Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಆಷಾಢ ಅಮವಾಸ್ಯೆ: ಯಾವ ಸಮಯದೊಳಗೆ ಎಡೆ ಬಡಿಸಬೇಕು? ಈ ಭೀಮನ ಅಮವಾಸ್ಯೆ ಹೆಣ್ಮಕ್ಕಳಿಗೆ ವಿಶೇಷವಾದದ್ದು ಏಕೆ?
ಆಷಾಢ ಅಮವಾಸ್ಯೆ ಹಿಂದೂಗಳಿಗೆ ಬಹು ಪ್ರಮುಖವಾದ ದಿನ, ಈ ದಿನದಂದು ಪಿತೃಗಳಿಗೆ ತರ್ಪಣ ನೀಡಿದರೆ ಅವರಿಗೆ ಮೋಕ್ಷ ಸಿಗುವುದು, ಕುಟುಂಬದಲ್ಲಿ ನೆಮ್ಮದಿ, ಸಂತೋಷ ಇರುತ್ತದೆ ಎಂಬ ನಂಬಿಕೆ. ಈ ಪಿತೃ ತರ್ಪಣವನ್ನು ಕೆಲವೊಂದು ವಿಶೇಷ ದಿನಗಳಲ್ಲಿ ಮಾಡಲಾಗುವುದು, ಆಷಾಢ ಅಮವಾಸ್ಯೆ, ದೀಪಾವಳಿ ಸಮಯದಲ್ಲಿ ಹಾಗೂ ಪಿತೃ ಪಕ್ಷದ ಸಮಯದಲ್ಲಿ ಪಿತೃ ತರ್ಪಣ ಕಾರ್ಯ ಮಾಡುತ್ತಾರೆ.
ಸತ್ತ ದಿನಾಂಕ, ತಿಥಿ ತಿಳಿದಿರದಿದ್ದರೆ ಈ ಸಮಯದಲ್ಲಿ ತರ್ಪಣ ನೀಡಬಹುದು. ಈ ದಿನಗಳಲ್ಲಿ ಪಿತೃ ತರ್ಪಣ ನೀಡುವುದರಿಂದ ಎಲ್ಲಾ ಹಿರಿಯರ ಆಶೀರ್ವಾದ ಸಿಗುತ್ತದೆ, ಎಲ್ಲರಿಗೂ ಮೋಕ್ಷ ಸಿಗುತ್ತದೆ, ಹಾಗಾಗಿ ಅವರು ಸಂಂತೋಷದಿಂದ ನಮ್ಮನ್ನು ಹರಿಸುತ್ತಾರೆ, ಅವರ ರಕ್ಷಣೆ ಸದಾ ನಮ್ಮ ಮೇಲಿರುತ್ತದೆ ಎಂದು ಹೇಳಲಾಗುವುದು. ಹೀಗಾಗಿ ಈ ಪಿತೃ ತರ್ಪಣಕ್ಕೆ ತುಂಬಾನೇ ಮಹತ್ವವಿದೆ.
ಆಷಾಢ ಅಮವಾಸ್ಯೆಯನ್ನು ಭೀಮನ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು. ಆಷಾಢ ಅಮವಾಸ್ಯೆ ಈ ಬಾರಿ ಆಗಸ್ಟ್ 4ಕ್ಕೆ ಬಂದಿದೆ, ಅಮವಾಸ್ಯೆ ತಿಥಿ ಶನಿವಾರದಂದು ಮಧ್ಯಾಹ್ನ 03:54ಕ್ಕೆ ಶುರುವಾಗಿ ಆಗಸ್ಟ್ 4 ಸಂಜೆ 4:44ಕ್ಕೆ ಮುಕ್ತಾಯವಾಗಲಿದೆ.

ಆಷಾಢ ಅಮವಾಸ್ಯೆ ಎಡೆ ಬಡಿಸುವ ಪದ್ಧತಿ ಇದೆ
ಕೆಲವರಿ ಈ ದಿನ ಪಿತೃತರ್ಪಣವನ್ನು ಅರ್ಪಿಸಿ ಬರುತ್ತಾರೆ, ಇನ್ನು ಕೆಲವರು ಪಿತೃ ತರ್ಪಣ ಅರ್ಪಿಸಿ ಬಂದ ಮೇಲೆ ಹಿರಿಯರಿಗೆ ಎಡೆ ಅರ್ಪಿಸುತ್ತಾರೆ. ಈ ದಿನ ಅವರಿಗೆ ಇಷ್ಟವಾದ ಭಕ್ಷ್ಯ ಮಾಡಿ ಎಡೆ ಬಡಿಸಲಾಗುವುದು.
ಈ ವರ್ಷ ಎಡೆಯನ್ನು ಸಮಯದಲ್ಲಿ ಬಡಿಸಬೇಕು?
ತೀರಿ ಹೋದ ಪೂರ್ವಜರಿಗೆ ಎಡೆಯನ್ನು ಅಮವಾಸ್ಯೆಯ ತಿಥಿಯ ಒಳಗಡೆ ಬಡಿಸಬೇಕು, ಹಾಗಾಗಿ ಈ ವರ್ಷ ಕೆಲವರು ಶನಿವಾರ ಸಂಜೆ ಎಡೆ ಇಡುತ್ತಿದ್ದಾರೆ, ಭಾನುವಾರ ಇಡುವುದಾದರೆ ಸಂಜೆ 04:44ರ ಒಳಗಾಗಿ ಇಡಬೇಕು.
ಭೀಮನ ಅಮವಾಸ್ಯೆ
ಆಷಾಢ ಅಮವಾಸ್ಯೆಯನ್ನು ಭೀಮನ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ, ಈ ದಿನ ಮಹಿಳೆಯರಿಗೆ ತುಂಬಾನೇ ವಿಶೇಷ, ಗಂಡನ ಹಾಗೂ ಒಡಹುಟ್ಟಿದ ಸಹೋದರರ ಶ್ರೇಯೋಭಿವೃದ್ಧಿಗಾಗಿ ಭೀಮನ ಅಮವಾಸ್ಯೆ ಆಚರಿಸುತ್ತಾರೆ.
ಶಿವನಿಗೆ ಆರಾಧನೆಗೆ ವಿಶೇಷ ದಿನ:
ಈ ದಿನ ಶಿವನ ಆರಾಧನೆಗೆ ತುಂಬಾನೇ ವಿಶೇಷವಾದ ದಿನವೆಂದು ಹೇಳಲಾಗುವುದು. ಈ ದಿನ ವಿವಾಹಿತರು ಗಂಡನ ಆರೋಗ್ಯ, ಆಯುಸ್ಸಿಗೆ ಪ್ರಾರ್ಥನೆ ಮಾಡಿದರೆ, ಅವಾಹಿತ ಹೆಣ್ಮಕ್ಕಳು ಒಳ್ಳೆಯ ಗಂಡನ ನೀಡು ಎಂದು ಪ್ರಾರ್ಥಿಸಿ ಈ ದಿನ ಪೂಜೆ ಮಾಡುತ್ತಾರೆ.
ಈ ದಿನ ಎರಡು ವಿಶೇಷ ದೀಪಗಳನ್ನು ಹಚ್ಚಲಾಗುವುದು, ಇದನ್ನು ಕಾಳಿಕಾಂಬ ದೀಪವೆಂದು ಕರೆಯಲಾಗುವುದು, ನಂತರ ಶಿವ-ಪಾರ್ವತಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
