Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನವೆಂಬರ್ 12ಕ್ಕೆ ದೇವೋತ್ಥಾನ ಏಕಾದಶಿ: ಉಳಿದ 23 ಏಕಾದಶಿಗಿಂತ ತುಂಬಾ ವಿಶೇಷವಾದ ಏಕಾದಶಿಯಿದು, ಏಕೆ?
ದೇವೋತ್ಥಾನ ಏಕಾದಶಿ ಧಾರ್ಮಿಕ ಕಾರಣಗಳಿಂದ ತುಂಬಾನೇ ಮಹತ್ವದ ದಿನ, ಇತರ 23 ಏಕಾದಶಿಗಿಂತೀ ಏಕಾದಶಿ ತುಂಬಾನೇ ವಿಶೇಷವಾದದ್ದು. ದೇವೋತ್ಥಾನ ಏಕಾದಶಿ ನವೆಂಬರ್ 12ರಂದು ಆಚರಿಸಲಾಗುತ್ತಿದೆ, ಈ ಏಕಾದಶಿಯ ಮಹತ್ವವೇನು , ಪೂಜಾ ಸಮಯವೇನು, ಕಾರ್ತಿಕ ಮಾಸದಲ್ಲಿ ಬರುವ ಈ ಏಕಾಶಿಯಂದು ಏನು ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ದೀಪಾವಳಿ ನಂತರ ಬರುವ ಮೊದಲ ಏಕಾದಶಿ
ಈ ಏಕಾದಶಿ ದೀಪಾವಳಿ ಬಳಿಕ ಬರುವ ಮೊದಲ ಏಕಾದಶಿಯಾಗಿದೆ. ಕಾರ್ತಿಕ ಮಾಸದಲ್ಲಿ ಬರುವ ಈ ಏಕಾದಶಿಯಂದು ಶ್ರೀ ವಿಷ್ಣುವು ಯೋಗ ನಿದ್ದೆಯಿಂದ ಎಚ್ಚೆರವಾಗುತ್ತಾನೆ ಎಂಬುವುದು ಧಾರ್ಮಿಕ ನಂಬಿಕೆ. ಶ್ರೀವಿಷ್ಣು ನಾಲ್ಕು ತಿಂಗಳ ಕಾಲ ಯೋಗ ನಿದ್ದೆಯಲ್ಲಿರುತ್ತಾನೆ, ಈ ಅವಧಿಯಲ್ಲಿ ಮಹೇಶ್ವರನು ಭೂಮಂಡಲದ ಜವಾಬ್ದಾರಿ ಹೊತ್ತಿರುತ್ತಾನೆ, ದೇವೋತ್ಥಾನ ಏಕಾದಶಿಯಂದು ಶ್ರೀ ವಿಷ್ಣು ಯೋಗ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಾನೆ ಎಂದು ಹೇಳಲಾಗುವುದು. ಈ ಏಕಾದಶಿಯನ್ನು ದೇವಪ್ರಭೋಧನಿ ಏಕಾದಶಿ ಅಥವಾ ದೇವುತಾನಿ ಏಕಾದಶಿ ಎಂದು ಕರೆಯಲಾಗುವುದು.
ದೇವೋತ್ಥಾನಿ ಏಕಾಶಿ ಬಳಿಕ ಶುಭ ಕಾರ್ಯಗಳು ಪ್ರಾರಂಭವಾಗುವುದು
ದೇವೋತ್ಥಾನ ಏಕಾದಶಿ ಬಳಿಕ ಶುಭ ಕಾರ್ಯಗಳು ಪ್ರಾರಂಭವಾಗಲಿದೆ. ಮದುವೆ, ಗೃಹ ಪ್ರವೇಶ ಸೇರಿ ಅನೇಕ ಶುಭ ಕಾರ್ಯಗಳನ್ನು ದೇವೋತ್ಥಾನ ಏಕಾದಶಿ ಬಳಿಕ ಪ್ರಾರಂಭಿಸಲಾಗುವುದು.
ದೇವೋತ್ಥಾನಿ ಏಕಾದಶಿತಿಥಿ ಹಾಗೂ ಪೂಜಾ ಮುಹೂರ್ತ
ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ನವೆಂಬರ್ 11 ಸಂಜೆ 06:46ಕ್ಕೆ ಪ್ರಾರಂಭ
ನವೆಂಬರ್ 12 ಸಂಜೆ 04:04ಕ್ಕೆ ಮುಕ್ತಾಯ
ಪಾರಣ ಸಮಯ: ನವೆಂಬರ್ 13 ಬೆಳಗ್ಗೆ 06:18ರಿಂದ 10:08ರವರೆಗೆ ಇದೆ.
ದೇವೋತ್ಥಾನ ಏಕಾದಶಿಯ ಮಹತ್ವ
ಕಾರ್ತಿಕ ಮಾಸವೇ ಧಾರ್ಮಿಕ ದೃಷ್ಟಿಯಿಂದ ವಿಶೇಷವಾದ ದಿನಗಳಾಗಿದೆ, ಈ ಮಾಸದಲ್ಲಿ ಶ್ರೀವಿಷ್ಣು ಮತ್ತು ಶಿವನ ಆರಾಧನೆಗೆ ಮಹತ್ವದ ದಿನಗಳಾಗಿದೆ. ಈ ಏಕಾದಶಿಗೆ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು.
ಈ ದಿನ ಸಂಪೂರ್ಣ ಉಪವಾಸವಿದ್ದು ಪೂಜೆ ಮಾಡಬೇಕು.
ಈ ದಿನ ಅಕ್ಕಿಯ ಆಹಾರ ಪದಾರ್ಥ ಸೇವಿಸಬಾರದು, ಆಹಾರಕ್ಕೆ ಉಪ್ಪು ಹಾಕಿ ಬಳಸಬಾರದು
ಈ ದಿನ ಶ್ರೀ ವಿಷ್ಣು ಹಾಗೂ ಶಿವನ ದೇವಾಲಯಕ್ಕೆಭೇಟಿ ನೀಡಿ
ಈ ದಿನ ತುಳಸಿ ಗಿಡಕ್ಕೆ ಹೂವು ಹಾಕಿ ದೀಪ ಹಚ್ಚಿ
ಶ್ರೀ ವಿಷ್ಣುವಿನ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿ, ಹಣ್ಣುಗಳನ್ನು ಅರ್ಪಿಸಿ.
ನೈವೇದ್ಯ ಅರ್ಪಿಸಿ ಪೂಜೆಯನ್ನು ಸಲ್ಲಿಸಿ.
ಏಕಾದಶಿಯಂದು ಈ ಮಂತ್ರ ಪಠಣೆ ಮಾಡಿ
ಉತ್ತಿಷ್ಟೋ ಉತ್ತಿಷ್ಟ ಗೋವಿಂದೋ
ಉತ್ತಿಷ್ಟೋ ಗರೂಢಧ್ವಜ|
ಉತ್ತಿಷ್ಟೋ ಕಮಲಾಕಾಂತ
ಜಗತಾಂ ಮಂಗಲಂ ಕುರೂ||''
- ''ಬ್ರಹ್ಮೇಂದ್ರರುದಾಗ್ನಿ ಕುಬೇರ ಸೂರ್ಯಸೋಮಾದಿಭಿರ್ವಂದಿತ ವಂದನೀಯ|
ಬುಧ್ಯಸ್ಯ ದೇವೇಶ ಜಗನ್ನಿವಾಸ ಮಂತ್ರ ಪ್ರಭಾವೇಣ ಸುಖೇನ ದೇವ||''
ಈ ಮಂತ್ರಗಳ ಪಠಣೆ ಮಾಡುವುದರಿಂದ ಸಂಪತ್ತು ವೃದ್ಧಿಸುವುದು, ಜೀವನದಲ್ಲಿ ಏನಾದರು ಕಷ್ಟಗಳಿದ್ದರೆ ಅದು ದೂರಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











