Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ರಕ್ಷಾ ಬಂಧನ 2024: ಸಿನಿಮಾ ಕತೆಯಂತಿದೆ ಈ ಅಣ್ಣ ತಂಗಿಯ ಕತೆ
ಈ ಅಣ್ಣ-ತಂಗಿಯ ಕತೆ ಥೇಟ್ ಸಿನಿಮಾ ಕತೆಯಂತಿದೆ
ಈ ಅಣ್ಣನಿಗೆ ತಂಗಿಯೇ ಎಲ್ಲಾ, ತಂಗಿಗೂ ಅಷ್ಟೇ ಅಣ್ಣನೇ ಪ್ರಪಂಚ. ಚಿಕ್ಕ ಪ್ರಾಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾರೆ, ನಂತರ ಬೆಳೆಯುವುದು ಅಜ್ಜಿಯ ಆಶ್ರಯದಲ್ಲಿ. ಮನೆಯಲ್ಲಿ ಕಡು ಬಡತನ, ಅಜ್ಜಿ ಕೂಲಿ ಮಾಡಿ ಬಂದ ಅಲ್ಪ ದುಡಿಮೆಯಿಂದಲೇ ಹೊಟ್ಟೆ ತುಂಬಬೇಕು. ಅಜ್ಜಿ, ಅಣ್ಣ-ತಂಗಿ ಇದೇ ಅವರ ಪುಟ್ಟ ಪ್ರಪಂಚ.

ಪುಟ್ಟ ಹುಡುಗನಾಗಿದ್ದಾಗಲೇ ಅಣ್ಣನಿಗೆ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅವಳಿಗೆ ಬೇಕಾಗಿರುವುದನ್ನು ಕೊಡಿಸುವ ಮಟ್ಟಕ್ಕೆ ಬೆಳೆಯಬೇಕೆಂಬ ಆಸೆ, ಹೀಗಾಗಿ ಪುಟ್ಟ ಹುಡುಗನಾಗಿದ್ದಾಲೇ ಶಾಲೆಗೆ ರಜೆ ಇದ್ದಾಗ ಕೂಲಿ ಕೆಲಸಕ್ಕೆ ಹೋಗಿ ಅದರಲ್ಲಿ ಬಂದ ಹಣದಲ್ಲಿ ತಂಗಿಗೆ ಏನಾದರು ಕೊಡಿಸಿ ಖುಷಿ ಪಡುತ್ತಿದ್ದ. ಡಿಗ್ರಿ ಓದು ಮುಗಿಯುವಷ್ಟರಲ್ಲಿ ಅಜ್ಜಿಯೂ ಇಲ್ಲ, ಅಣ್ಣ-ತಂಗಿಗೆ ಸ್ವಂತ ಸೂರಿಲ್ಲ, ಕಾಲೇಜು ಓದುತ್ತಿರುವ ತಂಗಿ, ಯಾರ ಸಹಾಯವು ಇಲ್ಲ, ಆದರೂ ತನ್ನ ತಂಗಿಗೆ ಒಳ್ಳೆಯ ಬದುಕು ಕಟ್ಟಿಕೊಟ್ಟೇ ಕೊಡುತ್ತೇನೆ, ಅವಳನ್ನು ತುಂಬಾ ಸಂತೋಷವಾಗಿ ನೋಡಿಕೊಳ್ಳುತ್ತೇನೆ ಎಂಬ ಅಣ್ಣನ ಹಠ. ಹೀಗಾಗಿ ತಂಗಿಗಾಗಿ ಏನಾದರೂ ಮಾಡಲೇಬೇಕೆಂಬ ಛಲದಲ್ಲಿ ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾನೆ.
ಈ ಸಮಯದಲ್ಲಿ ಸಿಕ್ಕ ಸಣ್ಣ-ಪುಟ್ಟ ಕೆಲಸ ಮಾಡುತ್ತಾ ತನ್ನ ಹಾಗೂ ತಂಗಿಯ ಹೊಟ್ಟೆ ತುಂಬುತ್ತಿದ್ದ, ಅಣ್ಣನ ಶ್ರಮಕ್ಕೆ ಸರ್ಕಾರಿ ನೌಕರಿ ಸಿಗುತ್ತೆ. ಅಷ್ಟೆಲ್ಲಾ ಕಷ್ಟಪಟ್ಟ ಬದುಕಿನಲ್ಲಿ ಹೊಸ ಭರವಸೆಗಳು ಮೂಡುತ್ತೆ, ಇನ್ನು ನಾನು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಆತ್ಮವಿಶ್ವಾಸ ಹೆಚ್ಚಾಗುತ್ತೆ. ದುಡಿದ ಹಣ ಕೂಡಿಟ್ಟು ಸ್ವಲ್ಪ ಜಾಗ ಖರೀದಿಸಿ, ಇರಲು ಒಂದು ಮನೆ ಮಾಡುತ್ತಾರೆ, ತಂಗಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಿದ್ದಾನೆ.
ನನ್ನ ತಂಗಿಯನ್ನು ಒಂದು ಒಳ್ಳೆಯ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕೆಂದುವುದು ಅಣ್ಣನ ಕನಸು, ನನ್ನ ಅಣ್ಣನಿಗೆ ಸಂಗಾತಿ ಬಂದ ಮೇಲಷ್ಟೇ ನಾನು ಮದುವೆಯಾಗುತ್ತೇನೆ, ಇಲ್ಲದಿದ್ದರೆ ಅಣ್ಣ ಒಂಟಿಯಾಗುತ್ತಾನೆ ಎಂಬ ತಂಗಿಯ ಆತಂಕ, ಈ ಅಣ್ಣ-ತಂಗಿಯ ಬಾಂಧವ್ಯ ಹೀಗೆಯೇ ಗಟ್ಟಿಯಾಗಿ, ಸಂತೋಷವಾಗಿರಲಿ.
ಎಲ್ಲಾ ಸಹೋದರ-ಸಹೋದರಿ ಸಂಬಂಧ ಹೀಗೆ ಇರುತ್ತೆ ಅಲ್ವಾ?
ನಾವಿಬ್ಬರು ಜಗಳ ಆಡುವುದನ್ನು ನೋಡಿದರೆ, ನಮ್ಮನ್ನು ಹಿಂದಿನ ಜನ್ಮದ ವೈರಿಗಳು ಎಂದು ಅಂದುಕೊಳ್ಳಬಹುದು. ನಮ್ಮ ಮಾತು ಜಗಳದ ರೂಪದಲ್ಲಿ ಇದ್ದರೂ ಮನದಲ್ಲಿ ಇಬ್ಬರಿಗೂ ಪರಸ್ಪರ ಪ್ರೀತಿ ಹಾಗೂ ಕಾಳಜಿ ಜಗದಷ್ಟೇ ಆಳವಾಗಿರುವುದು ಖಂಡಿತ. ದಿನದ 24 ಗಂಟೆ ಮುಗಿಯುವ ಮುನ್ನವೇ ನಮ್ಮ ಜಗಳ ಮುಗಿದು ಮತ್ತೆ ಒಂದಾಗುತ್ತೇವೆ.
ಅದೆಷ್ಟೋ ಬಾರಿ ವಯಸ್ಸಿನಲ್ಲಿ ಚಿಕ್ಕವನಾದರೂ ಅವನಿಂದ ಕಲಿಯುವುದು ತುಂಬಾ ಇದೆ ಅನಿಸುತ್ತೆ . ಜೀವನ ಎಷ್ಟೇ ಸವಾಲು ಮುಂದಿಟ್ಟರು, ಮನದಲ್ಲಿ ಸಾವಿರ ಚಿಂತೆ ಇದ್ದರೂ ತಾನು ಸಂತೋಷವಾಗಿರಲೂ, ತನ್ನವರನ್ನು ನಗಿಸುಲೂ ಪ್ರಯತ್ನ ಮಾಡುತ್ತಾನೆ. ಕೊಂಚ ಹಿಂಜರಿಕೆ ಸ್ವಭಾವವಿದ್ದರೂ ತನ್ನ ಕೈಲಾದ ಶ್ರಮ ಪಡುತ್ತಾನೆ. ಅದೆಷ್ಟೋ ಬಾರಿ ನಾವೇನು ಹೇಳದೆ ಹೋದರು ಪರಿಸ್ಥಿತಿಗೆ ತಕ್ಕಂತೆ ಅವನೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾನೆ.
ಅವನು ಜೊತೆ ಇರುವುದೇ ನನ್ನ ಜೀವನಕ್ಕೆ ಉಡುಗೊರೆ ಇದ್ದ ಹಾಗೆ. ನೂರು ಬಾರಿ ಜಗಳ ಆಡಿದರು ನಮ್ಮ ಸಂಬಂಧ ನೂರು ಕಾಲ ಹೀಗೆ ಇರಬೇಕು ಎನ್ನುವುದು ನನ್ನ ಆಸೆ ಹಾಗೂ ನನ್ನ ತಮ್ಮ ಎಂದಿಗೂ ದೂರ ಆಗುವುದಿಲ್ಲ ಎನ್ನುವುದು ನನ್ನ ಭರವಸೆ.
ಈ ರಕ್ಷಾ ಬಂಧನ ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಲಿ.
ರಕ್ಷಾ ಬಂಧನ ಶುಭಾಶಯಗಳು ಮನ್ನು!
ಎಂದಿಗೂ ನಾನು ನಿನ್ನೊಂದಿಗೆ ಇರುವೆ.
-ಮಾನಸ ಅಗ್ನಿಹೋತ್ರಿ, ಬಳ್ಳಾರಿ



Click it and Unblock the Notifications
