Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಇದೇನಿದು ಮುಖ್ಯಮಂತ್ರಿಗಳೇ! ಏನೂ ಅಂತ ಇಂಥ ಮಾತಾಡಿದಿರೀ?

ಏನು ನಿಮ್ಮೀ ಮಾತಿನ ಅರ್ಥ? ಇದರಿಂದ ಭ್ರಷ್ಟರ ಪಟಾಲಂಗೆ ಏನು ಸಂದೇಶ ಹೋಗುತ್ತದೆ ಎಂಬುದರ ಪರಿಜ್ಞಾನ ಇದೆಯಾ ನಿಮಗೆ? ಇರ್ಲಿ ಬಿಡಿ. ಭ್ರಷ್ಟಾತಿಭ್ರಷ್ಟರು ನಿಮ್ಮ ಹೆಗಲ ಮೇಲೆ ಕೈಹಾಕಿಕೊಂಡಿರುವಾಗ (ಒಮ್ಮೆ ಪಕ್ಕದ ಚಿತ್ರ ನೋಡಿ) ನಿಮ್ಮಂಥವರಿಂದ ಇನ್ನೆಂಥ ಮಾತು ಬರಲು ಸಾಧ್ಯ ಅಲ್ಲವೇ!?
ಇದು ನೂರಕ್ಕೆ ನೂರರಷ್ಟು ನಿಮಗೇ ತಿರುಗುಬಾಣವಾಗುವ ಖಾತ್ರಿ ನಮಗಿದೆ, ಗೊತ್ತಾ? ಯಾಕೆ, ಈ ಪಾಟಿ ಹತಾಶರಾದಿರಿ ಸದಾ ಆನಂದದ ಗೌಡರೇ? ಆಯ್ತು. ನ್ಯಾ. ಬನ್ನೂರುಮಠರು ನಿಮ್ಮ ಮಾತನ್ನು ಯಥಾವತ್ತಾಗಿ ಸ್ವೀಕರಿಸಿ ನಾಳೆ ದಿನ ಲೋಕಾಯುಕ್ತರಾದರು ಅಂತಿಟ್ಟುಕೊಳ್ಳಿ. ಆಗ ಏನಾದೀತು ಲೋಕಾಯುಕ್ತದ ಘನತೆ. ಹೋಗಲಿ ಅಂಥಾ 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಲೋಕಾಯುಕ್ತರಿಂದ ಜನತೆ ಏನನ್ನು ತಾನೇ ನಿರೀಕ್ಷಿಸಿಯಾರು.
'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿಲ್ಲದ' ವ್ಯಕ್ತಿಗಳಿಗೆ ಮಣೆ ಹಾಕುವ ಮೂಲಕ ನೀವೇನು ಭ್ರಷ್ಟಾಚಾರವನ್ನು ಸಾರ್ವತ್ರಿಕಗೊಳಿಸ ಬಯಸಿದ್ದೀರಾ? ಶೇಮ್ ಆನ್ ಯು.
ನ್ಯಾ. ಬನ್ನೂರುಮಠರನ್ನು ಲೋಕಾಯುಕ್ತರನ್ನಾಗಿಸುವ ಮೊದಲು 'ನಾನು ನೂರಕ್ಕೆ 99ರಷ್ಟು ಪರಿಪೂರ್ಣನಾಗಿದ್ದೆ. ಸರಿ ನನ್ನನ್ನೇ ಲೋಕಾಯುಕ್ತರನ್ನಾಗಿ ಮಾಡಿ ಎಂದು ನ್ಯಾ. ಶಿವರಾಜ್ ಪಾಟೀಲ್ ನಿಮ್ಮ ಮನೆಯ ಬಾಗಿಲು ಬಡಿದರೆ ಏನು ಉತ್ತರ ನೀಡುವಿರಿ. ಹೆಚ್ಚೇನೂ ಇಲ್ಲ. ಇಬ್ಬರೂ ಒಂದೇ ಬಡಾವಣೆಯ ಫಲಾನುಭವಿಗಳು. 'ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿ ಇಲ್ಲದ' ಇಬ್ಬರನ್ನು ನೇಮಕ ಮಾಡುವ ಸುಯೋಗ ನಿಮ್ಮದಾಗುತ್ತದೆ. ನೋಡಿ, ಏನು ಮಾಡುತ್ತೀರೋ?



Click it and Unblock the Notifications