ಎಚ್ಚರ! ಈ ದಿನಗಳಲ್ಲಿ ಪ್ರಯಾಣ ಮಾಡಿದ್ರೆ ಅಪಾಯ; ಇವು ಜೂನ್-ಜುಲೈನ ಅಶುಭ ದಿನಗಳು

ಎಚ್ಚರ! ಈ ದಿನಗಳಲ್ಲಿ ಪ್ರಯಾಣ ಮಾಡಿದ್ರೆ ಅಪಾಯ ಖಚಿತ. ಹೌದು, ಜೂನ್ ಮತ್ತು ಜುಲೈ ತಿಂಗಳ ಈ ಅಶುಭ ದಿನಾಂಕಗಳಲ್ಲಿ ಪ್ರಯಾಣವೇ ಬೇಡ. ಈಗಾಗಲೇ ಅಹಮದಾಬಾದ್ ವಿಮಾನ ಅಪಘಾತ ಸಂಭವಿಸಿದೆ. ಬಳಿಕ ಕೇದಾರನಾಥ ಹೆಲಿಕಾಪ್ಟರ್ ಅಪಘಾತವೂ ನೋಡಿದ್ದೇವೆ. ಒಂದರ ಹಿಂದೆ ಒಂದರಂತೆ ಅನೇಕ ಅಪಘಾತಗಳು ಸಂಭವಿಸಿವೆ. ಇದು ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸಿದೆ. ಈ ಮಧ್ಯೆಯೇ, ಜ್ಯೋತಿಷ್ಯ ತಜ್ಞೆ ಶ್ವೇತಾ ಎಸ್. ಮಹೇಶ್ವರಿ ಅವರು ಜೂನ್ ಮತ್ತು ಜುಲೈ ತಿಂಗಳಲ್ಲಿ ಪ್ರಯಾಣಿಸಬೇಡಿ (Ashubh Travel Dates June July 2025) ಎಂದು ಎಚ್ಚರಿಕೆ ನೀಡಿದ್ದಾರೆ. ಆ ಅಶುಭ ದಿನಾಂಕಗಳು ಯಾವುವು? ತಿಳಿಯಲು ಮುಂದೆ ಓದಿ.

ಬಹುತೇಕ ಜನರು ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಪ್ರಯಾಣಿಸಲು ಅಥವಾ ತೀರ್ಥಯಾತ್ರೆಗೆ ಹೋಗಲು ಯೋಜಿಸುತ್ತಾರೆ. ಬೇಸಿಗೆ ರಜೆಯಲ್ಲಿಯೂ ಪ್ರಯಾಣಿಸುವುದು ಸಾಮಾನ್ಯ. ಇದೇ ಸಮಯದಲ್ಲಿ, ಜ್ಯೋತಿಷ್ಯ ತಜ್ಞೆ ಶ್ವೇತಾ ಎಸ್. ಮಹೇಶ್ವರಿ (swetta maheshwari) ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಅವರು 2025ರ ಕೆಲವು ದಿನಾಂಕಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಇದಲ್ಲದೆ, ಜುಲೈನಲ್ಲಿ ದೊಡ್ಡ ದುರಂತ ಸಂಭವಿಸುವ ಮುನ್ಸೂಚನೆ ಇದೆ. ಈ ದಿನಗಳಲ್ಲಿ ಪ್ರಯಾಣವು (traveling) ಅಪಘಾತ, ಅಡಚಣೆ ಅಥವಾ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

Ashubh Travel Dates June July 2025

ಯಾವ ಕಾರಣಕ್ಕಾಗಿ ಪ್ರಯಾಣ ನಿಷೇಧ?

ಜ್ಯೋತಿಷ್ಯ ತಜ್ಞೆ ಶ್ವೇತಾ ಎಸ್ ಮಹೇಶ್ವರಿ ಅವರು, ಇದು ಮಂಗಳನ ವರ್ಷ ಎಂದು ಹೇಳಿದ್ದಾರೆ. ಇದು ಅಪಘಾತಗಳು, ಆಕ್ರಮಣಶೀಲತೆ ಮತ್ತು ಅಸ್ಥಿರತೆಗೆ ಹೆಸರುವಾಸಿಯಾದ ಗ್ರಹ. ಈ ಪರಿಸ್ಥಿತಿಯಲ್ಲಿ, ಕೆಲವು ದಿನಾಂಕಗಳ ಮೇಲೆ ಮಂಗಳನ ಪ್ರಭಾವ ಬಲವಾಗಿರುತ್ತದೆ. ಹಾಗೆಯೇ ಈ ಸಮಯದಲ್ಲಿ ಪ್ರಯಾಣವು ಅಪಾಯಕಾರಿ. ಈ ಹೆಚ್ಚಿನ ಅಪಾಯದ ದಿನಾಂಕಗಳಲ್ಲಿ ಪ್ರಯಾಣವು ವಿಳಂಬ, ಆರೋಗ್ಯ ಸಮಸ್ಯೆಗಳು ಅಥವಾ ಶಕ್ತಿಯ ಅಸಮತೋಲನಕ್ಕೆ ಕಾರಣವಾಗಬಹುದು ಎಂದು ಮುನ್ಸೂಚನೆ ನೀಡಿದ್ದಾರೆ.

ಆ ಅಶುಭ ದಿನಾಂಕಗಳು ಯಾವುವು?

ಶ್ವೇತಾ ಎಸ್ ಮಹೇಶ್ವರಿ ಅವರು, ಪ್ರಯಾಣವು ಅಪಘಾತಗಳಿಗೆ ಕಾರಣವಾಗಬಹುದಾದ ಆ ಅಶುಭ ದಿನಾಂಕಗಳ ಬಗ್ಗೆ ಸಹ ಹೇಳಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್ ಉಲ್ಲೇಖಿಸಿರುವ ಆ ದಿನಾಂಕಗಳು ಇಲ್ಲಿವೆ ನೋಡಿ.

• ಜನವರಿ: 8, 17, 26
• ಫೆಬ್ರವರಿ: 7, 16, 25
• ಮಾರ್ಚ್: 6, 15, 24
• ಏಪ್ರಿಲ್: 5, 14, 23
• ಮೇ: 4, 13, 22, 31
• ಜೂನ್: 3, 12, 21, 30
• ಜುಲೈ: 2, 11, 20, 29
• ಆಗಸ್ಟ್: 1, 10, 19, 28
• ಸೆಪ್ಟೆಂಬರ್: 9, 18, 27
• ಅಕ್ಟೋಬರ್: 8, 17, 26
• ನವೆಂಬರ್: 7, 16, 25
• ಡಿಸೆಂಬರ್: 6, 15, 24

ನೆಟ್ಟಿಗರ ಕಾಮೆಂಟ್ ಏನು? ಯಾವೆಲ್ಲಾ ಪ್ರಶ್ನೆ ಕೇಳಿದ್ದಾರೆ?

ಶ್ವೇತಾ ಎಸ್ ಮಹೇಶ್ವರಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ನೆಟ್ಟಿಗರಲ್ಲಿ ಆತಂಕ ಹೆಚ್ಚಿಸಿರುವುದು ಸುಳ್ಳಲ್ಲ. ಸಾಮಾಜಿಕ ಜಾಲತಾಣ ಬಳಕೆದಾರರು, ಶ್ವೇತಾ ಮಹೇಶ್ವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಒಬ್ಬರು, 'ನಾನು ಈಗಾಗಲೇ ಟಿಕೆಟ್ ಬುಕ್ ಮಾಡಿದ್ದೇನೆ. ಇದು ನನ್ನ ಮದುವೆ. ಇದನ್ನು ತಪ್ಪಿಸಲು ಯಾವುದೇ ಮಾರ್ಗವಿದೆಯೇ?' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರ, 'ಪ್ರಯಾಣವನ್ನು ವೃತ್ತಿಯಾಗಿ ಹೊಂದಿರುವವರು ಏನು ಮಾಡಬೇಕು? ಎಂದು ಕೇಳಿದ್ದಾರೆ. ಇನ್ನೊಬ್ಬರು, 'ನಾನು ಸಿಬ್ಬಂದಿ ಹಡಗಿನಲ್ಲಿ ಕೆಲಸ ಮಾಡುತ್ತೇನೆ. ಹಾಗಾದರೆ, ನಾನು ಏನು ಮಾಡಬೇಕು?' ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ರೀತಿಯ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

Story first published: Tuesday, June 17, 2025, 19:39 [IST]
X
Desktop Bottom Promotion