Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ದೀಪಾವಳಿ 2023 ಕ್ಯಾಲೆಂಡರ್: ಈ ವರ್ಷ ನವೆಂಬರ್ 13ರಂದು ಹಬ್ಬವಿಲ್ಲ, ಯಾವ ದಿನ ಯಾವ ಹಬ್ಬ?
ದೀಪಾವಳಿ ಎಂಬುವುದು ಒಂದು ದಿನದ ಸಡಗರವಲ್ಲ, 5 ದಿನಗಳವರೆಗೆ ನಡೆಯುವ ಸಂಭ್ರಮ. ಈ 5 ದಿನಗಳ ಬೆಳಕಿನ ಹಬ್ಬದಲ್ಲಿ ಒಂದೊಂದು ದಿನ ಒಂದೊಂದು ಆಚರಣೆಯಿದೆ, ಆ ಆಚರಣೆಗೆ ತುಂಬಾನೇ ಮಹತ್ವವಿದೆ. ಈ ವರ್ಷ ಯಾವ ದಿನ ಯಾವ ಹಬ್ಬವನ್ನು ಆಚರಿಸಲಾಗುವುದು ಎಂದು ನೋಡೋಣ ಬನ್ನಿ:
5 ದಿನಗಳ ದೀಪಾವಳಿ ಆಚರಣೆ
ಶುಕ್ರವಾರ ನವೆಂಬರ್ 10, 2023: ಧನ್ತೆರೇಸ್ ಅಥವಾ ಧನ್ ತ್ರಯೋದಶಿ
ಶನಿವಾರ ನವೆಂಬರ್ 11, 2023: ಚೋಟಿ ಅಥವಾ ಚಿಕ್ಕ ದೀಪಾವಳಿ
ಭಾನುವಾರ ನವೆಂಬರ್ 12 , 2023: ಲಕ್ಷ್ಮಿ ಪೂಜೆ, ನರಕ ಚತುರ್ದಶಿ
ಮಂಗಳವಾರ, ನವೆಂಬರ್ 14, 2023: ಗೋವರ್ಧನ ಪೂಜೆ, ಬಲಿಪ್ರತಿಪಾದ
ಬುಧವಾರ, ನವೆಂಬರ್ 15, 2023: ಭಾಯಿ ದೂಜ್

ನವೆಂಬರ್ 13 ಶುಭ ದಿನವಲ್ಲ ಹಾಗಾಗಿ ಈ ದಿನ ಹಬ್ಬವನ್ನು ಆಚರಿಸುವುದಿಲ್ಲ.
ಧನ್ತೇರಸ್: ಇದು ದೀಪಾಳಿಯ ಮೊದಲ ದಿನ. ಪ್ರತೀವರ್ಷ ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿಯಂದು ಧನ್ತೇರಸ್ ಆಚರಿಸಲಾಗುವುದ. ಈ ದಿನ ಚಿನ್ನ- ಬೆಳ್ಳಿ ಖರೀದಿಗೆ ತುಂಬಾನೇ ಶುಭ ಎಂದು ಪರಿಗಣಿಸಲಾಗುವುದು. ಧನ್ತೇರಸ್ ದಿನದಂದು ಮುಖ್ಯ ದ್ವಾರದಲ್ಲಿ ದೀಪವನ್ನು ಹಚ್ಚಿಟ್ಟು ಚಿನ್ನವನ್ನು ಇರಿಸಿ ಪೂಜಿಸಲಾಗುವುದು, ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆಯಿದೆ. ಈ ದಿನದಂದು ಗಿಫ್ಟ್ಸ್ ಕೊಡುವುದಾಗಲಿ, ತಗೊಳುವುದು ಮಾಡಬಾರದು. ಈ ದಿನ ಪಾತ್ರೆಗಳನ್ನು ತಗೊಂಡರೆ ಅದರಲ್ಲಿ ಏನಾದರು ಆಹಾರ ವಸ್ತು ಹಾಕಿ ಕೊಂಡೊಯ್ಯಿರಿ, ಖಾಲಿ ಕೊಂಡಯ್ಯಬೇಡಿ.
ಚೋಟಿ ದೀಪಾವಳಿ: ಈ ದಿನದಂದು ಯಮದೀಪವನ್ನು ಹಚ್ಚಿ ಯಮಧರ್ಮನನ್ನು ಪೂಜಿಸಲಾಗುವುದು. ಯಮಧರ್ಮನನ್ನು ಪೂಜಿಸುವುದರಿಂದ ಅಕಾಲಿಕ ಸಾವಿನ ಭಯದ ದೂರಾಗುವುದು. ಈ ದೀಪಾವಳಿಯಂದು 14 ದೀಪಗಳನ್ನು ಹಚ್ಚಿಟ್ಟು ದೀಪಾವಳಿ ಹಬ್ಬವನ್ನು ಆಚರಿಸಲಾಗುವುದು.
ಲಕ್ಷ್ಮಿ ಪೂಜೆ: ಕಾರ್ತಿಕ ಮಾಸದ ಅಮವಾಸ್ಯೆಯ ಪ್ರದೋಷ ಕಾಲದಂದು ಲಕ್ಷ್ಮಿಯನ್ನು ಆರಾಧಿಸಿದರೆ ಸಂಪತ್ತು ವೃದ್ಧಿಯಾಗುವುದು. ಈ ದಿನ ಲಕ್ಷ್ಮಿ, ಗಣೇಶ, ಸರಸ್ವತಿ, ಸಂಪತ್ತಿನ ದೇವರು ಕುಬೇರನನ್ನು ಪೂಜಿಸಲಾಗುವುದು. ಈ ದಿನ ಮನೆಯನ್ನು ಅಲಂಕರಿಸಿ, ಲಕ್ಷ್ಮಿ ಫೋಟೋಗೆ ಹೂ, ಚಿನ್ನಾಭರಣಗಳನ್ನು ಹಾಕಿ ಅಲಂಕರಿಸಿ, ನಾಣ್ಯಗಳು, ಹಣವನ್ನು ಇಟ್ಟು ಆರಾಧಿಸಲಾಗುವುದು.
ಗೋವರ್ಧನ ಪೂಜೆ: ಬಲಿಪಾಡ್ಯಮಿ ದಿನದಂದು ಗೋವರ್ಧನ ಪೂಜೆ ಮಾಡಲಾಗುವುದು. ಈ ದಿನ ಸಗಣಿಯಿಂದ ಗೋವರ್ಧನ ಬೆಟ್ಟ ಮಾಡಿ ಗೋವುಗಳನ್ನು ಪೂಜಿಸಲಾಗುವುದು. ಗೋವರ್ಧನ ಪೂಜೆಯನ್ನು ಅನ್ನಕೂಟ ಎಂದು ಕರೆಯಲಾಗುವುದು. ಈ ಪೂಜೆಯಲ್ಲಿ ದೇವರಿಗೆ ಅರ್ಪಿಸುವ ಸಿಹಿತಿಂಡಿಗಳು, ಅಗರಬತ್ತಿಗಳು, ಹೂವುಗಳು, ತಾಜಾ ಹೂವುಗಳಿಂದ ಮಾಡಿದ ಹೂಮಾಲೆಗಳು, ರೋಲಿ, ಅಕ್ಕಿ ಮತ್ತು ಹಸುವಿನ ಸಗಣಿಯನ್ನು ಗೋವರ್ಧನ ಪೂಜೆಗೆ ಬಳಸಲಾಗುವುದು. ದೇವರಿಗೆ ಪಂಚಾಮೃತ ಅರ್ಪಿಸಲಾಗುವುದು.
ಭಾಯಿಧೂಜ್: ಇದನ್ನು ನಮ್ಮ ಕಡೆ ಹೆಚ್ಚು ಆಚರಿಸುವುದಿಲ್ಲ, ಆದರೆ ಉತ್ತರ ಭಾರತದ ಕಡೆ ಆಚರಸಲಾಗುವುದು. ಇದು ಸಹೋದರತ್ವ ಸಾರುವ ಹಬ್ಬವನ್ನಾಗಿ ಆಚರಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications