Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಚೈಸ್ಯಾಮ್ ಮತ್ತೆ ಒಂದಾದರೆ? ಫ್ಯಾನ್ಸ್ ಕುತೂಹಲ ಹೆಚ್ಚಿಸಿದೆ ನಾಗಚೈತನ್ಯ ಹಂಚಿಕೊಂಡಿರುವ ಆ ಫೋಟೋಗಳು
ಸಮಂತಾ-ನಾಗಚೈತನ್ಯ ಮದುವೆಯಾದಾಗ ಈ ಜೋಡಿಯನ್ನು ತುಂಬಾನೇ ಮೆಚ್ಚಿಕೊಂಡಿದ್ದರು. 10 ವರ್ಷ ಪ್ರೇಮಿಸಿ ಮದುವೆಯಾದ ಜೋಡಿ ಮದುವೆಯಾಗಿ 3 ವರ್ಷದಲ್ಲಿ ಬೇರ್ಪಟ್ಟಾಗ ಎಲ್ಲಾ ಹುಸಿ ಮುನಿಸು ಮರೆತು ಈ ಜೋಡಿ ಮತ್ತೆ ಒಂದಾಗಬಾರದಾ? ಎಂದು ಅವರ ಅಭಿಮಾನಿಗಳು ಬಯಸಿದ್ದರು.

ಇಬ್ಬರು ಒಂದಾಗುವಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದರು. ಆದರೆ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಾವು ಜೊತೆಗಿರುವ ಫೋಟೋಗಳನ್ನು ರಿಮೂವ್ ಮಾಡುವ ಮೂಲಕ ಇಬ್ಬರು ತಮ್ಮ-ತಮ್ಮ ದಾರಿ ನೋಡಿಕೊಂಡು ನಡೆದಿದ್ದರು. ಆದರೆ ಈ ಜೋಡಿ ಮತ್ತೆ ಒಂದಾಗುವುದೇ ಎಂಬ ಕುತೂಹಲ ಜನರಲ್ಲಿ ಮೂಡಿದೆ, ಅದಕ್ಕೆ ಕಾರಣ ನಾಗಚೈತನ್ಯ ಹಂಚಿಕೊಂಡ ಆ ಫೋಟೋಗಳು....
ವಿಚ್ಛೇದನದ ಬಳಿಕ ಸಮಂತಾ ಬದುಕಿನಲ್ಲಿ ಸಮುದ್ರದ ಅಲೆಯಂತೆ ಬಂದೆರಗಿದ ಸಮಸ್ಯೆಗಳು ಎಲ್ಲರಿಗೆ ಗೊತ್ತಿರುವ ವಿಷಯ... ವಿಚ್ಛೇದನದ ಬಳಿಕ ವೃತ್ತಿ ಬದುಕಿನಲ್ಲಿ ಅದೇ ಪಾಪ್ಯೂಲರಿಟಿ ಉಳಿಸಿಕೊಂಡಿದ್ದ ಸಮಂತಾರಿಗೆ ಆರೋಗ್ಯ ಹದಗೆಟ್ಟಿತು. ಮಯೋಸೈಟಿಸ್ ಎಂಬ ಅಟೊಇಮ್ಯೂನೆ ಕಾಯಿಲೆ ಅವರ ಜೀವನವನ್ನು ಹಿಂಡಿ ಹಿಪ್ಪೆ ಮಾಡಿತು. ಸಮಂತಾ ತಮ್ಮ ಅನಾರೋಗ್ಯದ ಬಗ್ಗೆ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಾಗ ಅಯ್ಯೋ ಹೀಗಾಯ್ತಲ್ಲ ಎಂದು ಜನ ಮರುಗಿದ್ದರು. ಆ ಕಾಯಿಲೆ ಸಮಂತಾರನ್ನು ತುಂಬಾನೇ ಕುಗ್ಗುವಂತೆ ಮಾಡಿತು. ಎದ್ದು ಓಡಾಡುವುದು ಕೂಡ ಕಷ್ಟವಾಯಿತು.
ಆದರೆ ಆತ್ಮವಿಶ್ವಾಸ ಮೂಲಕ ಆ ಕಾಯಿಲೆಯನ್ನು ಮಣಿಸುವ ಪ್ರಯತ್ನದಲ್ಲಿದ್ದಾರೆ ಸಮಂತಾ. ಸಮಂತಾ ಈ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂಬುವುದು ಅವರ ಈಗೀನ ಫೋಟೋಗಳನ್ನು ನೋಡಿದಾಗ ತಿಳಿಯುತ್ತೆ. ಸಮಂತಾ ತುಂಬಾನೇ ಗೆಲುವಿನಿಂದ ಕಾಣುತ್ತಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಮತ್ತೆ ಸಕ್ರೀಯವಾಗುತ್ತಿದ್ದಾರೆ. ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾಗ ನಾಗಚೈತನ್ಯ ಮತ್ತೆ ಅವರ ಬಳಿ ಮರಳಿ ಬರಬಾರದೇ , ಸಿನಿಮಾಗಳಲ್ಲಿ ಕಾಣುವಂತೆ ಇವರ ಜೀವನ ಹ್ಯಾಪಿ ಎಂಡಿಂಗ್ ಆಗಬಾರದೇ ಎಂದು ಸ್ಯಾಮ್-ಚೈ ಕಟ್ಟಾಭಿಮಾನಿಗಳು ಮತ್ತೊಮ್ಮೆ ಬಯಸಿದ್ದರು. ಈಗ ನಾಗ ಚೈತನ್ಯ ಹಂಚಿಕೊಂಡಿರುವ ಫೋಟೋಗಳು ಈ ಜೋಡಿ ಮುಂದಾಗುವ ಸೂಚನೆ ಮೂಡಿಸುತ್ತಿದೆ.
ಇತ್ತೀಚೆಗೆ ನಾಗಚೈತನ್ಯ ಸಮಂತಾ ಜೊತೆಗಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ವಿಚ್ಛೇದನ ಬಳಿಕ ಜೋಡಿಯಾಗಿರುವ ಫೋಟೋವನ್ನು ನಾಗಚೈತನ್ಯ ಇದೇ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಫೋಟೋದಲ್ಲಿ ಹ್ಯಾಪಿ ಟೈಮ್ ವಿಥ್ ಹ್ಯಾಶ್ ಎಂದು ಅವರ ಸಾಕುನಾಯಿಯ ಫೋಟೋವನ್ನು ಹಂಚಿಕೊಂಡಿದ್ದರು. ಕಾರಿನಲ್ಲಿ ಕುಳಿತು ಸೂರ್ಯಾಸ್ತ ಕಣ್ತುಂಬಿಕೊಳ್ಳುವ ಫೋಟೋ ಅದಾಗಿದೆ. ಈ ಹ್ಯಾಶ್ ನಾಯಿ ನಾಗಚೈತನ್ಯ ಹಾಗೂ ಸಮಂತಾ ಮೊದಲ ವಿವಾಹ ವಾರ್ಷಿಕೋತ್ಸವದಲ್ಲಿ ಮನೆಗೆ ಸ್ವಾಗತಿಸಿದ್ದರು. ವಿಚ್ಛೇದನದ ಬಳಿಕ ಈ ಮುದ್ದಿನ ನಾಯಿಯನ್ನು ಸಮಂತಾ ನೋಡಿಕೊಳ್ಳುತ್ತಿದ್ದರು. ಇದೀಗ ಈ ನಾಯಿ ಜೊತೆಗೆ ನಾಗಚೈತನ್ಯ ಹಾಕಿಕೊಂಡಿರುವ ಫೋಟೋಗಳು ಇವರ ಬದುಕಿನ ಕಾರ್ಮೋಡಗಳು ದೂರಾಗಿ , ಪ್ರೀತಿಯ ತಂಗಾಳಿ ಮತ್ತೊಮ್ಮೆ ಬೀಸುವುದೇ.... ಏನೇ ಆಗಲಿ ಈ ಜೋಡಿ ಒಂದಾಗಿ ಬಾಳಲಿ ಎಂಬುವುದೇ ಅವರ ಅಭಿಮಾನಿಗಳ ಆಶಯ....



Click it and Unblock the Notifications