For Quick Alerts
ALLOW NOTIFICATIONS  
For Daily Alerts

ಇದೇನಿದು ಮುಖ್ಯಮಂತ್ರಿಗಳೇ! ಏನೂ ಅಂತ ಇಂಥ ಮಾತಾಡಿದಿರೀ?

By Srinath
|
bannur-matt-land-scam-sadananda-gowda-reaction
ಬೆಂಗಳೂರು, ಅ 29: ನಾಡಿನ ದೊರೆ ಸದಾನಂದ ಗೌಡರು 'ನೂರಕ್ಕೆ ನೂರರಷ್ಟು ಯಾರೂ ಪರಿಪೂರ್ಣರಾಗಿರುವುದಿಲ್ಲ' ಎಂದಿದ್ದಾರೆ. ಇದೇನಿದು, ಮುಖ್ಯಮಂತ್ರಿಗಳೇ! ಏನೂ ಅಂತ ಇಂಥ ಮಾತಾಡಿದಿರೀ ನನ್ನ ದೊರೆಯೇ? ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವವರ ಬಾಯಿಂದ ಇಂಥ ಮಾತು ಬರಬಹುದಾ!?

ಏನು ನಿಮ್ಮೀ ಮಾತಿನ ಅರ್ಥ? ಇದರಿಂದ ಭ್ರಷ್ಟರ ಪಟಾಲಂಗೆ ಏನು ಸಂದೇಶ ಹೋಗುತ್ತದೆ ಎಂಬುದರ ಪರಿಜ್ಞಾನ ಇದೆಯಾ ನಿಮಗೆ? ಇರ್ಲಿ ಬಿಡಿ. ಭ್ರಷ್ಟಾತಿಭ್ರಷ್ಟರು ನಿಮ್ಮ ಹೆಗಲ ಮೇಲೆ ಕೈಹಾಕಿಕೊಂಡಿರುವಾಗ (ಒಮ್ಮೆ ಪಕ್ಕದ ಚಿತ್ರ ನೋಡಿ) ನಿಮ್ಮಂಥವರಿಂದ ಇನ್ನೆಂಥ ಮಾತು ಬರಲು ಸಾಧ್ಯ ಅಲ್ಲವೇ!?

ಇದು ನೂರಕ್ಕೆ ನೂರರಷ್ಟು ನಿಮಗೇ ತಿರುಗುಬಾಣವಾಗುವ ಖಾತ್ರಿ ನಮಗಿದೆ, ಗೊತ್ತಾ? ಯಾಕೆ, ಈ ಪಾಟಿ ಹತಾಶರಾದಿರಿ ಸದಾ ಆನಂದದ ಗೌಡರೇ? ಆಯ್ತು. ನ್ಯಾ. ಬನ್ನೂರುಮಠರು ನಿಮ್ಮ ಮಾತನ್ನು ಯಥಾವತ್ತಾಗಿ ಸ್ವೀಕರಿಸಿ ನಾಳೆ ದಿನ ಲೋಕಾಯುಕ್ತರಾದರು ಅಂತಿಟ್ಟುಕೊಳ್ಳಿ. ಆಗ ಏನಾದೀತು ಲೋಕಾಯುಕ್ತದ ಘನತೆ. ಹೋಗಲಿ ಅಂಥಾ 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಲೋಕಾಯುಕ್ತರಿಂದ ಜನತೆ ಏನನ್ನು ತಾನೇ ನಿರೀಕ್ಷಿಸಿಯಾರು.

'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿಲ್ಲದ' ವ್ಯಕ್ತಿಗಳಿಗೆ ಮಣೆ ಹಾಕುವ ಮೂಲಕ ನೀವೇನು ಭ್ರಷ್ಟಾಚಾರವನ್ನು ಸಾರ್ವತ್ರಿಕಗೊಳಿಸ ಬಯಸಿದ್ದೀರಾ? ಶೇಮ್ ಆನ್ ಯು.

ನ್ಯಾ. ಬನ್ನೂರುಮಠರನ್ನು ಲೋಕಾಯುಕ್ತರನ್ನಾಗಿಸುವ ಮೊದಲು 'ನಾನು ನೂರಕ್ಕೆ 99ರಷ್ಟು ಪರಿಪೂರ್ಣನಾಗಿದ್ದೆ. ಸರಿ ನನ್ನನ್ನೇ ಲೋಕಾಯುಕ್ತರನ್ನಾಗಿ ಮಾಡಿ ಎಂದು ನ್ಯಾ. ಶಿವರಾಜ್‌ ಪಾಟೀಲ್ ನಿಮ್ಮ ಮನೆಯ ಬಾಗಿಲು ಬಡಿದರೆ ಏನು ಉತ್ತರ ನೀಡುವಿರಿ. ಹೆಚ್ಚೇನೂ ಇಲ್ಲ. ಇಬ್ಬರೂ ಒಂದೇ ಬಡಾವಣೆಯ ಫಲಾನುಭವಿಗಳು. 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಇಬ್ಬರನ್ನು ನೇಮಕ ಮಾಡುವ ಸುಯೋಗ ನಿಮ್ಮದಾಗುತ್ತದೆ. ನೋಡಿ, ಏನು ಮಾಡುತ್ತೀರೋ?

English summary

Bannurmatt land scam - Sadananda Gowda reaction uncalled for, Lokayukta-to-be Justice Bannur Matt lands in land scam, ಇದೇನಿದು ಮುಖ್ಯಮಂತ್ರಿಗಳೇ! ಏನೂ ಅಂತ ಇಂಥ ಮಾತಾಡಿದಿರೀ?

Lokayukta-to-be Justice SR Bannur Matt is embroiled in land scam. But it seems CM Sadanada Gowda has come to his rescue saying that 'all is well with a not hundred percent perfect person'. 
Story first published: Sunday, October 30, 2011, 12:34 [IST]
X
Desktop Bottom Promotion