Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಚೈಸ್ಯಾಮ್ ಮತ್ತೆ ಒಂದಾದರೆ? ಫ್ಯಾನ್ಸ್ ಕುತೂಹಲ ಹೆಚ್ಚಿಸಿದೆ ನಾಗಚೈತನ್ಯ ಹಂಚಿಕೊಂಡಿರುವ ಆ ಫೋಟೋಗಳು
ಸಮಂತಾ-ನಾಗಚೈತನ್ಯ ಮದುವೆಯಾದಾಗ ಈ ಜೋಡಿಯನ್ನು ತುಂಬಾನೇ ಮೆಚ್ಚಿಕೊಂಡಿದ್ದರು. 10 ವರ್ಷ ಪ್ರೇಮಿಸಿ ಮದುವೆಯಾದ ಜೋಡಿ ಮದುವೆಯಾಗಿ 3 ವರ್ಷದಲ್ಲಿ ಬೇರ್ಪಟ್ಟಾಗ ಎಲ್ಲಾ ಹುಸಿ ಮುನಿಸು ಮರೆತು ಈ ಜೋಡಿ ಮತ್ತೆ ಒಂದಾಗಬಾರದಾ? ಎಂದು ಅವರ ಅಭಿಮಾನಿಗಳು ಬಯಸಿದ್ದರು.

ಇಬ್ಬರು ಒಂದಾಗುವಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದರು. ಆದರೆ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಾವು ಜೊತೆಗಿರುವ ಫೋಟೋಗಳನ್ನು ರಿಮೂವ್ ಮಾಡುವ ಮೂಲಕ ಇಬ್ಬರು ತಮ್ಮ-ತಮ್ಮ ದಾರಿ ನೋಡಿಕೊಂಡು ನಡೆದಿದ್ದರು. ಆದರೆ ಈ ಜೋಡಿ ಮತ್ತೆ ಒಂದಾಗುವುದೇ ಎಂಬ ಕುತೂಹಲ ಜನರಲ್ಲಿ ಮೂಡಿದೆ, ಅದಕ್ಕೆ ಕಾರಣ ನಾಗಚೈತನ್ಯ ಹಂಚಿಕೊಂಡ ಆ ಫೋಟೋಗಳು....
ವಿಚ್ಛೇದನದ ಬಳಿಕ ಸಮಂತಾ ಬದುಕಿನಲ್ಲಿ ಸಮುದ್ರದ ಅಲೆಯಂತೆ ಬಂದೆರಗಿದ ಸಮಸ್ಯೆಗಳು ಎಲ್ಲರಿಗೆ ಗೊತ್ತಿರುವ ವಿಷಯ... ವಿಚ್ಛೇದನದ ಬಳಿಕ ವೃತ್ತಿ ಬದುಕಿನಲ್ಲಿ ಅದೇ ಪಾಪ್ಯೂಲರಿಟಿ ಉಳಿಸಿಕೊಂಡಿದ್ದ ಸಮಂತಾರಿಗೆ ಆರೋಗ್ಯ ಹದಗೆಟ್ಟಿತು. ಮಯೋಸೈಟಿಸ್ ಎಂಬ ಅಟೊಇಮ್ಯೂನೆ ಕಾಯಿಲೆ ಅವರ ಜೀವನವನ್ನು ಹಿಂಡಿ ಹಿಪ್ಪೆ ಮಾಡಿತು. ಸಮಂತಾ ತಮ್ಮ ಅನಾರೋಗ್ಯದ ಬಗ್ಗೆ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಾಗ ಅಯ್ಯೋ ಹೀಗಾಯ್ತಲ್ಲ ಎಂದು ಜನ ಮರುಗಿದ್ದರು. ಆ ಕಾಯಿಲೆ ಸಮಂತಾರನ್ನು ತುಂಬಾನೇ ಕುಗ್ಗುವಂತೆ ಮಾಡಿತು. ಎದ್ದು ಓಡಾಡುವುದು ಕೂಡ ಕಷ್ಟವಾಯಿತು.
ಆದರೆ ಆತ್ಮವಿಶ್ವಾಸ ಮೂಲಕ ಆ ಕಾಯಿಲೆಯನ್ನು ಮಣಿಸುವ ಪ್ರಯತ್ನದಲ್ಲಿದ್ದಾರೆ ಸಮಂತಾ. ಸಮಂತಾ ಈ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂಬುವುದು ಅವರ ಈಗೀನ ಫೋಟೋಗಳನ್ನು ನೋಡಿದಾಗ ತಿಳಿಯುತ್ತೆ. ಸಮಂತಾ ತುಂಬಾನೇ ಗೆಲುವಿನಿಂದ ಕಾಣುತ್ತಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಮತ್ತೆ ಸಕ್ರೀಯವಾಗುತ್ತಿದ್ದಾರೆ. ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾಗ ನಾಗಚೈತನ್ಯ ಮತ್ತೆ ಅವರ ಬಳಿ ಮರಳಿ ಬರಬಾರದೇ , ಸಿನಿಮಾಗಳಲ್ಲಿ ಕಾಣುವಂತೆ ಇವರ ಜೀವನ ಹ್ಯಾಪಿ ಎಂಡಿಂಗ್ ಆಗಬಾರದೇ ಎಂದು ಸ್ಯಾಮ್-ಚೈ ಕಟ್ಟಾಭಿಮಾನಿಗಳು ಮತ್ತೊಮ್ಮೆ ಬಯಸಿದ್ದರು. ಈಗ ನಾಗ ಚೈತನ್ಯ ಹಂಚಿಕೊಂಡಿರುವ ಫೋಟೋಗಳು ಈ ಜೋಡಿ ಮುಂದಾಗುವ ಸೂಚನೆ ಮೂಡಿಸುತ್ತಿದೆ.
ಇತ್ತೀಚೆಗೆ ನಾಗಚೈತನ್ಯ ಸಮಂತಾ ಜೊತೆಗಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ವಿಚ್ಛೇದನ ಬಳಿಕ ಜೋಡಿಯಾಗಿರುವ ಫೋಟೋವನ್ನು ನಾಗಚೈತನ್ಯ ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಫೋಟೋದಲ್ಲಿ ಹ್ಯಾಪಿ ಟೈಮ್ ವಿಥ್ ಹ್ಯಾಶ್ ಎಂದು ಅವರ ಸಾಕುನಾಯಿಯ ಫೋಟೋವನ್ನು ಹಂಚಿಕೊಂಡಿದ್ದರು. ಕಾರಿನಲ್ಲಿ ಕುಳಿತು ಸೂರ್ಯಾಸ್ತ ಕಣ್ತುಂಬಿಕೊಳ್ಳುವ ಫೋಟೋ ಅದಾಗಿದೆ. ಈ ಹ್ಯಾಶ್ ನಾಯಿ ನಾಗಚೈತನ್ಯ ಹಾಗೂ ಸಮಂತಾ ಮೊದಲ ವಿವಾಹ ವಾರ್ಷಿಕೋತ್ಸವದಲ್ಲಿ ಮನೆಗೆ ಸ್ವಾಗತಿಸಿದ್ದರು. ವಿಚ್ಛೇದನದ ಬಳಿಕ ಈ ಮುದ್ದಿನ ನಾಯಿಯನ್ನು ಸಮಂತಾ ನೋಡಿಕೊಳ್ಳುತ್ತಿದ್ದರು. ಇದೀಗ ಈ ನಾಯಿ ಜೊತೆಗೆ ನಾಗಚೈತನ್ಯ ಹಾಕಿಕೊಂಡಿರುವ ಫೋಟೋಗಳು ಇವರ ಬದುಕಿನ ಕಾರ್ಮೋಡಗಳು ದೂರಾಗಿ , ಪ್ರೀತಿಯ ತಂಗಾಳಿ ಮತ್ತೊಮ್ಮೆ ಬೀಸುವುದೇ.... ಏನೇ ಆಗಲಿ ಈ ಜೋಡಿ ಒಂದಾಗಿ ಬಾಳಲಿ ಎಂಬುವುದೇ ಅವರ ಅಭಿಮಾನಿಗಳ ಆಶಯ....



Click it and Unblock the Notifications
