Latest Updates
-
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು!
ಇದೇನಿದು ಮುಖ್ಯಮಂತ್ರಿಗಳೇ! ಏನೂ ಅಂತ ಇಂಥ ಮಾತಾಡಿದಿರೀ?

ಏನು ನಿಮ್ಮೀ ಮಾತಿನ ಅರ್ಥ? ಇದರಿಂದ ಭ್ರಷ್ಟರ ಪಟಾಲಂಗೆ ಏನು ಸಂದೇಶ ಹೋಗುತ್ತದೆ ಎಂಬುದರ ಪರಿಜ್ಞಾನ ಇದೆಯಾ ನಿಮಗೆ? ಇರ್ಲಿ ಬಿಡಿ. ಭ್ರಷ್ಟಾತಿಭ್ರಷ್ಟರು ನಿಮ್ಮ ಹೆಗಲ ಮೇಲೆ ಕೈಹಾಕಿಕೊಂಡಿರುವಾಗ (ಒಮ್ಮೆ ಪಕ್ಕದ ಚಿತ್ರ ನೋಡಿ) ನಿಮ್ಮಂಥವರಿಂದ ಇನ್ನೆಂಥ ಮಾತು ಬರಲು ಸಾಧ್ಯ ಅಲ್ಲವೇ!?
ಇದು ನೂರಕ್ಕೆ ನೂರರಷ್ಟು ನಿಮಗೇ ತಿರುಗುಬಾಣವಾಗುವ ಖಾತ್ರಿ ನಮಗಿದೆ, ಗೊತ್ತಾ? ಯಾಕೆ, ಈ ಪಾಟಿ ಹತಾಶರಾದಿರಿ ಸದಾ ಆನಂದದ ಗೌಡರೇ? ಆಯ್ತು. ನ್ಯಾ. ಬನ್ನೂರುಮಠರು ನಿಮ್ಮ ಮಾತನ್ನು ಯಥಾವತ್ತಾಗಿ ಸ್ವೀಕರಿಸಿ ನಾಳೆ ದಿನ ಲೋಕಾಯುಕ್ತರಾದರು ಅಂತಿಟ್ಟುಕೊಳ್ಳಿ. ಆಗ ಏನಾದೀತು ಲೋಕಾಯುಕ್ತದ ಘನತೆ. ಹೋಗಲಿ ಅಂಥಾ 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಲೋಕಾಯುಕ್ತರಿಂದ ಜನತೆ ಏನನ್ನು ತಾನೇ ನಿರೀಕ್ಷಿಸಿಯಾರು.
'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿಲ್ಲದ' ವ್ಯಕ್ತಿಗಳಿಗೆ ಮಣೆ ಹಾಕುವ ಮೂಲಕ ನೀವೇನು ಭ್ರಷ್ಟಾಚಾರವನ್ನು ಸಾರ್ವತ್ರಿಕಗೊಳಿಸ ಬಯಸಿದ್ದೀರಾ? ಶೇಮ್ ಆನ್ ಯು.
ನ್ಯಾ. ಬನ್ನೂರುಮಠರನ್ನು ಲೋಕಾಯುಕ್ತರನ್ನಾಗಿಸುವ ಮೊದಲು 'ನಾನು ನೂರಕ್ಕೆ 99ರಷ್ಟು ಪರಿಪೂರ್ಣನಾಗಿದ್ದೆ. ಸರಿ ನನ್ನನ್ನೇ ಲೋಕಾಯುಕ್ತರನ್ನಾಗಿ ಮಾಡಿ ಎಂದು ನ್ಯಾ. ಶಿವರಾಜ್ ಪಾಟೀಲ್ ನಿಮ್ಮ ಮನೆಯ ಬಾಗಿಲು ಬಡಿದರೆ ಏನು ಉತ್ತರ ನೀಡುವಿರಿ. ಹೆಚ್ಚೇನೂ ಇಲ್ಲ. ಇಬ್ಬರೂ ಒಂದೇ ಬಡಾವಣೆಯ ಫಲಾನುಭವಿಗಳು. 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಇಬ್ಬರನ್ನು ನೇಮಕ ಮಾಡುವ ಸುಯೋಗ ನಿಮ್ಮದಾಗುತ್ತದೆ. ನೋಡಿ, ಏನು ಮಾಡುತ್ತೀರೋ?



Click it and Unblock the Notifications