು, ಕಾರ್ತಿಕ ಮಾಸದಲ್ಲಿ ಬರುವ ಈ ಏಕಾಶಿಯಂದು ಏನು ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ದೀಪಾವಳಿ ನಂತರ ಬರುವ ಮೊದಲ ಏಕಾದಶಿ
ಈ ಏಕಾದಶಿ ದೀಪಾವಳಿ ಬಳಿಕ ಬರುವ ಮೊದಲ ಏಕಾದಶಿಯಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ಈ ಏಕಾದಶಿಯಂದು ಶ್ರೀ ವಿಷ್ಣುವು ಯೋಗ ನಿದ್ದೆಯಿಂದ ಎಚ್ಚೆರವಾಗುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆ. ಶ್ರೀವಿಷ್ಣು ನಾಲ್ಕು ತಿಂಗಳ ಕಾಲ ಯೋಗ ನಿದ್ದೆಯಲ್ಲಿರುತ್ತಾನೆ, ಈ ಅವಧಿಯಲ್ಲಿ ಮಹೇಶ್ವರನು ಭೂಮಂಡಲದ ಜವಾಬ್ದಾರಿ ಹೊತ್ತಿರುತ್ತಾನೆ, ದೇವೋತ್ಥಾನ ಏಕಾದಶಿಯಂದು ಶ್ರೀ ವಿಷ್ಣು ಯೋಗ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಾನೆ ಎಂದು ಹೇಳಲಾಗುವುದು. ಈ ಏಕಾದಶಿಯನ್ನು ದೇವಪ್ರಭೋಧನಿ ಏಕಾದಶಿ ಅಥವಾ ದೇವುತಾನಿ ಏಕಾದಶಿ ಎಂದು ಕರೆಯಲಾಗುವುದು.
ದೇವೋತ್ಥಾನಿ ಏಕಾಶಿ ಬಳಿಕ ಶುಭ ಕಾರ್ಯಗಳು ಪ್ರಾರಂಭವಾಗುವುದು
ದೇವೋತ್ಥಾನ ಏಕಾದಶಿ ಬಳಿಕ ಶುಭ ಕಾರ್ಯಗಳು ಪ್ರಾರಂಭವಾಗಲಿದೆ. ಮದುವೆ, ಗೃಹ ಪ್ರವೇಶ ಸೇರಿ ಅನೇಕ ಶುಭ ಕಾರ್ಯಗಳನ್ನು ದೇವೋತ್ಥಾನ ಏಕಾದಶಿ ಬಳಿಕ ಪ್ರಾರಂಭಿಸಲಾಗುವುದು.
ದೇವೋತ್ಥಾನಿ ಏಕಾದಶಿತಿಥಿ ಹಾಗೂ ಪೂಜಾ ಮುಹೂರ್ತ
ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ನವೆಂಬರ್ 11 ಸಂಜೆ 06:46ಕ್ಕೆ ಪ್ರಾರಂಭ
ನವೆಂಬರ್ 12 ಸಂಜೆ 04:04ಕ್ಕೆ ಮುಕ್ತಾಯ
ಪಾರಣ ಸಮಯ: ನವೆಂಬರ್ 13 ಬೆಳಗ್ಗೆ 06:18ರಿಂದ 10:08ರವರೆಗೆ ಇದೆ.
ದೇವೋತ್ಥಾನ ಏಕಾದಶಿಯ ಮಹತ್ವ
ಕಾರ್ತಿಕ ಮಾಸವೇ ಧಾರ್ಮಿಕ ದೃಷ್ಟಿಯಿಂದ ವಿಶೇಷವಾದ ದಿನಗಳಾಗಿದೆ, ಈ ಮಾಸದಲ್ಲಿ ಶ್ರೀವಿಷ್ಣು ಮತ್ತು ಶಿವನ ಆರಾಧನೆಗೆ ಮಹತ್ವದ ದಿನಗಳಾಗಿದೆ. ಈ ಏಕಾದಶಿಗೆ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು.
ಈ ದಿನ ಸಂಪೂರ್ಣ ಉಪವಾಸವಿದ್ದು ಪೂಜೆ ಮಾಡಬೇಕು.
ಈ ದಿನ ಅಕ್ಕಿಯ ಆಹಾರ ಪದಾರ್ಥ ಸೇವಿಸಬಾರದು, ಆಹಾರಕ್ಕೆ ಉಪ್ಪು ಹಾಕಿ ಬಳಸಬಾರದು
ಈ ದಿನ ಶ್ರೀ ವಿಷ್ಣು ಹಾಗೂ ಶಿವನ ದೇವಾಲಯಕ್ಕೆಭೇಟಿ ನೀಡಿ
ಈ ದಿನ ತುಳಸಿ ಗಿಡಕ್ಕೆ ಹೂವು ಹಾಕಿ ದೀಪ ಹಚ್ಚಿ
ಶ್ರೀ ವಿಷ್ಣುವಿನ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿ, ಹಣ್ಣುಗಳನ್ನು ಅರ್ಪಿಸಿ.
ನೈವೇದ್ಯ ಅರ್ಪಿಸಿ ಪೂಜೆಯನ್ನು ಸಲ್ಲಿಸಿ.
ಏಕಾದಶಿಯಂದು ಈ ಮಂತ್ರ ಪಠಣೆ ಮಾಡಿ
ಉತ್ತಿಷ್ಟೋ ಉತ್ತಿಷ್ಟ ಗೋವಿಂದೋ
ಉತ್ತಿಷ್ಟೋ ಗರೂಢಧ್ವಜ|
ಉತ್ತಿಷ್ಟೋ ಕಮಲಾಕಾಂತ
ಜಗತಾಂ ಮಂಗಲಂ ಕುರೂ||''
- ''ಬ್ರಹ್ಮೇಂದ್ರರುದಾಗ್ನಿ ಕುಬೇರ ಸೂರ್ಯಸೋಮಾದಿಭಿರ್ವಂದಿತ ವಂದನೀಯ|
ಬುಧ್ಯಸ್ಯ ದೇವೇಶ ಜಗನ್ನಿವಾಸ ಮಂತ್ರ ಪ್ರಭಾವೇಣ ಸುಖೇನ ದೇವ||''
ಈ ಮಂತ್ರಗಳ ಪಠಣೆ ಮಾಡುವುದರಿಂದ ಸಂಪತ್ತು ವೃದ್ಧಿಸುವುದು, ಜೀವನದಲ್ಲಿ ಏನಾದರು ಕಷ್ಟಗಳಿದ್ದರೆ ಅದು ದೂರಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
