Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವರ್ಷದ ಮೊದಲ ಶನಿ ತ್ರಯೋದಶಿ: ಪ್ರದೋಷ(ಸಂಜೆ) ಸಮಯದಲ್ಲಿ ಈ ಪರಿಹಾರ ಮಾಡಿದರೆ ಕಷ್ಟಗಳು ದೂರಾಗುವುದು
ವರ್ಷದ ಮೊದಲ ಶನಿ ತ್ರಯೋದಶಿ ಈ ದಿನ(ಜನವರಿ 11ಕ್ಕೆ ಬಂದಿದೆ). ಶನಿವಾರ ಶನಿದೇವನ ಆರಾಧನೆಗೆ ಮೀಸಲಾದ ದಿನ, ಇದೇ ದಿನದಂದು ಪ್ರದೋಷ ವ್ರತ ಕೂಡ ಬಂದರೆ ಆ ದಿನವನ್ನು ಶನಿ ತ್ರಯೋದಶಿಯೆಂದು ಆಚರಿಸಲಾಗುವುದು, ಶನಿಯ ದೋಷಗಳಿದ್ದರೆ ಅದರ ನಿವಾರಣೆ ಈ ದಿನ ಅತ್ಯಂತ ಶ್ರೇಷ್ಠವಾಗಿದೆ.
ಈ ದಿನ ಶನಿ ತ್ರಯೋದಶಿ ಆಚರಣೆ ಮಾಡುವುದರಿಂದ ಶನಿದೋಷವಿದ್ದರೆ ಅದು ಕಡಿಮೆಯಾಗಲಿದೆ, ಶನಿ ದೋಷಕ್ಕೆ ಅತ್ಯಂತ ಶ್ರೇಷ್ಠವಾದ ದಿನವಾಗಿದೆ. ಹಾಗಾಗಿ ಶನಿಸಾಡೇಸಾತಿ ನಡೆಯುತ್ತಿರುವವರೆಗೆ ಈ ದಿನ ದಿನ ಅತ್ಯಂತ ಮುಖ್ಯವಾಗಿದೆ, ಶನಿತ್ರಯೋದಶಿಯಂದು ಪ್ರದೋಷ ಕಾಲದಲ್ಲಿ ಮಾಡುವ ಪೂಜೆ ತುಂಬಾನೇ ವಿಶೇಷವಾಗಿದೆ, ಇದರ ಬಗ್ಗೆ ಮತ್ತಷ್ಟು ಮಾಹಿತಿ ನೋಡೋಣ:

ಈ ಶನಿ ತ್ರಯೋದಶಿ ದಿನ ಏನು ಮಾಡಬೇಕು?
ಶನಿ ತ್ರಯೋದಶಿಯಂದು ಉಪವಾಸವಿದ್ದು ದೇವಾಲಯಕ್ಕೆ ಹೋಗಿ ಸಾಸಿವೆಯೆಣ್ಣೆಯಲ್ಲಿ ನಮ್ಮ ಮುಖವನ್ನು ನೋಡಿ ದೇವಾಲಯಕ್ಕೆ ಅರ್ಪಿಸಿ ಬರಬೇಕು, ಹೀಗೆ ಮಾಡುವುದರಿಂದ ಶನಿದೋಷವಿರುವುದು ಕಡಿಮೆಯಾಗುತ್ತದೆ.
ಈ ದಿನ ಮಾಡುವ ದಾನಕ್ಕೆ ಮಹತ್ವವಿದೆ
ಶನಿ ತ್ರಯೋದಶಿಯಂದು ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ, ಈ ದಿನ ಕಪ್ಪು ಕಂಬಳಿ, ವಸ್ತ್ರಗಳು, ಕಪ್ಪು ಎಳ್ಳು ಇವುಗಳನ್ನು ದಾನ ಮಾಡಿ. ಈ ರೀತಿ ಮಾಡುವ ದಾನದಿಂದ ನಿಮ್ಮ ಕಷ್ಟಗಳು ಕಡಿಮೆಯಾಗುವುದು. ಶನಿಯ ತನ್ನ ಕಠಿಣ ದೃಷ್ಟಿ ಬೀರುವುದಿಲ್ಲ, ಹೀಗಾಗಿ ಶನಿ ದೋಷ ನೀಡುವ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.
ಪ್ರದೋಷ ಸಮಯದಲ್ಲ ಶಿವಲಿಂಗಕ್ಕೆ ಅಭಿಷೇಕ ಮಾಡಿ
ಪ್ರದೋಷ ಸಮಯದಲ್ಲಿ ಶಿವ ಪೂಜೆಯನ್ನು ಮಾಡಬೇಕು, ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಕಷ್ಟಗಳ ನಿವಾರಣೆಗೆ ತುಂಬಾನೇಸಹಕಾರಿಯಾಗಿದೆ. ರುದ್ರಾಭಿಷೇಕ ಮಾಡಿಸುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೇವೆ, ಶಿವನ ಕೃಪೆಯಿಂದ ಕಷ್ಟಗಳ ನಿವಾರಣೆಯಾಗಲಿದೆ, ಶನಿದೋಷದಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು.
ಶನಿಸಾಡೇಸಾತಿ ಅತ್ಯಂತ ಕಠಿಣದ ಸಮಯ ಏಕೆ?
ಧಾರ್ಮಿಕ ನಂಬಿಕೆ ಪ್ರಕಾರ ಒಬ್ಬ ಮನುಷ್ಯನ ಜೀವನದಲ್ಲಿ ಅತ್ಯಂತ ಕಷ್ಟದ ಸಮಯವೆಂದರೆ ಶನಿಸಾಡೇಸಾತಿ ಸಮಯ. ಶನಿ ಸಾಡೇಸಾತಿ ಅವಧಿ ಅಂದರೆ ಏಳೂವರೆ ವರ್ಷ. ಈ ಸಮಯದಲ್ಲಿ ಅವನು ತುಂಬಾನೇ ಕಷ್ಟ ಅನುಭವಿಸುತ್ತಾನೆ, ಅವಮಾನಗಳು, ಸೋಲು, ಆರ್ಥಿಕ ನಷ್ಟ, ವೃತ್ತಿ ಬದುಕಿನಲ್ಲಿ ಏರಳಿತ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ. ಈ ಶನಿಸಾಡೇಸಾತಿ ತಮ್ಮ ರಾಶಿಯಲ್ಲಿರುವವರು ಶನಿಗೆ ಸಂಬಂಧಿಸಿದ ಪೂಜೆ ಮಾಡಿದರೆ ಶನಿ ದೋಷ ಕಡಿಮೆಯಾಗುವುದು, ಶನಿ ಸಾಡೇಸಾತಿಗೆ ಶನಿತ್ರಯೋದಶಿಯಂದ ಮಾಡುವ ಪೂಜೆ ಅತ್ಯಂತ ಮಹತ್ವದ್ದಾಗಿದೆ.
ಶನಿ ಮಂತ್ರ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
' ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











