Latest Updates
-
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ!
ಇದೇನಿದು ಮುಖ್ಯಮಂತ್ರಿಗಳೇ! ಏನೂ ಅಂತ ಇಂಥ ಮಾತಾಡಿದಿರೀ?

ಏನು ನಿಮ್ಮೀ ಮಾತಿನ ಅರ್ಥ? ಇದರಿಂದ ಭ್ರಷ್ಟರ ಪಟಾಲಂಗೆ ಏನು ಸಂದೇಶ ಹೋಗುತ್ತದೆ ಎಂಬುದರ ಪರಿಜ್ಞಾನ ಇದೆಯಾ ನಿಮಗೆ? ಇರ್ಲಿ ಬಿಡಿ. ಭ್ರಷ್ಟಾತಿಭ್ರಷ್ಟರು ನಿಮ್ಮ ಹೆಗಲ ಮೇಲೆ ಕೈಹಾಕಿಕೊಂಡಿರುವಾಗ (ಒಮ್ಮೆ ಪಕ್ಕದ ಚಿತ್ರ ನೋಡಿ) ನಿಮ್ಮಂಥವರಿಂದ ಇನ್ನೆಂಥ ಮಾತು ಬರಲು ಸಾಧ್ಯ ಅಲ್ಲವೇ!?
ಇದು ನೂರಕ್ಕೆ ನೂರರಷ್ಟು ನಿಮಗೇ ತಿರುಗುಬಾಣವಾಗುವ ಖಾತ್ರಿ ನಮಗಿದೆ, ಗೊತ್ತಾ? ಯಾಕೆ, ಈ ಪಾಟಿ ಹತಾಶರಾದಿರಿ ಸದಾ ಆನಂದದ ಗೌಡರೇ? ಆಯ್ತು. ನ್ಯಾ. ಬನ್ನೂರುಮಠರು ನಿಮ್ಮ ಮಾತನ್ನು ಯಥಾವತ್ತಾಗಿ ಸ್ವೀಕರಿಸಿ ನಾಳೆ ದಿನ ಲೋಕಾಯುಕ್ತರಾದರು ಅಂತಿಟ್ಟುಕೊಳ್ಳಿ. ಆಗ ಏನಾದೀತು ಲೋಕಾಯುಕ್ತದ ಘನತೆ. ಹೋಗಲಿ ಅಂಥಾ 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಲೋಕಾಯುಕ್ತರಿಂದ ಜನತೆ ಏನನ್ನು ತಾನೇ ನಿರೀಕ್ಷಿಸಿಯಾರು.
'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿಲ್ಲದ' ವ್ಯಕ್ತಿಗಳಿಗೆ ಮಣೆ ಹಾಕುವ ಮೂಲಕ ನೀವೇನು ಭ್ರಷ್ಟಾಚಾರವನ್ನು ಸಾರ್ವತ್ರಿಕಗೊಳಿಸ ಬಯಸಿದ್ದೀರಾ? ಶೇಮ್ ಆನ್ ಯು.
ನ್ಯಾ. ಬನ್ನೂರುಮಠರನ್ನು ಲೋಕಾಯುಕ್ತರನ್ನಾಗಿಸುವ ಮೊದಲು 'ನಾನು ನೂರಕ್ಕೆ 99ರಷ್ಟು ಪರಿಪೂರ್ಣನಾಗಿದ್ದೆ. ಸರಿ ನನ್ನನ್ನೇ ಲೋಕಾಯುಕ್ತರನ್ನಾಗಿ ಮಾಡಿ ಎಂದು ನ್ಯಾ. ಶಿವರಾಜ್ ಪಾಟೀಲ್ ನಿಮ್ಮ ಮನೆಯ ಬಾಗಿಲು ಬಡಿದರೆ ಏನು ಉತ್ತರ ನೀಡುವಿರಿ. ಹೆಚ್ಚೇನೂ ಇಲ್ಲ. ಇಬ್ಬರೂ ಒಂದೇ ಬಡಾವಣೆಯ ಫಲಾನುಭವಿಗಳು. 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಇಬ್ಬರನ್ನು ನೇಮಕ ಮಾಡುವ ಸುಯೋಗ ನಿಮ್ಮದಾಗುತ್ತದೆ. ನೋಡಿ, ಏನು ಮಾಡುತ್ತೀರೋ?



Click it and Unblock the Notifications