Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಆಷಾಢ ಅಮವಾಸ್ಯೆ: ಯಾವ ಸಮಯದೊಳಗೆ ಎಡೆ ಬಡಿಸಬೇಕು? ಈ ಭೀಮನ ಅಮವಾಸ್ಯೆ ಹೆಣ್ಮಕ್ಕಳಿಗೆ ವಿಶೇಷವಾದದ್ದು ಏಕೆ?
ಆಷಾಢ ಅಮವಾಸ್ಯೆ ಹಿಂದೂಗಳಿಗೆ ಬಹು ಪ್ರಮುಖವಾದ ದಿನ, ಈ ದಿನದಂದು ಪಿತೃಗಳಿಗೆ ತರ್ಪಣ ನೀಡಿದರೆ ಅವರಿಗೆ ಮೋಕ್ಷ ಸಿಗುವುದು, ಕುಟುಂಬದಲ್ಲಿ ನೆಮ್ಮದಿ, ಸಂತೋಷ ಇರುತ್ತದೆ ಎಂಬ ನಂಬಿಕೆ. ಈ ಪಿತೃ ತರ್ಪಣವನ್ನು ಕೆಲವೊಂದು ವಿಶೇಷ ದಿನಗಳಲ್ಲಿ ಮಾಡಲಾಗುವುದು, ಆಷಾಢ ಅಮವಾಸ್ಯೆ, ದೀಪಾವಳಿ ಸಮಯದಲ್ಲಿ ಹಾಗೂ ಪಿತೃ ಪಕ್ಷದ ಸಮಯದಲ್ಲಿ ಪಿತೃ ತರ್ಪಣ ಕಾರ್ಯ ಮಾಡುತ್ತಾರೆ.
ಸತ್ತ ದಿನಾಂಕ, ತಿಥಿ ತಿಳಿದಿರದಿದ್ದರೆ ಈ ಸಮಯದಲ್ಲಿ ತರ್ಪಣ ನೀಡಬಹುದು. ಈ ದಿನಗಳಲ್ಲಿ ಪಿತೃ ತರ್ಪಣ ನೀಡುವುದರಿಂದ ಎಲ್ಲಾ ಹಿರಿಯರ ಆಶೀರ್ವಾದ ಸಿಗುತ್ತದೆ, ಎಲ್ಲರಿಗೂ ಮೋಕ್ಷ ಸಿಗುತ್ತದೆ, ಹಾಗಾಗಿ ಅವರು ಸಂಂತೋಷದಿಂದ ನಮ್ಮನ್ನು ಹರಿಸುತ್ತಾರೆ, ಅವರ ರಕ್ಷಣೆ ಸದಾ ನಮ್ಮ ಮೇಲಿರುತ್ತದೆ ಎಂದು ಹೇಳಲಾಗುವುದು. ಹೀಗಾಗಿ ಈ ಪಿತೃ ತರ್ಪಣಕ್ಕೆ ತುಂಬಾನೇ ಮಹತ್ವವಿದೆ.
ಆಷಾಢ ಅಮವಾಸ್ಯೆಯನ್ನು ಭೀಮನ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು. ಆಷಾಢ ಅಮವಾಸ್ಯೆ ಈ ಬಾರಿ ಆಗಸ್ಟ್ 4ಕ್ಕೆ ಬಂದಿದೆ, ಅಮವಾಸ್ಯೆ ತಿಥಿ ಶನಿವಾರದಂದು ಮಧ್ಯಾಹ್ನ 03:54ಕ್ಕೆ ಶುರುವಾಗಿ ಆಗಸ್ಟ್ 4 ಸಂಜೆ 4:44ಕ್ಕೆ ಮುಕ್ತಾಯವಾಗಲಿದೆ.

ಆಷಾಢ ಅಮವಾಸ್ಯೆ ಎಡೆ ಬಡಿಸುವ ಪದ್ಧತಿ ಇದೆ
ಕೆಲವರಿ ಈ ದಿನ ಪಿತೃತರ್ಪಣವನ್ನು ಅರ್ಪಿಸಿ ಬರುತ್ತಾರೆ, ಇನ್ನು ಕೆಲವರು ಪಿತೃ ತರ್ಪಣ ಅರ್ಪಿಸಿ ಬಂದ ಮೇಲೆ ಹಿರಿಯರಿಗೆ ಎಡೆ ಅರ್ಪಿಸುತ್ತಾರೆ. ಈ ದಿನ ಅವರಿಗೆ ಇಷ್ಟವಾದ ಭಕ್ಷ್ಯ ಮಾಡಿ ಎಡೆ ಬಡಿಸಲಾಗುವುದು.
ಈ ವರ್ಷ ಎಡೆಯನ್ನು ಸಮಯದಲ್ಲಿ ಬಡಿಸಬೇಕು?
ತೀರಿ ಹೋದ ಪೂರ್ವಜರಿಗೆ ಎಡೆಯನ್ನು ಅಮವಾಸ್ಯೆಯ ತಿಥಿಯ ಒಳಗಡೆ ಬಡಿಸಬೇಕು, ಹಾಗಾಗಿ ಈ ವರ್ಷ ಕೆಲವರು ಶನಿವಾರ ಸಂಜೆ ಎಡೆ ಇಡುತ್ತಿದ್ದಾರೆ, ಭಾನುವಾರ ಇಡುವುದಾದರೆ ಸಂಜೆ 04:44ರ ಒಳಗಾಗಿ ಇಡಬೇಕು.
ಭೀಮನ ಅಮವಾಸ್ಯೆ
ಆಷಾಢ ಅಮವಾಸ್ಯೆಯನ್ನು ಭೀಮನ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ, ಈ ದಿನ ಮಹಿಳೆಯರಿಗೆ ತುಂಬಾನೇ ವಿಶೇಷ, ಗಂಡನ ಹಾಗೂ ಒಡಹುಟ್ಟಿದ ಸಹೋದರರ ಶ್ರೇಯೋಭಿವೃದ್ಧಿಗಾಗಿ ಭೀಮನ ಅಮವಾಸ್ಯೆ ಆಚರಿಸುತ್ತಾರೆ.
ಶಿವನಿಗೆ ಆರಾಧನೆಗೆ ವಿಶೇಷ ದಿನ:
ಈ ದಿನ ಶಿವನ ಆರಾಧನೆಗೆ ತುಂಬಾನೇ ವಿಶೇಷವಾದ ದಿನವೆಂದು ಹೇಳಲಾಗುವುದು. ಈ ದಿನ ವಿವಾಹಿತರು ಗಂಡನ ಆರೋಗ್ಯ, ಆಯುಸ್ಸಿಗೆ ಪ್ರಾರ್ಥನೆ ಮಾಡಿದರೆ, ಅವಾಹಿತ ಹೆಣ್ಮಕ್ಕಳು ಒಳ್ಳೆಯ ಗಂಡನ ನೀಡು ಎಂದು ಪ್ರಾರ್ಥಿಸಿ ಈ ದಿನ ಪೂಜೆ ಮಾಡುತ್ತಾರೆ.
ಈ ದಿನ ಎರಡು ವಿಶೇಷ ದೀಪಗಳನ್ನು ಹಚ್ಚಲಾಗುವುದು, ಇದನ್ನು ಕಾಳಿಕಾಂಬ ದೀಪವೆಂದು ಕರೆಯಲಾಗುವುದು, ನಂತರ ಶಿವ-ಪಾರ್ವತಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications