Latest Updates
-
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ!
ದೀಪಾವಳಿ 2023 ಕ್ಯಾಲೆಂಡರ್: ಈ ವರ್ಷ ನವೆಂಬರ್ 13ರಂದು ಹಬ್ಬವಿಲ್ಲ, ಯಾವ ದಿನ ಯಾವ ಹಬ್ಬ?
ದೀಪಾವಳಿ ಎಂಬುವುದು ಒಂದು ದಿನದ ಸಡಗರವಲ್ಲ, 5 ದಿನಗಳವರೆಗೆ ನಡೆಯುವ ಸಂಭ್ರಮ. ಈ 5 ದಿನಗಳ ಬೆಳಕಿನ ಹಬ್ಬದಲ್ಲಿ ಒಂದೊಂದು ದಿನ ಒಂದೊಂದು ಆಚರಣೆಯಿದೆ, ಆ ಆಚರಣೆಗೆ ತುಂಬಾನೇ ಮಹತ್ವವಿದೆ. ಈ ವರ್ಷ ಯಾವ ದಿನ ಯಾವ ಹಬ್ಬವನ್ನು ಆಚರಿಸಲಾಗುವುದು ಎಂದು ನೋಡೋಣ ಬನ್ನಿ:
5 ದಿನಗಳ ದೀಪಾವಳಿ ಆಚರಣೆ
ಶುಕ್ರವಾರ ನವೆಂಬರ್ 10, 2023: ಧನ್ತೆರೇಸ್ ಅಥವಾ ಧನ್ ತ್ರಯೋದಶಿ
ಶನಿವಾರ ನವೆಂಬರ್ 11, 2023: ಚೋಟಿ ಅಥವಾ ಚಿಕ್ಕ ದೀಪಾವಳಿ
ಭಾನುವಾರ ನವೆಂಬರ್ 12 , 2023: ಲಕ್ಷ್ಮಿ ಪೂಜೆ, ನರಕ ಚತುರ್ದಶಿ
ಮಂಗಳವಾರ, ನವೆಂಬರ್ 14, 2023: ಗೋವರ್ಧನ ಪೂಜೆ, ಬಲಿಪ್ರತಿಪಾದ
ಬುಧವಾರ, ನವೆಂಬರ್ 15, 2023: ಭಾಯಿ ದೂಜ್

ನವೆಂಬರ್ 13 ಶುಭ ದಿನವಲ್ಲ ಹಾಗಾಗಿ ಈ ದಿನ ಹಬ್ಬವನ್ನು ಆಚರಿಸುವುದಿಲ್ಲ.
ಧನ್ತೇರಸ್: ಇದು ದೀಪಾಳಿಯ ಮೊದಲ ದಿನ. ಪ್ರತೀವರ್ಷ ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿಯಂದು ಧನ್ತೇರಸ್ ಆಚರಿಸಲಾಗುವುದ. ಈ ದಿನ ಚಿನ್ನ- ಬೆಳ್ಳಿ ಖರೀದಿಗೆ ತುಂಬಾನೇ ಶುಭ ಎಂದು ಪರಿಗಣಿಸಲಾಗುವುದು. ಧನ್ತೇರಸ್ ದಿನದಂದು ಮುಖ್ಯ ದ್ವಾರದಲ್ಲಿ ದೀಪವನ್ನು ಹಚ್ಚಿಟ್ಟು ಚಿನ್ನವನ್ನು ಇರಿಸಿ ಪೂಜಿಸಲಾಗುವುದು, ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುವುದು ಎಂಬ ನಂಬಿಕೆಯಿದೆ. ಈ ದಿನದಂದು ಗಿಫ್ಟ್ಸ್ ಕೊಡುವುದಾಗಲಿ, ತಗೊಳುವುದು ಮಾಡಬಾರದು. ಈ ದಿನ ಪಾತ್ರೆಗಳನ್ನು ತಗೊಂಡರೆ ಅದರಲ್ಲಿ ಏನಾದರು ಆಹಾರ ವಸ್ತು ಹಾಕಿ ಕೊಂಡೊಯ್ಯಿರಿ, ಖಾಲಿ ಕೊಂಡಯ್ಯಬೇಡಿ.
ಚೋಟಿ ದೀಪಾವಳಿ: ಈ ದಿನದಂದು ಯಮದೀಪವನ್ನು ಹಚ್ಚಿ ಯಮಧರ್ಮನನ್ನು ಪೂಜಿಸಲಾಗುವುದು. ಯಮಧರ್ಮನನ್ನು ಪೂಜಿಸುವುದರಿಂದ ಅಕಾಲಿಕ ಸಾವಿನ ಭಯದ ದೂರಾಗುವುದು. ಈ ದೀಪಾವಳಿಯಂದು 14 ದೀಪಗಳನ್ನು ಹಚ್ಚಿಟ್ಟು ದೀಪಾವಳಿ ಹಬ್ಬವನ್ನು ಆಚರಿಸಲಾಗುವುದು.
ಲಕ್ಷ್ಮಿ ಪೂಜೆ: ಕಾರ್ತಿಕ ಮಾಸದ ಅಮವಾಸ್ಯೆಯ ಪ್ರದೋಷ ಕಾಲದಂದು ಲಕ್ಷ್ಮಿಯನ್ನು ಆರಾಧಿಸಿದರೆ ಸಂಪತ್ತು ವೃದ್ಧಿಯಾಗುವುದು. ಈ ದಿನ ಲಕ್ಷ್ಮಿ, ಗಣೇಶ, ಸರಸ್ವತಿ, ಸಂಪತ್ತಿನ ದೇವರು ಕುಬೇರನನ್ನು ಪೂಜಿಸಲಾಗುವುದು. ಈ ದಿನ ಮನೆಯನ್ನು ಅಲಂಕರಿಸಿ, ಲಕ್ಷ್ಮಿ ಫೋಟೋಗೆ ಹೂ, ಚಿನ್ನಾಭರಣಗಳನ್ನು ಹಾಕಿ ಅಲಂಕರಿಸಿ, ನಾಣ್ಯಗಳು, ಹಣವನ್ನು ಇಟ್ಟು ಆರಾಧಿಸಲಾಗುವುದು.
ಗೋವರ್ಧನ ಪೂಜೆ: ಬಲಿಪಾಡ್ಯಮಿ ದಿನದಂದು ಗೋವರ್ಧನ ಪೂಜೆ ಮಾಡಲಾಗುವುದು. ಈ ದಿನ ಸಗಣಿಯಿಂದ ಗೋವರ್ಧನ ಬೆಟ್ಟ ಮಾಡಿ ಗೋವುಗಳನ್ನು ಪೂಜಿಸಲಾಗುವುದು. ಗೋವರ್ಧನ ಪೂಜೆಯನ್ನು ಅನ್ನಕೂಟ ಎಂದು ಕರೆಯಲಾಗುವುದು. ಈ ಪೂಜೆಯಲ್ಲಿ ದೇವರಿಗೆ ಅರ್ಪಿಸುವ ಸಿಹಿತಿಂಡಿಗಳು, ಅಗರಬತ್ತಿಗಳು, ಹೂವುಗಳು, ತಾಜಾ ಹೂವುಗಳಿಂದ ಮಾಡಿದ ಹೂಮಾಲೆಗಳು, ರೋಲಿ, ಅಕ್ಕಿ ಮತ್ತು ಹಸುವಿನ ಸಗಣಿಯನ್ನು ಗೋವರ್ಧನ ಪೂಜೆಗೆ ಬಳಸಲಾಗುವುದು. ದೇವರಿಗೆ ಪಂಚಾಮೃತ ಅರ್ಪಿಸಲಾಗುವುದು.
ಭಾಯಿಧೂಜ್: ಇದನ್ನು ನಮ್ಮ ಕಡೆ ಹೆಚ್ಚು ಆಚರಿಸುವುದಿಲ್ಲ, ಆದರೆ ಉತ್ತರ ಭಾರತದ ಕಡೆ ಆಚರಸಲಾಗುವುದು. ಇದು ಸಹೋದರತ್ವ ಸಾರುವ ಹಬ್ಬವನ್ನಾಗಿ ಆಚರಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications