Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ರಕ್ಷಾ ಬಂಧನ 2024: ಸಿನಿಮಾ ಕತೆಯಂತಿದೆ ಈ ಅಣ್ಣ ತಂಗಿಯ ಕತೆ
ಈ ಅಣ್ಣ-ತಂಗಿಯ ಕತೆ ಥೇಟ್ ಸಿನಿಮಾ ಕತೆಯಂತಿದೆ
ಈ ಅಣ್ಣನಿಗೆ ತಂಗಿಯೇ ಎಲ್ಲಾ, ತಂಗಿಗೂ ಅಷ್ಟೇ ಅಣ್ಣನೇ ಪ್ರಪಂಚ. ಚಿಕ್ಕ ಪ್ರಾಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾರೆ, ನಂತರ ಬೆಳೆಯುವುದು ಅಜ್ಜಿಯ ಆಶ್ರಯದಲ್ಲಿ. ಮನೆಯಲ್ಲಿ ಕಡು ಬಡತನ, ಅಜ್ಜಿ ಕೂಲಿ ಮಾಡಿ ಬಂದ ಅಲ್ಪ ದುಡಿಮೆಯಿಂದಲೇ ಹೊಟ್ಟೆ ತುಂಬಬೇಕು. ಅಜ್ಜಿ, ಅಣ್ಣ-ತಂಗಿ ಇದೇ ಅವರ ಪುಟ್ಟ ಪ್ರಪಂಚ.

ಪುಟ್ಟ ಹುಡುಗನಾಗಿದ್ದಾಗಲೇ ಅಣ್ಣನಿಗೆ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಅವಳಿಗೆ ಬೇಕಾಗಿರುವುದನ್ನು ಕೊಡಿಸುವ ಮಟ್ಟಕ್ಕೆ ಬೆಳೆಯಬೇಕೆಂಬ ಆಸೆ, ಹೀಗಾಗಿ ಪುಟ್ಟ ಹುಡುಗನಾಗಿದ್ದಾಲೇ ಶಾಲೆಗೆ ರಜೆ ಇದ್ದಾಗ ಕೂಲಿ ಕೆಲಸಕ್ಕೆ ಹೋಗಿ ಅದರಲ್ಲಿ ಬಂದ ಹಣದಲ್ಲಿ ತಂಗಿಗೆ ಏನಾದರು ಕೊಡಿಸಿ ಖುಷಿ ಪಡುತ್ತಿದ್ದ. ಡಿಗ್ರಿ ಓದು ಮುಗಿಯುವಷ್ಟರಲ್ಲಿ ಅಜ್ಜಿಯೂ ಇಲ್ಲ, ಅಣ್ಣ-ತಂಗಿಗೆ ಸ್ವಂತ ಸೂರಿಲ್ಲ, ಕಾಲೇಜು ಓದುತ್ತಿರುವ ತಂಗಿ, ಯಾರ ಸಹಾಯವು ಇಲ್ಲ, ಆದರೂ ತನ್ನ ತಂಗಿಗೆ ಒಳ್ಳೆಯ ಬದುಕು ಕಟ್ಟಿಕೊಟ್ಟೇ ಕೊಡುತ್ತೇನೆ, ಅವಳನ್ನು ತುಂಬಾ ಸಂತೋಷವಾಗಿ ನೋಡಿಕೊಳ್ಳುತ್ತೇನೆ ಎಂಬ ಅಣ್ಣನ ಹಠ. ಹೀಗಾಗಿ ತಂಗಿಗಾಗಿ ಏನಾದರೂ ಮಾಡಲೇಬೇಕೆಂಬ ಛಲದಲ್ಲಿ ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾನೆ.
ಈ ಸಮಯದಲ್ಲಿ ಸಿಕ್ಕ ಸಣ್ಣ-ಪುಟ್ಟ ಕೆಲಸ ಮಾಡುತ್ತಾ ತನ್ನ ಹಾಗೂ ತಂಗಿಯ ಹೊಟ್ಟೆ ತುಂಬುತ್ತಿದ್ದ, ಅಣ್ಣನ ಶ್ರಮಕ್ಕೆ ಸರ್ಕಾರಿ ನೌಕರಿ ಸಿಗುತ್ತೆ. ಅಷ್ಟೆಲ್ಲಾ ಕಷ್ಟಪಟ್ಟ ಬದುಕಿನಲ್ಲಿ ಹೊಸ ಭರವಸೆಗಳು ಮೂಡುತ್ತೆ, ಇನ್ನು ನಾನು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಆತ್ಮವಿಶ್ವಾಸ ಹೆಚ್ಚಾಗುತ್ತೆ. ದುಡಿದ ಹಣ ಕೂಡಿಟ್ಟು ಸ್ವಲ್ಪ ಜಾಗ ಖರೀದಿಸಿ, ಇರಲು ಒಂದು ಮನೆ ಮಾಡುತ್ತಾರೆ, ತಂಗಿಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತಿದ್ದಾನೆ.
ನನ್ನ ತಂಗಿಯನ್ನು ಒಂದು ಒಳ್ಳೆಯ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕೆಂದುವುದು ಅಣ್ಣನ ಕನಸು, ನನ್ನ ಅಣ್ಣನಿಗೆ ಸಂಗಾತಿ ಬಂದ ಮೇಲಷ್ಟೇ ನಾನು ಮದುವೆಯಾಗುತ್ತೇನೆ, ಇಲ್ಲದಿದ್ದರೆ ಅಣ್ಣ ಒಂಟಿಯಾಗುತ್ತಾನೆ ಎಂಬ ತಂಗಿಯ ಆತಂಕ, ಈ ಅಣ್ಣ-ತಂಗಿಯ ಬಾಂಧವ್ಯ ಹೀಗೆಯೇ ಗಟ್ಟಿಯಾಗಿ, ಸಂತೋಷವಾಗಿರಲಿ.
ಎಲ್ಲಾ ಸಹೋದರ-ಸಹೋದರಿ ಸಂಬಂಧ ಹೀಗೆ ಇರುತ್ತೆ ಅಲ್ವಾ?
ನಾವಿಬ್ಬರು ಜಗಳ ಆಡುವುದನ್ನು ನೋಡಿದರೆ, ನಮ್ಮನ್ನು ಹಿಂದಿನ ಜನ್ಮದ ವೈರಿಗಳು ಎಂದು ಅಂದುಕೊಳ್ಳಬಹುದು. ನಮ್ಮ ಮಾತು ಜಗಳದ ರೂಪದಲ್ಲಿ ಇದ್ದರೂ ಮನದಲ್ಲಿ ಇಬ್ಬರಿಗೂ ಪರಸ್ಪರ ಪ್ರೀತಿ ಹಾಗೂ ಕಾಳಜಿ ಜಗದಷ್ಟೇ ಆಳವಾಗಿರುವುದು ಖಂಡಿತ. ದಿನದ 24 ಗಂಟೆ ಮುಗಿಯುವ ಮುನ್ನವೇ ನಮ್ಮ ಜಗಳ ಮುಗಿದು ಮತ್ತೆ ಒಂದಾಗುತ್ತೇವೆ.
ಅದೆಷ್ಟೋ ಬಾರಿ ವಯಸ್ಸಿನಲ್ಲಿ ಚಿಕ್ಕವನಾದರೂ ಅವನಿಂದ ಕಲಿಯುವುದು ತುಂಬಾ ಇದೆ ಅನಿಸುತ್ತೆ . ಜೀವನ ಎಷ್ಟೇ ಸವಾಲು ಮುಂದಿಟ್ಟರು, ಮನದಲ್ಲಿ ಸಾವಿರ ಚಿಂತೆ ಇದ್ದರೂ ತಾನು ಸಂತೋಷವಾಗಿರಲೂ, ತನ್ನವರನ್ನು ನಗಿಸುಲೂ ಪ್ರಯತ್ನ ಮಾಡುತ್ತಾನೆ. ಕೊಂಚ ಹಿಂಜರಿಕೆ ಸ್ವಭಾವವಿದ್ದರೂ ತನ್ನ ಕೈಲಾದ ಶ್ರಮ ಪಡುತ್ತಾನೆ. ಅದೆಷ್ಟೋ ಬಾರಿ ನಾವೇನು ಹೇಳದೆ ಹೋದರು ಪರಿಸ್ಥಿತಿಗೆ ತಕ್ಕಂತೆ ಅವನೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾನೆ.
ಅವನು ಜೊತೆ ಇರುವುದೇ ನನ್ನ ಜೀವನಕ್ಕೆ ಉಡುಗೊರೆ ಇದ್ದ ಹಾಗೆ. ನೂರು ಬಾರಿ ಜಗಳ ಆಡಿದರು ನಮ್ಮ ಸಂಬಂಧ ನೂರು ಕಾಲ ಹೀಗೆ ಇರಬೇಕು ಎನ್ನುವುದು ನನ್ನ ಆಸೆ ಹಾಗೂ ನನ್ನ ತಮ್ಮ ಎಂದಿಗೂ ದೂರ ಆಗುವುದಿಲ್ಲ ಎನ್ನುವುದು ನನ್ನ ಭರವಸೆ.
ಈ ರಕ್ಷಾ ಬಂಧನ ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಲಿ.
ರಕ್ಷಾ ಬಂಧನ ಶುಭಾಶಯಗಳು ಮನ್ನು!
ಎಂದಿಗೂ ನಾನು ನಿನ್ನೊಂದಿಗೆ ಇರುವೆ.
-ಮಾನಸ ಅಗ್ನಿಹೋತ್ರಿ, ಬಳ್ಳಾರಿ



Click it and Unblock the Notifications
